ಹರಿತಲೇಖನಿ ದಿನಕ್ಕೊಂದು ಕಥೆ: ಚಿನ್ನದ ಗಟ್ಟಿ

ಬಹಳ ಕಾಲದ ಹಿಂದೆ ಒಂದು ಸುಂದರವಾದ ಸಮೃದ್ಧಿಯಿಂದ ಕೂಡಿದ ‘ಹಳ್ಳಿ ಇತ್ತು. ಜನರು ತಮ್ಮ ಹೊಲಗದ್ದೆಗಳಲ್ಲಿ ಕಷ್ಟಪಟ್ಟು ದುಡಿಯುತ್ತಿದ್ದರು.

ಹಸು, ಎಮ್ಮೆ, ಆಡು, ಕುರಿಗಳು ಸಾಕಷ್ಟಿದ್ದವು. ಗ್ರಾಮಸ್ಥರೆಲ್ಲರೂ ದೇವರಲ್ಲಿ ಭಕ್ತಿಯುಳ್ಳವರೂ, ದಾನಧರ್ಮ, ಕರುಣೆಯಿಂದ ಕೂಡಿದವರೂ ಆಗಿದ್ದರು. ಆ ಹಳ್ಳಿಯಲ್ಲಿ ಚಿನ್ನದ ಒಂದು ದೊಡ್ಡ ಗಟ್ಟಿ ಇತ್ತು. ಆದು ಗ್ರಾಮಸ್ಥರೆಲ್ಲರಿಗೂ ಸೇರಿದ ಆಸ್ತಿಯಾಗಿತ್ತು.

ತಮ್ಮ ಆ ಅಮೂಲ್ಯ ಸಂಪತ್ತನ್ನು ಸುತ್ತಮುತ್ತಲಿನ ಹಳ್ಳಿಯವರು ತೆಗೆದುಕೊಂಡು ಹೋಗಬಹುದೆಂಬ ಹೆದರಿಕೆ ಇತ್ತು. ಆದ್ದರಿಂದ ಅವರು ಒಂದು ದಿನ ಸಭೆ ಸೇರಿ, ಚಿನ್ನದ ಗಟ್ಟಿಯ ಸಂರಕ್ಷಣೆ ಮಾಡುವುದು ಹೇಗೆ ಎಂದು ಚರ್ಚಿಸತೊಡಗಿದರು.

ಒಬ್ಬೊಬ್ಬರು ಒಂದೊಂದು ಸಲಹೆ ನೀಡಿದರು. ಕೆಲವರು ಊರಿನ ಹಿರಿಯರೊಬ್ಬರ ಮನೆಯಲ್ಲಿ ಅಡಗಿಸಿಡೋಣವೆಂದರು. ಇನ್ನು ಕೆಲವರು ದೇವಾಲದೊಳಗೆ ಇಡೋಣವೆಂದರು. ಆದರೆ ಒಬ್ಬ ಚಿನ್ನದ ಗಟ್ಟಿಯನ್ನು ‘ನಾವು ವ್ಯವಸಾಯ ಮಾಡದಿರುವ ಭೂಮಿಯಲ್ಲಿ ಹೂಳಿಬಿಡೋಣ’ ಎಂದು ಸಲಹೆ ಕೊಟ್ಟನು. ಎಲ್ಲರಿಗೂ ಇದು ಒಪ್ಪಿಗೆಯಾಯಿತು.

ಮರುದಿನ ಒಂದು ಬಂಜರು ಭೂಮಿಯಲ್ಲಿ ದೊಡ್ಡ ಗುಂಡಿ ತೆಗೆದು ಚಿನ್ನದ ಗಟ್ಟಿಯನ್ನಿಟ್ಟು ಮಣ್ಣು ಮುಚ್ಚಿದರು. ಇನ್ನು ತಮ್ಮ ಸಂಪತ್ತು ಸುರಕ್ಷಿತವಾಗಿರುತ್ತದೆಂದು ಭಾವಿಸಿದರು.

ಈ ವಿಚಾರವನ್ನು ಪಕ್ಕದ ಊರಿನವರಿಗೆ ಯಾರೂ ತಿಳಿಸುವುದು ಬೇಡವೆಂದು ಮಾತನಾಡಿಕೊಂಡರು. ಕಾಲದ ಚಕ್ರ ಉರುಳಿ ಬಹು ವರ್ಷಗಳಾದವು. ಆ ಬಂಜರು ಭೂಮಿಯಲ್ಲಿ ಚಿನ್ನದ ಗಟ್ಟಿ ಹೂಳಿದ್ದ ವಿಚಾರ ಅರಿತಿದ್ದ ಹಳ್ಳಿಗರು ಮರಣ ಹೊಂದಿದರು. ಆ ಊರಿನ ಹಿರಿಯರು ಆ ಚಿನ್ನದ ಗಟ್ಟಿಯ ವಿಷಯವನ್ನು ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ತಿಳಿಸಿರಲಿಲ್ಲ.

ಸುಮಾರು ವರ್ಷಗಳ ನಂತರ ಒಬ್ಬ ಸಾಹಸೀ ಯುವ ರೈತ ಬಂಜರು ಭೂಮಿಯಲ್ಲಿ ಉಳುಮೆ ಮಾಡಲೆಂದು ಹಾರೆ ಪಿಕಾಸಿನಿಂದ ಅಗೆಯತೊಡಗಿದ.

ಭೂಮಿಯನ್ನು ಹಸನು ಮಾಡಿ, ನೇಗಿಲನ್ನು ಉಪಯೋಗಿಸಿ ಉಳುವಾಗ ಯಾವುದೋ ವಸ್ತು ತಾಗಿ ‘ಠಣ್’ ಎಂಬ ಶಬ್ದವಾಯಿತು. ಆ ಯುವಕ ಆ ಜಾಗದ ಮಣ್ಣು ತೆಗೆದು ನೋಡುತ್ತಾನೆ, ಏನಾಶ್ಚರ್ಯ! ಫಳ ಫಳನೆ ಹೊಳೆಯುವ ಚಿನ್ನದ ಗಟ್ಟಿ, ಆಹಾ ತನಗೆ ದೇವರು ನಿಧಿ ಕರುಣಿಸಿದನೆಂದು ಸಂತೋಷಪಟ್ಟನು.

ಯಾರೂ ನೋಡಲಿಲ್ಲವೆಂದು ತಿಳಿದು ಮಣ್ಣನ್ನು ತೆಗೆದು ಚಿನ್ನದ ಗಟ್ಟಿಯನ್ನು ಹೊರಗೆ ತೆಗೆಯಲು ನೋಡಿದ. ಆದರೆ ಅದು ತುಂಬಾ ಭಾರವಿದ್ದುದರಿಂದ ಹೊರಗೆ ತೆಗೆಯಲಾಗಲಿಲ್ಲ. ಅವನು ಆ ಗಟ್ಟಿಯ ಸುತ್ತಲೂ ಹಗ್ಗ ಕಟ್ಟಿ ಎಳೆಯತೊಡಗಿದನು. ಆದರೂ ಅವನಿಂದ ಅದನ್ನು ಭೂಮಿಯಿಂದ ಹೊರಗೆ ತೆಗೆಯಲಾಗಲಿಲ್ಲ. ಯುವಕ ಚಿನ್ನದ ಗಟ್ಟಿಯನ್ನು ತೆಗೆಯುವುದು ಹೇಗೆಂದು ಯೋಚಿಸತೊಡಗಿದ.

ಕೊನೆಗೆ ಉಪಾಯ ಮೂಡಿತು. ಆ ಚಿನ್ನದ ಗಟ್ಟಿಯನ್ನು ನಾಲ್ಕು ತುಂಡು ಮಾಡಿ ಮನೆಗೆ ಕೊಂಡೊಯ್ಯುವುದೆಂದು ಯೋಚಿಸಿದನು. ಚಿನ್ನದ ಗಟ್ಟಿಯ ಒಂದು ಭಾಗ ಮಾರಿ ನಿತ್ಯದ ಖರ್ಚಿಗೆ ಬಳಸುವುದು, ಎರಡನೆಯದನ್ನು ಮಾರಿ ನೇಗಿಲು, ಕತ್ತಿ, ಗುದ್ದಲಿ ಇತ್ಯಾದಿ

ತೆಗೆದುಕೊಳ್ಳುವುದು, ಮೂರನೆಯ ತುಂಡನ್ನು ಮಾರಿ ಮಳೆಗಾಲಕ್ಕೆ, ಕಷ್ಟದ ದಿನಗಳಲ್ಲಿ ಉಪಯೋಗಿಸುವುದೆಂದೆಣಿಸಿದನು. ನಾಲ್ಕನೆ ತುಂಡನ್ನು ಮಾರಿ ದಾನಧರ್ಮಕ್ಕಾಗಿ ಬಳಸುವುದೆಂದು ನಿರ್ಧರಿಸಿದನು.

ನಂತರ, ಆ ದೊಡ್ಡ ಚಿನ್ನದ ಗಟ್ಟಿಯನ್ನು ನಾಲ್ಕ ತುಂಡುಗಳನ್ನಾಗಿ ಕತ್ತರಿಸಿದನು. ಅವುಗಳನ್ನು ಒಂದೊಂದಾಗಿ ಸುಲಭವಾಗಿ ತನ್ನ ಮನೆಗೆ ತೆಗೆದುಕೊಂಡು ಹೋದನು.

ಮುಂದೆ ತನ್ನ ಯೋಜನೆಯಂತೆ ಕಾರ್ಯ ಪ್ರವೃತ್ತನಾದನು. ಹೀಗೆ ಸಮಸ್ಯೆ ಎದುರಾದಾಗ ತನ್ನ ಬುದ್ಧಿವಂತಿಕೆಯಿಂದ ಪರಿಹರಿಸಿಕೊಂಡು ತನ್ನ ಮನೆಗೆ ಚಿನ್ನದ ಗಟ್ಟಿಯನ್ನು ತೆಗೆದುಕೊಂಡು ಹೋಗಿ ವಿನಿಯೋಗಿಸಿ ಬಹಳ ಕಾಲ ಸುಖವಾಗಿ ಬದುಕಿದನು.

ಕೃಪೆ: ಸಾಮಾಜಿಕ ಜಾಲತಾಣ.

ರಾಜಕೀಯ

ಎಷ್ಟೇ ಗ್ಯಾರಂಟಿಗಳನ್ನು ಕೊಟ್ಟರೂ ನಮಗೆ ತೊಂದರೆ ಇಲ್ಲ; ಪ್ರತಿಪಕ್ಷ ನಾಯಕ ಆರ್‌.ಅಶೋಕ

ಎಷ್ಟೇ ಗ್ಯಾರಂಟಿಗಳನ್ನು ಕೊಟ್ಟರೂ ನಮಗೆ ತೊಂದರೆ ಇಲ್ಲ; ಪ್ರತಿಪಕ್ಷ ನಾಯಕ ಆರ್‌.ಅಶೋಕ

ಗ್ಯಾರಂಟಿಗಳಿಗೆ ಈ ಹಣವನ್ನು ಬಳಸಿದರೂ ಇನ್ನೂ ಹಣ ಉಳಿಯುತ್ತದೆ. ಗ್ಯಾರಂಟಿಗೆ ಹಣ ಕೊಡಬೇಡಿ ಎಂದು ಹೇಳುತ್ತಿಲ್ಲ. ಆರ್. ಅಶೋಕ (R. Ashoka)

[ccc_my_favorite_select_button post_id="112891"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ಮಂಗಳವಾರ ಬೆಳಗ್ಗೆ ವ್ಯಕ್ತಿಯೋರ್ವನ ಮೃತ ದೇಹ ನಗರದ ಹೊರವಲಯದಲ್ಲಿರುವ ರೈಲ್ವೇ ನಿಲ್ದಾಣದ ಬಳಿ ಪತ್ತೆಯಾಗಿದ್ದು, ಹತ್ಯೆ (Murder) ನಡೆದಿರುವ ಕುರಿತು ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

[ccc_my_favorite_select_button post_id="112854"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!