ತೆಲಂಗಾಣ: 36 ವರ್ಷ ಕಳೆದರೂ ಮದುವೆಯಾಗಿಲ್ಲ ಎಂದು ಬೇಸತ್ತ ಯುವಕನೋರ್ವ ಆತ್ಮಹತ್ಯೆ (Suicide) ಮಾಡಿಕೊಂಡಿರುವ ದಾರುಣ ಘಟನೆ ಸಿದ್ದಿಪೇಟೆ ಜಿಲ್ಲೆಯ ನಂಗೂನೂರು ಮಂಡಲದ ಸಿದ್ದಣ್ಣಪೇಟೆ ಗ್ರಾಮದಲ್ಲಿ ನಡೆದಿದೆ.
ಮದುವೆಯಾಗದೆ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಭಾಸ್ಕರ್ ಎಂದು ಗುರುತಿಸಲಾಗಿದೆ.
ಭಾಸ್ಕರ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ನಾಲೈದು ವರ್ಷಗಳಿಂದ ನಿರಂತರವಾಗಿ ಮದುವೆಯಾಗಲು ಹುಡುಗಿ ಹುಡುಕಿದರೂ ಸಿಗದೆ ಮನನೊಂದ ಭಾಸ್ಕರ್ ಖಿನ್ನತೆಗೊಳಗಾಗಿದ್ದ ಎನ್ನಲಾಗಿದೆ.
ಹೀಗಾಗಿ ಮನೆಯಲ್ಲಿಯೇ ಭಾಸ್ಕರ್ ತನ್ನ ಕೊಠಡಿಯಲ್ಲಿ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ
ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಒಂದು ನಿರ್ಣಾಯಕ ಕ್ಷಣ. ಅನೇಕ ಜನರು ನಿರ್ದಿಷ್ಟ ವಯಸ್ಸನ್ನು ತಲುಪಿದ ನಂತರ ಮದುವೆಯ ಬಗ್ಗೆ ಕನಸು ಕಾಣುತ್ತಾರೆ. ಪ್ರತಿಯೊಬ್ಬ ಯುವಕನು ತನ್ನ ಭಾವಿ ಪತ್ನಿ ಹೀಗಿರಬೇಕು ಎಂದು ಊಹಿಸುತ್ತಾನೆ. ಆದರೆ ಇಂದಿನ ಸಮಾಜದಲ್ಲಿ ನಾನಾ ಕಾರಣಗಳಿಂದ ಅವಿವಾಹಿತರ ಸಂಖ್ಯೆ ಹೆಚ್ಚಿವೆ. ಕೆಲವು ಯುವಕರು 30 ವರ್ಷ ದಾಟಿದರೂ ಮದುವೆಯಾಗಿರುವುದಿಲ್ಲ.
ವಯಸ್ಸಾಗುತ್ತಿದೆ. ಆದರೆ ಮದುವೆಯ ಘಳಿಗೆ ಇನ್ನೂ ಬರುತ್ತಿಲ್ಲ. ಯಾವ ಸಂಬಂಧವೂ ಸಿಗದೆ ಹುಡುಗರು ಸುಸ್ತಾಗುತ್ತಿದ್ದಾರೆ. ಕೆಲವರು ಮದುವೆ ಬ್ಯೂರೋಗಳ ಹಾದಿಯನ್ನು ಅನುಸರಿಸುತ್ತಾರೆ. ಆದರೂ.. ಮದುವೆ ಆಗದೆ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ. ಈ ನೋವಿನಿಂದಾಗಿ ಕೆಲವು ಯುವಕರು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಕ್ಷಣಮಾತ್ರದಲ್ಲಿ ಅತ್ಯಮೂಲ್ಯ ಜೀವಗಳು ಬಲಿಯಾಗುತ್ತಿವೆ.