ದೊಡ್ಡಬಳ್ಳಾಪುರ: ತಾಲೂಕಿನ ಹಿರಿಯ ರಾಜಕೀಯ ಮುತ್ಸದ್ದಿ ಹೆಚ್.ಅಪ್ಪಯ್ಯಣ್ಣ ಅಗಲಿಕೆಗೆ ಜೆಡಿಎಸ್ (JDS) ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಕಣ್ಣೀರಿಟ್ಟಿದ್ದಾರೆ.
ಅಪ್ಪಯ್ಯಣ್ಣ ಅವರ ಅಗಲಿಕೆ ಕುರಿತು ಸಂತಾಪ ಸೂಚಿಸುವ ಸಲುವಾಗಿ ಹರಿತಲೇಖನಿಯೊಂದಿಗೆ ಮಾತಾಡುವ ವೇಳೆ ಕಣ್ಣೀರಿಟ್ಟಿರುವ ಮುನೇಗೌಡ ಅವರು, ಅಪ್ಪಯ್ಯಣ್ಣ ಅವರ ಅಗಲಿಕೆ ತುಂಬಲಾರದ ನಷ್ಟ ಎಂದಿದ್ದಾರೆ.
ಅಪ್ಪಯ್ಯಣ್ಣರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ತುಂಬಲೆಂದು ಪ್ರಾರ್ಥಿಸಿರುವ ಮುನೇಗೌಡ ಅವರು, ಮಾಜಿ ಪ್ರಧಾನಿ ದೇವೇಗೌಡರು ಅಪ್ಪಯ್ಯಣ್ಣರ ಮೇಲಿಟ್ಟಿದ್ದ ಅಭಿಮಾನ, ಅಕ್ಕರೆ, ನಂಬಿಕೆಯನ್ನು ನೆನೆದರು.
ಮುಂಚಿನಿಂದಲೂ ಮಾರ್ಗದರ್ಶಕರಾಗಿ ಬೆಂಬಲ ನೀಡಿದ್ದ ಅಪ್ಪಯ್ಯಣ್ಣ ಅವರೊಂದಿಗೆ ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಒಡನಾಟ ಹೆಚ್ಚಾಗಿತ್ತು. ಆದರೆ ಏಕಾಎಕಿ ಅವರ ಅಗಲಿಕೆ ತಡೆಯಲಾಗದ ನೋವನ್ನು ತಂದಿದೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿಯ ನೀಡಲೆಂದು ಪ್ರಾರ್ಥಿಸಿದ್ದಾರೆ.