ಬೆಂಗಳೂರು; ಮೂರು ರಾಜ್ಯಗಳನ್ನು ಕೇಂದ್ರೀಕೃತವಾಗಿ ಅಭಿವೃದ್ಧಿ ಪಡಿಸಲೆಂದು ಉಳಿದ ರಾಜ್ಯಗಳಿಗೆ ತಾರತಮ್ಯ ಮಾಡುವ ಮೂಲಕ ದೇಶವನ್ನು ಭಾರತೀಯ ಜನತಾ ಪಕ್ಷದವರು (BJP) ಪಡೆಯುತ್ತಿದ್ದಾರೆ ಎಂದು ಮಾಜಿ ಸಂದಸ ಡಿಕೆ ಸುರೇಶ್ (DK Suresh) ವಾಗ್ದಾಳಿ ನಡೆಸಿದ್ದಾರೆ.
ಇಂದು ಗೃಹ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಜರಾತ್, ಉತ್ತರ ಪ್ರದೇಶ, ಬಿಹಾರ, ಆಂಧ್ರ ಹೀಗೆ ಎನ್ಡಿಎ ಮಿತ್ರ ಪಕ್ಷಗಳ ರಾಜ್ಯಗಳನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಕಡೆಗಣನೆ ಮಾಡಿದ್ದಾರೆ.
ಬಿಜೆಪಿ ನೀತಿ ಒಡೆದು ಆಳುವ ನೀತಿ, ಒಕ್ಕೂಟ ವ್ಯವಸ್ಥೆ ಎಲ್ಲರನ್ನೂ ಒಟ್ಟಾಗಿ ತಗೆದುಕೊಂಡು ಹೋಗಬೇಕು. ಆದರೆ ತೆರಿಗೆ ಅನ್ಯಾಯ ಆಗ್ತಾ ಇರುವುದು ಕಣ್ಣಿಗೆ ಕಾಣ್ತಾ ಇದೆ.
ಕೇಂದ್ರಕ್ಕೆ ಹೆಚ್ಚು ತೆರಿಗೆ ಕಟ್ಟುವಲ್ಲಿ ಕರ್ನಾಟಕ ಮುಂದು, 19 ಜನ ಬಿಜೆಪಿ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದರೂ ರಾಜ್ಯಕ್ಕೆ ಬಜೆಟ್ನಲ್ಲಿ ಭಾರೀ ಅನ್ಯಾಯ ಮಾಡಲಾಗಿದೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಅವರು ವಾಗ್ದಾಳಿ ನಡೆಸಿದರು.
ಅತೀ ತೆರಿಗೆಯನ್ನು ಕರ್ನಾಟಕ ಕೇಂದ್ರಕ್ಕೆ ಪಾವತಿಸುತ್ತಿದೆ. ಕೇಂದ್ರವು ತೆರಿಗೆ ಹಂಚಿಕೆ, ಬಜೆಟ್ನಲ್ಲಿ ಅನುದಾನ ನೀಡದೇ ವಂಚಿಸಿದೆ. ರೂ.12 ಲಕ್ಷವರೆಗಿನ ಆದಾಯದಾರರಿಗೆ ತೆರಿಗೆ ವಿನಾಯಿತಿ ನೀಡಿದರೆ ಯಾರಿಗೆ ಲಾಭ ಎಂದು ಪ್ರಶ್ನಿಸಿದರು.
ಅದರಿಂದ ಕಾರ್ಮಿಕ, ರೈತರಿಗೆ, ಶಿಕ್ಷಣ ಕ್ಷೇತ್ರಕ್ಕೆ ಯವಕರಿಗೆ ಅನುಕೂಲವಾಗಿಲ್ಲ ಎಂದಿರುವ ಸುರೇಶ್ ಅವರು, ಇದೊಂದು ಬೋಗಸ್ ಬಂಡಲ್ ಬಜೆಟ್ ಎಂದು ಮತ್ತೆ ಮತ್ತೆ ಹೇಳುತ್ತೀನಿ ಎಂದು ಕುಟುಕಿದರು.
ಸಚಿವೆ ನಿರ್ಮಲಾ ಸೀತಾರಾಮನ್ ಅವರು 8ನೇ ಬಾರಿಗೆ ಬಜೆಟ್ ಮಂಡನೆ ಮಾಡಿದ್ದಾರೆ. ಕರ್ನಾಟಕದಿಂದ ಪ್ರತಿನಿಧಿಸುವ ಅವರಿಂದ ಬಜೆಟ್ನಿಂದ ನಿರೀಕ್ಷೆಗಳಿದ್ದವು. ಅವೆಲ್ಲವೂ ಹುಸಿಯಾಗಿವೆ, ಒಟ್ಟಾರೆ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಿದೆ.
ಗುಜರಾತ್, ಉತ್ತರ ಪ್ರದೇಶ, ಬಿಹಾರ, ಆಂಧ್ರ ಹೀಗೆ ಎನ್ಡಿಎ ಮಿತ್ರ ಪಕ್ಷಗಳ ರಾಜ್ಯಗಳನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಕಡೆಗಣನೆ ಮಾಡಿದ್ದಾರೆ.
ಕರ್ನಾಟಕ ಹಿಂದೆ ಸರಿಯಲು ಕೇಂದ್ರದ ಆರ್ಥಿಕ ನೀತಿಯೇ ಕಾರಣ. ದೇಶವನ್ನು ಬಿಜೆಪಿಯವರು ಒಡೆಯುತ್ತಿದ್ದಾರೆ. ಅವರಿಗೆ ಕರ್ನಾಟಕದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಬಿಜೆಪಿ (BJP) ರಾಜ್ಯ ನಾಯಕರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕುಮಾರಸ್ವಾಮಿ ಸೇರಿದಂತೆ ಬಿಜೆಪಿ ಸಂಸದರಿಗೆ ಸಲಹೆ ನೀಡಿದರು.