Daily story: Humble lamp

ಹರಿತಲೇಖನಿ ದಿನಕ್ಕೊಂದು: ವಿನಮ್ರ ಹಣತೆ

Daily story: ಬೆಳಕಿನ ವಿಚಾರದಲ್ಲಿನಾನೇ ಶ್ರೇಷ್ಠ, ನಾನೇ ಶ್ರೇಷ್ಠ’ ಅನ್ನುವ ತರ್ಕಗಳು ದಿನೇ ದಿನೇ ದೇವಲೋಕಕ್ಕೆ ಬರತೊಡಗಿದವು. ಸೂರ್ಯ, ಚಂದ್ರ, ನಕ್ಷತ್ರಗಳು ಪ್ರತಿನಿತ್ಯ ಇದೇ ವಿಷಯದ ಬಗ್ಗೆ ಸಂಬಂಧಿಸಿದವರ ಮೂಲಕ ತಮ್ಮನ್ನೇ ಶ್ರೇಷ್ಠರೆಂದು ಗುರುತಿಸಬೇಕು’ ಅನ್ನುವ ಬಲವಂತ ಹೇರತೊಡಗಿದವು.

ಯಾರನ್ನು ತಾನು ಶ್ರೇಷ್ಠನೆಂದು ಗುರುತಿಸಬೇಕೆಂದು ಬ್ರಹ್ಮನಿಗೆ ಗಲಿಬಿಲಿಯುಂಟಾಯಿತು. ಈ ವಿಚಾರದಲ್ಲಿಎಲ್ಲರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಿ ತುರ್ತು ಸಭೆ ಕರೆದನು.

ಸಭೆಗೆ ಇಂದ್ರಾದಿಗಳು ಸೇರಿದಂತೆ ಎಲ್ಲಾದೇವತೆಗಳು ಹಾಜರಿದ್ದರು. ಸೂರ್ಯ, ಚಂದ್ರ ಹೀಗೆ ಯಾರಾರ‍ಯರು ಸ್ಪರ್ಧೆಯಲ್ಲಿಇದ್ದರೋ ಅವರಿಗೆಲ್ಲಾಕರೆ ಹೊಯಿತು. ಎಲ್ಲರೂ ಬಂದು ಸೇರಿದಾಗ ಸಭೆ ಆರಂಭವಾಯಿತು.

ಭೂಮಿ ಕಡೆಯಿಂದ ಮಿಂಚುಹುಳ ಸ್ಪರ್ಧೆಗೆ ಹೋಗಿತ್ತು. ಭೂಮಿಯಲ್ಲಿಬೆಳಕಿಗೆ ಪ್ರತಿನಿಧಿ ನೀನು ಒಬ್ಬನೇನಾ, ಮತ್ಯಾರು ಇಲ್ಲವೇ ಹಣತೆ ಯಾಕೆ ಬಂದಿಲ್ಲಅಂತ ಸಭೆಯಲ್ಲಿಕೇಳಲಾಯಿತು. ಆಗ ಮಿಂಚುಹುಳವು ಹಣತೆಯನ್ನು ನಾನು ಕರೆದೆ. ಆದರೆ ಹಣತೆ ನಾನು ಸ್ಪರ್ಧಿಸಲು ಸೂಕ್ತವಾದವನೊ, ಇಲ್ಲವೊ ಗೊತ್ತಿಲ್ಲ. ನೀವು ಹೋಗಿ ಬನ್ನಿ’ ಅಂತ ಹೇಳಿ ಕಳಿಸಿತು ಎಂದಿತು.

ಬ್ರಹ್ಮನಿಗೆ ಈ ಸಭೆಯಲ್ಲಿ ಹಣತೆ ಇರುವುದು ಸೂಕ್ತವೆನ್ನಿಸಿ ತುರ್ತಾಗಿ ಅದನ್ನು ಕರೆಯಿಸಿತು. ಸಭೆಯಲ್ಲಿಮೊದಲು ವಾದಿಸುವ ಮತ್ತು ಹಕ್ಕು ಮಂಡಿಸುವ ಅಧಿಕಾರವನ್ನು ಸೂರ್ಯನಿಗೆ ನೀಡಲಾಯಿತು.

ಸೂರ್ಯ, ನನಗೆ ಪ್ರತಿಸ್ಪರ್ಧಿಯೇ ಇಲ್ಲ. ಈ ಸಭೆಯ ಅವಶ್ಯಕತೆಯೂ ಇರಲಿಲ್ಲ. ನಾನು ಇಲ್ಲದ ಜಗತ್ತೇ ಇಲ್ಲ. ಜೀವನ ನಡೆಯುವುದು ನನ್ನ ಬೆಳಕಿನಿಂದನೇ’ ಎಂದು ಹೇಳಿ ಅಹಂನಿಂದ ಎಲ್ಲರ ಕಡೆ ನೋಡಿತು.

ಆನಂತರ ಚಂದ್ರ, ಈ ಸೂರ್ಯ ಎಲ್ಲಾಕಾಲದಲ್ಲೂಇರವವನಲ್ಲ. ಹಗಲು ಮಾತ್ರ ಅವನ ಕೆಲಸ. ರಾತ್ರಿ ನಾನು ಇಲ್ಲದೆ ಬದುಕಿಲ್ಲ. ಕವಿಗಳಿಗೆ, ಪ್ರೇಮಿಗಳಿಗೆ ನನ್ನಷ್ಟು ಸಹಾಯ ಮಾಡಿದವರು ಯಾರೂ ಇಲ್ಲ. ನಾನು ಸೂರ್ಯನಷ್ಟು ಪ್ರಖರವಾದ ಬಿಸಿಲು ನೀಡಿ ಜನರಿಗೆ ತೊಂದರೆ ಕೊಡುವುದಿಲ್ಲ’ ಎಂದು ವಾದಿಸಿತು.

ನಕ್ಷತ್ರಗಳು ಸೂರ್ಯನ ಬೆಳಕು ಹಗಲು ಮಾತ್ರ ಮತ್ತು ಚಂದ್ರ ತಿಂಗಳಲ್ಲಿಕೆಲವು ದಿನ ಮಾತ್ರ. ಆದರೆ ನಾವು ರಾತ್ರಿಯಲ್ಲಿಯಾವತ್ತೂ ಇರ್ತೀವಿ. ನಮ್ಮ ಬೆಳಕು ಅವರಿಗೆ ಚಿಕ್ಕದಿರಬಹುದು. ಆದರೆ ಅಷ್ಟರಲ್ಲೇ ಅವರಿಗೆ ಹಾದಿ ತೋರಿಸುತ್ತೀವಿ. ಮಕ್ಕಳಿಗೂ ನಮ್ಮನ್ನು ಕಂಡರೆ ಅಕ್ಕರೆ’ ಅಂತ ಹೇಳಿದವು.

ಮಿಂಚುಹುಳ ಕೂಡ ನಾನು ಸಣ್ಣವನಾದರೂ ಯಾರ ಸಹಾಯವಿಲ್ಲದೆ ಇಡೀ ಕತ್ತಲೆಯಲ್ಲಿಒಂದು ಬೆಳಕಿನ ಸೊಬಗು ಮೂಡಿಸುವೆ ಎಂದು ಹೇಳಿತು.

ತನ್ನ ವಾದ ಮಂಡಿಸಲು ಮುಂದಾದ ಹಣತೆ ನನಗೆ ವಾದ ಮಂಡಿಸಲು ಆಸೆಯೇನೂ ಇಲ್ಲ. ನಾನು ಶ್ರೇಷ್ಠನೆಂದೂ ಭಾವಿಸಿಲ್ಲ. ಕನಿಷ್ಠನೆಂದೂ ಭಾವಿಸಿಲ್ಲ. ನಾನು ನನ್ನ ಕೆಲಸ ಮಾಡುತ್ತಿದ್ದೇನೆ. ತನ್ನನ್ನು ತಾನು ಸುಟ್ಟುಕೊಂಡು ಬೆಳಕು ನೀಡುವುದರಲ್ಲಿನನಗೆ ಖುಷಿ ಇದೆ.

ಅದು ಕೇವಲ ಸ್ವಲ್ಪವೇ ಬೆಳಕಾಗಲಿ, ನನ್ನನ್ನು ನಂಬಿ ಹಚ್ಚಿದವರಿಗೆ ನಾನು ಮೋಸ ಮಾಡಲ್ಲ. ಅವರು ಬಯಸುವವರೆಗೂ ಬೆಳಕು ಕೊಡುತ್ತೇನೆ. ಅವರು ಬೇಡವೆಂದರೆ ನನ್ನ ಬೆಳಗುವಿಕೆ ನಿಲ್ಲಿಸುತ್ತೇನೆ. ಸೂರ್ಯನಾಗಲಿ, ಚಂದ್ರನಾಗಲಿ, ನಕ್ಷತ್ರಗಳಾಗಲಿ ಬೇಡವೆಂದರೆ ನಿಲ್ಲಿಸಿಯಾರೆ? ಜನರಿಗೆ ಬೇಕೋ ಬೇಡ್ವೊ ಗೊತ್ತಿಲ್ಲದೆ ತಮ್ಮ ಪಾಡಿಗೆ ತಾವು ಉರಿಯುತ್ತಲೇ ಇರುತ್ತಾರೆ.

ನಾನು ಇಲ್ಲದೆ ಹೋಗಿದ್ದರೆ ಮನುಷ್ಯರ ಜಗತ್ತು ಹೇಗಿರುತ್ತಿತ್ತು ಎಂದು ಊಹಿಸಿ. ಆದರೆ ನನಗೆ ಅದರಲ್ಲಿಹೆಗ್ಗಳಿಕೆ ಇಲ್ಲ. ಅದು ನನ್ನ ಕೆಲಸ, ನನ್ನ ಪಾಡಿಗೆ ನಾನು ಉರಿದು ಬೆಳಕು ಕೊಡುವುದು ಕರ್ತವ್ಯ. ಕರ್ತವ್ಯದಲ್ಲಿಶ್ರೇಷ್ಠತೆಯ ಲೆಕ್ಕ ಹಾಕುವುದು ನನಗೆ ಸರಿ ಬರುವುದಿಲ್ಲ. ಅದಕ್ಕಾಗಿ ನಾನು ಮೊದಲೇ ಸಭೆಗೆ ಬಂದಿರಲಿಲ್ಲ. ಕ್ಷಮಿಸಿ’ ಎಂದು ಕೈ ಮುಗಿಯಿತು.

ಹಣತೆಯ ಮಾತು ಮುಗಿಯುತ್ತಲೇ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಆಗ ಬ್ರಹ್ಮ, ಯಾರು ಶ್ರೇಷ್ಠರು ಎಂಬುದನ್ನು ನಾನು ತೀರ್ಮಾನಿಸುವ ಅಗತ್ಯ ಇಲ್ಲ. ಇಡೀ ಸಭೆಯೇ ಅದನ್ನು ಗುರುತಿಸಿದೆ.

ಶ್ರೇಷ್ಠತೆ ಬರುವುದು ಬರೀ ಬಲದಿಂದಲ್ಲ, ತನ್ನ ಶಕ್ತಿಯಿಂದಲ್ಲ, ಅದರ ಜೊತೆಗೆ ನಡವಳಿಕೆಯಿಂದಲೂ. ಸಣ್ಣ ಬೆಳಕು ಕೊಟ್ಟರೂ ಹಣತೆಯ ವ್ಯಕ್ತಿತ್ವ ಗುರುತರವಾದದ್ದು’ ಎಂದ. ಎಲ್ಲರೂ ಹಣತೆಗೆ ಜಯಕಾರ ಹಾಕಿದರು. ಸೂರ್ಯ, ಚಂದ್ರ, ನಕ್ಷತ್ರಗಳಿಗೆ ತಮ್ಮ ತಪ್ಪಿನ ಅರಿವಾಯಿತು.

ಕೃಪೆ: ಸದಾಶಿವ್‌ ಸೊರಟೂರು

ರಾಜಕೀಯ

ಬಡವರ ಬಿಪಿಎಲ್‌ ಕಾರ್ಡುಗಳನ್ನು ರದ್ದು ಮಾಡಲಾಗಿದೆ: ಆರ್‌.ಅಶೋಕ ಆಕ್ರೋಶ

ಬಡವರ ಬಿಪಿಎಲ್‌ ಕಾರ್ಡುಗಳನ್ನು ರದ್ದು ಮಾಡಲಾಗಿದೆ: ಆರ್‌.ಅಶೋಕ ಆಕ್ರೋಶ

ಬಡವರ ಬಿಪಿಎಲ್‌ ಕಾರ್ಡುಗಳನ್ನು ರದ್ದು ಮಾಡಲಾಗಿದೆ. ಈ ಮೂಲಕ ಗ್ಯಾರಂಟಿಗಳನ್ನು ತಪ್ಪಿಸಬಹುದು ಎಂದು ಸರ್ಕಾರ ಅಂದುಕೊಂಡಿದೆ; ಆರ್. ಅಶೋಕ (R. Ashoka)

[ccc_my_favorite_select_button post_id="116854"]
ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP): ಗೋಯೆಲ್‌ ಜೊತೆ ಕೇಂದ್ರ ಸಚಿವ ಹೆಚ್.ಡಿ.ಕೆ ಮಹತ್ವದ ಚರ್ಚೆ

ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP):

ಕರ್ನಾಟಕದ ಕೈಗಾರಿಕಾಭಿವೃದ್ದಿಗೆ ಪರಿವರ್ತನಾತ್ಮಕ ಹೆಜ್ಜೆ ಎಂದೇ ನಂಬಲಾಗಿರುವ 9 ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯನ್ನು (NICDP- National Industrial Corridor Development Programme) ಅನುಷ್ಠಾನಗೊಳಿಸಬೇಕೆಂದು ಕೋರಿ ಕೇಂದ್ರದ ಬೃಹತ್‌ ಕೈಗಾರಿಕೆ

[ccc_my_favorite_select_button post_id="116156"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ

ವಿಶ್ವಕಪ್ ವಿಜೇತ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿ ಅಭಿನಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಕರ್ನಾಟಕದ ಕ್ರಿಕೆಟ್ ಪಟುಗಳಿಗೆ ತಲಾ ಹತ್ತು ಲಕ್ಷ ನಗದು ಬಹುಮಾನದ ಜೊತೆಗೆ ಸರ್ಕಾರಿ ಉದ್ಯೋಗ ಘೋಷಿಸಿದರು.

[ccc_my_favorite_select_button post_id="116681"]
ಕೆಲವೇ ಗಂಟೆಗಳಲ್ಲಿ ಸರಗಳ್ಳನ ಬಂಧನ.. ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ತಂಡಕ್ಕೆ ವ್ಯಾಪಕ ಪ್ರಶಂಸೆ

ಕೆಲವೇ ಗಂಟೆಗಳಲ್ಲಿ ಸರಗಳ್ಳನ ಬಂಧನ.. ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ತಂಡಕ್ಕೆ ವ್ಯಾಪಕ ಪ್ರಶಂಸೆ

ಮಹಿಳೆಯ ಮಾಂಗಲ್ಯ ಸರವನ್ನು ಕಿತ್ತು ಬೈಕ್‌ನಲ್ಲಿ ಪರಾರಿಯಾಗಿರುವ ಘಟನೆ ನಡೆದು ಕೆಲವೇ ಗಂಟೆಯೊಳಗೆ ಆರೋಪಿಯನ್ನು (Chain snatcher) ಬಂಧಿಸುವಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ನೇತೃತ್ವದ

[ccc_my_favorite_select_button post_id="116820"]
ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ದುರ್ಮರಣ: ಇಂದು ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ದುರ್ಮರಣ: ಇಂದು ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ (Mahantesh Bilagi) ಸೇರಿ ಮೂವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

[ccc_my_favorite_select_button post_id="116728"]

ಆರೋಗ್ಯ

ಸಿನಿಮಾ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್ ಇಲ್ಲಿದೆ ನೋಡಿ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ( Actor Darshan) ಅಭಿನಯದ "ದಿ ಡೆವಿಲ್" (The Devil) ಸಿನಿಮಾದ ಮೂರನೇ ಗೀತೆ ಬಿಡುಗಡೆಯಾಗಿದೆ.

[ccc_my_favorite_select_button post_id="116277"]
error: Content is protected !!