ಥಾಣೆ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಹೆಣ್ಣುಕೊಟ್ಟ ಮಾವನನ್ನು ದೊಣ್ಣೆಯಿಂದ ಹೊಡೆದು ಕೊಂದು (Killed) ಅಳಿಯ ಪಾರಾರಿಯಾಗಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಟಾಸ್ ನಗರ ಪಟ್ಟಣದಲ್ಲಿ ನಡೆದಿದೆ.
ಮೃತನನ್ನು ಸುಶೀಲ್ಸಿಂಗ್ ಗೌಂಡ್ ಸರ್ದಾರ್ (55 ವರ್ಷ) ಎಂದು ಗುರುತಿಸಲಾಗಿದೆ.ಜಲಗಾಂವ್ ನ ನಿವಾಸಿ ಬೋಲಾಸಿಂಗ್ ಜಗದೀಶ್ಸಿಂಗ್ ಭವಾರ್ (35 ವರ್ಷ) ಕೊಲೆ ಮಾಡಿ ಪರಾರಿಯಾಗಿರುವ ಆಳಿಯ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಪತ್ನಿ ಮತ್ತು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಲು ತನ್ನ ಮಾವನ ಮನೆಗೆ ಭವಾರ್ ಬಂದಾಗ ಈ ಘಟನೆ ನಡೆದಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಕೌಟುಂಬಿಕ ಕಲಹಗಳಿಂದಾಗಿ ದಂಪತಿಗಳು ಬೇರೆ ಬೇರೆಯಾಗಿ ವಾಸಿಸುತ್ತಿದ್ದರು ಆದರೆ ಇತ್ತೀಚೆಗೆ ಪತ್ನಿಯನ್ನು ಸಂಪರ್ಕಿಸಿ ಮನೆಗೆ ಭವಾರ್ ಕರೆದಿದ್ದ.
ಆದರೆ ಸುಶೀಲ್ಸಿಂಗ್ ತನ್ನ ಮಗಳು ಮತ್ತು ಮೊಮ್ಮಕ್ಕಳನ್ನು ಕಳುಹಿಸಲು ನಿರಾಕರಿಸಿದಾಗ, ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದು ಭವರ್ ಮರದ ದೊಣ್ಣೆಯಿಂದ ಸುಶೀಲ್ಸಿಂಗ್ ಮನಬಂದಂತೆ ದಳಿಸಿದ್ದಾನೆ. ಪತ್ನಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ಆಕೆಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ಇದನ್ನೂ ಓದಿ; ಹಲಸಿನ ಹಣ್ಣು ತಂದ ಆಪತ್ತು.. ಬಾಲಕನ ದುರ್ಮರಣ
ತೀವ್ರವಾಗಿ ಗಾಯಗೊಂಡ ಸರ್ದಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದು ಆಳಿನ ಕಿತಾಪತಿಯಿಂದ ಕುಟುಂಬ ಆಸರೆಯಿಲ್ಲದೆ ಬೀದಿಗೆ ಬಿದ್ದಿದೆ.
ಕೊಲೆ ಪ್ರಕರಣ ದಾಖಲಿಸಿ ಪೊಲೀಸರು ಪರಾರಿಯಾಗಿರುವ ಭವಾರ್ನ ಪತ್ತೆಗೆ ಮುಂದಾಗಿದ್ದಾರೆ.