ಬೆಂಗಳೂರು: ನೈಜೀರಿಯಾ ದೇಶದ ಮಹಿಳೆಯೋಬ್ಬರನ್ನು ದುಷ್ಕರ್ಮಿಗಳು ಕೊಲೆ (Murder) ಮಾಡಿರುವ ಘಟನೆ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸುಮಾರು 30 ವರ್ಷದ ನೈಜೀರಿಯಾ ಮಹಿಳೆಯ ಹೆಸರು, ವಿಳಾಸ ಪತ್ತೆಯಾಗಿಲ್ಲ. ಚಿಕ್ಕಜಾಲದ ತರಹುಣಸೆಯ ಚಪ್ಪರಕಲ್ಲು ರಸ್ತೆಯ ತೇರಾಫಾರಂ ಸಮೀಪ ಜಮೀನೊಂದರ ಮರದ ಕೆಳಗೆ ಮಹಿಳೆಯ ಶವ ಪತ್ತೆಯಾಗಿದೆ.
ದುಷ್ಕರ್ಮಿಗಳು ಈ ಮಹಿಳೆ ತಲೆಗೆ ಯಾವುದೋ ಆಯುಧದಿಂದ ಹೊಡೆದು ಬೇರೆಡೆ ಕೊಲೆ ಮಾಡಿ ಈ ಜಾಗದಲ್ಲಿ ತಂದು ಬಿಸಾಡಿರುವ ಶಂಕೆ ವ್ಯಕ್ತವಾಗಿದೆ.
ಬುಧವಾರ ಮಹಿಳೆಯ ಶವ ನೋಡಿದ ಸಾರ್ವಜನಿಕರೊಬ್ಬರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಚಿಕ್ಕಜಾಲ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಈ ಮಹಿಳೆ ನೈಜೀರಿಯಾ ದವರೆಂದು ಗೊತ್ತಾಗಿದೆ.
ಮಹಿಳೆ ಯಾರು, ಎಲ್ಲಿ ವಾಸವಿದ್ದರು, ದುಷ್ಕ ರ್ಮಿಗಳು ಯಾವ ಕಾರಣಕ್ಕೆ ಕೊಲೆ ಮಾಡಿದ್ದಾ ರೆಂಬುದರ ಕುರಿತು ಪೊಲೀಸರು ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ.