ಬೆಂಗಳೂರು: ಬಾಡಿಗೆಯಲ್ಲಿ ದುಡಿಯಬಹುದೆಂದು ಸಾಲ ಮಾಡಿ ಖರೀದಿಸಿದ ಕಾರಿನ ಸಾಲ ತೀರಿಸಲು ಸಾಧ್ಯವಾಗದೆ, ಇಎಂಐ ಬಾಕಿ ಉಳಿದಿರುವ ಕಾರಣದಿಂದಾಗಿ ಯುವ ಚಾಲಕನೊಬ್ಬ ನೇಣು ಬಿಗಿದು ಆತ್ಮಹತ್ಯೆಗೆ (Suicide) ಶರಣಾದ ಘಟನೆ ನಗರದ ಚಿಕ್ಕಬಾಣಾವರದಲ್ಲಿ ನಡೆದಿದೆ.
ಮೃತನನ್ನು ಕಲಬುರಗಿ ಮೂಲದ 21 ವರ್ಷದ ದೇವರಾಜ್ ಎಂದು ಗುರುತಿಸಲಾಗಿದೆ.
ದೇವರಾಜ್ ಕಳೆದ ವರ್ಷ ಕಾರು ಖರೀದಿಸಿದ್ದರು ಮತ್ತು ಅದರ ಇಎಂಐ ಪಾವತಿ ಮಾಡುವ ಉದ್ದೇಶದಿಂದ ಅದನ್ನು ಬಾಡಿಗೆಗೆ ನೀಡುವ ಯೋಜನೆ ಮಾಡಿಕೊಂಡಿದ್ದರು. ಆದರೆ ಇತ್ತೀಚಿನ ತಿಂಗಳುಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬಾಡಿಗೆ ಸಿಗದೆ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದರು.
ಬ್ಯಾಂಕ್ನಿಂದ ಎರಡು ತಿಂಗಳ ಇಎಂಐ ಬಾಕಿಯಾಗಿದ್ದು, ನೋಟಿಸ್ ಕೂಡಾ ಬಂದಿದ್ದಲ್ಲದೆ, ಸಾಲದ ಒತ್ತಡದಿಂದ ದೇವರಾಜ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಚಿಕ್ಕಬಾಣಾವರದ ತಾವು ವಾಸ ಮಾಡುವ ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತಂತೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.