ಬೆಂಗಳೂರು: ನಿಷ್ಠೆಗೆ ಮತ್ತೊಂದು ಹೆಸರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಇದಕ್ಕೆ ಕಾರಣ ಸತತ 17 ವರ್ಷಗಳಿಂದ IPL ಗೆಲ್ಲದೆ ಇದ್ದರು RCB ಅಭಿಮಾನಿಗಳು ಮಾತ್ರ ತಂಡವನ್ನು ಬಿಟ್ಟುಕೊಟ್ಟಿಲ್ಲ, ಬಿಟ್ಟು ಕೊಡುವುದು ಇಲ್ಲ.
18 ವರ್ಷಗಳಿಂದ ಕಾದು ನಿಂತಿರುವ ಆ ಸಮಯ ಬಂದಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಸರ್ವಶ್ರೇಷ್ಠ ಪ್ರದರ್ಶನ ಪಣಕ್ಕಿಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2016ರ ನಂತರ ಹಾಗೂ ಒಟ್ಟಾರೆ 4ನೇ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಫೈನಲ್ ಪ್ರವೇಶಿಸಿ ಸಾಧನೆ ಮಾಡಿದೆ.
ಆ ಮೂಲಕ ಜೂನ್ 3ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ನಲ್ಲಿ ಬೆಂಗಳೂರು ತಂಡ 2ನೇ ಕ್ವಾಲಿಫೈಯರ್ ವಿಜೇತ ತಂಡವನ್ನು ಎದುರಿಸಲಿದೆ.
ಇದರ ಬೆನ್ನಲ್ಲೇ 18 ನೇ ಸರಣಿಯಲ್ಲಿ RCB ಕಪ್ ಗೆಲ್ಲಲೇ ಬೇಕೆಂದು ಅಭಿಮಾನಿಗಳು ದೇವರಿಗೆ ಮೊರೆ ಹೋಗಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಮತ್ತಷ್ಟು ಅಭಿಮಾನಿಗಳು ಕಪ್ ಗೆದ್ದ ದಿನ RCB ಜರ್ಸಿ ಧರಿಸುವುದು, ಅನ್ನ ದಾಸೋಹ, ಬೈಕ್ ರ್ಯಾಲಿ ಮುಂತಾದ ವಿಚಾರಗಳ ಕುರಿತು ಚರ್ಚೆ ನಡೆಸುತ್ತಿದ್ದಾರೆ.
ಈಗ ಮುಖ್ಯ ವಿಷಯಕ್ಕೆ ಬರೋಣ, RCB ಹೆಸರಿಗೆ ಬೆಂಗಳೂರು ತಂಡವಾದರೂ ಇದರ ಅಭಿಮಾನಿಗಳು ದೇಶ ವಿದೇಶಗಳಲ್ಲಿ ಇದ್ದಾರೆ. ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಏಕೈಕ ತಂಡವೆಂದರೆ ಅದು RCB ಅದು ಎಲ್ಲರಿಗೂ ಗೊತ್ತು.
ಅಂತೆಯೇ ಜೂ. 3 ರಂದು ನಡೆಯಲಿರುವ ಫೈನಲ್ನಲ್ಲಿ RCB ಕಪ್ ಗೆಲ್ಲಿಸುವಂತೆ ಅಭಿಮಾನಿಯೋರ್ವ ದೇವರಿಗೆ ಚೀಟಿ ಬರೆದು ಕೋರಿ ಕೊಂಡಿರುವ ಘಟನೆ ತೆಲಂಗಾಣದಲ್ಲಿ ವರದಿಯಾಗಿದೆ.
ಹೌದು ತೆಲಂಗಾಣ ರಾಜ್ಯದ ಕರೀಂನಗರದಲ್ಲಿರುವ ಪ್ರಸಿದ್ಧ ಕೊಂಡಗಟ್ಟು ಆಂಜನೇಯ ಸ್ವಾಮಿಗೆ ಚೀಟಿ ಬರೆದಿರುವ RCB ಅಭಿಮಾನಿ, please god this year RCB won that trophy ecsala cup Namde ಎಂದು ಬೇಡಿಕೊಂಡಿದ್ದಾನೆ.
ಈ ಚೀಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.