ನೆಲಮಂಗಲ: ಪಾರ್ಟಿಗೆಂದು ಕರೆದ ದುಷ್ಕರ್ಮಿಗಳು ಯುವಕನನ್ನು ಬರ್ಬರವಾಗಿ ಹತ್ಯೆ (Murder) ಮಾಡಿದ್ದಾರೆ.
ನೆಲಮಂಗಲ ತಾಲೂಕಿನ ಗೊಲ್ಲಹಳ್ಳಿ ಬಳಿ ತಡರಾತ್ರಿ 1:30ರ ಸಮಯದಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ ದರ್ಶನ್ (24) ಯುವಕನನ್ನು ಭೀಕರವಾಗಿ ಹತ್ಯೆ ಮಾಡಲಾದೆ.
ಸ್ಥಳಕ್ಕೆ ನೆಲಮಂಗಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಾಗಿದೆ. ಘಟನೆ ನಂತರ ಕೊಲೆ ಆರೋಪಿ ವೇಣುಗೋಪಾಲ್ ನಾಪತ್ತೆಯಾಗಿದ್ದಾನೆ.
ಮೇಲ್ನೋಟಕ್ಕೆ ಇಬ್ಬರು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಎನ್ನಲಾಗಿದೆ. ಶುಕ್ರವಾರ ರಾತ್ರಿ ದರ್ಶನ್ನನ್ನು ವೇಣು ಗೋಪಾಲ್ ಪಾರ್ಟಿಗೆ ಕರೆದಿದ್ದಾನೆ.
ಈ ವೇಳೆ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೃತ ದೇಹ ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಸರ್ಕಾರಿ ಆಸ್ಪತ್ರೆ ರವಾನೆ ಮಾಡಲಾಗಿದೆ. ಕೊಲೆ ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ವಾಷಿಂಗ್ ಮಿಷಿನ್ ವೈರ್ನಿಂದ ವಿದ್ಯುತ್ ತಗುಲಿ ಬಾಲಕಿ ಸಾವು
ವಾಷಿಂಗ್ ಮಿಷನ್ನ ವೈರ್ನಿಂದ ವಿದ್ಯುತ್ ತಗುಲಿ ಬಾಲಕಿಯೊ ಬ್ಬಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನೆಲಮಂಗಲ ತಾಲೂಕಿನ ಹಂಚಿಪುರ ಗ್ರಾಮದ ಪ್ರಿಯದರ್ಶಿನಿ (13 ವರ್ಷ) ಮೃತಪಟ್ಟ ಬಾಲಕಿ.
ಪ್ರಿಯದರ್ಶಿನಿ ತನ್ನ ಮನೆಯಲ್ಲಿ ಬಟ್ಟೆ ತೊಳೆ ಯುವ ವೇಳೆ, ವಾಷಿಂಗ್ ಮಿಷನ್ ಆನ್ ಮಾಡುವ ಸಂದರ್ಭದಲ್ಲಿ ವೈರ್ನಿಂದ ವಿದ್ಯುತ್ ತಗುಲಿದೆ. ವೈರ್ ತಗುಲುತ್ತಿದ್ದಂತೆ ದೇಹದಲ್ಲಿ ವಿದ್ಯುತ್ ಪ್ರಸರವಾಗಿ ಆಕೆ ಸ್ಥಳದಲ್ಲೇ ಕುಸಿದುಬಿದ್ದು ತಕ್ಷಣ ಸಾವನ್ನಪ್ಪಿದ್ದಾಳೆ.
ಮಾನವೀಯತೆ ಮೆರೆದ ಕುಟುಂಬ: ಈ ಘಟನೆಯು ಬಾಲಕಿ ಕುಟುಂಬದ ಮೇಲೆ ದೊಡ್ಡ ಆಘಾತವನ್ನು ಉಂಟುಮಾಡಿದ್ದರೂ, ಅವರ ಮಾನವೀಯತೆಯ ಚಿಂತನೆಯು ಸಮಾಜಕ್ಕೆ ಮಾದರಿಯಾಗಿದೆ.
ಬಾಲಕಿಯ ಕಣ್ಣುಗಳನ್ನು ದಾನ ಮಾಡುವ ಮೂಲಕ ಕುಟುಂಬವು ತಮ್ಮ ದುಃಖದ ಸಂದರ್ಭದಲ್ಲೂ ಸಾರ್ಥಕತೆಯನ್ನು ಮೆರೆದಿದೆ. ಈ ಕಾರ್ಯವು ಇತರರ ಜೀವನಕ್ಕೆ ಬೆಳಕು ನೀಡುವ ಮೂಲಕ ಬಾಲಕಿಯ ಸ್ಮರಣೆಯನ್ನು ಶಾಶ್ವತವಾಗಿಸಿದೆ.
ಘಟನಾ ಸ್ಥಳಕ್ಕೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ನರೇಂದ್ರ ಬಾಬು ಭೇಟಿ ನೀಡಿ ಪರಿಶೀಲನೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.