ಚಿಕ್ಕಬಳ್ಳಾಪುರ: ಜಮೀನು ವಿವಾದದ (Land dispute) ಹಿನ್ನಲೆಯಲ್ಲಿ ಗ್ರಾಮದ ಮಧ್ಯೆ ಯುವಕನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು, ಘಟನೆ ಬಗ್ಗೆ ತಿಳಿದು ಮಗನ ರಕ್ಷಣೆಗೆ ಧಾವಿಸಿದ ತಾಯಿಯೂ ಮೇಲೆ ಹಲ್ಲೆ ಮಾಡಲಾಗಿದ್ದು. ಘಟನೆಯಲ್ಲಿ ತಾಯಿ ಹಠಾತ್ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕೋರೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶಿವಣ್ಣ ಎಂಬಾತ ಡೈರಿಗೆ ಹಾಲು ಹಾಕಲು ತೆರಳುತ್ತಿದ್ದ ನವೀನ್ ಎಂಬ ಯುವಕನಿಗೆ ಹೊಂಚು ಹಾಕಿ ಹಿಂಬದಿಯಿಂದ ಮಚ್ಚಿನಿಂದ ಹಲ್ಲೆ ಮಾಡಿದ್ದು, ನವೀನ್ ತಪ್ಪಿಸಿಕೊಂಡು ಎಸ್ಕೇಪ್ ಆಗಿದ್ದಾನೆ.
ಘಟನೆ ತಿಳಿದು ಮಗನ ರಕ್ಷಣೆಗೆ ಧಾವಿಸಿದ ಯಶೋಧಮ್ಮ ನ ಮೇಲೂ ಹಲ್ಲೆ ಮಾಡಲು ಯತ್ನಿಸಿದ್ದಾನೆ ಎನ್ನಲಾಗಿದೆ. ಘಟನೆ ನಂತರ ತಾಯಿ ಮಗ ಇಬ್ಬರನ್ನ ಆಸ್ಪತ್ರೆಗೆ ಇಬ್ಬರನ್ನ ಕರೆತರಲಾಗಿದೆ.. ಆದ್ರೆ ಆಸ್ಪತ್ರೆಗೆ ಬರುವುಷ್ಟರಲ್ಲೇ ತಾಯಿ ಯಶೋಧಮ್ಮ ಮೃತಪಟ್ಟಿದ್ದಾರೆ ಎಂದು ವೈದ್ಯರು ಧೃಡೀಕರಿಸಿದ್ದಾರೆ.
ಇನ್ನೂ ಗಾಯಗೊಂಡಿರುವ ನವೀನ್ ಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ವಿಷಯ ತಿಳಿದು ಆಸ್ಪತ್ರೆ ಬಳಿ ಜಮಾಯಿಸಿದ ಮೃತ ಯಶೋಧಮ್ಮ ಪುತ್ರಿಯರ ಗೋಳಾಟ ಮುಗಿಲುಮುಟ್ಟಿತ್ತು.
ಇನ್ನೂ ಘಟನೆ ನಂತರ ಪರಾರಿಯಾಗಿದ್ದ ಶಿವಣ್ಣನನ್ನು ಪೊಲೀಸರು ಬಂಧಿಸಿದ್ದಾರೆ.
ಪೇರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.