ಖಮ್ಮಂ: ಇಷ್ಟವಿಲ್ಲದ ಸಂಬಂಧಿಕರ ಜೊತೆ ತಂಪು ಪಾನೀಯ (ಕೂಲ್ಡ್ರಿಂಕ್ಸ್) ಕುಡಿದಿದ್ದಕ್ಕಾಗಿ ಗಂಡ ನೀಡಿದ ಕಿರುಕುಳಕ್ಕೆ ಬೇಸತ್ತು ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತೆ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ತೆಲಂಗಾಣ ರಾಜ್ಯದ ಖಮ್ಮಂ ಜಿಲ್ಲೆಯಲ್ಲಿ ವರದಿಯಾಗಿದೆ.
ಖಮ್ಮಂ ಜಿಲ್ಲೆಯ ಕೊನಿಜರ್ಲಾ ಮಂಡಲದ ಸಾಲೆ ಬಂಜಾರ ಗ್ರಾಮದ ಮಾಲೋತು ಶ್ರೀನು ಮತ್ತು ನಾಗಮಣಿ ದಂಪತಿಗಳ ಏಕೈಕ ಪುತ್ರಿ ಪೂಜಿತಾ (19 ವರ್ಷ) ಮೃತ ದುರ್ದೈವಿ.
ಈಕೆಯನ್ನು ತಮ್ಮ ಊರಿನ ಹತ್ತಿರದ ಮನೆಯ ಕೆಪಿಎಚ್ಬಿಯಲ್ಲಿ ವಾಸಿಸುವ ಮತ್ತು ಆಭರಣ ಶೋ ರೂಂನಲ್ಲಿ ಮಾರಾಟಗಾರರಾಗಿ ಕೆಲಸ ಮಾಡುವ ಜಟೋತ ಶ್ರೀನಿವಾಸ್ ಅವರೊಂದಿಗೆ ಏಪ್ರಿಲ್ 16 ರಂದು ವಿವಾಹ ಮಾಡಲಾಗಿತ್ತು.
ಆದರೆ ಪೂಜಿತಾ ಅವರು ಶ್ರೀನಿವಾಸ್ ಕುಟುಂಬಕ್ಕೆ ಇಷ್ಟವಿಲ್ಲದ ಸಂಬಂಧಿಕರ ಜೊತೆ ತಂಪು ಪಾನೀಯ ಕುಡಿಯುತ್ತಿರುವ ವೀಡಿಯೊವನ್ನು ಸಹೋದರ ಮತ್ತು ಅಳಿಯ ವಾಟ್ಸಾಪ್ನಲ್ಲಿ ಶ್ರೀನಿವಾಸ್ಗೆ ಕಳುಹಿಸಿದ್ದರಂತೆ.
ಅಂದಿನಿಂದ, ಶ್ರೀನಿವಾಸ್ ಅವರು ನಮಗೆ ಆಗದವರ ಜನರ ಜೊತೆ ತಂಪು ಪಾನೀಯ ಏಕೆ ಕುಡಿದೆ ಎಂದು ಕಿರುಕುಳ ನೀಡುತ್ತಿದ್ದನಂತೆ.
ಇದರಿಂದ ಬೇಸತ್ತು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಪೂಜಿತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಏಕೈಕ ಪುತ್ರಿ ಅಕಾಲಿಕ ಅಗಲಿಕೆಗೆ ಪೂಜಿತಾ ಅವರ ಪೋಷಕರು ಆಕ್ರಂದನ ಮುಗಿಲು ಮುಟ್ಟಿದೆ.