ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮ (ಕಭಿ) ಸಾರ್ವಜನಿಕ ಆಸ್ಪತ್ರೆ, ಫೈತ್ ನರ್ಸಿಂಗ್ ಇನ್ಸ್ಟಿಟ್ಯೂಷನ್ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಮೂರ್ಛೆ ರೋಗ ದಿನಾಚರಣೆ ಅಂಗವಾಗಿ ಮೂರ್ಚೆ ರೋಗ ಕುರಿತ ಜಾಗೃತಿ ಜಾಥಾ (Awareness rally) ಹಮ್ಮಿಕೊಳ್ಳಲಾಗಿತ್ತು.
ಮೂರ್ಛೆ ರೋಗದ ಬಗ್ಗೆ ಇರುವ ಕಳಂಕ ಮತ್ತು ತಪ್ಪು ಕಲ್ಪನೆಯನ್ನು ಹೋಗಲಾಡಿಸುವಂತೆ ಅರಿವು ಮೂಡಿಸಲಾಯಿತು.
ಜಿಲ್ಲಾ ಕುಷ್ಟರೋಗ ನಿರ್ಮೂಲನಾ ಅಧಿಕಾರಿ ಹಾಗೂ ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ.ನಾಗರಾಜ್ ಮಾತನಾಡಿ, ಜನ ಸಾಮಾನ್ಯ ಜನರಿಗೆ ಮೂರ್ಛೆರೋಗದ ಬಗ್ಗೆ ಇರುವ ಮೂಢನಂಬಿಕೆಯನ್ನು ಹೋಗಲಾಡಿಸಲು ಸರಿಯಾದ ತಿಳುವಳಿಕೆ ನೀಡಲು ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಮೂರ್ಚೆ ರೋಗ ಅಥವಾ ಅಪಸ್ಮಾರವು ನರವೈಜ್ಞಾನಿಕ ಕಾಯಿಲೆಯಾಗಿದ್ದು, ಇದು ಮೆದುಳಿನಲ್ಲಿನ ವಿದ್ಯುತ್ ಚಟುವಟಿಕೆಯ ಹಠಾತ್ ಸ್ಫೋಟಗಳಿಂದ ಉಂಟಾಗುತ್ತದೆ, ಇದರ ಪರಿಣಾಮವಾಗಿ ರೋಗಗ್ರಸ್ತವಾಗುವಿಕೆಗಳು ಅಥವಾ ಅಸಾಮಾನ್ಯ ನಡವಳಿಕೆಯ ಅವಧಿಗಳು, ಸಂವೇದನೆಗಳು ಅಥವಾ ಅರಿವಿನ ನಷ್ಟ.
ಈ ರೋಗಗ್ರಸ್ತವಾಗುವಿಕೆಗಳು ತೀವ್ರತೆ ಮತ್ತು ಅವಧಿಗಳಲ್ಲಿ ವ್ಯಾಪಕವಾಗಿ ಬದಲಾಗಬಹುದು, ಮಿದುಳಿನ ಆಘಾತ, ಸೋಂಕುಗಳು, ಪಾರ್ಶ್ವವಾಯು ಅಥವಾ ಬೆಳವಣಿಗೆಯ ಅಸ್ವಸ್ಥತೆಗಳು ಸೇರಿದಂತೆ ವಿವಿಧ ಕಾರಣಗಳನ್ನು ಹೊಂದಿರಬಹುದು. ಇದು ದೀರ್ಘಕಾಲದ ಸ್ಥಿತಿಯಾಗಿದ್ದರೂ, ಅಪಸ್ಮಾರ ಹೊಂದಿರುವ ಅನೇಕ ಜನರು ತಮ್ಮ ರೋಗಗ್ರಸ್ತವಾಗುವಿಕೆಗಳನ್ನು ನಿರ್ವಹಿಸಬಹುದು.
ಸರಿಯಾದ ಚಿಕಿತ್ಸೆಯೊಂದಿಗೆ ಸಾಮಾನ್ಯ ಜೀವನವನ್ನು ನಡೆಸಬಹುದು. ಆದರೆ ಬಹಳಷ್ಟು ಮಂದಿಗೆ ಮೂರ್ಚೆ ರೋಗದ ಬಗ್ಗೆ ತಪ್ಪು ಕಲ್ಪನೆಗಳಿದ್ದು, ಕೆಲವು ಸಾರಿ ಇದು ರೋಗಿಯ ಪ್ರಾಣಕ್ಕೂ ಮುಳುವಾಗಲಿದೆ. ಈ ಬಗ್ಗೆ ಜಾಗೃತಿ ಅಗತ್ಯ . ಮೂರ್ಛೆರೋಗದ ವ್ಯಕ್ತಿಯು ಸಾಮಾನ್ಯರಂತೆ ಜೀವನ ನಡೆಸಲು ನಮ್ಮ ನಿಮ್ಮೆಲ್ಲರ ಸಹಾಯ ಬಹು ಮುಖ್ಯ ಎಂದರು.
ಅಂತರಾಷ್ಟ್ರೀಯ ಮೂರ್ಛೆರೋಗದ ದಿನ ಅಂಗವಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಶಾರದಾ ನಾಗನಾಥ್, ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ರಮೇಶ್, ಆರೋಗ್ಯ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.