ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸುತ್ತಲೇ ಸುತ್ತುತ್ತಿದ್ದ ರಾಷ್ಟ್ರ ರಾಜಕಾರಣ, ಇತ್ತೀಚೆಗೆ ಹಲವು ಕಾರಣಗಳಿಂದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಸುತ್ತ ಸುತ್ತುತ್ತಿದೆ.
ಎಪ್ಸ್ಟೀನ್ ಪೈಲ್ಸ್, ಮಾಜಿ ಸೇನಾಧಿಕಾರಿ ನರಾವಣೆ ಅವರ ಅಪ್ರಕಟಿತ ಪುಸ್ತಕ, ಭಾರತದ ಮೇಲೆ ಅಮೇರಿಕಾ ಶೇ.18 ಸುಂಕ, ಅಮೇರಿಕಾಗೆ ಭಾರತದಿಂದ ಶೂನ್ಯ ಶುಲ್ಕದ ಟ್ರೇಡ್ ಮಾಡಿ ಕೊಂಡಿರುವ ಮೋದಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ವಿರೋಧ ಪಕ್ಷಗಳು, ದೇಶದ ಜನತೆ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡುವಂತಾಗಿದೆ.
ಇನ್ನೂ ಬುಧವಾರ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬಜೆಟ್ ಮೇಲಿನ ಚರ್ಚೆ ಸಂಧರ್ಭದಲ್ಲಿ ಮಾತನಾಡಿರುವ ವಾಗ್ದಾಳಿ, ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಮೋದಿ ಸರ್ಕಾರವನ್ನು ಗಲಿಬಿಲಿಗೊಳಿಸಿದೆ.
ಮತ್ತೊಂದೆಡೆ ಮೋದಿ ಸರ್ಕಾರದ ಪರವಾಗಿ ಸುದ್ದಿ ಮಾಡುತ್ತವೆ ಎಂದು ಗೋದಿ ಮೀಡಿಯಾ ಎಂದು ಬಿರುದು ಪಡೆದಿರುವ ಕೆಲ ಖಾಸಗಿ ಚಾನಲ್ಗಳ ವಿರುದ್ಧ ನಿನ್ನೆ ರಾಹುಲ್ ಗಾಂಧಿ ಬಹಿರಂಗವಾಗಿ ಕಿಡಿಕಾರಿದ್ದು, ಮಾಧ್ಯಮಗಳ ವಲಯದಲ್ಲಿಯೂ ತೀವ್ರ ಚರ್ಚೆಗೆ ಕಾರಣವಾಗಿದೆ.
ಹೌದು ಗುರುವಾರ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ನಿರ್ಣಯ ಮಂಡಿಸಲು ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೋಟಿಸ್ ಸಲ್ಲಿಸಿದ ನಂತರ, ಈ ಬಗ್ಗೆ ಮಾಧ್ಯಮಗಳು ಕೇಳಿದಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಸರ್ಕಾರದ ಕೀವರ್ಡ್” ತೆಗೆದುಕೊಂಡು ಅದರ ಬಗ್ಗೆ ಕಾರ್ಯಕ್ರಮಗಳನ್ನು ನಡೆಸುತ್ತೀರಿ. ಆ ಮೂಲಕ “ದೇಶಕ್ಕೆ ಅಪಚಾರ” ಮಾಡುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಸತ್ತಿನಲ್ಲಿ ವಿಷಯಾಧಾರಿತ ನಿಲುವಳಿ ಸೂಚನೆಯ ಕುರಿತು ಗಾಂಧಿಯವರನ್ನು ಪ್ರಶ್ನಿಸಿದಾಗ, ಈ ದಿನ ಮಾಧ್ಯಮಗಳಿಗೆ ಒದಗಿಸಲಾದ ಕೀವರ್ಡ್ ಅದೇನಾ ಎಂದು ಅವರು ಲೇವಡಿ ಮಾಡಿದರು.
LoP @RahulGandhi Ji gives journalism lessons to Godi media.
— Saral Patel (@SaralPatel) February 12, 2026
“You are doing disservice to the country. You are not totally employed by the BJP. Your job is to be objective.
You can’t pick a word given by the BJP and run your whole show on it every day.” pic.twitter.com/hatMvJM8HH
“ಕುಚ್ ತೋ ಅಪ್ನಾ ಕಾಮ್ ಕರಾ ಕರೋ ಭಾಯ್ ( ಕನಿಷ್ಠ ಆದರೂ ನೀವು ನಿಮ್ಮ ಕೆಲವು ಕೆಲಸಗಳನ್ನು ಮಾಡಬೇಕು). ನೀವು ಬಿಜೆಪಿಯಿಂದ ನೇಮಕವಾಗಿರುವ ಸಂಪೂರ್ಣವಾಗಿ ಉದ್ಯೋಗಿಯಾಗಿಲ್ಲ. ಸ್ವಲ್ಪ ವಸ್ತುನಿಷ್ಠ ಕೆಲಸ ಮಾಡಲು ಪ್ರಯತ್ನಿಸಿ. ಇದು ನಿಜವಾಗಿಯೂ ನಾಚಿಕೆಗೇಡಿನ ಸಂಗತಿ. ಅದು ತುಂಬಾ ಜಾಸ್ತಿ ಆಗಿದೆ. ನೀವು ಯೋಚಿಸುವುದಿಲ್ಲವೇ? ನೀವು ಜವಾಬ್ದಾರಿಯುತ ಜನರು. ನೀವು ಮಾಧ್ಯಮದವರು ಎಂಬುದ ಮರೆಯಬೇಡಿ.”
“ನೀವು ವಸ್ತುನಿಷ್ಠರಾಗಿರಬೇಕಾದ ಜವಾಬ್ದಾರಿಯನ್ನು ಹೊಂದಿದ್ದೀರಿ. ಅವರು ಪ್ರತಿದಿನ ನಿಮಗೆ ನೀಡುವ ಒಂದು ಮಾತನ್ನು ನೀವು ಸುಮ್ಮನೆ ನಂಬಿ ಅದರ ಮೇಲೆಯೇ ನಿಮ್ಮ ಇಡೀ ಪ್ರಸಾರ ನಡೆಸಲು ಸಾಧ್ಯವಿಲ್ಲ. ನೀವು ದೇಶಕ್ಕೆ ಅನ್ಯಾಯ ಮಾಡುತ್ತಿದ್ದೀರಿ. ಅದನ್ನು ಗುರುತಿಸಲು ನಿಮಗೆ ಸಾಧ್ಯವಾಗುತ್ತಿಲ್ಲವೇ?” ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತಾದ PTIಗೆ ಸೇರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.