ನವದೆಹಲಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ, ಕೊಲೆ ಬೆದರಿಕೆ ಹಾಕಿರುವ ವಿಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರಿವ ವಿಡಿಯೊದಲ್ಲಿ, ಜೈ ಮಹಾಕಾಲ್, ಜೈ ಓಂ ಬಿರ್ಲಾ, ಜೈ ನರೇಂದ್ರ ಮೋದಿ ಎಂದು ಮಾತು ಆರಂಭಿಸುವ ವ್ಯಕ್ತಿ, ತಾನು ಕರ್ಣಿ ಸೇನೆ ಎಂದು ಹೇಳಿಕೊಂಡಿದ್ದು, ಬಜೆಟ್ ಅಧಿವೇಶನದ ಮೊದಲ ಹಂತದಲ್ಲಿ ಓಂ ಬಿರ್ಲಾ ಅವರ ಕಚೇರಿಯಲ್ಲಿ ಕಾಂಗ್ರೆಸ್ ಸಂಸದರು ಗದ್ದಲ ಎಬ್ಬಿಸಿದರು ಎಂಬ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರ ಆರೋಪವನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಸೇರಿದಂತೆ 25 ಮಂದಿ ಕಾಂಗ್ರೆಸ್ ಸಂಸದರಿಗೆ ಜೀವ ಬೆದರಿಕೆ ಹಾಕಿದ್ದಾರೆ.
भाजपा के एक कार्यकर्ता द्वारा नेता प्रतिपक्ष @RahulGandhi जी को खुलेआम गोली मारने की धमकी देना बेहद गंभीर और शर्मनाक है।
— Delhi Congress (@INCDelhi) February 19, 2026
राजनीतिक मतभेद अपनी जगह हैं, लेकिन हिंसा के लिए उकसाना लोकतंत्र पर सीधा हमला है।
संबंधित व्यक्ति की तुरंत गिरफ्तारी हो और कड़ी कानूनी कार्रवाई सुनिश्चित की… pic.twitter.com/keObsnGAJ9
ಸಂಸದರ ನಡೆದುಕೊಂಡ ರೀತಿಯು ಬಿಜೆಪಿ ಮತ್ತು ಕರ್ಣಿ ಸೇನೆಯ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾಗಿ, ಓಂ ಬಿರ್ಲಾ ಅವರ ಕಚೇರಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ 25 ಸಂಸದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವ್ಯಕ್ತಿಯು ಒತ್ತಾಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಓಂ ಬಿರ್ಲಾ ಫೋಟೊ ಇರುವ ಕೊಠಡಿಯಲ್ಲಿ ಕುಳಿತ ವ್ಯಕ್ತಿಯು, ಬಿಜೆಪಿ ಶಾಲು ಹಾಕಿಕೊಂಡು, ತಾನು ಕರ್ಣಿ ಸೇನೆಯ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾರೆ.
ಇಂತಹ ಘಟನೆ ಮತ್ತೆ ಸಂಭವಿಸಿದರೆ, ನಾವು ಆ ಸಂಸದರ ಮನೆಗಳಿಗೆ ನುಗ್ಗಿ ಅವರ ಮನೆಗಳನ್ನು ಧ್ವಂಸ ಮಾಡುತ್ತೇವೆ. ಈ ಘಟನೆ ರಾಹುಲ್ ಗಾಂಧಿಯವರ ಆದೇಶದ ಮೇರೆಗೆ ನಡೆದಿದೆ ಎಂದು ನಾನು ನಂಬುತ್ತೇನೆ.
ರಾಹುಲ್ ಗಾಂಧಿ, ಎಚ್ಚರಿಕೆಯಿಂದ ಕೇಳಿ, ಅಂತಹ ಘಟನೆ ಮತ್ತೆ ಸಂಭವಿಸಿದರೆ, ನಾವು ನಿಮ್ಮ ಮನೆಗೆ ನುಗ್ಗಿ ನಿಮಗೆ ಗುಂಡು ಹಾರಿಸುತ್ತೇವೆ’ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ರಾಹುಲ್ ಗಾಂಧಿ ಅವರನ್ನು ಬಹಿರಂಗವಾಗಿ ಹತ್ಯೆ ಮಾಡುತ್ತೇನೆ ಎಂದರು, ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದು ಕೇವಲ ಒಬ್ಬ ವ್ಯಕ್ತಿಯ ಕೃತ್ಯವಲ್ಲ, ಬದಲಿಗೆ ಗೋಡ್ಸೆ ಕಾರ್ಖಾನೆಯ ಯೋಜನೆಯ ಭಾಗ ಎಂದು ಕಿಡಿಕಾರಿದೆ.
“राहुल गांधी जी को सोशल मीडिया पर जान से मारने की धमकी दी जा रही है, फिर भी सरकार कार्रवाई नहीं कर रही – इससे उनकी मानसिकता साफ झलकती है। क्या वह देश में अराजकता फैलने देना चाहती है?”
— ATMARAM SWM inc (@AryanCkb) February 19, 2026
~ श्री #सचिन पायलट जी pic.twitter.com/KGvav0Ixkw