ದೊಡ್ಡಬಳ್ಳಾಪುರ: ತಾಲೂಕಿನ ಹಾಲು ಉತ್ಪಾದಕರ ಸಹಾಕರ ಸಂಘಗಳ ಡೈರಿಗಳಲ್ಲಿ (Dairies) ರೈತರಿಗೆ ಫೀಡ್ (feed) ಕೊರತೆ ಎದುರಾಗಿದ್ದು, ಪರದಾಡುತಾಗಿದೆ.

ಕರ್ನಾಟಕ ಹಾಲು ಮಹಾಮಂಡಳಿ (KMF) ರೈತರಿಗಾಗಿ ‘ನಂದಿನಿ’ ಬ್ರ್ಯಾಂಡ್ ಅಡಿಯಲ್ಲಿ ಗುಣಮಟ್ಟದ ಪಶು ಆಹಾರವನ್ನು (Cattle Feed) ಪೂರೈಸುತ್ತದೆ. ಇದು ಹಸುಗಳ ಆರೋಗ್ಯ ಮತ್ತು ಹಾಲಿನ ಇಳುವರಿಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಸಮತೋಲಿತ ಪಶು ಆಹಾರವಾಗಿದೆ.

ರೈತರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಮೇವು ಮತ್ತು ಆಹಾರವನ್ನು ಒದಗಿಸಿ, ಹೈನುಗಾರಿಕೆಯನ್ನು ಲಾಭದಾಯಕವಾಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಆದರೆ ಡೈರಿ ಫೀಡ್ ಕೊರತೆಯಿಂದ ರೈತರು ಪರದಾಡುವ ಪರಿಸ್ಥಿತಿ ದೊಡ್ಡಬಳ್ಳಾಪುರ ತಾಲೂಕಿನ ರೈತರದ್ದಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಡೈರಿಗಳಲ್ಲಿ ಫೀಡ್ ದಾಸ್ತಾನು ಇಲ್ಲವಾಗಿದೆ. ಏಪ್ರಿಲ್ 1 ರಿಂದ ಇಂಡೆಂಟ್ ಹಾಕಲಾಗುತ್ತಿದ್ದರು ಪೂರೈಕೆ ಇಲ್ಲವಾಗಿದೆ.
ಬೇಸಿಗೆ ಬಿಸಿಯಲ್ಲಿ ಜಾನುವಾರುಗಳಿಗೆ ಫೀಡ್ ದೊರಕದೆ ಹಾಲು ಉತ್ಪಾದನೆ ಕಡಿಮೆಯಾಗಿದೆ. ಅಲ್ಲದೆ ಪೌಷ್ಟಿಕಾಂಶದ ಕೊರತೆ ಎದುರಾಗಿದೆ. ಈ ಕುರಿತು ಡೈರಿಗಳ ಬಳಿ ಕಳೆದ 10 ದಿನಗಳಿಂದ ಅಲೆದು, ಅಲೆದು ಸಾಕಾಗಿದ್ದು, ಯಾವ ಅಧಿಕಾರಿಗಳು ರೈತರಿಗೆ ಸ್ಪಂದಿಸುತ್ತಿಲ್ಲ ಎಂದು ಯುವ ರೈತ ಮಲ್ಲೋಹಳ್ಳಿ ಪುನೀತ್ ಗೌಡ ಅಳಲು ತೋಡಿಕೊಂಡಿದ್ದಾರೆ.
ತ್ವರಿತ ಪೂರೈಕೆಗೆ ಸೂಚನೆ
ಈ ಕುರಿತಂತೆ ಬಮೂಲ್ ನಿರ್ದೇಶಕ ಬಿ.ಸಿ. ಆನಂದ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, ಡೈರಿ ಕಾರ್ಯದರ್ಶಿಗಳು ಮಾರ್ಚ್ ತಿಂಗಳಲ್ಲಿ ದಾಸ್ತಾನು ಮಾಡಿಕೊಳ್ಳದ ಕಾರಣ ಡೈರಿಗಳಲ್ಲಿ ಫೀಡ್ ಅಭಾವ ಉಂಟಾಗಿದೆ.
ಈ ಕುರಿತಂತೆ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಏಪ್ರಿಲ್ ತಿಂಗಳಲ್ಲಿ ಏಕಾಏಕಿ 23 ಸಾವಿರ ಟನ್ ಫೀಡ್ಗೆ ಇಂಡೆಂಟ್ ಹಾಕಿರುವ ಕಾರಣ ರಾಜಾನುಕುಂಟೆ ಘಟಕದಿಂದ ಪೂರೈಕೆ ಮಾಡಲು ವಿಳಂಬವಾಗುತ್ತಿದೆ.
ಸಾಂಗ್ಲಿ ಘಟಕದಿಂದ ಫೀಡ್ ಪೂರೈಕೆಗೆ ಸಿದ್ಧವಿದ್ದರು, ಸ್ಥಳೀಯ ಹಸುಗಳಿಗೆ ಫೀಡ್ ಹೊಂದದ ಕಾರಣ ತಡೆಹಿಡಿಯಲಾಗಿದೆ. ಆದಾಗ್ಯೂ ರಾಜಾನುಕುಂಟೆ ಘಟಕದಿಂದ ಹೆಚ್ಚುವರಿ ಉತ್ಪಾದನಗೆ ಒತ್ತು ನೀಡಿ, ತ್ವರಿತವಾಗಿ ರೈತರಿಗೆ ಫೀಡ್ ಪೂರೈಕೆಗೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಬಿ.ಸಿ. ಆನಂದ್ ಕುಮಾರ್ ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ: ಇಂದು ವಿವಿಧೆಡೆ ವಿದ್ಯುತ್ ಸ್ಥಗಿತ

ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಫೀಡರ್ನಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಏಪ್ರಿಲ್ 12ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ವರೆಗೆ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ (Power cut).
ಕುಚ್ಚಪ್ಪನಪೇಟೆ, ಕೊಂಗಾಡಿಯಪ್ಪ ಮುಖ್ಯರಸ್ತೆ, ಸಂಜಯ್ ನಗರ, ಭುವನೇಶ್ವರಿನಗರ, ಚೈತನ್ಯನಗರ, ತೇರಿನಬೀದಿ, ರಂಗಪ್ಪ ಸರ್ಕಲ್, ಕೆಸಿಪಿ ಸರ್ಕಲ್, ವೀರಾಪುರ, ಗಾಂಧಿನಗರ, ಖಾಸ್ಬಾಗ್ ಹಾಗೂ ಸುತ್ತಮು-ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ನಗರ ಉಪವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ಪಿ.ವಿನಯಕು-ಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.