ದೊಡ್ಡಬಳ್ಳಾಪುರ: ಪೊಲೀಸರ ದಾಳಿ,‌ ಜೂಜುಕೋರರ ಬಂಧನ…!

ದೊಡ್ಡಬಳ್ಳಾಪುರ, (ಆ.21): ಸರ್ಕಾರಿ ಜಮೀನಿನಲ್ಲಿ ಜೂಜಾಟದಲ್ಲಿ ನಿರತರಾಗಿ 06 ಮಂದಿ ಜೂಜುಕೂರರನ್ನು ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಮುನಿಕೃಷ್ಣ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಲಕ್ಷ್ಮೀ ದೇವಿಪುರದ ಸರ್ಕಾರಿ ಜಮೀನಿನಲ್ಲಿ ಜೂಜಾಟದಲ್ಲಿ ನಿರತರಾಗಿರುವ ಕುರಿತಂತೆ ಮಾಹಿತಿ ತಿಳಿದು ದಾಳಿ ನಡೆಸಿರುವ ಪೊಲೀಸರು, 06 ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರಿಂದ ರೂ.12.500 ನಗದು, 05 ಮೊಬೈಲ್ ವಶಕ್ಕೆ ಪಡೆಯಲಾಗಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ದಾಳಿ ನಡೆಸಿದ ತಂಡದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಮುನಿಕೃಷ್ಣ, ಸಿಬ್ಬಂದಿಗಳಾದ ರಂಗನಾಥ್, ಚಂದ್ರಶೇಖರ್, ಸಚಿನ್ ಉಪ್ಪಾರ್, ನಾಗೇಶ್, ಸುನೀಲ್, ರಮೇಶ್ ಮತ್ತಿತರರಿದ್ದರು ಎನ್ನಲಾಗಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

error: Content is protected !!