ಹರಿತಲೇಖನಿ ದಿನಕ್ಕೊಂದು ಕಥೆ: ಕರ್ಣನೆಂಬ ವೀರ ಯೋಧ

ಧೃತರಾಷ್ಟ್ರ, ಪಾಂಡು ಮತ್ತು ವಿದುರರನ್ನು ಬೆಳೆಸುವ ಹೊರೆ ಭೀಷ್ಮನ ಮೇಲಿತ್ತು. ಮೂವರು ಗಂಡುಮಕ್ಕಳು ದೊಡ್ಡವರಾದ ನಂತರ ಅವರನ್ನು ಶಿಕ್ಷಣಕ್ಕಾಗಿ ಆಶ್ರಮಕ್ಕೆ ಕಳುಹಿಸುತ್ತಾನೆ. ಧೃತರಾಷ್ಟ್ರನು ಬಲದಲ್ಲಿ, ಪಾಂಡು ಬಿಲ್ಲುಗಾರಿಕೆಯಲ್ಲಿ ಮತ್ತು ವಿದುರನು ಧರ್ಮ ಮತ್ತು ನೀತಿಯಲ್ಲಿ ಪ್ರವೀಣರಾದರು. 

ಯೌವನದಲ್ಲಿ ಧೃತರಾಷ್ಟ್ರ ಕುರುಡನಾಗಿದ್ದ ಕಾರಣ ರಾಜ್ಯಕ್ಕೆ ಉತ್ತರಾಧಿಕಾರಿಯಾಗಲು ಸಾಧ್ಯವಾಗಲಿಲ್ಲ. ವಿದುರನು ಗುಲಾಮನ ಮಗನಾದ್ದರಿಂದ ಅವನನ್ನೂ ರಾಜನನ್ನಾಗಿ ಮಾಡಲು ಸಾಧ್ಯವಾಗಲಿಲ್ಲ. ಆದ್ದರಿಂದ ಪಾಂಡುವನ್ನು ಹಸ್ತಿನಾಪುರದ ರಾಜ ಎಂದು ಘೋಷಿಸಲಾಯಿತು. 

ಗಾಂಧಾರದ ರಾಜಕುಮಾರಿ ಗಾಂಧಾರಿಯನ್ನು ಧೃತರಾಷ್ಟ್ರನು ವಿವಾಹವಾಗುತ್ತಾನೆ. ಪಾಂಡು ಕುಂತಿಯೆಂಬಾಕೆಯನ್ನು ವಿವಾಹವಾಗುತ್ತಾನೆ. ಈ ಕುಂತಿಯ ಮಗನೇ ಕರ್ಣ.

ಯದುವಂಶಿ ರಾಜ ಶೂರಸೇನನ ಪ್ರೀತಿಯ ಮಗಳೇ ಈ ಕುಂತಿ. ಅವಳ ತಂದೆ ಅವಳನ್ನು ಮನೆಗೆ ಬಂದ ಮಹಾತ್ಮರ ಸೇವೆಗೆಂದು ಮೀಸಲಿಟ್ಟಿದ್ದನು. ಕುಂತಿಯು ತನ್ನ ತಂದೆಯ ಅತಿಥಿಗೃಹಕ್ಕೆ ಬರುತ್ತಿದ್ದ ಋಷಿಮುನಿಗಳಿಗೆ, ಸಂತರಿಗೆ, ಮಹಾತ್ಮರಿಗೆ ಎಲ್ಲರಿಗೂ ಸೇವೆಯನ್ನು ಸಲ್ಲಿಸುತ್ತಿದ್ದಳು. 

ಒಮ್ಮೆ ಶೂರಸೇನನ ಆಶ್ರಮಕ್ಕೆ ದುರ್ವಾಸ ಮುನಿಗಳು ಬರುತ್ತಾರೆ. ಕುಂತಿಯು ಮನಃಪೂರ್ವಕವಾಗಿ ದುರ್ವಾಸ ಮುನಿಗಳ ಸೇವೆ ಮಾಡಿದಳು. ಕುಂತಿಯ ಸೇವೆಯಿಂದ ಸಂತುಷ್ಟನಾದ ದುರ್ವಾಸ ಋಷಿ, “ಮಗಳೇ! ನಿನ್ನ ಸೇವೆಯಿಂದ ನನಗೆ ತುಂಬಾ ಸಂತೋಷವಾಗಿದೆ. ಆದ್ದರಿಂದ ನಾನು ನಿನಗೆ ಒಂದು ಮಂತ್ರವನ್ನು ಉಡುಗೊರೆಯಾಗಿ ನೀಡುತ್ತೇನೆ. ಇದನ್ನು ಪಠಿಸುತ್ತಾ ನೀನು ನೆನೆಸಿಕೊಂಡ ದೇವರನ್ನು ನಿನ್ನ ಕಣ್ಣ ಮುಂದೆ ಕರೆಸಿಕೊಳ್ಳಬಹುದು ಮತ್ತು ಅವರಿಂದ ನನ್ನ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಬಹುದೆಂದು ದುರ್ವಾಸ ಮುನಿ ಕುಂತಿಗೆ ಮಂತ್ರವನ್ನು ಹೇಳಿ ಕೊಟ್ಟರು.

ಒಂದು ದಿನ, ಆ ಮಂತ್ರದ ಸತ್ಯಾಸತ್ಯತೆಯನ್ನು ಪರೀಕ್ಷಿಸಲು, ಕುಂತಿ, ಒಂಟಿ ಸ್ಥಳದಲ್ಲಿ ಕುಳಿತು, ಆ ಮಂತ್ರವನ್ನು ಜಪಿಸುತ್ತಾ ಸೂರ್ಯದೇವನನ್ನು ಸ್ಮರಿಸಿದಳು. ಅದೇ ಕ್ಷಣದಲ್ಲಿ ಸೂರ್ಯದೇವ ಅಲ್ಲಿ ಪ್ರತ್ಯಕ್ಷನಾಗಿ, “ದೇವಿ! ನೀವು ನನ್ನಿಂದ ಏನು ಬಯಸುತ್ತೀರಿ ಅದನ್ನು ಖಮಡಿತ ನಾನು ಈಡೇರಿಸುತ್ತೇನೆಂದು ಹೇಳುತ್ತಾನೆ. ಅದಕ್ಕೆ ಕುಂತಿಯು, “ದೇವರೇ! ನಿಮ್ಮಿಂದ ನನಗೆ ಯಾವುದೇ ರೀತಿಯ ನಿರೀಕ್ಷೆ ಇಲ್ಲ. ಆದರೆ, ಈ ಮಂತ್ರದ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಮಾತ್ರ ನಾನು ಮಂತ್ರವನ್ನು ಜಪಿಸಿದ್ದೇನೆ. 

ಕುಂತಿಯ ಈ ಮಾತುಗಳನ್ನು ಕೇಳಿದ ಸೂರ್ಯದೇವನು “ಓ ಕುಂತಿ! ನನ್ನ ಭೇಟಿ ಎಂದಿಗೂ ವ್ಯರ್ಥವಾಗಲು ನಾನು ಬಿಡುವುದಿಲ್ಲ. ನಾನು ನಿನಗೆ ಅತ್ಯಂತ ಪರಾಕ್ರಮಿ ಮತ್ತು ದಾನಶೀಲ ಮಗನನ್ನು ನೀಡುತ್ತೇನೆ. ಹೀಗೆ ಹೇಳುತ್ತಾ ಸೂರ್ಯದೇವನು ಮಾಯವಾದನು.

ಕುಂತಿಯು ನಾಚಿಕೆಯಿಂದ ಈ ವಿಷಯವನ್ನು ಯಾರಿಗೂ ಹೇಳಲಾಗದೆ ತನ್ನಲ್ಲೆ ವಿಷಯವನ್ನು ಮುಚ್ಚಿಟ್ಟುಕೊಳ್ಳುತ್ತಾಳೆ. ಸಮಯ ಬಂದಾಗ, ಆಕೆಯ ಗರ್ಭದಿಂದ ರಕ್ಷಾಕವಚ – ಉಂಗುರಗಳನ್ನು ಧರಿಸಿದ ಮಗು ಜನಿಸುತ್ತದೆ. 

ಕುಂತಿಯು ಸಮಾಜಕ್ಕೆ ಹೆಸರು ಆ ಮಗುವನ್ನು ಮಂಜೂಷದಲ್ಲಿ ಹಾಕಿ ರಾತ್ರಿ ಗಂಗೆಯಲ್ಲಿ ಮುಳುಗಿಸಿದಳು. ಮಗು ತೇಲುತ್ತಾ ಧೃತರಾಷ್ಟ್ರನ ಸಾರಥಿಯಾದ ಅಥಿರಥನು ತನ್ನ ಕುದುರೆಗೆ ಗಂಗಾನದಿಯಲ್ಲಿ ನೀರುಣಿಸುತ್ತಿದ್ದ ಸ್ಥಳವನ್ನು ತಲುಪಿತು. 

ರಕ್ಷಾಕವಚ ಧರಿಸಿದ್ದ ಮಗುವಿನ ಮೇಲೆ ಅವನ ಕಣ್ಣು ಬಿದ್ದಿತು. ಅಥಿರಥನಿಗೆ ಮಕ್ಕಳಿಲ್ಲದ ಕಾರಣ ಮಗುವನ್ನು ತಬ್ಬಿ ಮನೆಗೆ ಕರೆದುಕೊಂಡು ಹೋಗಿ ತನ್ನ ಸ್ವಂತ ಮಗನಂತೆ ಸಾಕಲು ಆರಂಭಿಸಿದ. ಆ ಮಗು ಬಹಳ ಸುಂದರವಾದ ಕಿವಿಗಳನ್ನು, ಕರ್ಣಕುಂಡಲಿಯನ್ನು ಹೊಂದಿತ್ತು. ಆದ್ದರಿಂದ ಆ ಮಗುವಿಗೆ ಕರ್ಣ ಎಂದು ಹೆಸರಿಡಲಾಯಿತು.

ಮಹಾರಾಜ ಧೃತರಾಷ್ಟ್ರನ ಸಾರಥಿ ಅಥಿರಥ ಮತ್ತು ಅವನ ಹೆಂಡತಿ ರಾಧೆಯ ದತ್ತು ಮಗನಾಗಿ ಕರ್ಣನು ಬೆಳೆಯುತ್ತಾನೆ. ಕರ್ಣನು ತನ್ನ ತಂದೆ ಅಥಿರಥನಂತೆ ರಥವನ್ನು ಓಡಿಸುವುದಕ್ಕಿಂತ ಯುದ್ಧ ಕಲೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದನು. 

ಕರ್ಣ ಮತ್ತು ಅವನ ತಂದೆ ಅಥಿರಥ ಆ ಸಮಯದಲ್ಲಿ ಯುದ್ಧ ಕಲೆಯ ಅತ್ಯುತ್ತಮ ಪ್ರವೀಣರಲ್ಲಿ ಒಬ್ಬರಾಗಿದ್ದ ಆಚಾರ್ಯ ದ್ರೋಣರನ್ನು ಭೇಟಿಯಾದರು.

ದ್ರೋಣಾಚಾರ್ಯರು ಆ ಕಾಲದಲ್ಲಿ ಕುರು ರಾಜಕುಮಾರರಿಗೆ ಶಿಕ್ಷಣ ನೀಡುತ್ತಿದ್ದರು. ಅವನು ಕರ್ಣನಿಗೆ ಕಲಿಸಲು ನಿರಾಕರಿಸಿದನು ಏಕೆಂದರೆ ಕರ್ಣನು ಸಾರಥಿಯ ಮಗ ಮತ್ತು ದ್ರೋಣರು ಕ್ಷತ್ರಿಯರಿಗೆ ಮಾತ್ರ ವಿದ್ಯೆಯನ್ನು ಕಲಿಸುವುದಾಗಿ ಹೇಳಿದರು.

ದ್ರೋಣಾಚಾರ್ಯರ ನಿರಾಕರಣೆಯ ನಂತರ, ಕರ್ಣನು ಬ್ರಾಹ್ಮಣರಿಗೆ ಮಾತ್ರ ಕಲಿಸುತ್ತಿದ್ದ ಪರಶುರಾಮನನ್ನು ಸಂಪರ್ಕಿಸಿದನು. ತನ್ನನ್ನು ಬ್ರಾಹ್ಮಣನೆಂದು ಕರೆದುಕೊಂಡ ಕರ್ಣನು ಪರಶುರಾಮನಲ್ಲಿ ವಿದ್ಯಾಭ್ಯಾಸ ನೀಡುವಂತೆ ವಿನಂತಿಸಿದನು. ಪರಶುರಾಮನು ಕರ್ಣನ ಕೋರಿಕೆಯನ್ನು ಸ್ವೀಕರಿಸಿದನು ಮತ್ತು ಕರ್ಣನಿಗೆ ತನ್ನಂತೆಯೇ ಯುದ್ಧ ಮತ್ತು ಬಿಲ್ಲುವಿದ್ಯೆಯಲ್ಲಿ ತರಬೇತಿ ನೀಡಿದನು.

ಕರ್ಣನ ವಿದ್ಯಾಭ್ಯಾಸ ಕೊನೆಯ ಹಂತದಲ್ಲಿತ್ತು. ಮಧ್ಯಾಹ್ನದ ಸಮಯ, ಗುರು ಪರಶುರಾಮರು ಕರ್ಣನ ತೊಡೆಯ ಮೇಲೆ ತಲೆಯಿಟ್ಟು ವಿಶ್ರಾಂತಿ ಪಡೆಯುತ್ತಿದ್ದರು. ಸ್ವಲ್ಪ ಹೊತ್ತಿನ ನಂತರ ಎಲ್ಲಿಂದಲೋ ಬಂದ ಚೇಳು ಅವನ ಇನ್ನೊಂದು ತೊಡೆಯನ್ನು ಕಚ್ಚಿ ಗಾಯ ಮಾಡತೊಡಗಿತು. 

ಗುರುವಿನ ವಿಶ್ರಾಂತಿಗೆ ಭಂಗ ಬರದಂತೆ ಕರ್ಣನು ಚೇಳಿನಿಂದ ದೂರ ಸರಿಯದೆ ಅದರ ಕಡಿತವನ್ನು ಸಹಿಸಿಕೊಂಡನು. ಸ್ವಲ್ಪ ಸಮಯದ ನಂತರ ಪರಶುರಾಮರು ನಿದ್ರೆಯಿಂದ ಎದ್ದು ಕರ್ಣನ ತೊಡೆಯಿಂದ ಬಹಳಷ್ಟು ರಕ್ತ ಹರಿಯುವುದನ್ನು ನೋಡಿದರು. 

ಚೇಳಿನ ಕಾಟವನ್ನು ಸಹಿಸಿಕೊಳ್ಳುವ ತಾಕತ್ತು ಕ್ಷತ್ರಿಯನಿಗೆ ಮಾತ್ರ ಇರುತ್ತದೆ, ಬ್ರಾಹ್ಮಣನಿಗಲ್ಲ. ನೀನು ನನ್ನ ಬಳಿ ಬ್ರಾಹ್ಮಣನೆಂದು ಸುಳ್ಳು ಹೇಳಿ ವಿದ್ಯೆಯನ್ನು ಕಲಿತುಕೊಂಡಿದ್ದೀಯ. ಈ ಕಾರಣಕ್ಕಾಗಿ ಪರಶುರಾಮರು ಅಗತ್ಯ ಅಗತ್ಯ ಸಮಯದಲ್ಲಿ ನಿನಗೆ ನಾನು ಕಲಿಸಿದ ವಿದ್ಯೆ ಮರೆತು ಹೋಗಲಿ ಎಂದು ಶಾಪವನ್ನು ನೀಡುತ್ತಾರೆ.

ಇದಾದ ಬಳಿಕ ಪರಶುರಾಮರ ಆಶ್ರಮವನ್ನು ತೊರೆದು ಕರ್ಣನು ಕೆಲಕಾಲ ಅಲೆದಾಡಲು ಆರಂಭಿಸುತ್ತಾನೆ. ಈ ವೇಳೆ ಅವನು ‘ಶಬ್ದವೇದಿ ವಿದ್ಯೆಯನ್ನು’ ಕಲಿಯಲು ಮುಂದಾಗುತ್ತಾನೆ. ಅಭ್ಯಾಸದ ವೇಳೆ ಹಸುವಿನ ಕರುವನ್ನು ಕಾಡುಪ್ರಾಣಿ ಎಂದು ತಪ್ಪಾಗಿ ಭಾವಿಸಿ ಬಾಣವನ್ನು ಹೊಡೆದು ಕರುವನ್ನು ಸಾಯಿಸುತ್ತಾನೆ.

ಆಗ ಆ ಹಸುವಿನ ಒಡೆಯನಾದ ಬ್ರಾಹ್ಮಣನು ಕರ್ಣನಿಗೆ ಅಸಹಾಯಕ ಪ್ರಾಣಿಯನ್ನು ಕೊಂದಂತೆಯೇ ನೀನು ಸಹ ಮುಂದೊಂದು ದಿನ ಅತ್ಯಂತ ಅಸಹಾಯಕನಾಗಿದ್ದಾಗ, ನಿನ್ನ ಗಮನ ಶತ್ರುಗಳಲ್ಲದೇ ಬೇರೆಡೆ ಇದ್ದಾಗ ನಿನ್ನನ್ನು ಕೊಲ್ಲುವಂತಾಗಲಿ ಎಂದು ಶಾಪವನ್ನು ನೀಡುತ್ತಾನೆ.

ಕರ್ಣನು ರಂಗವನ್ನು ಪ್ರವೇಶಿಸಿ ಅರ್ಜುನನಿಗೆ ದ್ವಂದ್ವಯುದ್ಧಕ್ಕೆ ಸವಾಲು ಹಾಕುತ್ತಾನೆ. ಆಗ ಕೃಪಾಚಾರ್ಯರು ಕರ್ಣನ ದ್ವಂದ್ವಯುದ್ಧವನ್ನು ತಿರಸ್ಕರಿಸಿ ಅವನ ವಂಶ ಮತ್ತು ರಾಜ್ಯದ ಬಗ್ಗೆ ಕೇಳುತ್ತಾರೆ. ಏಕೆಂದರೆ ದ್ವಂದ್ವಯುದ್ಧದ ನಿಯಮಗಳ ಪ್ರಕಾರ ಒಬ್ಬ ರಾಜಕುಮಾರ ಮಾತ್ರ ಹಸ್ತಿನಾಪುರದ ರಾಜಕುಮಾರನಾಗಿದ್ದ ಅರ್ಜುನನಿಗೆ ದ್ವಂದ್ವಯುದ್ಧಕ್ಕೆ ಸವಾಲು ಹಾಕುವ ಹಕ್ಕನ್ನು ಹೊಂದಿದ್ದಾನೆಂದು ಹೇಳುತ್ತಾನೆ. 

ಆಗ ಕೌರವರಲ್ಲಿ ಹಿರಿಯನಾದ ದುರ್ಯೋಧನನು ಅರ್ಜುನನೊಂದಿಗೆ ದ್ವಂದ್ವಯುದ್ಧಕ್ಕೆ ಅರ್ಹನಾಗುವಂತೆ ಕರ್ಣನನ್ನು ಅಂಗರಾಜ ಎಂದು ಘೋಷಿಸಿದನು. 

ಕರ್ಣನು ದುರ್ಯೋಧನನಿಗೆ ಪ್ರತಿಯಾಗಿ ಅವನಿಂದ ಏನು ಬೇಕು ಎಂದು ಕೇಳಿದಾಗ, ದುರ್ಯೋಧನನು ಕರ್ಣನನ್ನು ನೀನು ನನ್ನ ಸ್ನೇಹಿತನಾಗುವುದನ್ನು ಮಾತ್ರ ತಾನು ಬಯಸುತ್ತೇನೆಂಬುದನ್ನು ಹೇಳುತ್ತಾನೆ. ಅಂದಿನಿಂದ ಕರ್ಣ ಮತ್ತು ದುರ್ಯೋಧನನು ಅತ್ಯಂತ ಆಪ್ತರಾಗುತ್ತಾರೆ.

ಕೃಪೆ: ಸಾಮಾಜಿಕ ಜಾಲತಾಣ..

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ: ಕುಮಾರ ಬಂಗಾರಪ್ಪ

ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ: ಕುಮಾರ ಬಂಗಾರಪ್ಪ

ಬಿಜೆಪಿ (BJP) ರಾಜ್ಯ ಘಟಕದ ಅಧ್ಯಕ್ಷರ ನೇಮ ಕದ ವಿಚಾರದಲ್ಲಿ ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾವು ನಮ್ಮ ಬದ್ದರಾಗಿದ್ದೇವೆ ಎಂದು ಮಾಜಿ ಸಚಿವ ಕುಮಾರ ಬಂಗಾರಪ್ಪ (Kumara Bangarappa) ಹೇಳಿದರು.

[ccc_my_favorite_select_button post_id="116983"]
ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP): ಗೋಯೆಲ್‌ ಜೊತೆ ಕೇಂದ್ರ ಸಚಿವ ಹೆಚ್.ಡಿ.ಕೆ ಮಹತ್ವದ ಚರ್ಚೆ

ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP):

ಕರ್ನಾಟಕದ ಕೈಗಾರಿಕಾಭಿವೃದ್ದಿಗೆ ಪರಿವರ್ತನಾತ್ಮಕ ಹೆಜ್ಜೆ ಎಂದೇ ನಂಬಲಾಗಿರುವ 9 ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯನ್ನು (NICDP- National Industrial Corridor Development Programme) ಅನುಷ್ಠಾನಗೊಳಿಸಬೇಕೆಂದು ಕೋರಿ ಕೇಂದ್ರದ ಬೃಹತ್‌ ಕೈಗಾರಿಕೆ

[ccc_my_favorite_select_button post_id="116156"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ

ವಿಶ್ವಕಪ್ ವಿಜೇತ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿ ಅಭಿನಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಕರ್ನಾಟಕದ ಕ್ರಿಕೆಟ್ ಪಟುಗಳಿಗೆ ತಲಾ ಹತ್ತು ಲಕ್ಷ ನಗದು ಬಹುಮಾನದ ಜೊತೆಗೆ ಸರ್ಕಾರಿ ಉದ್ಯೋಗ ಘೋಷಿಸಿದರು.

[ccc_my_favorite_select_button post_id="116681"]
ಕೆಲವೇ ಗಂಟೆಗಳಲ್ಲಿ ಸರಗಳ್ಳನ ಬಂಧನ.. ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ತಂಡಕ್ಕೆ ವ್ಯಾಪಕ ಪ್ರಶಂಸೆ

ಕೆಲವೇ ಗಂಟೆಗಳಲ್ಲಿ ಸರಗಳ್ಳನ ಬಂಧನ.. ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ತಂಡಕ್ಕೆ ವ್ಯಾಪಕ ಪ್ರಶಂಸೆ

ಮಹಿಳೆಯ ಮಾಂಗಲ್ಯ ಸರವನ್ನು ಕಿತ್ತು ಬೈಕ್‌ನಲ್ಲಿ ಪರಾರಿಯಾಗಿರುವ ಘಟನೆ ನಡೆದು ಕೆಲವೇ ಗಂಟೆಯೊಳಗೆ ಆರೋಪಿಯನ್ನು (Chain snatcher) ಬಂಧಿಸುವಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ನೇತೃತ್ವದ

[ccc_my_favorite_select_button post_id="116820"]
ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ಖಾಸಗಿ ಬಸ್ಗೆ ಹಿಂದಿನಿಂದ ಪ್ಯಾಸೆಂಜರ್ ಆಟೋ ಡಿಕ್ಕಿ ಹೊಡೆದ ಪರಿಣಾಮ (Accident) ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಸಂಜೆ ತಾಲೂಕಿನ ಕಂಟನಕುಂಟೆ ಸಮೀಪ ಸಂಭವಿಸಿದೆ.

[ccc_my_favorite_select_button post_id="116950"]

ಆರೋಗ್ಯ

ಸಿನಿಮಾ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್ ಇಲ್ಲಿದೆ ನೋಡಿ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ( Actor Darshan) ಅಭಿನಯದ "ದಿ ಡೆವಿಲ್" (The Devil) ಸಿನಿಮಾದ ಮೂರನೇ ಗೀತೆ ಬಿಡುಗಡೆಯಾಗಿದೆ.

[ccc_my_favorite_select_button post_id="116277"]
error: Content is protected !!