ಬೆಂಗಳೂರು: ವಕ್ಫ್ ವಿವಾದವನ್ನ (waqf board land issue) ಬಿಜೆಪಿ ರಾಜಕೀಯ ಅಸ್ತ್ರವಾಗಿರಿಸಿಕೊಂಡು ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸುವ ಮೂಲಕ, ಅಶಾಂತಿ ಮೂಡಿಸಲು ಹುನ್ನಾರ ನಡೆಸುತ್ತಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಇಲಾಖೆ ಸಮರ್ಥವಾಗಿದ್ದು ಯಾವುದೇ ರೀತಿಯ ಅಶಾಂತಿ ಮೂಡಿಸಿದರು ಪರಿಸ್ಥಿತಿ ನಿಯಂತ್ರಣಕ್ಕೆ ತರೋಕೆ ಸನ್ನದ್ಧವಾಗಿದೆ ಎಂದು ಹೇಳಿದರು. ಶಾಂತಿ ಭಂಗ ಮಾಡೋಕೆ ಪ್ರಯತ್ನ ಪಟ್ಟರೆ ಬಿಜೆಪಿಯವರ ವಿರುದ್ಧ ಮೂಲಾಜಿಲ್ಲದೆ ಸೂಕ್ತ ಕಠಿಣ ಕ್ರಮ ಜರುಗಿಸೋದಾಗಿ ಹೇಳಿದರು.
ಸಿಎಂ ಆರೋಪಕ್ಕೆ ಸಾಕ್ಷಿ ಕೇಳುವ ಬಿಜೆಪಿಯವರು, ರಾಜ್ಯದಿಂದ ಇತರೆಡೆಗೆ 700 ಕೋಟಿ ರವಾನೆಯಾಗಿದೆ ಎಂಬ ಪ್ರಧಾನಿ ಹೇಳಿಕೆಗೆ ದಾಖಲೆ ಕೊಟ್ಟಿದ್ದಾರಾ..? ಹಾಗೆಯೇ ಶಾಸಕರ ಖರೀದಿ ಬಗ್ಗೆ ಸಿಎಂ ಕೂಡ ಸತ್ಯವಾದ ಆರೋಪ ಮಾಡಿದ್ದಾರೆ ಬಿಜೆಪಿಯವರು ಹಗುರ ಹೇಳಿಕೆ ನೀಡೋದನ್ನ ನಿಲ್ಲಿಸಬೇಕು ಎಂದು ಹೇಳಿದರು.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಕಂಟ್ರಾಕ್ಟರ್ ಅಸೋಸಿಯೇಷನ್ ಕೆಂಪಣ್ಣ ಅವರು 40 ಪರ್ಸೆಂಟ್, 50 ಪರ್ಸೆಂಟ್ ಕಮಿಷನ್ ಪಡೆಯುತ್ತಾರೆಂದು ಪ್ರಧಾನಮಂತ್ರಿ ಕಚೇರಿ ಪತ್ರ ಬರೆದು ಆರೋಪ ಮಾಡಿದ್ದರು. ಅದನ್ನು ನಾವು ಚುನಾವಣೆಯಲ್ಲಿ ಬಳಸಿಕೊಂಡಿದ್ದೆವೇ ಹೊರತು, 40% ಅದರಿಂದಲೇ ಸರ್ಕಾರ ಅಧಿಕಾರಕ್ಕೆ ಬಂದಿಲ್ಲ.
ನಮ್ಮ ಹೋರಾಟ ಹಾಗೂ ಜನಪ್ರಿಯ ಯೋಜನೆ ಘೋಷಣೆಯಿಂದ ಸರ್ಕಾರ ಅಧಿಕಾರಕ್ಕೆ ಬಂದಿದೆ. ಯಶಸ್ವಿಯಾಗಿ ಆಡಳಿತ ನೀಡ್ತಿದ್ದೇವೇ. ಬಿಜೆಪಿಯವರು 40% ಕಮಿಷನ್ ಪಡೆದಿಲ್ಲ ಎಂದಾದರೆ ಯಾವ ಆಧಾರ ಮೇಲೆ ಎಂಬುದು ತಿಳಿದಿಲ್ಲ ಎಂದು ಪರಮೇಶ್ವರ್ ಹೇಳಿದರು.