ದೊಡ್ಡಬಳ್ಳಾಪುರ, (ಜೂ.19); ಫಸಲ್ ವಿಮೆ ಯೋಜನೆಯಲ್ಲಿ ರೈತರಿಗೆ ವಂಚನೆಯಾಗಿದ್ದು, ಕೂಡಲೇ ಮರು ಪರಿಶೀಲನೆ ನಡೆಸಿ, ನಷ್ಟಕ್ಕೆ ಒಳಗಾಗಿರುವ ರೈತರಿಗೆ ಪರಿಹಾರ ನೀಡದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದೆಂದು ರಾಜ್ಯ ರೈತ ಶಕ್ತಿ ಸಂಘದ ರಾಜ್ಯಾಧ್ಯಕ್ಷ ಹೊನ್ನಾಘಟ್ಟ ಮಹೇಶ್ ಎಚ್ಚರಿಕೆ ನೀಡಿದ್ದಾರೆ.
ಬರ ಪೀಡಿತ ತಾಲೂಕೆಂದು ಸರಕಾರಗಳೇ ಘೋಷಿಸಿದ ಮೇಲೆ ಫಸಲ್ ವಿಮೆ ಯೋಜನೆಗೆ ಹಣ ಕಟ್ಟಿದ್ದ ತಾಲೂಕಿನ ಸಾವಿರಾರು ರೈತರಿಗೆ ಪರಿಹಾರ ನೀಡದೆ ಇರುವುದು ವಿಮಾ ಸಂಸ್ಥೆಯ ವಂಚನೆಯಾಗಿದೆ.
ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಿಮೆ ಕಂಪನಿಗಳು ಪದೇ ಪದೇ ರೈತರ ಹಣವನ್ನು ಲೂಟಿ ಮಾಡುತ್ತಿದ್ದು, ಸರ್ಕಾರ ನಿಗಾವಹಿಸದೆ ಇರುವುದು ಖಂಡನೀಯ.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಫಸಲ್ ವಿಮೆ ಯೋಜನೆಯ ಹಣ ವಿತರಣೆ ಲೋಪವಾಗಿರುವ ಅಂಕಿಅಂಶಗಳು ಕೃಷಿ ಇಲಾಖೆ ಅಧಿಕಾರಿಗಳಿಗೆ ಇಲ್ಲವಾಗಿದೆಯೇ..? ತಾಲೂಕಿನ ರೈತರ ಸ್ಥಿತಿ ಏನೆಂಬುದು ತಿಳಿದಿಲ್ಲವೆ.. ಬರದಿಂದ ರೈತರು ಬಸವಳಿಯುತ್ತಿದ್ದರು ಪರಿಹಾರ ನೀಡದ ವಿಮೆ ಕಂಪನಿಯ ಮೋಸದ ಬಗ್ಗೆ ಪ್ರಶ್ನೆ ಏಕೆ ಮಾಡುತ್ತಿಲ್ಲ..? ಅಧಿಕಾರಿಗಳು ಶಾಮಿಲಾಗಿದ್ದಾರೆಯೇ ಎಂದು ಹೊನ್ನಾಘಟ್ಟ ಮಹೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….