ಹರಿತಲೇಖನಿ ದಿನಕ್ಕೊಂದು ಕಥೆ: ರೈತ ಮತ್ತು ದೇವರು..!

ಅತೀ ವೃಷ್ಟಿ ಹಾಗೂ ಅನಾವೃಷ್ಟಿ ಗಳಿಂದ ನೊಂದ ರೈತನೊಬ್ಬನಿಗೆ,ಭಗವಂತನ ಮೇಲೆ ತುಂಬಾ ಬೇಸರವಾಯ್ತ. ಭಗವಂತ ಅವನ ಎದುರಿಗೆ ಬಂದು ,ನಾನೇನು ಮಾಡಬೇಕು ಹೇಳು ಎಂದ.

ವ್ಯವಸಾಯದ ಬಗ್ಗೆ ನೀನಗೇನು ಗೊತ್ತು, ಭಗವಂತ, ನಮ್ಮಂಥ ರೈತರನ್ನು ಕೇಳಿ ನೀನು, ಮಳೆ ಬಿಸಿಲನ್ನು ನೀಡಬೇಕು, ಅಕಾಲಿಕ ಮಳೆ, ಬರಗಾಲದಿಂದ ಕಷ್ಟ ಅನುಭವಿಸುವವರು ನಾವೇ ತಾನೇ ಎಂದ ರೈತ.

ಭಗವಂತ ನಗುತ್ತಾ, ಈ ಒಂದು ವರ್ಷ ನೀನು ಹೇಳಿದ ರೀತಿಯಲ್ಲೇ ಮಳೆ ಬಿಸಿಲನ್ನು  ನೀಡುತ್ತೇನೆ, ನಿನಗೆ ಒಂದು ವರ್ಷ ಅವಕಾಶವಿದೆ ಅದನ್ನು ಉಪಯೋಗಿಸಿಕೊ ಎಂದು ಹೇಳಿ ಹೋದ.

ರೈತನಿಗೆ ತುಂಬಾ ಖುಷಿಯಾಯಿತು, ರೈತ ಯಾವಾಗ ಬಿಸಿಲು ಬಯಸಿದನೋ ಆಗ ಬಿಸಿಲು ಬಂತು, ಮಳೆ ಬಯಸಿದಾಗ ಮಳೆ ಬಂತು, ಸ್ವಲ್ಪ ಕೊಡಾ ಹೆಚ್ಚು ಕಡಿಮೆ ಆಗಲಿಲ್ಲ. ಬತ್ತದ ಪೈರುಗಳೆಲ್ಲಾ ಎತ್ತರವಾಗಿ ಬೆಳೆದು ನಿಂತವು, ನೋಡಲು ತುಂಬಾ ಸೊಗಸಾಗಿ ಕಾಣುತ್ತಿದ್ದವು, ರೈತನಿಗೆ ತುಂಬಾ ಸಂತೋಷವಾಗಿತ್ತು.

ರೈತ ಅಂದುಕೊಂಡ ಪರಮಾತ್ಮನಿಗೆ ಈಗ ಗೊತ್ತಾಗುತ್ತದೆ, ಅದೆಷ್ಟು ಸಮಯದಿಂದ ವ್ಯರ್ಥವಾಗಿ ರೈತರನ್ನು ಸಮಸ್ಯೆಯಲ್ಲಿ ಸಿಲುಕಿಸುತ್ತಿದ್ದ, ಯಾರಾದರೂ ಒಬ್ಬ ರೈತನನ್ನು ಕೇಳಿದ್ದರೆ, ಈ ರೀತಿಯ ಸಮಸ್ಯೆ ಯೇ ಆಗುತ್ತಿರಲಿಲ್ಲ, ಈಗ ಅವನಿಗೆ ತನ್ನ ತಪ್ಪಿನ ಅರಿವಾಗುತ್ತದೆ, ಅಂದುಕೊಂಡ.

ಭತ್ತದ ಫಸಲೇನೊ ಚೆನ್ನಾಗಿ ಬೆಳೆದಿದ್ದವು, ನೋಡಲು ತುಂಬಾ ಚೆನ್ನಾಗಿದ್ದವು. ಆದರೆ ಅದರಲ್ಲಿ ಕಾಳುಗಳು ಇರದೆ ಬರೀ ಜೊಳ್ಳಾಗಿದ್ದವು, ರೈತ ಎದೆ ಬಡಿದು ಕೊಳ್ಳುತ್ತಾ ಹೇ, ಪರಮಾತ್ಮ, ಇದೇಕೆ  ಹೀಗಾಯಿತು ಎಂದು ಕಿರುಚಿದ.

ಭಗವಂತ ಬಂದು ಹೇಳಿದ, ನೀನು ಬಿರುಗಾಳಿ, ಮಿಂಚು, ಗುಡುಗು, ಸಿಡಿಲು ಬರಲು ಬಿಡಲಿಲ್ಲ, ಅವು ಎಲ್ಲಾ ಒಟ್ಟು ಗೂಡಿ  ಘರ್ಷಣೆ ಆಗಲು ಬಿಡಲಿಲ್ಲ, ಫಸಲು ಚೆನ್ನಾಗೇನೋ ಬೆಳೆದವು, ಆದರೆ ಅವು ಸತ್ವಯುತವಾಗಲಿಲ್ಲ, ಬಿರುಗಾಳಿ  ಗುಡುಗು, ಮಿಂಚು, ಇವುಗಳ ಘರ್ಷಣೆಯಿಂದ  ಸಸ್ಯಗಳು ತಮ್ಮ ಬಲದಿಂದ ಸೆಟೆದು  ನಿಲ್ಲುತ್ತವೆ. ಹೇಗಾದರೂ ಎದ್ದು ನಿಲ್ಲಬೇಕೆಂಬ  ಮನೋಭಾವ ಅವುಗಳಲ್ಲಿ ಬಂದು ಅವು ಸತ್ವಯುತವಾಗುತ್ತವೆ. ಹಾಗೇ ಗಟ್ಟಿಯಾಗಿ ಕಾಳುಕಟ್ಟುತ್ತವೆ, ಸಂಘರ್ಷದಲ್ಲೇ ಶಕ್ತಿ, ಸುಪ್ತವಾಗಿರುವುದು ಎಂದು ರೈತನಿಗೆ ಭಗವಂತ ತಿಳಿ ಹೇಳಿದ.

ನೋವಿನಿಂದಲೇ ಅಲ್ಲವೇ, ಎಲ್ಲಾ ಹೊಸತುಗಳ ಹುಟ್ಟು. ಕಹಿಯ ಕಲ್ಮಶವೆಲ್ಲಾ ಉರಿದು ಸುಟ್ಟಾಗಲೇ ಹೊಸರೂಪ‌, ಹೊಸತೇಜಸ್ಸು ಉಂಟಾಗುವುದು. ಹಾಗೆಯೇ, ತಾಯಿಗೆ ಪ್ರಸವ ಯಾತನೆ ಇಲ್ಲದೇ ಇದ್ದರೆ, ಮಗುವಿನ ಜನನವಾಗುವುದಿಲ್ಲ. ಆದ್ದರಿಂದಲೇ ತಾಯಿಗೆ ಮಗುವಿನ ಬಗ್ಗೆ ಅಪಾರವಾದ  ಪ್ರೀತಿಯಿರುತ್ತದೆ. ಎಲ್ಲವೂ ಸುಲಭವಾಗಿ ದೊರೆಯುವಂತಿದ್ದರೆ, ನಮಗೆ ಅದರಲ್ಲಿ ಯಾವ ಆನಂದವೂ ಇರುವುದಿಲ್ಲ, ಕಷ್ಟ ಅನುಭವಿಸಿದಾಗಲೇ, ಸುಖದ ಆನಂದವಿರುವುದು.
   

ಕೃಪೆ:
ಸುವರ್ಣಾ ಮೂರ್ತಿ. 

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಕುಮಾರಣ್ಣ ಮುಖ್ಯಮಂತ್ರಿಯಾಗಲಿ ಎಂದು ನೀವು ಕೂಗುವ ಸಮಯ ಇದಲ್ಲ; ಹೆಚ್.ಡಿ. ಕುಮಾರಸ್ವಾಮಿ

ಕುಮಾರಣ್ಣ ಮುಖ್ಯಮಂತ್ರಿಯಾಗಲಿ ಎಂದು ನೀವು ಕೂಗುವ ಸಮಯ ಇದಲ್ಲ; ಹೆಚ್.ಡಿ. ಕುಮಾರಸ್ವಾಮಿ

ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಎಂದು ಅಥವಾ ಕುಮಾರಣ್ಣ ಮುಖ್ಯಮಂತ್ರಿಯಾಗಲಿ ಎಂದು ನೀವು ಕೂಗುವ ಸಮಯ ಇದಲ್ಲ. ಅಂಬೇಡ್ಕರ್ ಅವರ ಜಯಂತಿ ದಿನ ನನ್ನ ಬಗ್ಗೆ ಘೋಷಣೆಗಳನ್ನು ಕೂಗುವುದು ಬೇಡ: ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy)

[ccc_my_favorite_select_button post_id="120957"]
ಈ ಉಪ ಚುನಾವಣೆಯು ಕಾಂಗ್ರೆಸ್ ಸರ್ಕಾರವನ್ನು ಕಿತ್ತುಹಾಕಲು ಅವಕಾಶ: ಆರ್.ಅಶೋಕ

ಈ ಉಪ ಚುನಾವಣೆಯು ಕಾಂಗ್ರೆಸ್ ಸರ್ಕಾರವನ್ನು ಕಿತ್ತುಹಾಕಲು ಅವಕಾಶ: ಆರ್.ಅಶೋಕ

ಈ ಉಪಚುನಾವಣೆಯಲ್ಲಿ ಬಡವರು ಹಾಗೂ ಶ್ರೀಮಂತರ ನಡುವೆ ಸ್ಪರ್ಧೆ ನಡೆಯಲಿದೆ. ಇದರಲ್ಲಿ ಕಾಂಗ್ರೆಸ್ ಸೋತು ಮುಂದಿನ ರಾಜ್ಯದ ಭವಿಷ್ಯ ತೀರ್ಮಾನವಾಗಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ (R. Ashoka) ಹೇಳಿದರು.

[ccc_my_favorite_select_button post_id="120773"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

IPLಗೆ ಕ್ಷಣಗಣನೆ.. ಟಿಕೆಟ್ ಬೇಡಿ ಮರ್ಯಾದೆ ಕಳೆದುಕೊಂಡ ಶಾಸಕರು

IPLಗೆ ಕ್ಷಣಗಣನೆ.. ಟಿಕೆಟ್ ಬೇಡಿ ಮರ್ಯಾದೆ ಕಳೆದುಕೊಂಡ ಶಾಸಕರು

ಇಂಡಿಯನ್ ಪ್ರೀಮಿಯರ್ ಲೀಗ್ (IPL) 19ನೇ ಆವೃತ್ತಿಯ ಉದ್ಘಾಟನಾ ಪಂದ್ಯ ಇಂದು (ಮಾರ್ಚ್ 28) ಚಿನ್ನಸ್ವಾಮಿಯಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗಲಿವೆ.

[ccc_my_favorite_select_button post_id="120518"]

RCB ಮಾರಾಟ: ವಿಜಯ್ ಮಲ್ಯ ಭಾವುಕ ಸಂದೇಶ

[ccc_my_favorite_select_button post_id="120461"]

RCBಗೆ ಕೆಎಂಎಫ್ ಪ್ರಾಯೋಜಕತ್ವ..!

[ccc_my_favorite_select_button post_id="120424"]

IPL ಟಿಕೆಟ್: ನಕಲಿ ಲಿಂಕ್ ಎಚ್ಚರಿಕೆ

[ccc_my_favorite_select_button post_id="120376"]
ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ಪುರುಷರು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಸೋಮವಾರ ಸಂಜೆ ದೊಡ್ಡಬಳ್ಳಾಪುರ ಗ್ರಾಮಾಂತರ ಹಾಗೂ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

[ccc_my_favorite_select_button post_id="120943"]
ಟ್ಯಾಂಕರ್ ಉರುಳಿ BMW ಕಾರು ಅಪ್ಪಚ್ಚಿ.. ವಕೀಲ ದುರ್ಮರಣ

ಟ್ಯಾಂಕರ್ ಉರುಳಿ BMW ಕಾರು ಅಪ್ಪಚ್ಚಿ.. ವಕೀಲ ದುರ್ಮರಣ

ರಸ್ತೆಯಲ್ಲಿ ಟ್ಯಾಂಕರ್ ಬ್ರೇಕ್ ವಿಫಲವಾಗಿದ್ದರಿಂದ ಚಾಲಕನ ನಿಯಂತ್ರಣ ಕಳೆದುಕೊಂಡು ಪಕ್ಕದಲ್ಲೇ ಸಾಗುತ್ತಿದ್ದ ಬಿಎಂಡಬ್ಲ್ಯು ಕಾರಿನ (BMW Car) ಮೇಲೆ ಮಗುಚಿ ಬಿದ್ದಿದೆ.

[ccc_my_favorite_select_button post_id="120918"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]