daily story| ಹರಿತಲೇಖನಿ ದಿನಕ್ಕೊಂದು ಕಥೆ: ಮರದ ಬೆಲೆ

daily story: ಒಂದು ಹಳ್ಳಿಯಲ್ಲಿ ಮುತ್ತು ಶೆಟ್ಟಿ ಎಂಬುವವನು ವ್ಯಾಪಾರಿಗಳ ‘ವಂಶದಲ್ಲಿ ಜನಿಸಿದ್ದ, ಬಾಲ್ಕದಲ್ಲೇ ತಂದೆಯನ್ನು ಕಳೆದುಕೊಂಡು ಕಷ್ಟದಿಂದ ಬೆಳೆದಿದ್ದ ಅವನಿಗೆ ಮನೆಯಲ್ಲಿ ಸಂಪತ್ತು ರಾಶಿ ಬಿದ್ದರೆ ಮಾತ್ರ ಸುಖವಾಗಿ ಬದುಕಬಹುದೆಂಬ ಭಾವನೆ ಬೆಳೆದಿತ್ತು.

ಸಂಪತ್ತು ಪ್ರಾಮಾಣಿಕನ ಬಳಿಗೆ ಬರುವುದು ನಿಧಾನ, ಧಾರಾವಾಗಿ ಬರಬೇಕೆಂದರೆ ಏನಾದ್ರೂ ಅಡ್ಡ ದಾರಿ ಹಿಡಿಯಬೇಕೆಂಬ ಕೆಟ್ಟ ಯೋಚನೆ ಅವನ ಮನಸ್ಸನ್ನು ಆವರಿಸಿತ್ತು.

ಮುತ್ತು ಶೆಟ್ಟಿಯ ಮನೆಯ ಬಳಿ ಸುಗಂಧ ಬೀರುವ ರತ್ನಗಂಧ ಎಂಬ ಮರಗಳಿದ್ದವು. ಅವನ ತಂದೆ ಅದರ ಗಿಡ ನೆಟ್ಟು ನೀರೆರೆದು ಆ ಮರವಾಗುವ ತನಕ ಬೆಳೆಸಿದ್ದ. ‘ಯಾವ ಕಾಲಕ್ಕೂ ಈ ಮರಗಳನ್ನು ಕಡಿದು ಮಾರಾಟ ಮಾಡಬಾರದು. ಇದರ ಹವೆ ಬಲು ದೂರದವರೆಗೂ ಗಾಳಿಯನ್ನು ಶುದ್ದೀಕರಿಸಿ ಒಳ್ಳೆಯ ಆರೋಗ್ಯ ನೀಡುತ್ತದೆ. ಈ ಅಮೂಲ್ಯ ವೃಕ್ಷ ಸಂತತಿ ಬೇಕೆಂದರೆ ಸುಲಭವಾಗಿ ಸಿಗುವುದಿಲ್ಲ’ ಎಂದು ಮಗನಿಗೆ ಕಿವಿಮಾತು ಹೇಳಿದ್ದ. ಹೀಗಾಗಿ ಮರಗಳು ವಿಶಾಲವಾಗಿ ಬೆಳೆದು ನೆರಳು ಕೊಡುತ್ತಿದ್ದವು.

ಹಗಲಿರುಳೂ ಕುಬೇರನಾಗುವ ಕನಸು ಕಾಣುತ್ತಿದ್ದ ಮುತ್ತು ಶೆಟ್ಟಿಯನ್ನು ಅವನ ಗೆಳೆಯರು ತಪ್ಪು ದಾರಿಗೆಳೆದರು. ‘ಅಂಗೈಯಲ್ಲಿ ಬೆಣ್ಣೆ ಇಡ್ಕೊಂಡು ಯಾರಾದರೂ ತುಪ್ಪ ಹುಡುಕುತ್ತಾರಾ? ದೊರೆಗಳ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಅಂದು ಉಡುಗೊರೆ ನೀಡಿದವರಿಗೆಲ್ಲ ದೊರೆ ಬಂಗಾರದ ನಾಣ್ಯಗಳನ್ನು ಬಾಚಿ ಬಾಚಿ ಕೊಡುತ್ತಾರೆ. ರತ್ನಗಂಧ ವೃಕ್ಷಗಳನ್ನು ಸುಮ್ಮನೆ ಇಟ್ಟುಕೊಂಡರೆ ದುಡ್ಡು ಬರುವುದಿಲ್ಲ. ಮರಗಳನ್ನು ಕಡಿದು ಪೀಠೋಪಕರಣಗಳನ್ನು ಮಾಡಿಸಿ ದೊರೆಗೆ ಉಡುಗೊರೆ ನೀಡು, ಘಮಘಮ ಸುಗಂಧ ಬೀರುವ ಸಾಮಗ್ರಿಗಳನ್ನು ಕಂಡರೆ ದೊರೆಗೆ ಹರ್ಷವಾಗುತ್ತದೆ. ಮೂಟೆಗಟ್ಟಲೆ ಬಂಗಾರ ಕೊಡುತ್ತಾರೆ. ಅಪೂರ್ವವಾದ ಈ ವೃಕ್ಷಗಳ ಬೆಲೆ ದೊರೆಗಳಿಗೆ ಗೊತ್ತಿದೆ ಎಂದು ಕಿವಿಯೂದಿದರು.

ಬಂಗಾರ ಎನ್ನುವಾಗ ಶೆಟ್ಟಿಗೆ ನಾಲಗೆ ನೀರೂರಿತು. ‘ಆದರೆ ಈ ಮರಗಳನ್ನು ಕಡಿಯಬಾರದೆಂದು ಅಪ್ಪ ಹೇಳಿದ್ದಾರಲ್ಲ?’ ಎಂದು ಆತಂಕಗೊಂಡ, ಗೆಳೆಯರು ನಕ್ಕು ಬಿಟ್ಟರು. ‘ಬರುತ್ತಿರುವುದು ಬಂಗಾರದ ನಾಣ್ಯಗಳು ಅಪ್ಪ ಹೇಳಿದ್ದಾರೆಂದು ಸುಮ್ಮನೆ ಕುಳಿತರೆ ಬಡವನಾಗಿಯೇ ಉಳಿಯುತ್ತಿ’ ಎಂದು ಮೂದಲಿಸಿದರು.

ಶೆಟ್ಟಿ ಮರ ಕಡಿಯಲು ಮುಂದಾದಾಗ ಅವನ ತಾಯಿ ಅಡ್ಡ ಬಂದಳು.
ಅಮೂಲ್ಯವಾದ ವೃಕ್ಷ ಸಂತತಿಯನ್ನು ಅಳಿಸಬಾರದೆಂದು ಯಾಚಿಸಿದಳು. ಆದರೆ ಯಾರ ಮಾತಿಗೂ ಕಿವಿಗೊಡದ ಮುತ್ತು ಶೆಟ್ಟಿ ಮರಗಳನ್ನು ಕಡಿದುರುಳಿಸಿ ಪೀಠೋಪಕರಣಗಳನ್ನು ಸಿದ್ಧಗೊಳಿಸಿದ.
ಆ ಹೊತ್ತಿಗೆ ಶೆಟ್ಟಿಯ ಒಬ್ಬನೇ ಮಗನಿಗೆ ವಿಷದ ಹಾವು ಕಡಿಯಿತು.

ಸಾವು ಬದುಕಿನೊಂದಿಗೆ ಹೋರಾಡುತ್ತಿದ್ದ ಅವನನ್ನು ಪರೀಕ್ಷಿಸಿದ ವೈದ್ಯರು. ‘ರತ್ನಗಂಧ ಎಂಬ ಅಪರೂಪದ ಮರದ ತೊಗಟೆಯನ್ನು ತಂದರೆ ಅದರಿಂದ ಔಷಧ ತಯಾರಿಸಿ ಇವನನ್ನು ಬದುಕಿಸಬಹುದು. ಆದರೆ ಇಂತಹ ಅಮೂಲ್ಯ ಮದ್ದು ಸಿಗುವುದು ತೀರ ಅನುಮಾನ ಎಂದರು.
‘ಹೀಗೆಂದರೆ ಹೇಗೆ? ನನ್ನ ಮಗನನ್ನು ಏನಾದರೂ ಮಾಡಿ ಬದುಕಿಸಿ ಕೈತುಂಬ ಹೊನ್ನು ಕೊಡುತ್ತೇನೆ’ ಎಂದ ಶೆಟ್ಟಿ. ವೈದ್ಯರಿಗೆ ನಗು ಬಂತು.

ಗಿಡಗಳು ಮಾಡುವ ಕೆಲಸವನ್ನು ಹಣ ಮಾಡುವುದಿಲ್ಲಪ್ಪ ನನ್ನ ತೂಕದ ಬಂಗಾರ ಕೊಟ್ಟರೂ ಮೂಲಿಕೆಯಿಲ್ಲದೆ ವಿಷ ಇಳಿಯದು. ಹಣದಿಂದ ಪ್ರಾಣವನ್ನು ಕೊಂಡುಕೊಳ್ಳಲಾಗದು’ ಎಂದರು.
ಮುತ್ತು ಶೆಟ್ಟಿ ತಲೆ ಮೇಲೆ ಕೈಹೊತ್ತು ಕುಳಿತ. ಧನದಾಹದಿಂದ ತಾನು ಕಡಿದು ಹಾಕಿದ ಮರವಿರುತ್ತಿದ್ದರೆ ತನ್ನ ಮಗ ಬದುಕಬಹುದಿತ್ತು. ತಾನೆಂತಹ ತಪ್ಪು ಮಾಡಿದೆ! ಎಂದು ಅಳತೊಡಗಿದ.

ಆಗ ಅದೇ ಮರದಿಂದ ತಯಾರಿಸಿದ ಒಂದು ಮಂಚವು ಮನುಷ್ಯ ಭಾಷೆಯಲ್ಲಿ ಅವನನ್ನು ಕರೆಯಿತು. ‘ಅಯ್ಯಾ, ನಿನ್ನ ತಂದೆ ನಮ್ಮನ್ನು ನೆಟ್ಟು ನೀರೆರೆದು ಗೊಬ್ಬರ ಹಾಕಿ ಬೆಳೆಸಿದರು. ನಾವು ಮರಗಳು ನೆಟ್ಟವನ ಋಣ ತೀರಿಸದೆ ಬಿಡುವುದಿಲ್ಲ. ಅದಕ್ಕಾಗಿ ನಿನಗೊಂದು ಉಪಕಾರ ಮಾಡುತ್ತೇವೆ.

ನಮ್ಮ ತೊಗಟೆಯೂ ಸಿಗದಂತೆ ನೀನು ನಾಶ ಮಾಡಿರುವೆ. ಇದರ ಬದಲು ನಮ್ಮನ್ನು ಬೆಂಕಿಯಲ್ಲಿ ಸುಟ್ಟು ಅದರಿಂದ ಸಿಗುವ ಬೂದಿಯನ್ನು ನಿನ್ನ ಮಗನ ಮೈಗೆ ಲೇಪಿಸು ನೀರಿನಲ್ಲಿ ಕದಡಿ ಕುಡಿಸು. ಅವನು ವಿಷದ ಪ್ರಭಾವದಿಂದ ಮುಕ್ತನಾಗಿ ಬದುಕುತ್ತಾನೆ’ ಎಂದಿತು.

ಮುತ್ತು ಶೆಟ್ಟಿ ಹಾಗೆಯೇ ಮಾಡಿ ಮಗನ ಜೀವವುಳಿಸಿಕೊಂಡ. ಹಣದ ಆಶೆಗೆ ಸಸ್ಯಗಳ ಕುಲನಾಶ ಮಾಡಬಾರದು ಎಂಬ ನೀತಿಯನ್ನು ತಿಳಿದುಕೊಂಡು ತಾನೂ ತನ್ನ ತಂದೆಯಂತೆ ಆಮೂಲ್ಯ ಗಿಡಗಳನ್ನು ನೆಟ್ಟು ಬೆಳೆಸಿದ.

ಕೃಪೆ: ಸಾಮಾಜಿಕ ಜಾಲತಾಣ (ಲೇಖಕರ ಮಾಹಿತಿ ಲಭ್ಯವಿಲ್ಲ)

ರಾಜಕೀಯ

ಜಾತಿ ಆಧಾರದ ಮೇಲೆ ಸಂಘಟನೆ ಮಾಡಬೇಡಿ, ಮಹಿಳಾ ಶಕ್ತಿ ಆಧಾರದ ಮೇಲೆ ಸಂಘಟನೆ ಮಾಡಿ: ಡಿಸಿಎಂ ಡಿ.ಕೆ. ಶಿವಕುಮಾರ್ ಸಲಹೆ

ಜಾತಿ ಆಧಾರದ ಮೇಲೆ ಸಂಘಟನೆ ಮಾಡಬೇಡಿ, ಮಹಿಳಾ ಶಕ್ತಿ ಆಧಾರದ ಮೇಲೆ ಸಂಘಟನೆ

“ಯಾವುದೇ ಪರಿಸ್ಥಿತಿಯಲ್ಲಾದರೂ ಸರಿ ಮಹಿಳಾ ನೌಕರರು ಜಾತಿ ಸಂಘಗಳ ಆಧಾರದ ಮೇಲೆ ಸಂಘಟನೆ ಮಾಡಬೇಡಿ, ಮಹಿಳಾ ಶಕ್ತಿ ಆಧಆರದ ಮೇಲೆ ಸಂಘಟನೆ ಮಾಡಿ. ನಿಮ್ಮದು ಕೇವಲ ಒಂದೇ ಒಂದು ಸಂಘ ಇರಬೇಕು. ಅದು ಮಹಿಳಾ

[ccc_my_favorite_select_button post_id="117023"]
ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP): ಗೋಯೆಲ್‌ ಜೊತೆ ಕೇಂದ್ರ ಸಚಿವ ಹೆಚ್.ಡಿ.ಕೆ ಮಹತ್ವದ ಚರ್ಚೆ

ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP):

ಕರ್ನಾಟಕದ ಕೈಗಾರಿಕಾಭಿವೃದ್ದಿಗೆ ಪರಿವರ್ತನಾತ್ಮಕ ಹೆಜ್ಜೆ ಎಂದೇ ನಂಬಲಾಗಿರುವ 9 ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯನ್ನು (NICDP- National Industrial Corridor Development Programme) ಅನುಷ್ಠಾನಗೊಳಿಸಬೇಕೆಂದು ಕೋರಿ ಕೇಂದ್ರದ ಬೃಹತ್‌ ಕೈಗಾರಿಕೆ

[ccc_my_favorite_select_button post_id="116156"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ

ವಿಶ್ವಕಪ್ ವಿಜೇತ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿ ಅಭಿನಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಕರ್ನಾಟಕದ ಕ್ರಿಕೆಟ್ ಪಟುಗಳಿಗೆ ತಲಾ ಹತ್ತು ಲಕ್ಷ ನಗದು ಬಹುಮಾನದ ಜೊತೆಗೆ ಸರ್ಕಾರಿ ಉದ್ಯೋಗ ಘೋಷಿಸಿದರು.

[ccc_my_favorite_select_button post_id="116681"]
ಕೆಲವೇ ಗಂಟೆಗಳಲ್ಲಿ ಸರಗಳ್ಳನ ಬಂಧನ.. ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ತಂಡಕ್ಕೆ ವ್ಯಾಪಕ ಪ್ರಶಂಸೆ

ಕೆಲವೇ ಗಂಟೆಗಳಲ್ಲಿ ಸರಗಳ್ಳನ ಬಂಧನ.. ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ತಂಡಕ್ಕೆ ವ್ಯಾಪಕ ಪ್ರಶಂಸೆ

ಮಹಿಳೆಯ ಮಾಂಗಲ್ಯ ಸರವನ್ನು ಕಿತ್ತು ಬೈಕ್‌ನಲ್ಲಿ ಪರಾರಿಯಾಗಿರುವ ಘಟನೆ ನಡೆದು ಕೆಲವೇ ಗಂಟೆಯೊಳಗೆ ಆರೋಪಿಯನ್ನು (Chain snatcher) ಬಂಧಿಸುವಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ನೇತೃತ್ವದ

[ccc_my_favorite_select_button post_id="116820"]
ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ಖಾಸಗಿ ಬಸ್ಗೆ ಹಿಂದಿನಿಂದ ಪ್ಯಾಸೆಂಜರ್ ಆಟೋ ಡಿಕ್ಕಿ ಹೊಡೆದ ಪರಿಣಾಮ (Accident) ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಸಂಜೆ ತಾಲೂಕಿನ ಕಂಟನಕುಂಟೆ ಸಮೀಪ ಸಂಭವಿಸಿದೆ.

[ccc_my_favorite_select_button post_id="116950"]

ಆರೋಗ್ಯ

ಸಿನಿಮಾ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್ ಇಲ್ಲಿದೆ ನೋಡಿ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ( Actor Darshan) ಅಭಿನಯದ "ದಿ ಡೆವಿಲ್" (The Devil) ಸಿನಿಮಾದ ಮೂರನೇ ಗೀತೆ ಬಿಡುಗಡೆಯಾಗಿದೆ.

[ccc_my_favorite_select_button post_id="116277"]
error: Content is protected !!