ಹರಿತಲೇಖನಿ ದಿನಕ್ಕೊಂದು ಕಥೆ: ಹುಷಾರು, ಪ್ರಾಮಾಣಿಕತೆಯ ಪರೀಕ್ಷೆ ಕಾಯ್ತಾ ಇರ್ತದೆ..!!

ಒಬ್ಬರು ಪ್ರಕಾಂಡ ವಿದ್ವಾಂಸರಿದ್ದರು. ಹತ್ತಾರು ಊರುಗಳಲ್ಲಿ ಅವರ ಪ್ರವಚನಗಳಿಗೆ ಭಾರಿ ಬೆಲೆ ಇತ್ತು. ಜನರು ದೊಡ್ಡ ಸಂಖ್ಯೆಯಲ್ಲಿ ಸೇರುತ್ತಿದ್ದರು. ಪುರಾಣಗಳ ಕಥೆಗಳನ್ನು ಸಮಕಾಲೀನ ನೆಲೆಗಳಿಗೆ ವಿಸ್ತರಿಸಿ ಜನರಿಗೆ ಒಳಿತು-ಕೆಡುಕಿನ ಬಗ್ಗೆ ಬೋಧನೆ ಮಾಡುವುದು ಅವರ ವಿಶೇಷ. ಸಾಲದ್ದಕ್ಕೆ ತಾವು ಕೂಡಾ ಉನ್ನತ ಮೌಲ್ಯಗಳನ್ನು ಪಾಲಿಸಿಕೊಂಡು ಬರುತ್ತಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು.

ಒಂದು ಸಾರಿ ಅವರಿಗೆ ಪಟ್ಟಣದ ಸಮೀಪದ ಒಂದು ಊರಿನಿಂದ ಪ್ರವಚನಕ್ಕೆ ಕರೆಬಂದಿತ್ತು. ಹೀಗೆ ಪ್ರವಚನಕ್ಕೆ ಕರೆಬಂದರೆ ದೊಡ್ಡ ಮೊತ್ತ ಕೇಳುವವರಲ್ಲ ಅವರು. ಹಾಗಾಗಿ ಬಸ್ಸಿನಲ್ಲೇ ಹೋಗಿಬಿಡುತ್ತಿದ್ದರು. ಹಾಗೆ ಬಸ್ಸು ಹತ್ತಿ ಸೀಟೊಂದನ್ನು ಹಿಡಿದು ಕುಳಿತರು. ಸ್ವಲ್ಪಹೊತ್ತಿನಲ್ಲಿ ಬಸ್ಸು ಹೊರಟಿತು. ಕಂಡಕ್ಟರ್ ಟಿಕೆಟ್ ಕೊಡಲು ಆರಂಭಿಸಿದ. ಆಚಾರ್ಯರು ಹಣ ನೀಡಿದರು. ಕಂಡಕ್ಟರ್ ಟಿಕೆಟ್ ಮತ್ತು ಬಾಕಿ ಹಣವನ್ನು ವಾಪಸ್ ನೀಡಿದ.

ಆಚಾರ್ಯರು ಎಣಿಸಿ ನೋಡಿದರೆ ಹತ್ತು ರೂಪಾಯಿ ಹೆಚ್ಚು ಬಂದಿತ್ತು. ಕಂಡಕ್ಟರ್ ಟಿಕೆಟ್ ಮಾಡಿಕೊಂಡು ವಾಪಸ್ ಬರುವಾಗ ಕೊಡಬೇಕು ಎಂದುಕೊಂಡರು ರಾಯರು.

ಆದರೆ, ಸ್ವಲ್ಪ ಹೊತ್ತು ಹಾಗೇ ಕುಳಿತಿದ್ದಾಗ ಮತ್ತೆ ಯೋಚನೆ ಮಾಡಿದರು: ನಾನು ಸಣ್ಣ ಹತ್ತು ರೂಪಾಯಿಯ ಬಗ್ಗೆ ಅನಗತ್ಯವಾಗಿ ಯೋಚನೆ ಮಾಡುತ್ತಿದ್ದೇನೆ ಅಲ್ವಾ? ಅಷ್ಟಕ್ಕೂ ಈ ಬಸ್ ಕಂಪನಿಗಳು ದೊಡ್ಡ ಲಾಭ ಮಾಡುತ್ತವೆ. ಕಂಡಕ್ಟರ್ ಗಳೇನು ದುಡ್ಡು ಹೊಡೆಯೋದು ಕಡಿಮೇನಾ’ ಎಂದೆಲ್ಲ ಯೋಚಿಸಿ, ದುಡ್ಡು ಹಿಂದಿರುಗಿಸದಿದ್ದರೆ ಏನಾಗ್ತದೆ ಎಂದು ಲೆಕ್ಕ ಹಾಕಿದರು.

`ಹಾಗಾಗಿ, ಇದು ದೇವರೇ ಕೊಟ್ಟ ಹಣ ಅಂತ ಇಟ್ಕೊಳ್ತೇನೆ. ಇದನ್ನು ಯಾವುದಾದರೂ ಒಳ್ಳೆಯ ಕೆಲಸಕ್ಕೆ ಬಳಸಿದರೆ ಆಯಿತು ಅಷ್ಟೇ ಅಲ್ವಾ?’ ಎಂದು ಯೋಚಿಸುತ್ತಾ ಕೈಯಲ್ಲಿದ್ದ 10 ರೂ. ನೋಟನ್ನು ಜೇಬಿಗೆ ತುರುಕಿಕೊಡರು.

ಅಷ್ಟು ಹೊತ್ತಿಗೆ ಬಸ್ಸು ಅವರು ಇಳಿಯಬೇಕಾಗಿದ್ದ ಊರಿನ ಬಸ್ ನಿಲ್ದಾಣವನ್ನು ತಲುಪಿತು. ಕಂಡಕ್ಟರ್ ಯಾರ್ರೀ ಇಳಿಯೋರು ಅಂದ. ರಾಯರು ತಮ್ಮ ಧೋತರವನ್ನು ಸರಿ ಮಾಡಿಕೊಂಡು ಜುಬ್ಬಾವನ್ನೊಮ್ಮೆ ಸವರಿಕೊಂಡು ಇಳಿದರು. ಎರಡೇ ಹೆಜ್ಜೆ ಇಟ್ಟದ್ದು, ಅವರ ಮನಸ್ಸು ಒಮ್ಮೆಲೇ ಜಗ್ಗಿದಂತಾಯ್ತು. ಕೂಡಲೇ ಅವರು ಜುಬ್ಬಾದ ಜೇಬಿಗೆ ಕೈ ಹಾಕಿ ಹತ್ತು ರೂಪಾಯಿ ತೆಗೆದರು. ಅಷ್ಟು ಹೊತ್ತಿಗೆ ಬಸ್ ಮುಂದಿನ ಪಯಣಕ್ಕೆ ಹೊರಟಿತ್ತು. ಆದರೂ ಆಚಾರ್ಯರು ಕಂಡಕ್ಟ್ರೇ ಎಂದು ಕೂಗಿ ಕರೆದರು. “ನೋಡಿ ಸ್ವಾಮಿ ನೀನು ಹತ್ತು ರೂ. ಹೆಚ್ಚು ಕೊಟ್ಟಿದ್ದೀರಿ. ವಾಪಸ್ ತಗೊಳ್ಳಿ” ಅಂತ ಹೇಳುತ್ತಾ ಬಸ್ಸಿನ ಕಡೆಗೆ ಹೋದರು.

ಅವರತ್ತ ಬಂದವನೇ ಕಂಡಕ್ಟರ್ ಅವರ ಕಾಲಿಗೆ ಬಿದ್ದ. ಎದ್ದು ನಿಂತು ಕೇಳಿದ: ನೀವು ಪ್ರವಚನ ನೀಡುವ ವಿಶ್ವನಾಥ ಆಚಾರ್ಯರಲ್ಲವೇ?

ಆಚಾರ್ಯರು: ಹೌದಪ್ಪಾ ಎಂದರು.

ಆಚಾರ್ಯರೇ ನಾನು ನಿಮ್ಮ ಬಗ್ಗೆ ತುಂಬ ಕೇಳಿದ್ದೇನೆ. ನಿಮ್ಮ ಪ್ರವಚನಗಳನ್ನು ನೇರವಾಗಿ ಮತ್ತು ಯೂಟ್ಯೂಬ್‍ಗಳಲ್ಲಿ ನೋಡಿದ್ದೇನೆ. ನಿಮ್ಮ ಬಗ್ಗೆ ಗೌರವಾದರ ನಂಗೆ. ಇವತ್ತು  ಬಸ್ಸಿಗೆ ಹತ್ತಿದಾಗಲೇ ನೀವೇ ಅನಿಸಿತು. ಅದರ ನಡುವೆಯೇ ಒಂದು ಸಣ್ಣ ಬುದ್ಧಿ ತೋರಿಸಿದೆ. ನಿಮಗೆ ಹತ್ತು ರೂಪಾಯಿ ಜಾಸ್ತಿ ಕೊಡೋಣ. ಪ್ರಾಮಾಣಿಕತೆಯ ಬಗ್ಗೆ ತುಂಬ ಚೆನ್ನಾಗಿ ಹೇಳುತ್ತಾರಲ್ಲಾ.. ಏನು ಮಾಡುತ್ತಾರೆ ನೋಡೋಣ ಅಂತ ಅಂದುಕೊಂಡೆ. ಈಗ ನೀವು ಅದನ್ನು ಹಿಂದೆ ಕೊಟ್ಟಿದ್ದು ನೋಡಿ ನಿಮ್ಮ ಮೇಲಿನ ಅಭಿಮಾನ ಇನ್ನೂ ಹೆಚ್ಚಾಯಿತು. ನೀವು ಕೇವಲ ಮಾತಿನಲ್ಲಿ ಏನೋ ಹೇಳಿ, ಹೇಗೋ ಬದುಕುವವರಲ್ಲ ಎನ್ನುವುದು ನಂಗೆ ಸ್ಪಷ್ಟವಾಯಿತು. ನಿಮ್ಮನ್ನು ಪರೀಕ್ಷೆ ಮಾಡಿದ ಸಣ್ಣಬುದ್ಧಿಯನ್ನು ಕ್ಷಮಿಸಬೇಕು ಗುರುಗಳೇ: ಕಂಡಕ್ಟರ್ ಹೇಳಿದ.

ಆಚಾರ್ಯರಿಗೆ ನಿಂತಲ್ಲೇ ಬೆವರಲು ಆರಂಭವಾಯಿತು, ಕೈಕಾಲು ನಡುಗಿತು. ಎರಡೂ ಕೈಗಳನ್ನು ಎತ್ತಿ ದೇವರಿಗೆ ನಮಸ್ಕರಿಸಿದರು. ದೇವರೇ ನಾನು ಹತ್ತು ರೂಪಾಯಿ ಅಲ್ವಾ ಅಂತ ಎಷ್ಟು ಕ್ಷುಲ್ಲಕವಾಗಿ ಯೋಚಿಸಿದೆ. ಅದುವೇ ನನ್ನ ಗೌರವದ ಮಾನದಂಡವಾಗಿ ಹೋಯ್ತಲ್ಲ. ದೇವರೆ ನನಗೆ ಸರಿಯಾದ ಹೊತ್ತಿನಲ್ಲಿ ಜ್ಞಾನೋದಯ ಆಗುವಂತೆ ಮಾಡಿದೆಯಲ್ಲ ನಿನ್ನ ಮಹಿಮೆ ಅಪಾರ ತಂದೆ ಎಂದು ಹೇಳುತ್ತಾ ದೇವಸ್ಥಾನದತ್ತ ನಡೆದರು.

ಕಂಡಕ್ಟರ್ ಇಡೀ ಬಸ್ಸಿಗೆ ಕೇಳುವಂತೆ ಹೇಳುತ್ತಿದ್ದ, ಆ ಆಚಾರ್ಯರಿದ್ದಾರಲ್ಲಾ.. ಭಾರಿ ಪ್ರಾಮಾಣಿಕ ಮನುಷ್ಯ..

ಕೃಪೆ: ಕೃಷ್ಣ ಭಟ್ ಅಳದಂಗಡಿ ಅಂಕಣದಿಂದ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಧರ್ಮಸ್ಥಳ ಪ್ರಕರಣ; ಸುಳ್ಳು ಆಪಾದನೆ ಮಾಡಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಸಿಎಂ ಸೂಚನೆ: ಡಿಸಿಎಂ ಡಿ.ಕೆ.ಶಿವಕುಮಾರ್

ಧರ್ಮಸ್ಥಳ ಪ್ರಕರಣ; ಸುಳ್ಳು ಆಪಾದನೆ ಮಾಡಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಸಿಎಂ

“ಧರ್ಮಸ್ಥಳ ವಿಚಾರದಲ್ಲಿ ಸುಳ್ಳು ಆಪಾದನೆ ಮಾಡಿದ್ದರೆ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದುʼ ಎಂದು ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿಯವರೇ ಭರವಸೆ ನೀಡಿದ್ದಾರೆ”; ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="112789"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ಡಿ.ಕ್ರಾಸ್ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿನ ಅಂಗಡಿಗಳಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು (Shops robbed) ನಡೆಯುತ್ತಿದ್ದು, ವ್ಯಾಪಾರಿಗಳನ್ನು ಚಿಂತೆಗೀಡುಮಾಡಿದೆ.

[ccc_my_favorite_select_button post_id="112687"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!