ಮುಂಡರಗಿ: ತುಂಗಭದ್ರಾ ನದಿಗೆ ತಂದೆಯೊಬ್ಬ ತನ್ನ ಮೂವರು ಪುಟಾಣಿ ಮಕ್ಕಳನ್ನು ಎಸೆದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಬಳಿ ನಡೆದಿದೆ.
ಮೃತರು 3ವರ್ಷದ ವೇದಾಂತ್, 4 ವರ್ಷದ ಪವನ್, 6 ವರ್ಷದ ಧನ್ಯಾ ಹಾಗೂ ತಂದೆ ಮಂಜುನಾಥ್ ಎಂಬುದಾಗಿ ವರದಿಯಾಗಿದೆ.
ತಂದೆ ಮಂಜುನಾಥ್ ಮೊದಲು ತನ್ನ ಮೂವರು ಮಕ್ಕಳನ್ನು ಗದಗ ಜಿಲ್ಲೆಯ ಕೊರ್ಲಹಳ್ಳಿ ಗ್ರಾಮದ ಬಳಿಯಲ್ಲಿರುವ ತುಂಗಭದ್ರಾ ನದಿಗೆ ಎಸೆದಿದ್ದಾನೆ. ನಂತರ ತಾನೂ ಸಾವಿಗೆ ಶರಣಾಗಿದ್ದಾನೆ.
ಇತ್ತ ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಮೃತರ ಶವಗಳನ್ನು ತುಂಗಭದ್ರಾ ನದಿಯಿಂದ ಹೊರ ತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ.