ಕಾಶ್ಮೀರ; ಇಡೀ ದೇಶವೇ ಬೆಚ್ಚಿ ಬೀಳಿಸಿರು ಪಹಲ್ಲಾಮ್ ನಲ್ಲಿ ನಡೆದ ಭೀಕರ ಹತ್ಯಾಕಾಂಡಕ್ಕೆ ಪ್ರತಿಕಾರವಾಗಿ ಭಾರತೀಯ ಸೇನೆ ಉಗ್ರರ ವಿರುದ್ಧ ಕಾರ್ಯಚರಣೆ ತೀವ್ರಗೊಳಿಸಿದ್ದು, ಲಷ್ಕರ್-ಇ-ತೈಯ್ಬಾ (laskar e taiba) ಕಮಾಂಡರನ್ನು ಹೊಡೆದುರುಳಿಸಿದೆ.
ಇಂದು ಕಾಶ್ಮೀರದಲ್ಲಿ ಬಂಡಿಯಾಪುರದಲ್ಲಿ ನಡೆದ ಯೋಧರ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿ ನಡೆದಿದೆ. ಈ ದಾಳಿಯಲ್ಲಿ ಲಷ್ಕರ್-ಇ-ತೈಯ್ಬಾ ಟಾಪ್ ಕಮಾಂಡರ್ ಅಲ್ತಾಫ್ ಲಲ್ಲಿಯನ್ನು ಸೇನೆ ಹೊಡೆದುರುಳಿಸಿದೆ.
ಯೋಧರ ಈ ಕಾರ್ಯಾಚರಣೆಯಲ್ಲಿ ವೇಳೆ ಒಬ್ಬ ಯೋಧ ಹಾಗೂ ಇಬ್ಬರು ಪೊಲೀಸರಿಗೆ ಗಂಭೀರವಾದ ಗಾಯಗಳಾಗಿವೆ ಎಂದು ವರದಿಯಾಗಿದೆ.