ದೆಹಲಿ: ಪಹಲ್ಗಾಮ್ ಉಗ್ರರ ದಾಳಿ ಹಿನ್ನೆಲೆಯಲ್ಲಿ ಪಾಪಿ ಪಾಕಿಸ್ತಾನದ ಉಗ್ರರ ತಾಣಗಳ ಮೇಲೆ ಭಾರತ ಸೇನೆ ನಡೆಸಿದ ಆಪರೇಷನ್ ಸಿಂಧೂರ (Operation Sindoora) ಪ್ರತಿದಾಳಿ ಹಿನ್ನೆಲೆಯಲ್ಲಿ ಬುದ್ದಿ ಕಲಿಯದ ಪಾಕ್ ತನ್ನ ಮೊಂಡುತನ ಮುಂದುವರಿಸಿದೆ.
ಇಂದು ರಾತ್ರಿ (ಮೇ.08) 8.30 ರ ವೇಳೆ ಜಮ್ಮು, ರಾಜಸ್ಥಾನ, ಗುಜರಾತ್, ಪಂಜಾಬ್ ಹಲವು ಗಡಿ ಪ್ರದೇಶಗಳಲ್ಲಿ ದಾಳಿಗೆ ಬಂದ ಪಾಕ್ನ ಹಲವು ಮಿಸೈಲ್, ಡ್ರೋನ್ಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.
ಇದರ ಬೆನ್ನಲ್ಲೇ ಕೆರಳಿದ ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ಮತ್ತಷ್ಟು ತೀವ್ರವಾದ ದಾಳಿಗೆ ಮುಂದಾಗಿದ್ದು, ಲಾಹೋರ್, ಮುಲ್ತಾನ್, ಮುಜಾಫರಾ ಬಾದ್, ಇಸ್ಲಾಮಾ ಬಾದ್, ಪೇಶಾವರ್ ಸೇರಿ 12 ನಗರಗಳು ಸೇರಿದಂತೆ 5 ಪ್ರಮುಖ ಏರ್ ಡಿಫೆನ್ಸ್ ಮೇಲೆ ದಾಳಿ ನಡೆಸಿ ದ್ವಂಸಗೊಳಿಸಿದೆ, ಪ್ರಮುಖವಾಗಿ ಕರಾಜಿ ಮೇಲೆ ತೀವ್ರವಾದ ದಾಳಿ ಮಾಡಿದೆ ಎನ್ನಲಾಗಿದೆ.
ಅಲ್ಲದೆ ಪಾಕಿಸ್ತಾನದ ಮೂರು ಫೈಟರ್ ಜೆಟ್, ಒಂದು ಸರ್ವೇಕ್ಷಣಾ ವಿಮಾನ ಸೇರಿ ನಾಲ್ಕು ವಿಮಾನಗಳನ್ನು ಹೊಡೆದುರುಳಿಸಿದ್ದು, ಇಬ್ಬರು ಪೈಲಟ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಇದರ ಬೆನ್ನಲ್ಲೇ ಪಾಕ್ ಅಧ್ಯಕ್ಷ ಶೆಹಬಾಜ್ ಷರೀಫ್ ಮನೆಯ ಸಮೀಪವೇ ಸೇನೆ ದಾಳಿ ನಡೆದಿದ್ದು, ಜೀವ ಉಳಿಸಿಕೊಳ್ಳಲು ಅಡಗುತಾಣಕ್ಕೆ ಪರಾರಿಯಾಗಿದ್ದಾರೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. (ಭಾರತೀಯ ಸೇನೆಯ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ)
ಇದರ ಬೆನ್ನಲ್ಲೇ ದೆಹಲಿಯ ಪೊಲೀಸ್ ಅಧಿಕಾರಿಗಳು/ಸಿಬ್ಬಂದಿಯ ಎಲ್ಲಾ ರಜೆಗಳನ್ನು ರದ್ದುಗೊಳಿಸಲಾಗಿದೆ.