ದೊಡ್ಡಬಳ್ಳಾಪುರ: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಬೆಂಗಳೂರು ಸಹಕಾರ ಹಾಲು ಒಕ್ಕೂಟದ (Bamul) ದೊಡ್ಡಬಳ್ಳಾಪುರ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಫಲಿತಾಂಶ ತಡೆ ಬಿದ್ದಿದೆ.
ಜೆಡಿಎಸ್ ಬೆಂಬಲಿತ ಹುಸ್ಕೂರು ಆನಂದ್ ಮತ್ತು ಬಿಜೆಪಿ ಬೆಂಬಲಿತ ಬಿಸಿ ಆನಂದ್ ಕುಮಾರ್ ಅವರ ನಡುವೆ ಜಿದ್ದಾಜಿದ್ದಿ ಸ್ಪರ್ಧೆ ನಡೆದಿತ್ತು.
ಬೆಂಗಳೂರು ಡೇರಿ ವೃತ್ತ ಸಮೀಪ್ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ಇಂದು ಬೆಳಿಗ್ಗೆ 9-00 ಗಂಟೆಯಿಂದ ಸಂಜೆ 4-00 ಗಂಟೆಯವರೆಗೆ ಮತದಾನ ನಡೆದಿತ್ತು.
ಆದರೆ ಇದೀಗ ಬಂದ ಮಾಹಿತಿ ಅನ್ವಯ ಇಂದು ಮತದಾನದ ಬಳಿಕ ನಡೆಯಬೇಕಾಗಿದ್ದ ಮತ ಎಣಿಕೆ ಕಾರ್ಯಕ್ಕೆ ತಡೆ ಬಿದ್ದಿದೆ ಎಂದು ತಿಳಿದುಬಂದಿದೆ.
ದೊಡ್ಡಬಳ್ಳಾಪುರ ತಾಲೂಕಿನ ಗಲಿಬಿಲಿಕೋಟೆ, ತಂಬೇನಹಳ್ಳಿ ಎಂಪಿಸಿಎಸ್ ಅಧ್ಯಕ್ಷರ ಮತದಾನದ ಹಕ್ಕಿನ ಕುರಿತು ಪ್ರಕರಣ ಬಾಕಿ ಇರುವ ಕಾರಣ ಮತ ಎಣಿಕೆ ತಡೆ ನೀಡಬಿದ್ದಿದೆ ಎಂದು ತಿಳಿದುಬಂದಿದೆ.
ಈ ಕುರಿತು ಜೂ.5 ರಂದು ನ್ಯಾಯಾಲಯದ ಆದೇಶ ನೀಡುವ ಸಾಧ್ಯತೆ ಇದ್ದು, ಬಳಿಕ ಮತ ಎಣಿಕೆ ನಡೆಯಬಹುದು ಎನ್ನಲಾಗಿದೆ.
ಇದನ್ನೂ ಓದಿ: Breaking News: ಗೊಂದಲದಲ್ಲಿ ದೊಡ್ಡಬಳ್ಳಾಪುರ ಬಮೂಲ್ ಚುನಾವಣೆ ಮತ ಎಣಿಕೆ..!, ಕಾದು ನಿಂತ ಅಭ್ಯರ್ಥಿಗಳು