ದೊಡ್ಡಬಳ್ಳಾಪುರ: ಇತ್ತೀಚಿಗೆ ನಗರ ವ್ಯಾಪ್ತಿಯಲ್ಲಿ ಕೊಳಕ ಮಂಡಲ ಹಾವುಗಳು (Russell viper Snake) ಹೆಚ್ಚಾಗಿ ಕಂಡುಬರುತ್ತಿವೆ.
ಕೆಲ ದಿನಗಳ ಹಿಂದಷ್ಟೇ ನಿರ್ಮಾಣ ಹಂತದಲ್ಲಿದ್ದ ಮನೆಯ ತೊಟ್ಟಿಯಲ್ಲಿ ಬಿದ್ದಿದ್ದ ಕೊಳಕ ಮಂಡಲ ಹಾವು ರಕ್ಷಣೆ ಬೆನ್ನಲ್ಲೇ, ಇಂದು ಬೆಳ್ಳಂಬೆಳಗ್ಗೆ ಕರೇನಹಳ್ಳಿ ಮನೆಯೊಂದರಲ್ಲಿ ಸುಮಾರು 4 ವರ್ಷದ ಕೊಳಕ ಮಂಡಲ ಹಾವು ಕಂಡು ಬಂದಿದೆ.
ನಗರದ ಕರೇನಹಳ್ಳಿ ಅಭಯ ಚೌಡೇಶ್ವರಿ ದೇವಾಲಯದ ಹಿಂಭಾಗದ ಮನೆಯೊಂದರಲ್ಲಿ ಹಾವು ಇಂದು ಬೆಳಗ್ಗೆ ಕಂಡು ಬಂದಿದೆ.
ಈ ಹಿನ್ನೆಲೆಯಲ್ಲಿ ಮನೆಯ ಮಾಲೀಕರು ಉರಗ ರಕ್ಷಕ ಸ್ನೇಕ್ ಉಲ್ಲಾಸ್ ಅವರಿಗೆ ಮಾಹಿತಿ ನೀಡಿದ್ದು, ಉಲ್ಲಾಸ್ ಸ್ಥಳಕ್ಕೆ ತೆರಳಿ ಹಾವನ್ನು ರಕ್ಷಿಸಿ, ಕಾಡಿಗೆ ಬಿಟ್ಟಿದ್ದಾರೆ.
ಈ ಕೊಳಕ ಮಂಡಲ ಹಾವು ಸುಮಾರು ನಾಲ್ಕು ವರ್ಷದ್ದು ಎನ್ನಲಾಗುತ್ತಿದ್ದು, 3.5 ಅಡಿ ಉದ್ದ ವಿತ್ತು.
ಕೊಳಕು ಮಂಡಲ Russell viper
ಭಾರತದ Big four venomous ಹಾವುಗಳಲ್ಲಿ ಒಂದಾದ ಕೊಳಕು ಮಂಡಲ ಭಾರತದ ಹಾವು ಕಡಿತದಿಂದ ಸಾವನ್ನಪ್ಪುವ ಪ್ರಕರಣಗಳಿಗೆ ಕಾರಣವಾಗುವ ಹಾವುಗಳಲ್ಲಿ ಅಗ್ರಸಾಲಿನಲ್ಲಿ ನಿಲ್ಲುತ್ತದೆ.
Hemotoxin ವಿಷದ ಹಾವಾದ ಇದು ಕಚ್ಚಿದಾಗ ಸೂಕ್ತ ಚಿಕಿತ್ಸೆ ಕೊಡಸದಿದ್ದರೆ ವ್ಯಕ್ತಿ ಸಾಯುವ ಸಾಧ್ಯತೆ ಇರುವ ಜೊತೆಗೆ, ಸೂಕ್ತ ಚಿಕಿತ್ಸೆ ದೊರೆಯದಿದ್ದಾಗ ಕಚ್ಚಿದ ಭಾಗ ಗ್ಯಾಂಗ್ರೀನ್ ಆಗುವ ಸಾಧ್ಯತೆ ಇರುತ್ತದೆ.
ಕೊಳಕು ಮಂಡಲ ಹಾವಿನಿಂದ ಕಚ್ಚಿಸಿಕೊಂಡ ಬಹಳಷ್ಟು ಜನ ಸೂಕ್ತ ಚಿಕಿತ್ಸೆ ಪಡೆಯದೆ ಗ್ಯಾಂಗ್ರಿನ್ ಆಗಿ ಕಾಲುಗಳನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಈ ಹಾವಿನ ಕುರಿತು ಹೆಚ್ಚಿನ ಕುರಿತು ಹೆಚ್ಚಿನ ಎಚ್ಚರಿಕೆ ವಹಿಸಬೇಕಿದೆ.
ಸಾಮಾನ್ಯವಾಗಿ ಕೊಳಕುಮಂಡಲ ಹಾವುಗಳ ರಾತ್ರಿ ಸಮಯದಲ್ಲಿ ಹೆಚ್ಚಾಗಿ ಓಡಾಡುವ ಕಾರಣ, ರಾತ್ರಿ ಸಮಯ ಹೊರಗೆ ನಡೆದು ಹೋಗುವಾಗ ಕಡ್ಡಾಯವಾಗಿ ಟಾರ್ಚ್ ಲೈಟ್ ಗಳನ್ನು ಬಳಸಬೇಕಿದೆ. ಜೊತೆಗೆ ಮನೆಯ ಸುತ್ತಮುತ್ತ ಸಂದಿಕೊಂದಿಗಳು ಹೆಚ್ಚಾಗಿ ಇಲ್ಲದಂತೆ ನೋಡಿಕೊಳ್ಳುವುದು ಉತ್ತಮ.