When the cloud moves

ಹರಿತಲೇಖನಿ ದಿನಕ್ಕೊಂದು ಕಥೆ: ಮೋಡ ಸರಿದಾಗ

Harithalekhani; ಧಾರುಣಿ ಹುಟ್ಟು ಅಂಗವಿಕಲೆ. ಭಗವಂತನ ಶಾಪವೋ ಎಂಬಂತೆ ನೀಲಮ್ಮ ಕೇಶವರಾಯರಿಗೆ ನಾಲ್ಕು ಮಕ್ಕಳಲ್ಲಿ ಮೂರನೆಯವಳಾಗಿ ಹುಟ್ಟಿದವಳು.

ಮೊದಲೆರಡು ಗಂಡು ಮಕ್ಕಳು. ಕೊನೆಯವಳು ಮತ್ತೊಬ್ಬಳು ಶ್ರಾವಣಿ. ಈಕೆ ಸುರ ಸುಂದರಿ ಎಂದೇ ಹೇಳಬಹುದು. ಅಷ್ಟೇ ಅಲ್ಲ ಸಕಲ ಕಲಾ ವಲ್ಲಭೆ. ಹಾಡು, ನೃತ್ಯ ಯಾವುದೇ ಚಟುವಟಿಕೆ ಇರಲಿ.. ಶ್ರಾವಣಿ ಅಲ್ಲಿ ಇದ್ದೇ ಇರುತಿದ್ದಳು.

ಹೆತ್ತವರಿಗೂ ಮುದ್ದಿನ ಮಗಳಾದಳು. ಮೊದಲೆರಡು ಗಂಡು ಮಕ್ಕಳ ಸ್ಥಾನ ಬೇರೇನೇ ಇತ್ತು. ಇನ್ನು ಉಳಿದದ್ದು ಪಾಪ ಧಾರುಣಿ ನಡೆಯಲಾಗದ ನತದೃಷ್ಟೆ. ಎಲ್ಲದಕ್ಕೂ ಪರರ ಆಶ್ರಯ ಬೇಕು.ಸ್ವಲ್ಪ ಮಟ್ಟಿಗೆ ಮೂಲೆ ಗುಂಪೇ ಆದಳು ಎನ್ನಬಹುದು. ಆದರೆ ತಂಗಿಯ ಚಟುವಟಿಕೆಯ ನೋಡಿ ನಾನು ಏನಾದರು ಮಾಡಬೇಕು,ಸಾಧಿಸಬೇಕು ಎನ್ನುವ ಹಂಬಲ ಮನದೊಳಗೆ ಇತ್ತು.

ಉಳಿದ ಮಕ್ಕಳ ಹಾಗೆ ತಾನು ಶಾಲೆಗೆ ಹೋಗುವ ಹಾಗಿಲ್ಲ.. ಮನೆಯಲ್ಲಿ ಅಣ್ಣನವರು,ತಂಗಿ ಓದುತಿದ್ದ ಪಾಠಗಳು ಕಿವಿಗೆ ಬಿದ್ದ ಕ್ಷಣ ಅದನ್ನು ಜ್ಞಾಪಿಸಿಕೊಳ್ಳುವ ಶಕ್ತಿ ದೇವರು ಕರುಣಿಸಿದ್ದ.ಹಾಗೆ ತಂಗಿ ಮಾಡುತಿದ್ದ ಸಂಗೀತದ ಹಾಡು ತನ್ನಷ್ಟಕ್ಕೆ ತಾನೇ ಹಾಡಿಕೊಳ್ಳುತಿದ್ದಳು..

ಸ್ವರವೂ ಇಂಪಾಗಿತ್ತು.. ಒಂದು ಭಾರಿ ಅವರ ಮನೆಗೆ ಬಂದ ಬಳಗದವರೊಬ್ಬರು ಧಾರುಣಿ ಗುಣುಗುತಿದ್ದ ಹಾಡು ಕೇಳುತ್ತಾರೆ. ಈ ಹುಡುಗಿಗೆ ಸರಿಯಾದ ದಾರಿ ತೋರಿದರೆ ಒಳ್ಳೆ ಸಂಗೀತ ಗಾರ್ತಿಯಾದರು ಆಗಬಹುದು ಎಂದು ಕೇಶವರಾಯರಲ್ಲಿ ಪ್ರಸ್ತಾಪಿಸುತ್ತಾರೆ. ಆದರೆ ರಾಯರು ಅಷ್ಟೊಂದು ಉತ್ಸಾಹ ತೋರಿಸುವುದಿಲ್ಲ.

ಇತ್ತ ಶ್ರಾವಣಿಗೆ ಒಂದು ಟಿವಿಯ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಸಿಗ್ತದೆ. ಒಂದು ದಿನ ಅಲ್ಲಿ ಅವಳ ಅಕ್ಕನ ಬಗ್ಗೆ ಹೇಳುವಾಗ ತೀರ್ಪುಗಾರರು ಅಲ್ಲಿಗೆ ಬಂದ ಧಾರುಣಿಯಲ್ಲೂ ಹಾಡಲು ಹೇಳುತ್ತಾರೆ. ಅವಳ ಹಾಡು ಕೇಳಿದ ಎಲ್ಲರೂ ದಂಗಾಗಿ ದೇವರು ಕಾಲು ಕೊಡದಿದ್ದರೆ ಏನಂತೆ.. ಕಂಠವಾದರೂ ಕೊಟ್ಟಿದ್ದಾರಲ್ಲ ಅನ್ನುತ್ತಾ ಅವಳಿಗೂ ಮಾರ್ಗದರ್ಶನಕ್ಕಾಗಿ ಒಂದು ಶಿಕ್ಷಕಿಯನ್ನು ನೀಡುತ್ತಾರೆ.

ಧಾರುಣಿ ಎಲ್ಲ ಪ್ರಕಾರದ ಸಂಗೀತವನ್ನು ಕೂಡಲೇ ಕಲಿಯುತ್ತಿದ್ದಳು. ಧಾರುಣಿಗೆ ಟಿವಿ ಯವರು ನಡೆಸಿದ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಬರ್ತದೆ.

ಅವಳ ಬಾಳಿನಲ್ಲೂ ಕಪ್ಪು ಮೋಡಗಳು ಸರಿದು ಬೆಳದಿಂಗಳಾಗಿ ಹರಡುತ್ತದೆ ಅವಳ ಜೀವನದ ಪಥವೇ ಬದಲಾಗುತ್ತದೆ. ಗಾಲಿ ಚಕ್ರ ಹೋಗಿ ಮುಂದೆ ಕೃತಕ ಕಾಲು ಜೋಡಿಸಿ ಅವಳು ನಡೆಯುವಂತಾಗುತ್ತಾಳೆ… ದೊಡ್ಡ ಸಂಗೀತಗಾರಳಾಗಿ ಎಲ್ಲರ ಮನ ಸೆಳೆದು ಮನೆ ಮಾತಾಗುತ್ತಾಳೆ.

ಕೃಪೆ: ಶೋಭಾ ಆರ್ ಕಲ್ಕೂರ್ (ಸಾಮಾಜಿಕ ಜಾಲತಾಣ)

ರಾಜಕೀಯ

ಸಂಸತ್‌ನಲ್ಲಿ ಆಪರೇಷನ್ ಸಿಂಧೂರ ಕದನವಿರಾಮದ ಕಾವೇರಿದ ಚರ್ಚೆ: ರಾಹುಲ್ ಗಾಂಧಿ ಸವಾಲು, ಮೋದಿ ಸ್ಪಷ್ಟನೆ

ಸಂಸತ್‌ನಲ್ಲಿ ಆಪರೇಷನ್ ಸಿಂಧೂರ ಕದನವಿರಾಮದ ಕಾವೇರಿದ ಚರ್ಚೆ: ರಾಹುಲ್ ಗಾಂಧಿ ಸವಾಲು, ಮೋದಿ

ಚಳಿಗಾಲದ ಅಧಿವೇಶನದಲ್ಲಿ ಆಪರೇಷನ್ ಸಿಂಧೂರ (Operation Sindoor), ಏಕಾಏಕಿ ಕದನ ವಿರಾಮ (ceasefire) ಘೋಷಣೆ ಕುರಿತು ತೀವ್ರ ಚರ್ಚೆಗೆ ಕಾರಣವಾಗಿತ್ತು.

[ccc_my_favorite_select_button post_id="111876"]
ಆಗಸ್ಟ್ 4 ರಿಂದ ಅಮೇರಿಕಾದಲ್ಲಿ ಶಾಸಕಾಂಗ ಶೃಂಗಸಭೆ 2025: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರಯಾಣ

ಆಗಸ್ಟ್ 4 ರಿಂದ ಅಮೇರಿಕಾದಲ್ಲಿ ಶಾಸಕಾಂಗ ಶೃಂಗಸಭೆ 2025: ವಿಧಾನ ಪರಿಷತ್ ಸಭಾಪತಿ

ಆಗಸ್ಟ್ 4 ರಿಂದ 6ನೇ ತಾರೀಖಿನವರೆಗೆ ಅಮೇರಿಕಾದ ಬೋಸ್ಟನ್ ನಗರದಲ್ಲಿ ನಡೆಯುವ "ಶಾಸಕಾಂಗ ಶೃಂಗಸಭೆ 2025”ರಲ್ಲಿ (Legislative Summit 2025) ಪಾಲ್ಗೊಳ್ಳಲು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಇಂದು ಬೆಳಗಿನ ಜಾವ

[ccc_my_favorite_select_button post_id="111777"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿ: ದೊಡ್ಡಬಳ್ಳಾಪುರದ ಕ್ರೀಡಾಪಟುಗಳು ಆಯ್ಕೆ

ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿ: ದೊಡ್ಡಬಳ್ಳಾಪುರದ ಕ್ರೀಡಾಪಟುಗಳು ಆಯ್ಕೆ

ಜು.25ರಿಂದ 28ರವರೆಗೆ ನಡೆಯಲಿರುವ ಪುರುಷರ ಸೀನಿಯರ್ -ನ್ಯಾಷನಲ್ಸ್ ಕಬಡ್ಡಿ ಚಾಂಪಿಯನ್‌ಶಿಪ್(Kabaddi Championship) ಪಂದ್ಯಾವಳಿ

[ccc_my_favorite_select_button post_id="111553"]
ದೊಡ್ಡಬಳ್ಳಾಪುರ: ಕೃಷಿ ಹೊಂಡಕ್ಕೆ ಮತ್ತೊಂದು ಬಲಿ.!

ದೊಡ್ಡಬಳ್ಳಾಪುರ: ಕೃಷಿ ಹೊಂಡಕ್ಕೆ ಮತ್ತೊಂದು ಬಲಿ.!

ಸರ್ಕಾರಗಳು ಮುಂಜಾಗ್ರತೆ ಕ್ರಮ ಕೈಗೊಳ್ಳಿ ಎಂದು ಎಷ್ಟೇ ಸೂಚನೆ ನೀಡಿದರು, ಕೃಷಿ ಹೊಂಡದಲ್ಲಿ (Agricultural pit) ಆಕಸ್ಮಿಕವಾಗಿ ಬಿದ್ದು ಸಾವನಪ್ಪುತ್ತಿರುವ ಪ್ರಕರಣಗಳು ಮಾತ್ರ ನಿಲ್ಲುತ್ತಿಲ್ಲ.

[ccc_my_favorite_select_button post_id="111873"]
ದೊಡ್ಡಬಳ್ಳಾಪುರ: ಕ್ಯಾಂಟರ್ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಕ್ಯಾಂಟರ್ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು..!

ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ (Accident) ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ತಾಲ್ಲೂಕಿನ ಮಧುರೆ ರಸ್ತೆಯಲ್ಲಿನ ಖಾಸಗಿ

[ccc_my_favorite_select_button post_id="111623"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!