ಹರಿತಲೇಖನಿ ದಿನಕ್ಕೊಂದು ಕಥೆ: ಹುಷಾರು, ಪ್ರಾಮಾಣಿಕತೆಯ ಪರೀಕ್ಷೆ ಕಾಯ್ತಾ ಇರ್ತದೆ..!!

ಒಬ್ಬರು ಪ್ರಕಾಂಡ ವಿದ್ವಾಂಸರಿದ್ದರು. ಹತ್ತಾರು ಊರುಗಳಲ್ಲಿ ಅವರ ಪ್ರವಚನಗಳಿಗೆ ಭಾರಿ ಬೆಲೆ ಇತ್ತು. ಜನರು ದೊಡ್ಡ ಸಂಖ್ಯೆಯಲ್ಲಿ ಸೇರುತ್ತಿದ್ದರು. ಪುರಾಣಗಳ ಕಥೆಗಳನ್ನು ಸಮಕಾಲೀನ ನೆಲೆಗಳಿಗೆ ವಿಸ್ತರಿಸಿ ಜನರಿಗೆ ಒಳಿತು-ಕೆಡುಕಿನ ಬಗ್ಗೆ ಬೋಧನೆ ಮಾಡುವುದು ಅವರ ವಿಶೇಷ. ಸಾಲದ್ದಕ್ಕೆ ತಾವು ಕೂಡಾ ಉನ್ನತ ಮೌಲ್ಯಗಳನ್ನು ಪಾಲಿಸಿಕೊಂಡು ಬರುತ್ತಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು.

ಒಂದು ಸಾರಿ ಅವರಿಗೆ ಪಟ್ಟಣದ ಸಮೀಪದ ಒಂದು ಊರಿನಿಂದ ಪ್ರವಚನಕ್ಕೆ ಕರೆಬಂದಿತ್ತು. ಹೀಗೆ ಪ್ರವಚನಕ್ಕೆ ಕರೆಬಂದರೆ ದೊಡ್ಡ ಮೊತ್ತ ಕೇಳುವವರಲ್ಲ ಅವರು. ಹಾಗಾಗಿ ಬಸ್ಸಿನಲ್ಲೇ ಹೋಗಿಬಿಡುತ್ತಿದ್ದರು. ಹಾಗೆ ಬಸ್ಸು ಹತ್ತಿ ಸೀಟೊಂದನ್ನು ಹಿಡಿದು ಕುಳಿತರು. ಸ್ವಲ್ಪಹೊತ್ತಿನಲ್ಲಿ ಬಸ್ಸು ಹೊರಟಿತು. ಕಂಡಕ್ಟರ್ ಟಿಕೆಟ್ ಕೊಡಲು ಆರಂಭಿಸಿದ. ಆಚಾರ್ಯರು ಹಣ ನೀಡಿದರು. ಕಂಡಕ್ಟರ್ ಟಿಕೆಟ್ ಮತ್ತು ಬಾಕಿ ಹಣವನ್ನು ವಾಪಸ್ ನೀಡಿದ.

ಆಚಾರ್ಯರು ಎಣಿಸಿ ನೋಡಿದರೆ ಹತ್ತು ರೂಪಾಯಿ ಹೆಚ್ಚು ಬಂದಿತ್ತು. ಕಂಡಕ್ಟರ್ ಟಿಕೆಟ್ ಮಾಡಿಕೊಂಡು ವಾಪಸ್ ಬರುವಾಗ ಕೊಡಬೇಕು ಎಂದುಕೊಂಡರು ರಾಯರು.

ಆದರೆ, ಸ್ವಲ್ಪ ಹೊತ್ತು ಹಾಗೇ ಕುಳಿತಿದ್ದಾಗ ಮತ್ತೆ ಯೋಚನೆ ಮಾಡಿದರು: ನಾನು ಸಣ್ಣ ಹತ್ತು ರೂಪಾಯಿಯ ಬಗ್ಗೆ ಅನಗತ್ಯವಾಗಿ ಯೋಚನೆ ಮಾಡುತ್ತಿದ್ದೇನೆ ಅಲ್ವಾ? ಅಷ್ಟಕ್ಕೂ ಈ ಬಸ್ ಕಂಪನಿಗಳು ದೊಡ್ಡ ಲಾಭ ಮಾಡುತ್ತವೆ. ಕಂಡಕ್ಟರ್ ಗಳೇನು ದುಡ್ಡು ಹೊಡೆಯೋದು ಕಡಿಮೇನಾ’ ಎಂದೆಲ್ಲ ಯೋಚಿಸಿ, ದುಡ್ಡು ಹಿಂದಿರುಗಿಸದಿದ್ದರೆ ಏನಾಗ್ತದೆ ಎಂದು ಲೆಕ್ಕ ಹಾಕಿದರು.

`ಹಾಗಾಗಿ, ಇದು ದೇವರೇ ಕೊಟ್ಟ ಹಣ ಅಂತ ಇಟ್ಕೊಳ್ತೇನೆ. ಇದನ್ನು ಯಾವುದಾದರೂ ಒಳ್ಳೆಯ ಕೆಲಸಕ್ಕೆ ಬಳಸಿದರೆ ಆಯಿತು ಅಷ್ಟೇ ಅಲ್ವಾ?’ ಎಂದು ಯೋಚಿಸುತ್ತಾ ಕೈಯಲ್ಲಿದ್ದ 10 ರೂ. ನೋಟನ್ನು ಜೇಬಿಗೆ ತುರುಕಿಕೊಡರು.

ಅಷ್ಟು ಹೊತ್ತಿಗೆ ಬಸ್ಸು ಅವರು ಇಳಿಯಬೇಕಾಗಿದ್ದ ಊರಿನ ಬಸ್ ನಿಲ್ದಾಣವನ್ನು ತಲುಪಿತು. ಕಂಡಕ್ಟರ್ ಯಾರ್ರೀ ಇಳಿಯೋರು ಅಂದ. ರಾಯರು ತಮ್ಮ ಧೋತರವನ್ನು ಸರಿ ಮಾಡಿಕೊಂಡು ಜುಬ್ಬಾವನ್ನೊಮ್ಮೆ ಸವರಿಕೊಂಡು ಇಳಿದರು. ಎರಡೇ ಹೆಜ್ಜೆ ಇಟ್ಟದ್ದು, ಅವರ ಮನಸ್ಸು ಒಮ್ಮೆಲೇ ಜಗ್ಗಿದಂತಾಯ್ತು. ಕೂಡಲೇ ಅವರು ಜುಬ್ಬಾದ ಜೇಬಿಗೆ ಕೈ ಹಾಕಿ ಹತ್ತು ರೂಪಾಯಿ ತೆಗೆದರು. ಅಷ್ಟು ಹೊತ್ತಿಗೆ ಬಸ್ ಮುಂದಿನ ಪಯಣಕ್ಕೆ ಹೊರಟಿತ್ತು. ಆದರೂ ಆಚಾರ್ಯರು ಕಂಡಕ್ಟ್ರೇ ಎಂದು ಕೂಗಿ ಕರೆದರು. “ನೋಡಿ ಸ್ವಾಮಿ ನೀನು ಹತ್ತು ರೂ. ಹೆಚ್ಚು ಕೊಟ್ಟಿದ್ದೀರಿ. ವಾಪಸ್ ತಗೊಳ್ಳಿ” ಅಂತ ಹೇಳುತ್ತಾ ಬಸ್ಸಿನ ಕಡೆಗೆ ಹೋದರು.

ಅವರತ್ತ ಬಂದವನೇ ಕಂಡಕ್ಟರ್ ಅವರ ಕಾಲಿಗೆ ಬಿದ್ದ. ಎದ್ದು ನಿಂತು ಕೇಳಿದ: ನೀವು ಪ್ರವಚನ ನೀಡುವ ವಿಶ್ವನಾಥ ಆಚಾರ್ಯರಲ್ಲವೇ?

ಆಚಾರ್ಯರು: ಹೌದಪ್ಪಾ ಎಂದರು.

ಆಚಾರ್ಯರೇ ನಾನು ನಿಮ್ಮ ಬಗ್ಗೆ ತುಂಬ ಕೇಳಿದ್ದೇನೆ. ನಿಮ್ಮ ಪ್ರವಚನಗಳನ್ನು ನೇರವಾಗಿ ಮತ್ತು ಯೂಟ್ಯೂಬ್‍ಗಳಲ್ಲಿ ನೋಡಿದ್ದೇನೆ. ನಿಮ್ಮ ಬಗ್ಗೆ ಗೌರವಾದರ ನಂಗೆ. ಇವತ್ತು  ಬಸ್ಸಿಗೆ ಹತ್ತಿದಾಗಲೇ ನೀವೇ ಅನಿಸಿತು. ಅದರ ನಡುವೆಯೇ ಒಂದು ಸಣ್ಣ ಬುದ್ಧಿ ತೋರಿಸಿದೆ. ನಿಮಗೆ ಹತ್ತು ರೂಪಾಯಿ ಜಾಸ್ತಿ ಕೊಡೋಣ. ಪ್ರಾಮಾಣಿಕತೆಯ ಬಗ್ಗೆ ತುಂಬ ಚೆನ್ನಾಗಿ ಹೇಳುತ್ತಾರಲ್ಲಾ.. ಏನು ಮಾಡುತ್ತಾರೆ ನೋಡೋಣ ಅಂತ ಅಂದುಕೊಂಡೆ. ಈಗ ನೀವು ಅದನ್ನು ಹಿಂದೆ ಕೊಟ್ಟಿದ್ದು ನೋಡಿ ನಿಮ್ಮ ಮೇಲಿನ ಅಭಿಮಾನ ಇನ್ನೂ ಹೆಚ್ಚಾಯಿತು. ನೀವು ಕೇವಲ ಮಾತಿನಲ್ಲಿ ಏನೋ ಹೇಳಿ, ಹೇಗೋ ಬದುಕುವವರಲ್ಲ ಎನ್ನುವುದು ನಂಗೆ ಸ್ಪಷ್ಟವಾಯಿತು. ನಿಮ್ಮನ್ನು ಪರೀಕ್ಷೆ ಮಾಡಿದ ಸಣ್ಣಬುದ್ಧಿಯನ್ನು ಕ್ಷಮಿಸಬೇಕು ಗುರುಗಳೇ: ಕಂಡಕ್ಟರ್ ಹೇಳಿದ.

ಆಚಾರ್ಯರಿಗೆ ನಿಂತಲ್ಲೇ ಬೆವರಲು ಆರಂಭವಾಯಿತು, ಕೈಕಾಲು ನಡುಗಿತು. ಎರಡೂ ಕೈಗಳನ್ನು ಎತ್ತಿ ದೇವರಿಗೆ ನಮಸ್ಕರಿಸಿದರು. ದೇವರೇ ನಾನು ಹತ್ತು ರೂಪಾಯಿ ಅಲ್ವಾ ಅಂತ ಎಷ್ಟು ಕ್ಷುಲ್ಲಕವಾಗಿ ಯೋಚಿಸಿದೆ. ಅದುವೇ ನನ್ನ ಗೌರವದ ಮಾನದಂಡವಾಗಿ ಹೋಯ್ತಲ್ಲ. ದೇವರೆ ನನಗೆ ಸರಿಯಾದ ಹೊತ್ತಿನಲ್ಲಿ ಜ್ಞಾನೋದಯ ಆಗುವಂತೆ ಮಾಡಿದೆಯಲ್ಲ ನಿನ್ನ ಮಹಿಮೆ ಅಪಾರ ತಂದೆ ಎಂದು ಹೇಳುತ್ತಾ ದೇವಸ್ಥಾನದತ್ತ ನಡೆದರು.

ಕಂಡಕ್ಟರ್ ಇಡೀ ಬಸ್ಸಿಗೆ ಕೇಳುವಂತೆ ಹೇಳುತ್ತಿದ್ದ, ಆ ಆಚಾರ್ಯರಿದ್ದಾರಲ್ಲಾ.. ಭಾರಿ ಪ್ರಾಮಾಣಿಕ ಮನುಷ್ಯ..

ಕೃಪೆ: ಕೃಷ್ಣ ಭಟ್ ಅಳದಂಗಡಿ ಅಂಕಣದಿಂದ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ದೇಶದಲ್ಲಿ ಬೆಂಗಳೂರಿಗೆ ಸರಿಸಮನಾದ ನಗರ ಮತ್ತೊಂದಿಲ್ಲ: ನಾರಾ ಲೋಕೇಶ್‌ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು

ದೇಶದಲ್ಲಿ ಬೆಂಗಳೂರಿಗೆ ಸರಿಸಮನಾದ ನಗರ ಮತ್ತೊಂದಿಲ್ಲ: ನಾರಾ ಲೋಕೇಶ್‌ಗೆ ಡಿಸಿಎಂ ಡಿ.ಕೆ. ಶಿವಕುಮಾರ್

“ಮೂಲಸೌಕರ್ಯ, ಮಾನವ ಸಂಪನ್ಮೂಲ, ನವೋದ್ಯಮ, ಅನ್ವೇಷಣೆ ವಿಚಾರದಲ್ಲಿ ದೇಶದಲ್ಲಿ ಬೆಂಗಳೂರಿಗೆ ಸರಿಸಮನಾದ ನಗರ ಮತ್ತೊಂದಿಲ್ಲ. ಬೇರೆಯವರು ತಮ್ಮನ್ನು ಮಾರ್ಕೆಟಿಂಗ್ ಮಾಡಿಕೊಳ್ಳಲು ಬೆಂಗಳೂರಿನ ಬಗ್ಗೆ ಮಾತನಾಡುತ್ತಾರೆ” ಎಂದು ಆಂಧ್ರ ಐಟಿ ಸಚಿವ ನಾರಾ ಲೋಕೇಶ್ (Nara

[ccc_my_favorite_select_button post_id="115011"]

ಬೆದರಿಕೆ ಕರೆ.. Video ಪೋಸ್ಟ್ ಮಾಡಿದ ಸಚಿವ

[ccc_my_favorite_select_button post_id="115009"]

300 ರೂ. ಊಟ ಕೊಟ್ಟು 300 ಕೋಟಿ

[ccc_my_favorite_select_button post_id="114973"]

Bihar Election; ಬಿಜೆಪಿ ಪಟ್ಟಿ ಬಿಡುಗಡೆ

[ccc_my_favorite_select_button post_id="114963"]
ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ. ಹೀಗಾಗಿ ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಅವರು ಸ್ಪಷ್ಟ ಎಚ್ಚರಿಕೆ ನೀಡಿದರು.

[ccc_my_favorite_select_button post_id="114725"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ನಿಸರ್ಗ ಯೋಗ ಕೇಂದ್ರದ ಹಾಗೂ ರಾಜ್ಯ ಬಾಲಕರ ಯೋಗ ತಂಡದ ನಾಯಕ ವಿ.ವರ ಪ್ರಸಾದ್ (V. Vara Prasad) 50ನೇ ಗೋಲ್ಡನ್‌ ಜುಬ್ಲಿ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ (Yoga Championship) ನಲ್ಲಿ ಭಾಗವಹಿಸಿ ಚಿನ್ನದ

[ccc_my_favorite_select_button post_id="114944"]
ದೊಡ್ಡಬಳ್ಳಾಪುರ: ಅರಸಮ್ಮ ದೇವಾಲಯದಲ್ಲಿ ಕಳವು

ದೊಡ್ಡಬಳ್ಳಾಪುರ: ಅರಸಮ್ಮ ದೇವಾಲಯದಲ್ಲಿ ಕಳವು

ಅರಸಮ್ಮ ದೇವಾಲಯದ (Arasamma Temple) ಬಾಗಿಲಿನ ಬೀಗ ಹೊಡೆದು ಹುಂಡಿ ಹಾಗೂ ದೇವರ ಆಭರಣಗಳನ್ನು ಕಳವು ಮಾಡಿರುವ ಪ್ರಕರಣ ಭಾನುವಾರ ರಾತ್ರಿ ನಡೆದಿದೆ.

[ccc_my_favorite_select_button post_id="114950"]
ದೊಡ್ಡಬಳ್ಳಾಪುರದಲ್ಲಿ ಸತತ 3ನೇ ಅಪಘಾತ..! ಬೈಕ್ ಸವಾರನ ಸ್ಥಿತಿ ಗಂಭೀರ

ದೊಡ್ಡಬಳ್ಳಾಪುರದಲ್ಲಿ ಸತತ 3ನೇ ಅಪಘಾತ..! ಬೈಕ್ ಸವಾರನ ಸ್ಥಿತಿ ಗಂಭೀರ

ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗ್ಗೆ 9.15 ರ ವರೆಗೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸತತ 3ನೇ ಅಪಘಾತ (Accident) ಪ್ರಕರಣ ವರದಿಯಾಗುತ್ತಿದೆ.

[ccc_my_favorite_select_button post_id="114999"]

ಆರೋಗ್ಯ

ಸಿನಿಮಾ

ದಿನ ಭವಿಷ್ಯ: ಈ ರಾಶಿಯವರಿಂದು ಅತಿಯಾದ ಒತ್ತಡಕ್ಕೆ ಸಿಲುಕದಿರಿ

ದಿನ ಭವಿಷ್ಯ: ಈ ರಾಶಿಯವರಿಂದು ಅತಿಯಾದ ಒತ್ತಡಕ್ಕೆ ಸಿಲುಕದಿರಿ

ರಾಹುಕಾಲ: 07:30AM ರಿಂದ 09:00AM, ಗುಳಿಕಕಾಲ: 01:30PM ರಿಂದ 03:00PM, ಯಮಗಂಡಕಾಲ: 10:30AM ರಿಂದ 12:00PM, Astrology

[ccc_my_favorite_select_button post_id="114397"]
error: Content is protected !!