ಹರಿತಲೇಖನಿ ದಿನಕ್ಕೊಂದು ಕಥೆ: ಬದುಕಿಗೆ ಪಾಠ ಮಹಾಭಾರತದಲ್ಲಿ.!

ಮಾನವನೆಂಬ ಜೀವಿಯೊಳಗೆ ಯಾವೆಲ್ಲ ಭಾವನೆಗಳು, ಸಂಘರ್ಷಗಳು, ರಾಗ ದ್ವೇಷವೇ ಮೊದಲಾದ ದ್ವಂದ್ವಗಳು ಮನೆ ಮಾಡಿಕೊಂಡಿರುವುದೋ ಅದೆಲ್ಲದರ ಅನಾವರಣವೇ ಮಹಾಭಾರತ. ಇಲ್ಲಿ ಮನಶ್ಶಾಸ್ತ್ರವಿದೆ, ರಾಜಕಾರಣವಿದೆ, ಪ್ರೀತಿ ವಿಶ್ವಾಸವಿದೆ, ಕ್ರೌರ್ಯವಿದೆ, ದ್ರೋಹ ಚಿಂತನವಿದೆ, ಮುಗ್ಧತೆಯಿದೆ ಅಂದರೆ ಸರ್ವಾಂಗ ಸುಂದರವಾದ, ಸಾರ್ವಕಾಲಿಕವಾದ, ಸರ್ವತ್ರವಾದ, ಸರ್ವರಿಗೂ ಅನ್ವಯವಾದ ವಿಶಿಷ್ಟವಾದ ಕಥಾನಕದ ಹೂರಣವೇ ಇದೆ… ಇದು ಮಹಾಭಾರತ.

ಇಲ್ಲಿ ದುರ್ಯೋಧನಾದಿಗಳು ಕೆಟ್ಟವರೆಂದು ಯುಧಿಷ್ಟಿರಾದಿಗಳು ಸಜ್ಜನರೆಂದು ಸ್ಥೂಲವಾಗಿ ಹೇಳಬಹುದಾದರೂ ಅವರವರ ಭಾವಕ್ಕೆ ತರ್ಕಕ್ಕೆ ಅನುಗುಣವಾಗಿ ಈ ನಿರ್ಣಯದಲ್ಲಿಯೂ ಭಿನ್ನ ನೋಟಗಳಿರುವುದೂ ಅಷ್ಟೇ ಸತ್ಯ

ಯುಧಿಷ್ಟಿರನ ಧರ್ಮಪ್ರಜ್ಞೆ ಇರಬಹುದು, ದುರ್ಯೋಧನನ ಅಧರ್ಮಪ್ರಜ್ಞೆ ಇರಬಹುದು ಯಾವುದು ಒಂದು ಮಿತಿಯಲ್ಲಿದ್ದರೆ ಅದು ಸಹ್ಯವಾದೀತು ಅತಿಯಾದರೆ ಅಧರ್ಮದಂತೆ ಧರ್ಮವೂ ಅಸಹ್ಯವೇ ಆದೀತೆನ್ನುವುದಕ್ಕೂ ಮಹಾಭಾರತವೇ ಸಾಕ್ಷಿ. ಎಷ್ಟೋ ಕಡೆಯಲ್ಲಿ ಯುಧಿಷ್ಟಿರನಿಗೆ ಅನ್ಯಾಯವಾಗಲು ಆತನ ಅತಿಯಾದ ಧರ್ಮವೇ ಕಾರಣವಾಗುತ್ತದೆ.

ಯಾವುದು ಸಮಾಜಕ್ಕೆ ಅಹಿತವಾಗಿರುವುದೋ ರಾಜ್ಯಕ್ಕೇ ಮುಳುವಾಗುವುದೋ ಅಂತಹ ವಿಚಾರಗಳನ್ನು ನಿರ್ಣಯಿಸುವಾಗ ತನ್ನ ಸ್ವಾರ್ಥವನ್ನು ಬದಿಗಿಟ್ಟು ವ್ಯವಹರಿಸುವುದೇ ಧರ್ಮ. 

ದ್ಯೂತದ ಸಮಯದಲ್ಲಿ ತನ್ನೊಡನೆ ತನ್ನ ತಮ್ಮಂದಿರನ್ನೂ, ಹೆಂಡತಿಯನ್ನೂ ಹಾಗೇ ಸರ್ವ ಸಂಪತ್ತನ್ನೂ ಕಳಕೊಂಡಿದ್ದಾದರೆ ಅದು ಧರ್ಮ ಎಂಬ ಅತಿಯಾದ ಭಾವನೆಯಿಂದಲೇ. ಅದೇರೀತಿ ತಮ್ಮಂದಿರು ಹೆಂಡತಿ ಎಲ್ಲರೂ ಅತಿಯಾದ ವಿನೀತ ಭಾವದಿಂದಲೇ ಯುಧಿಷ್ಟಿರನನ್ನು ಪ್ರಶ್ನಾತೀತ ನಾಯಕನೆಂದು ಒಪ್ಪಿದ್ದರಿಂದಲೇ ಪಾಂಡವರಿಗೆ ಅನ್ಯಾಯವಾದದ್ದು.

ಅಷ್ಟು ದೊಡ್ಡ ವಂಶದ ರಾಜನಾಗಿದ್ದೂ ಹೆಜ್ಜೆ ಹೆಜ್ಜೆಗೂ ಶಕುನಿಯ ಮೋಸವನ್ನು ಅರಿಯದೆ ಬರಿದೆ ಧರ್ಮ ಧರ್ಮವೆಂಬ ಮಂತ್ರದಿಂದ ನಗೆಪಾಟಲಾಗುವಂತೆ ವರ್ತಿಸುವ ಯುಧಿಷ್ಟಿರನ ರಾಜನೀತಿ ನಿಜವಾಗಿಯೂ ಶೋಚನೀಯವೇ. 

ಅತಿಯಾದರೆ ಅಮೃತವೂ ವಿಷವೇ ಎಂದು ಇದರಿಂದ ತಿಳಿಯುತ್ತದೆ. ಹಾಗೆಯೇ ದುರ್ಯೋಧನನಾಗಲಿ, ದುಷ್ಯಾಸನನಾಗಲಿ, ಕರ್ಣನಾಗಲಿ ಅಷ್ಟೊಂದು ಹದ್ದು ಮೀರಿ ವರ್ತಿಸುತ್ತಿರಲೂ ಯುಧಿಷ್ಟಿರನ ಅತಿಯಾದ ಧರ್ಮಪ್ರಜ್ಞೆಯೇ ಕಾರಣ. 

ಇತ್ತ ಯುಧಿಷ್ಟಿರನ ಪೂರ್ಣ ಅಂಕೆಯಲ್ಲಿರದೆ ರಾಜ್ಯದ ಹಿತದೃಷ್ಟಿಯಿಂದ ಸ್ವಲ್ಪಮಾತ್ರವಾದರೂ ಭೀಮಾದಿಗಳು ಸ್ವಂತಿಕೆಯಿಂದ ವರ್ತಿಸಿದ್ದರೆ, ಶಕುನಿಯನ್ನು ಮೊದಲೆ ಮುಗಿಸಿದ್ದರೆ, ಪಾಂಡು ರಾಜ ಕಾಡಿಗೆ ಹೋದರೂ ಮಾದ್ರಿಯ ಸಂಗ ಮಾಡದೆ ಇದ್ದಿದ್ದರೆ ಚಿತ್ರಣ ಭಿನ್ನವಾಗಿರುತ್ತಿತ್ತು. ಹಾಗೆಂದು ನಾವು ಹೇಳಿದಂತೆ ರೆ.. ರೆ.. ಗಳು ಸೇರಿಸಲಾಗದು. ಆದರೂ ನಾವು ಈ ರೆ…ರೆ…ಗಳಿಂದ ಪಾಠ ಕಲಿಯಬಹುದು.

ಎದುರಾಳಿಯು ದುರ್ಬಲನಾದಾಗ, ಮೊದಲೇ ದುಷ್ಟರಾದಂಥ ದುರ್ಯೋಧನಾದಿಗಳು ಅದರ ದುರುಪಯೋಗವನ್ನು ಪಡಕೊಳ್ಳದಿರುವರೇ..? ಯಾವುದೇ ಸಂದರ್ಭದಲ್ಲಿ ಯಾರು ತನ್ನ ದೌರ್ಬಲ್ಯವನ್ನು ಇತರರಿಗೆ ಬಿಟ್ಟುಕೊಡುವನೋ ಆವಾಗ ಆತನ ಅಧಃಪತನ ಪ್ರಾರಂಭವಾದಂತೆ. ಯುಧಿಷ್ಟಿರನಿಗೆ ಧರ್ಮದ ದೌರ್ಬಲ್ಯ, ದುರ್ಯೋಧನನಿಗೆ ಅಹಂಕಾರದ ದೌರ್ಬಲ್ಯ, ಶಕುನಿಗೆ ದ್ವೇಷದ ದೌರ್ಬಲ್ಯ, ದೃತರಾಷ್ಟ್ರನಿಗೆ ಪುತ್ರ ವಾತ್ಸಲ್ಯದ ದೌರ್ಬಲ್ಯ. ಆಯಾ ವ್ಯಕ್ತಿಯ ದೌರ್ಬಲ್ಯ ಇನ್ನೊಬ್ಬನಿಗೆ ಪ್ರಾಬಲ್ಯವನ್ನು ಸೃಷ್ಟಿಸಿ ಕೊಡುತ್ತದೆ.

ರಾಮಾಯಣವಾಗಲಿ ಮಹಾಭಾರತವಾಗಲಿ ತನ್ನ ತನ್ನ ದೌರ್ಬಲ್ಯವನ್ನು ಬಿಟ್ಟು ಕೊಟ್ಟಿದ್ದರಿಂದಲೇ ಭಿನ್ನವಾಗಿ ಹುಟ್ಟಿಕೊಂಡಿದೆ. ಅಂದು ದಶರಥ ಕೂಡ ಕೈಕೇಯಿಗೆ ‘ಸೂರ್ಯ ವಂಶದವರು ವಚನ ಭ್ರಷ್ಟರಾಗಲಾರರು’ ಎಂಬ ದೌರ್ಬಲ್ಯಕ್ಕೆ ಒಳಗಾಗಿ ದೇಶದ, ಪ್ರಜೆಗಳ ಮಾತ್ರವಲ್ಲ ತನ್ನ ಸಂಸಾರದ ಅಧೋಗತಿಗೆ ಕಾರಣನಾದನು. 

ಒಂದು ವೇಳೆ ಕೈಕೇಯಿ ರಾಮನನ್ನು ಕಾಡಿಗೆ ಅಟ್ಟಬೇಕು ಅನ್ನುವ ಬದಲು ರಾಮನನ್ನು ಕೊಲ್ಲಬೇಕು ಎಂದಿದ್ದರೆ ವಚನ ಪಾಲನೆ ಎನ್ನುವುದು ಎಷ್ಟೊಂದು ಅಪಹಾಸ್ಯಕ್ಕೆ ಒಳಗಾಗುತ್ತಿತ್ತು. ಏನೇ ಇರಲಿ ಈ ಮಹಾಭಾರತ, ರಾಮಾಯಣದಂಥ ಗ್ರಂಥಗಳಲ್ಲಿ ಅನುಭವಗಳ ಪಾಠಗಳು ಅನಂತವಾಗಿವೆಯೆಂದೇ ಹೇಳಬಹುದು.

ಅವರವರ ಭಾವಕ್ಕೆ ಅವರವರ ತಿಳಿವಿನಲಿ ತೆರೆದುಕೊಳ್ಳುವದೇ ಇದರ ಮಹಿಮೆ.

ಕೃಪೆ: ಸಾಮಾಜಿಕ ಜಾಲತಾಣ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಧರ್ಮಸ್ಥಳದ ವಿಚಾರದಲ್ಲಿ ಮಧ್ಯಂತರ ವರದಿಯಿಂದ ಗೊಂದಲಕ್ಕೆ ತೆರೆ: ಬಿ.ವೈ. ವಿಜಯೇಂದ್ರ

ಧರ್ಮಸ್ಥಳದ ವಿಚಾರದಲ್ಲಿ ಮಧ್ಯಂತರ ವರದಿಯಿಂದ ಗೊಂದಲಕ್ಕೆ ತೆರೆ: ಬಿ.ವೈ. ವಿಜಯೇಂದ್ರ

ಶ್ರೀ ಕ್ಷೇತ್ರ ಧರ್ಮಸ್ಥಳದ (Dharmasthala) ವಿಚಾರದಲ್ಲಿ ಮಧ್ಯಂತರ ವರದಿಯನ್ನೂ ಒಳಗೊಂಡಂತೆ ಗೊಂದಲಕ್ಕೆ ಗೃಹ ಸಚಿವರು ತೆರೆ ಎಳೆಯುವ ವಿಶ್ವಾಸದಲ್ಲಿ ನಾವು ಇದ್ದೇವೆ: ಬಿ.ವೈ.ವಿಜಯೇಂದ್ರ (B.Y. Vijayendra)

[ccc_my_favorite_select_button post_id="112771"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ಡಿ.ಕ್ರಾಸ್ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿನ ಅಂಗಡಿಗಳಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು (Shops robbed) ನಡೆಯುತ್ತಿದ್ದು, ವ್ಯಾಪಾರಿಗಳನ್ನು ಚಿಂತೆಗೀಡುಮಾಡಿದೆ.

[ccc_my_favorite_select_button post_id="112687"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!