ನೆಲಮಂಗಲ: ಮನೆ ಮುಂದೆ ಕಟ್ಟಿದ್ದ ನಾಯಿ ಮೇಲೆ ಚಿರತೆ ದಾಳಿ ಮಾಡಿದ್ದು, ಚಿರತೆ ದಾಳಿಗೆ ಪ್ರತಿ ದಾಳಿ ಮಾಡಿದ ನಾಯಿ ಮನೆಯವರನ್ನ ಎಚ್ಚರಿಸಿದೆ, ಮನೆಯವರು ಹೊರಗೆ ಬಂದಾಗ ಚಿರತೆ ಹೆದರಿ ಓಡಿ ಹೋಗಿರುವ ಘಟನೆ ನೆಲಮಂಗಲ ತಾಲ್ಲೂಕಿನ ತೊರೆಕೆಂಪೋಹಳ್ಳಿಯಲ್ಲಿ ಘಟನೆ ನಡೆದಿದೆ.
ಅನಿಲ್ ಎಂಬುವರು ತಮ್ಮ ಮನೆಯ ಮುಂದೆ ನೆಚ್ಚಿನ ನಾಯಿ ಕಟ್ಟಿದ್ದು ಮುಂಜಾನೆ ಸುಮಾರು 5 ಗಂಟೆಗೆ ಚಿರತೆ ಶ್ವಾನದ ಮೇಲೆ ದಾಳಿ ನಡೆಸಿದೆ. ಇದರಿಂದ ಕಂಗೆಡದ ಶ್ವಾನ ಪ್ರತಿದಾಳಿ ನಡೆಸಿದೆ, ಶ್ವಾನದ ಕೂಗಾಟ ಕೇಳಿ ಹೊರಬಂದ ಮನೆಯವರನ್ನ ನೋಡಿದಾಗ ಚಿರತೆ ಅಲ್ಲಿಂದ ಕಾಲ್ಕಿತ್ತಿದೆ. ಚಿರತೆ ಬಂದು ದಾಳಿ ಮಾಡಿ ಹೋಗಿರುವ ಹೆಜ್ಜೆ ಗುರುತುಗಳು ಹೊಲದಲ್ಲಿ ಮೂಡಿದ್ದು ಅದೃಷ್ಟವಶಾತ್ ಶ್ವಾನದ ಪ್ರಾಣ ಉಳಿದಿದೆ.
ಗ್ರಾಮದಲ್ಲಿ ಚಿರತೆ ಕಾಟವಿದ್ದರೂ ನಿಯಂತ್ರಣ ಮಾಡದೇ ಕಣ್ಮುಚ್ಚಿ ಕುಳಿತ ನೆಲಮಂಗಲ ಅರಣ್ಯ ಇಲಾಖೆಯ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು ಹಾಗೂ ಚಿರತೆಯನ್ನು ಹಿಡಿಯಲು ಬೋನ್ ಇಡುವಂತೆ ಆಗ್ರಹಿಸಿದರು. ಚಿರತೆಯ ಕಾಟದಿಂದ ಭಯ ಭೀತರಾಗಿರುವುದು ಸತ್ಯ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..
 
				 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						