ನವದೆಹಲಿ, (ಜುಲೈ.01): ತಮ್ಮನ್ನು ಹಿಂದೂಗಳು ಎಂದು ಕರೆದುಕೊಳ್ಳುವವರು ಹಿಂಸೆ, ದ್ವೇಷ ಮತ್ತು ಸುಳ್ಳುಗಳ ಬಗ್ಗೆ ಮಾತ್ರ ಮಾತನಾಡುತ್ತಾರೆ ಎಂದು ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ಲೋಕಸಭೆಯಲ್ಲಿ ಬಿಜೆಪಿಯನ್ನ ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದರು.
ಇಂದು ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಕುರಿತು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಚರ್ಚೆ ಆರಂಭಿಸಿ ಸಂವಿಧಾನದ ಹೆಸರಿನಲ್ಲಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. “ಹಿಂದೂ ಧರ್ಮವು ಭಯ, ದ್ವೇಷ ಮತ್ತು ಸುಳ್ಳುಗಳನ್ನ ಹರಡುವುದಲ್ಲ” ಎಂದು ಹೇಳಿದರು.
ಈ ವೇಳೆ ರಾಹುಲ್ ಗಾಂಧಿ ಅವರ ಭಾಷಣಕ್ಕೆ ಅಡ್ಡಿಪಡಿಸಿದ ಪ್ರಧಾನಿ ನರೇಂದ್ರ ಮೋದಿ, ಇಡೀ ಹಿಂದೂ ಸಮುದಾಯವನ್ನು ಹಿಂಸಾತ್ಮಕ ಎಂದು ಕರೆಯುವುದು ತುಂಬಾ ಗಂಭೀರ ವಿಷಯವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಈ ಸಂದರ್ಭದಲ್ಲಿ ಪ್ರತಿಪಕ್ಷಗಳು ಮತ್ತು ಆಡಳಿತಾರೂಢ ಎನ್ಡಿಎ ಸಂಸದರ ನಡುವಿನ ವಾಕ್ಸಮರದ ಮಧ್ಯೆ, ಕೇಂದ್ರ ಸಚಿವ ಅಮಿತ್ ಶಾ ಅವರು ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ತಿರುಗೇಟು ನೀಡಿದ ರಾಹುಲ್ ಗಾಂಧಿ, ನಾ ಹೇಳ್ತಾ ಇರೋದು ನಿಮಗೆ ಹಾಗೂ ಬಿಜೆಪಿಗೆ, ಮೋದಿ, ಬಿಜೆಪಿ, ಆರ್ಎಸ್ಎಸ್ ಪೂರ್ತಿ ಹಿಂದೂ ಸಮಾಜವಲ್ಲ ಎಂದರು.
ಈ ವೇಳೆ ವಿರೋಧ ಪಕ್ಷದ ಸದಸ್ಯರು ಮೋದಿ ಅವರು ಸದನವನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಮಾತನಾಡಲು ಮುಂದಾದ ವೇಳೆ ರಾಹುಲ್ ಗಾಂಧಿ ಅವರ ಮೈಕ್ ಮತ್ತೆ ಆಫ್ ಆಗಿತ್ತು, ಈ ವೇಳೆ ಮೈಕ್ ವಿಚಾರವಾಗಿ ಸಭಾಪತಿ ಸ್ಪಷ್ಟನೆ, ವಿರೋಧ ಪಕ್ಷದ ಸದಸ್ಯರ ನಡುವೆ ಆಕ್ಷೇಪ ಕಂಡುಬಂತು.
ನಂತರ ಮಾತನಾಡಿದ ರಾಹುಲ್ ಗಾಂಧಿ, ನಿಜ ಹೇಳಿದಕ್ಕೆ, ಭಗವಾನ್ ಈಶ್ವರ್ ಪೋಟೋ ತೋರಿಸಿದ್ದಕ್ಕೆ ತಡೆಯಲಾಗ್ತಾ ಇಲ್ಲ.. ಎದೆಗೆ ಬಾಣ ತಟ್ಟಿದೆ ಎಂಬುದ ಗಮನಿಸಬೇಕು.
ಭಾರತ ಸರ್ಕಾರದ ಆದೇಶದಿಂದ, ಭಾರತದ ಪ್ರಧಾನಿಯ ಆದೇಶದಿಂದ ನನ್ನ ಮೇಲೆ ಹಲ್ಲೆ ನಡೆಸಲಾಗಿದೆ. ಅದರ ಅತ್ಯಂತ ಆನಂದದಾಯಕ ಭಾಗವೆಂದರೆ ಇಡಿಯ 55 ಗಂಟೆಗಳ ವಿಚಾರಣೆ ಎಂದು ಗಂಭೀರ ಆರೋಪ ಮಾಡಿದರು.
ಭಾರತದ ಕಲ್ಪನೆ, ಸಂವಿಧಾನ ಮತ್ತು ಸಂವಿಧಾನದ ಮೇಲಿನ ದಾಳಿಯನ್ನು ವಿರೋಧಿಸಿದ ಜನರ ಮೇಲೆ ವ್ಯವಸ್ಥಿತ ಮತ್ತು ಪೂರ್ಣ ಪ್ರಮಾಣದ ದಾಳಿ ನಡೆದಿದೆ. ನಮ್ಮಲ್ಲಿ ಅನೇಕರ ಮೇಲೆ ವೈಯಕ್ತಿಕವಾಗಿ ಹಲ್ಲೆ ನಡೆಸಲಾಯಿತು.
ಕೆಲವು ನಾಯಕರು ಇನ್ನೂ ಜೈಲಿನಲ್ಲಿದ್ದಾರೆ. ಅಧಿಕಾರ ಮತ್ತು ಸಂಪತ್ತಿನ ಕೇಂದ್ರೀಕರಣ, ಬಡವರು ಮತ್ತು ದಲಿತರು ಮತ್ತು ಅಲ್ಪಸಂಖ್ಯಾತರ ಮೇಲಿನ ಆಕ್ರಮಣದ ಕಲ್ಪನೆಯನ್ನು ವಿರೋಧಿಸುವ ಯಾರನ್ನಾದರೂ ಹತ್ತಿಕ್ಕಲಾಯಿತು ಎಂದರು.
ನಾವೆಲ್ಲ ಸಾಮಾನ್ಯರು ಮೋದಿ ದೇವರ ಜೊತೆ ಮಾತಾಡ್ತಾರೆ. ನಾವೆಲ್ಲ ಬಯೋಜಲಿಕಲಿ ಜನ್ಮವಿತ್ತವರು, ನಮಗೆ ಜನನವಿದೆ, ಸಾವಿದೆ ಆದರೆ ಮೋದಿ ದೇವರ ಅವತಾರ ಅಂತಾರೆ. ಇವರೇಳ್ತಾರೆ ಮಹಾತ್ಮ ಗಾಂಧಿ ನಿಧನರಾದರು ಮತ್ತು ಗಾಂಧಿಯನ್ನು ಚಲನಚಿತ್ರದಿಂದ ಪುನರುಜ್ಜೀವನಗೊಳಿಸಲಾಯಿತು ಎಂದು. ನೀವು ಅಜ್ಞಾನವನ್ನು ಅರ್ಥ ಮಾಡಿಕೊಳ್ಳಬಲ್ಲಿರಾ..? ನಾನು ಗಮನಿಸಿದ ಮತ್ತೊಂದು ವಿಷಯವೆಂದರೆ ಇದು ಕೇವಲ ಒಂದು ಧರ್ಮವಲ್ಲ, ಅದು ಧೈರ್ಯದ ಬಗ್ಗೆ ಮಾತನಾಡುತ್ತವೆ ಎಂದು ರಾಹುಲ್ ಗಾಂಧಿ ಹೇಳಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….