ಹಾವೇರಿ: ರಾಣೆಬೆನ್ನೂರು ತಾಲೂಕಿನ ಇತಿಹಾಸ ಪ್ರಸಿದ್ಧ ದೇವರಗುಡ್ಡ ಮಾಲತೇಶ್ ಸ್ವಾಮಿ ಕಾರ್ಣಿಕ ಶುಕ್ರವಾರ ಸಂಜೆ ನಡೆಯಿತು.
21 ಅಡಿ ಬಿಲ್ಲನ್ನೇರಿದ ಗೊರವಯ್ಯ ನಾಗಪ್ಪಜ್ಜಾ ಉರ್ಮಿ ಸಾವಿರಾರು ಭಕ್ತರೆದುರು ಆಕಾಶದತ್ತ ಚಿಗುರಿತಲೇ, ಬೇರೆಲ್ಲ ಮುದ್ದಾಯಿತಲೇ ಪರಾಕ್ ಗೊರವಯ್ಯ ಕಾರ್ಣಿಕ ನುಡಿದ ನಂತರ ಬಿಲ್ಲಿನಿಂದ ಕೆಳಗೆ ಧುಮುಕಿದರು.
ಈ ಕಾರ್ಣಿಕದ ಕುರಿತು ಮಾಲತೇಶ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ್ ಭಟ್ಟ ಗುರೂಜಿ ಮಾಹಿತಿ ನೀಡಿ, ಬೇರು ಮುದ್ದಾಯಿತಲೇ ಅಂದರೆ ರೈತರಿಗೆ ಒಳ್ಳೆಯ ಮಳೆ, ಬೆಳೆ ಬರುತ್ತೆ. ಅದನ್ನು ತೆಗೆದುಕೊಳ್ಳುವ ಫಲಾನುಭವಿಗಳಿಗೂ ಒಳ್ಳೆಯದಾಗುತ್ತೆ ಎಂದರ್ಥ ಎಂದು ವಿಶ್ಲೇಷಿಸಬಹುದು ಎಂದರು.
ಇನ್ನೂ ರಾಜಕೀಯ ಬೆಳವಣಿಗೆಗಳ ಕುರಿತು ಹೇಳುವುದಾದರೆ, ಆಕಾಶದತ್ತ ಚಿಗುರಿತಲೇ ಅಂದರೆ ಈಗಿರುವ ನಾಯಕತ್ವ ಆಕಾಶದತ್ತ ಚಿಗುರಿಬಿಟ್ಟಿದೆ. ಬೇರು ಮುದ್ದಾಯಿತಲೇ ಅಂದರೆ, ಅವರಿಗೆಲ್ಲ ಬೆನ್ನೆಲುಬಾಗಿ ನಿಂತಿರುವುದನ್ನು ನೀವೆಲ್ಲ ನೋಡಿರಬಹುದು.
ಕಾನೂನು ವ್ಯವಸ್ಥೆಯಲ್ಲಿ ಏನು ಬದಲಾವಣೆಯಾದರೂ ಕೂಡ ಈಗಿರುವ ನಾಯಕತ್ವ ಹೇಳಿದಂತೆ ಅವರು ಒಪ್ಪಿಕೊಳ್ತಾರೆ ಎಂದು ವಿವರಿಸಿದರು.
ಬೇರುಗಳೆಲ್ಲಾ ಮುದ್ದಾಯಿತಲೇ ಅಂದರೆ, ಆಕಾಶದತ್ತ ಚಿಗುರಿರೋ ಗಿಡ ಹೇಳಿದಂಗೆ ಬೇರುಗಳು ಒಪ್ಪಿಕೊಳ್ತವೆ ಅಂತ ಅರ್ಥ ಎಂದು ಸಂತೋಷ ಭಟ್ಟ ಗುರೂಜಿ ಹೇಳಿದ್ದಾರೆ.