ಹರಿತಲೇಖನಿ ದಿನಕ್ಕೊಂದು ಕಥೆ: ಕರುಣೆಯ ಗೆಲುವು

ಸಣ್ಣ ದೇಶಕ್ಕೆ ಒಬ್ಬ ಒಳ್ಳೆಯ ದೊರೆಯಿದ್ದ. ಅವನೆಂದಿಗೂ ಸಿಂಹಾಸನದ ಮೇಲೆ ಕುಳಿತು ರಾಜ್ಯಭಾರ ಮಾಡಲಿಲ್ಲ. ಬದಲಾಗಿ ನೊಂದವರ ಬಳಿಗೆ ಹೋಗಿ ಕಣ್ಣೀರೊರೆಸಿದ.

ಸೋತವರಿಗೆ ನೆರವು ನೀಡಿದ. ಅಸಹಾಯಕರ ಸೇವೆ ಮಾಡಿದ. ಎಲ್ಲರೂ ತನ್ನ ಸಮಾನರೆಂದು ತಿಳಿದ. ಪ್ರಜೆಗಳು ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಅವನ ಮೇಲೆ ಪ್ರೀತಿಯಿಟ್ಟರು.

ಒಂದು ಸಲ ಚಕ್ರವರ್ತಿ ಆ ದೇಶದ ಬಳಿಗೆ ಕಾರ್ಯ ನಿಮಿತ್ತ ಬಂದ. ತನ್ನನ್ನು ಭೇಟಿಯಾಗುವಂತೆ ದೊರೆಗೆ ಭಟರ ಮೂಲಕ ಕರೆ ಕಳುಹಿಸಿದ.

ಆಗ ದೊರೆ ಒಬ್ಬ ರೋಗಿಷ್ಠನ ಮನೆಗೆ ಬಂದು ಅವನ ಶುಶ್ರೂಷೆ ಮಾಡುವುದರಲ್ಲಿ ನಿರತನಾಗಿದ್ದ. ಭಟರು ‘ಕೂಡಲೇ ಬಂದು ಭೇಟಿಯಾಗಬೇಕೆಂದು ಚಕ್ರವರ್ತಿಗಳು ಕರೆ ಕಳುಹಿಸಿದ್ದಾರೆ ಬನ್ನಿ’ ಎಂದರು. ದೊರೆ ವಿನೀತನಾಗಿ ‘ಕಷ್ಟದಲ್ಲಿರುವ ಪ್ರಜೆಯೊಬ್ಬನಿಗೆ ನೆರವಾಗುವ ಕೆಲಸದಲ್ಲಿದ್ದೇನೆ. ಇದು ಮುಗಿದ ಕೂಡಲೇ ಬರುವುದಾಗಿ ಹೇಳಿ’ ಎಂದು ತಿಳಿಸಿದ.

ಈ ಮಾತಿನಿಂದ ಚಕ್ರವರ್ತಿಗೆ ಅಸಾಧ್ಯ ಕೋಪ ಬಂತು. ‘ಏನಿದು? ಒಬ್ಬ ಸಣ್ಣ ರಾಜನಿಗೆ ಚಕ್ರವರ್ತಿಯ ಆಜ್ಞೆಯನ್ನು ಧಿಕ್ಕರಿಸುವಂಥ ಪೊಗರೇ? ತಕ್ಷ ಣ ಈ ರಾಜ್ಯದ ಮೇಲೆ ಯುದ್ಧ ಸಾರಿ. ಅವನನ್ನು ಸದೆ ಬಡಿಯಿರಿ’ ಎಂದು ಮಂತ್ರಿಗಳಿಗೆ ಆಜ್ಞಾಪಿಸಿದ.

ದೊರೆಗೆ ಯುದ್ಧದ ವರ್ತಮಾನ ತಲುಪಿತು. ಮಂತ್ರಿಗಳು ಯುದ್ಧದ ಸಿದ್ಧತೆಗೆ ಮುಂದಾದರು. ಆದರೆ ದೊರೆ ಒಪ್ಪಲಿಲ್ಲ. ‘ಯುದ್ಧ ಮಾಡಿದರೆ ನೂರಾರು ಮಂದಿಯ ಸಾವು ನಿಶ್ಚಿತ. ಅದರ ಬದಲು ರಾಜ್ಯವನ್ನು ಚಕ್ರವರ್ತಿಗೆ ಒಪ್ಪಿಸಿದರೆ ಎಲ್ಲರೂ ಬದುಕುತ್ತಾರೆ’ ಎಂದು ನಿರ್ಧರಿಸಿ ಚಕ್ರವರ್ತಿಯ ಭೇಟಿಗೆ ಸಿದ್ಧನಾದ.

ದೊರೆ ಒಬ್ಬ ಸೇವಕನ ಜೊತೆಗೆ ಕುದುರೆಯ ಮೇಲೆ ಕುಳಿತುಕೊಂಡು ಚಕ್ರವರ್ತಿಯ ಬಳಿಗೆ ಹೊರಟ. ಕಡು ಬಿಸಿಲಿಗೆ ಕಾಲು ಸುಡುತ್ತಿತ್ತು. ತಾನು ಕುದುರೆಯ ಮೇಲೆ ಸಾಗುವಾಗ ಸೇವಕ ಕುದುರೆಯ ಹಗ್ಗ ಹಿಡಿದುಕೊಂಡು ನಡೆದು ಬರುತ್ತಿದ್ದ. ಅವನು ನಡೆಯಲಾಗದೆ ಕಷ್ಟಪಡುತ್ತಿದ್ದ. ಅವನಿಗೆ ಆಯಾಸವಾಗುತ್ತಿದೆಯೆಂದು ದೊರೆಗೆ ಅರ್ಥವಾಯಿತು.

ಕುದುರೆಯ ಮೇಲಿಂದ ಕೆಳಗಿಳಿದ. ಸೇವಕನನ್ನು ಕರೆದು ‘ನೀನು ತುಂಬ ಬಳಲಿದ್ದಿ. ನೀನೀಗ ಕುದುರೆ ಮೇಲೆ ಕುಳಿತುಕೋ. ನಾನು ಸ್ವಲ್ಪ ದೂರ ಹಗ್ಗ ಹಿಡಿದುಕೊಂಡು ನಡೆದು ಬರುತ್ತೇನೆ. ನಿನ್ನ ಬಳಲಿಕೆ ತೀರಿದ ಮೇಲೆ ನಾನು ಕುಳಿತುಕೊಳ್ಳುತ್ತೇನೆ. ನಾವಿಬ್ಬರೂ ಹೀಗೆ ಸರದಿ ಬದಲಾಯಿಸಿಕೊಂಡು ಮುಂದೆ ಸಾಗೋಣ’ ಎಂದ.

ಸೇವಕ ಗಾಬರಿಯಿಂದ ‘ಎಲ್ಲಾದರೂ ಉಂಟೇ? ನೀವು ನಡೆದು ನಾನು ಕುದುರೆಯ ಮೇಲೇರುವುದೆ!’ ಎಂದು ದೂರ ನಿಂತ. ಆದರೆ ದೊರೆ ಒತ್ತಾಯದಿಂದ ಅವನನ್ನೂ ಕುದುರೆಯಲ್ಲಿ ಕೂಡಿಸಿ ಮುಂದೆ ಸಾಗಿದ.

ಒಮ್ಮೆ ಸೇವಕ, ಒಮ್ಮೆ ತಾನು ಕುದುರೆಯ ಮೇಲೇರುತ್ತ ಕಡೆಗೂ ಚಕ್ರವರ್ತಿಯ ಶಿಬಿರ ತಲಪಿದ. ಆಗ ಸೇವಕ ಕುದುರೆಯ ಮೇಲಿದ್ದ. ಅವನನ್ನೇ ದೊರೆಯೆಂದು ಭಾವಿಸಿ ಮಾತನಾಡಿಸಲು ಬಂದ ಚಕ್ರವರ್ತಿಯ ಬಳಿ ಸೇವಕ ಕುದುರೆಯಿಂದ ಕೆಳಗಿಳಿದು ಕೈ ಜೋಡಿಸಿ ‘ದೊರೆಗಳು ಅವರು! ನಾನು ಸೇವಕ’ ಎಂದು ವಿನಯದಿಂದ ಹೇಳಿದ.

ಚಕ್ರವರ್ತಿ ನಡೆದ ವಿಷಯ ತಿಳಿದುಕೊಂಡ. ಮರುಕ್ಷಣವೇ ಪಶ್ಚಾತ್ತಾಪದಿಂದ ತಲೆ ತಗ್ಗಿಸಿದ. ‘ಛೇ! ಸೇವಕನನ್ನೂ ತನ್ನ ಸಮಾನನೆಂದು ಭಾವಿಸಿ ಕುದುರೆಯ ಮೇಲೆ ಕರೆ ತರುವ ದೊರೆ ಈ ಭರತಖಂಡದಲ್ಲೇ ಇರಲಿಕ್ಕಿಲ್ಲ. ಇಂತಹವನೊಂದಿಗೆ ಯುದ್ಧವೆಸಗಿದರೆ ಪ್ರಜೆಗಳು ದಂಗೆಯೆದ್ದು ನನ್ನನ್ನೇ ಕೊಂದಾರು. ಋುಷಿ ಸದೃಶನಾದ ದೊರೆಯ ರಾಜ್ಯವನ್ನು ಸ್ವತಂತ್ರಗೊಳಿಸುತ್ತೇನೆ’ ಎಂದ ಹೇಳಿದ.

ಕೃಪೆ: ಸಾಮಾಜಿಕ ಜಾಲತಾಣ.

ರಾಜಕೀಯ

ದೊಡ್ಡಬಳ್ಳಾಪುರ TAPMCS ಚುನಾವಣೆ: ತಾಲ್ಲೂಕಿನಾಧ್ಯಂತ ಬಿರುಸಿನ ಪ್ರಚಾರ

ದೊಡ್ಡಬಳ್ಳಾಪುರ TAPMCS ಚುನಾವಣೆ: ತಾಲ್ಲೂಕಿನಾಧ್ಯಂತ ಬಿರುಸಿನ ಪ್ರಚಾರ

ನವೆಂಬರ್ 2 ರಂದು ನಡೆಯಲಿರುವ ದೊಡ್ಡಬಳ್ಳಾಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (TAPMCS) ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ.

[ccc_my_favorite_select_button post_id="115546"]
ಕರ್ನಾಟಕ ಪೊಲೀಸರಿಗೆ ನೂತನ ಕ್ಯಾಪ್..!

ಕರ್ನಾಟಕ ಪೊಲೀಸರಿಗೆ ನೂತನ ಕ್ಯಾಪ್..!

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಆಯೋಜಿಸಿದ್ದ ಪೊಲೀಸ್ ಸಿಬ್ಬಂದಿಯ ನೂತನ ಪೀಕ್ ಕ್ಯಾಚ್ ವಿತರಣೆ: Cmsiddaramaiah, D.K.Shivakumar

[ccc_my_favorite_select_button post_id="115427"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಗುಡ್ಮಾರ್ನಿಂಗ್ ನ್ಯೂಸ್: ಆಸ್ಟ್ರೇಲಿಯಾಗೆ ಮುಖಭಂಗ.. ಫೈನಲ್‌ಗೆ ಇಂಡಿಯಾ

ಗುಡ್ಮಾರ್ನಿಂಗ್ ನ್ಯೂಸ್: ಆಸ್ಟ್ರೇಲಿಯಾಗೆ ಮುಖಭಂಗ.. ಫೈನಲ್‌ಗೆ ಇಂಡಿಯಾ

ಭಾರತ (India) ತಂಡವು ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ (Women's ODI World Cup tournament) ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ (Australia) ವಿರುದ್ಧ 5 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ.

[ccc_my_favorite_select_button post_id="115495"]
ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ಕಳೆದ ತಿಂಗಳ ಕೊನೆಯ ದಿನ ನಡೆದಿದ್ದ ತಾಲೂಕಿನ ಪ್ರಸಿದ್ಧ ಗುಟ್ಟೆ ಶ್ರೀ ಲಕ್ಷೀನರಸಿಂಹ ಸ್ವಾಮಿ (Gutte Lakshmi Narasimhaswamy Temple) ದೇವಾಲಯದಲ್ಲಿ ಕಳ್ಳತನ (Theft) ಪ್ರಕರಣ ಮತ್ತೆ ಮುಂದುವರಿದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

[ccc_my_favorite_select_button post_id="115220"]
ದೊಡ್ಡಬಳ್ಳಾಪುರ: ಅಪಘಾತ ನ್ಯೂಸ್ ಅಪ್ಡೇಟ್.. ಬಾಲಕ ದುರ್ಮರಣ

ದೊಡ್ಡಬಳ್ಳಾಪುರ: ಅಪಘಾತ ನ್ಯೂಸ್ ಅಪ್ಡೇಟ್.. ಬಾಲಕ ದುರ್ಮರಣ

ದೊಡ್ಡಬಳ್ಳಾಪುರ ನಗರದ ಎಪಿಎಂಸಿ ಸಮೀಪದ ಹಾಲು ಶಿಥಲೀಕರಣ ಘಟಕದ ಬಳಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿ (Accident), ಸುಮಾರು 11 ವರ್ಷದ ಬಾಲಕ ಸಾವನಪ್ಪಿರುವ ದಾರುಣ ಘಟನೆ ನಡೆದಿದೆ.

[ccc_my_favorite_select_button post_id="115509"]

ಆರೋಗ್ಯ

ಸಿನಿಮಾ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಕನ್ನಡ ಚಿತ್ರರಂಗ ಸಮೃದ್ಧವಾಗಿ ಬೆಳೆಯಬೇಕಾದರೆ ನಾಯಕ ನಟರು ಹೆಚ್ಚು ಸಿನಿಮಾಗಳನ್ನು ಮಾಡಬೇಕು ಹಾಗೂ ಹೆಚ್ಚು ನಾಯಕ ನಟರು ಚಿತ್ರರಂಗಕ್ಕೆ ಬರಬೇಕು ಎಂದು ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.

[ccc_my_favorite_select_button post_id="115245"]
error: Content is protected !!