ಹರಿತಲೇಖನಿ ದಿನಕ್ಕೊಂದು ಕಥೆ: ಬುದ್ಧಿವಂತ ಇಲಿ

ಅದೊಂದು ದೊಡ್ಡ ಕಾಡಾಗಿರದಿದ್ದರೂ ದೊಡ್ಡದಾದ ಆಲದ ಮರ, ಸುತ್ತಲೂ ಬೆಳೆದು ನಿಂತ ಗಿಡ- ಮರಗಳಿಂದ ಕೂಡಿದ ಚಿಕ್ಕದಾದ ಕಾಡಾಗಿತ್ತು. ಆ ಕಾಡಿನಲ್ಲಿ ಚಿಗರೆ. ಮೊಲ, ಬೆಕ್ಕು, ಇಲಿ, ಮುಂಗಲಿ ಮುಂತಾದ ಪ್ರಾಣಿಗಳು, ಗಿಳಿ, ಗರುಡ, ಗೂಗೆ, ನವಿಲು, ಪಾರಿವಾಳ ಮುಂತಾದ ಪಕ್ಷಿಗಳು ವಾಸವಾಗಿದ್ದವು.

ವಿಶಾಲವಾಗಿ ರೆಂಬೆ ಕೊಂಬೆಗಳನ್ನು ಹರಡಿಕೊಂಡು ನಿಂತ ಮರದಲ್ಲಿ ಎಲ್ಲ ಪಕ್ಷಿಗಳೂ ಗೂಡು ಕಟ್ಟಿಕೊಂಡು ತಮ್ಮ ಮರಿಗಳೊಂದಿಗೆ ಸಂತೋಷವಾಗಿದ್ದವು.

ಈ ಆಲದ ಮರದ ಸುತ್ತಲೂ ಅನೇಕ ಕಲ್ಲು ಬಂಡೆಗಳಿದ್ದವು. ಬಂಡೆಗಳ ಮಧ್ಯೆ ಅನೇಕ ಚಿಕ್ಕ ಚಿಕ್ಕ ಪ್ರಾಣಿಗಳು ಬಿಲ ಮಾಡಿಕೊಂಡು ವಾಸವಾಗಿದ್ದವು. ಅವುಗಳಲ್ಲಿ ಇಲಿಯೂ ಒಂದಾಗಿತ್ತು. ಅದು ತನ್ನ ಮರಿಯೊಂದಿಗೆ ಸುತ್ತಮುತ್ತ ದೊರೆಯಬಹುದಾದ ಹುಳು-ಹುಪ್ಪಡಿ, ಹಣ್ಣು, ಬೀಜಗಳನ್ನು ಹೆಕ್ಕಿ ತಿಂದು ಸುಖವಾಗಿತ್ತು.

ಇದನ್ನು ಕಂಡ ಬೆಕ್ಕೊಂದು ಹೇಗಾದರೂ ಮಾಡಿ ಈ ಇಲಿಯನ್ನು ಹಿಡಿದು ತಿನ್ನಬೇಕು ಎಂದು ಯೋಚಿಸುತ್ತ ದಿನಾ ಒಂದಲ್ಲ ಒಂದು ರೀತಿ ಹೊಂಚು ಹಾಕುತ್ತಲೇ ಇತ್ತು.

ಇಲಿ ಬೆಕ್ಕಿನ ಹೊಂಚನ್ನು ಅರಿತು ತನ್ನ ಚಾಣಾಕ್ಷತನದಿಂದ ಬಿಲದೊಳಗೆ ಸೇರಿ ಬಿಡುತ್ತಿತ್ತು. ಹೀಗೆ ಸುಮಾರು ದಿನಗಳು ಕಳೆದವು.

ಒಂದು ದಿನ ಬೇಟೆಗಾರ ಆಲದ ಮರದ ಹತ್ತಿರ ತನ್ನ ಬಲೆಯನ್ನು ಬೀಸಿ ಹೋದ. ಅದನ್ನರಿಯದೇ ಚಿಗರೆಯೊಂದು ಅದರಲ್ಲಿ ಸಿಕ್ಕು ಬೇಟೆಗಾರನಿಗೆ ಬಲಿಯಾಯಿತು. ಇಲಿ ತನ್ನ ಬಳಗದವರಿಗೆ ‘ಇಲ್ಲಿ ಅಪಾಯ ತಪ್ಪಿದ್ದಲ್ಲ. ನಾವೆಲ್ಲರೂ ಎಚ್ಚರದಿಂದಿರಬೇಕು’ ಎಂದು ಎಚ್ಚರಿಸಿತು. ಹೀಗೆ ಕೆಲವು ದಿನಗಳು ಉರುಳಿದವು.

ಕೆಲವು ದಿನಗಳ ನಂತರ ಬೇಟೆಗಾರ ಅದೇ ಆಲದ ಮರದ ಕೆಳಗೆ ಮತ್ತೆ ಬಲೆ ಬೀಸಿ ಹೊರಟು ಹೋದ. ಇದನ್ನು ತನ್ನ ಬಿಲದಿಂದಲೇ ನೋಡಿದ ಇಲಿ ಬಿಲದೊಳಗೆ ಅಡಗಿಕೊಂಡಿತು.

ಬೆಳಕು ಹರಿಯುತ್ತಲೇ ಬಿಲದಿಂದಲೇ ಇಣುಕಿ ನೋಡಿತು. ಈ ಸಲ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದು ಬೇರೆ ಯಾರೂ ಅಲ್ಲ, ಅದು ಬೆಕ್ಕಾಗಿತ್ತು.

ಇಲಿಗೆ ಎಲ್ಲಿಲ್ಲದ ಆನಂದ. ತನ್ನನ್ನು ಹಿಡಿದು ತಿನ್ನುವ ಆಸೆಯಲ್ಲಿ ಬಂದು ಬಲೆಗೆ ಬಿದ್ದಿದೆ ಎಂದು ಅರಿತ ಇಲಿ ತನ್ನ ಬಳಗವನ್ನೆಲ್ಲ ಕರೆದು ಸಂತೋಷವನ್ನು ಹಂಚಿಕೊಂಡಿತು. ಹೀಗೆ ಸಂತೋಷದಲ್ಲಿ ಕಲ್ಲು ಬಂಡೆಗಳ ಮೇಲೆ ಅತ್ತ ಇತ್ತ ಓಡಾಡುತ್ತಿರುವಾಗ ಅಲ್ಲೊಂದು ಮುಂಗಲಿ ಕಾಣಿಸಿಕೊಂಡಿತು.

ಇದೇನಪ್ಪ ಒಂದರ ಕಾಟ ತಪ್ಪಿತು ಎನ್ನುವಷ್ಟರಲ್ಲಿ ಇನ್ನೊಂದು ಬಂತಲ್ಲ, ಏನು ಮಾಡುವುದು? ಎಂದು ಯೋಚಿಸುತ್ತಿದ್ದಂತೆ ಅದಕ್ಕೊಂದು ವಿಚಾರ ಹೊಳೆಯಿತು. ಇನ್ನು ಮುಂದೆ ಆಲದ ಮರದ ಮೇಲೆ ವಾಸ ಮಾಡಿದರಾಯಿತು ಎಂದು ಮರದ ಕಡೆ ನೋಡಿತು. ಅಲ್ಲಿ ಕುಳಿತ ಒಂದು ಗೂಗೆ ಇಲಿಯನ್ನೆ ಗುರಿಯಾಗಿಟ್ಟು ನೋಡುತ್ತಿತ್ತು. ಇದನ್ನು ಕಂಡ ಇಲಿ ಗಾಬರಿಯಾಯಿತು. ಕೆಳಗೆ ಮುಂಗಲಿ, ಮೇಲೆ ಗೂಗೆ, ಏನು ಮಾಡಲಿ ದೇವರೆ? ಎಂದು ಚಡಪಡಿಸತೊಡಗಿತು.

ಇಲಿಗೆ ಒಂದು ವಿಚಾರ ಹೊಳೆಯಿತು. ಅದು ನೇರವಾಗಿ ಬಲೆಯಲ್ಲಿ ಸಿಕ್ಕುಬಿದ್ದ ಬೆಕ್ಕಿನ ಸನಿಹಕ್ಕೆ ಹೋಗಿ ವಿನಯದಿಂದ ಕೇಳಿಕೊಂಡಿತು. ‘ನೋಡು ಬೆಕ್ಕಪ್ಪ, ನಾನು ನಿನ್ನನ್ನು ಈ ಬಲೆಯಿಂದ ಬಿಡಿಸಬಲ್ಲೆ. ಆದರೆ ಒಂದು ಷರತ್ತಿನ ಮೇಲೆ’ ಎನ್ನುತ್ತಿದ್ದಂತೆ ಬೆಕ್ಕು ‘ಏನದು ಷರತ್ತು?’ ಎಂದಿತು.

“ನಾನು ನಿನ್ನನ್ನು ಈ ಬಲೆಯಿಂದ ಬಿಡಿಸಿ ಬೇಟೆಗಾರನಿಂದ ಪಾರು ಮಾಡುತ್ತೇನೆ. ಇದರ ಬದಲಾಗಿ ನೀನು ನನ್ನನ್ನು ಈ ಮುಂಗಲಿ ಹಾಗೂ ಮರದ ಮೇಲಿರುವ ಗೂಬೆಯಿಂದ ರಕ್ಷಿಸುವುದಾಗಿ ಮಾತುಕೊಡು’ ಎಂದಿತು.

ಬಲೆಯಲ್ಲಿ ಸಿಕ್ಕು ಒದ್ದಾಡುತ್ತಿದ್ದ ಬೆಕ್ಕಿಗೆ ಪ್ರಾಣ ಉಳಿಸಿಕೊಳ್ಳಲು ಇದು ಒಳ್ಳೆಯ ವಿಚಾರ ಎಂದೆನೆಸಿತು. ‘ಇಲಿರಾಯ, ನಾನು ನಿನ್ನ ಷರತ್ತಿಗೆ ಬದ್ಧನಾಗಿದ್ದೇನೆ’ ಎಂದು ಮಾತು ಕೊಟ್ಟಿತು. ‘ನೀನು ಹೇಳಿದಂತೆ ನಡೆದುಕೊಳ್ಳುತ್ತೇನೆ. ನನ್ನನ್ನು ಪ್ರಾಣಾಪಾಯದಿಂದ ಪಾರು ಮಾಡು’ ಎಂದು ಅಂಗಲಾಚಿತು.

ಇಲಿ ಅಂಜುತ್ತಲೇ ತನ್ನ ಹಲ್ಲುಗಳಿಂದ ಬಲೆಯನ್ನು ಕಡಿದು ಬೆಕ್ಕನ್ನು ಬಿಡಗಡೆಗೊಳಿಸಿತು. ಬೆಕ್ಕು ಇಲಿಯನ್ನು ಮುಂಗಲಿ ಹಾಗೂ ಗೂಗೆಯಿಂದ ರಕ್ಷಿಸಿತು. ಬೆಕ್ಕು ಮತ್ತು ಇಲಿ ಪರಸ್ಪರ ಆನಂದದಿಂದ ತಮ್ಮ ತಮ್ಮ ಮನೆಗಳಲ್ಲಿ ತಮ್ಮ ಬಳಗದ ಜೊತೆ ಸುಖವಾಗಿ ಬಾಳತೊಡಗಿದವು.

ಕೃಪೆ: ಸುದರ್ಶಿನಿ ಅನ್ನಪೂರ್ಣಾ ಕನೋಜ, ಬೈಲಹೊಂಗಲ (ಸಾಮಾಜಿಕ ಜಾಲತಾಣ)

ರಾಜಕೀಯ

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ

"ನಾವು ಅವರ (ಧರ್ಮಸ್ಥಳ) ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ ಪರ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದಷ್ಟೇ ನಾವು ಹೇಳುತ್ತಿದ್ದೇವೆ": ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="113000"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ನೆರೆ ರಾಜ್ಯದಿಂದ ಅಕ್ರಮವಾಗಿ ಹೆಂಡ (Toddy) ಸಾಗಿಸುತ್ತಿದ್ದ ಮಹಿಳೆಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="112911"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!