ಹರಿತಲೇಖನಿ ದಿನಕ್ಕೊಂದು ಕಥೆ: ಬುದ್ಧಿವಂತ ಇಲಿ

ಅದೊಂದು ದೊಡ್ಡ ಕಾಡಾಗಿರದಿದ್ದರೂ ದೊಡ್ಡದಾದ ಆಲದ ಮರ, ಸುತ್ತಲೂ ಬೆಳೆದು ನಿಂತ ಗಿಡ- ಮರಗಳಿಂದ ಕೂಡಿದ ಚಿಕ್ಕದಾದ ಕಾಡಾಗಿತ್ತು. ಆ ಕಾಡಿನಲ್ಲಿ ಚಿಗರೆ. ಮೊಲ, ಬೆಕ್ಕು, ಇಲಿ, ಮುಂಗಲಿ ಮುಂತಾದ ಪ್ರಾಣಿಗಳು, ಗಿಳಿ, ಗರುಡ, ಗೂಗೆ, ನವಿಲು, ಪಾರಿವಾಳ ಮುಂತಾದ ಪಕ್ಷಿಗಳು ವಾಸವಾಗಿದ್ದವು.

ವಿಶಾಲವಾಗಿ ರೆಂಬೆ ಕೊಂಬೆಗಳನ್ನು ಹರಡಿಕೊಂಡು ನಿಂತ ಮರದಲ್ಲಿ ಎಲ್ಲ ಪಕ್ಷಿಗಳೂ ಗೂಡು ಕಟ್ಟಿಕೊಂಡು ತಮ್ಮ ಮರಿಗಳೊಂದಿಗೆ ಸಂತೋಷವಾಗಿದ್ದವು.

ಈ ಆಲದ ಮರದ ಸುತ್ತಲೂ ಅನೇಕ ಕಲ್ಲು ಬಂಡೆಗಳಿದ್ದವು. ಬಂಡೆಗಳ ಮಧ್ಯೆ ಅನೇಕ ಚಿಕ್ಕ ಚಿಕ್ಕ ಪ್ರಾಣಿಗಳು ಬಿಲ ಮಾಡಿಕೊಂಡು ವಾಸವಾಗಿದ್ದವು. ಅವುಗಳಲ್ಲಿ ಇಲಿಯೂ ಒಂದಾಗಿತ್ತು. ಅದು ತನ್ನ ಮರಿಯೊಂದಿಗೆ ಸುತ್ತಮುತ್ತ ದೊರೆಯಬಹುದಾದ ಹುಳು-ಹುಪ್ಪಡಿ, ಹಣ್ಣು, ಬೀಜಗಳನ್ನು ಹೆಕ್ಕಿ ತಿಂದು ಸುಖವಾಗಿತ್ತು.

ಇದನ್ನು ಕಂಡ ಬೆಕ್ಕೊಂದು ಹೇಗಾದರೂ ಮಾಡಿ ಈ ಇಲಿಯನ್ನು ಹಿಡಿದು ತಿನ್ನಬೇಕು ಎಂದು ಯೋಚಿಸುತ್ತ ದಿನಾ ಒಂದಲ್ಲ ಒಂದು ರೀತಿ ಹೊಂಚು ಹಾಕುತ್ತಲೇ ಇತ್ತು.

ಇಲಿ ಬೆಕ್ಕಿನ ಹೊಂಚನ್ನು ಅರಿತು ತನ್ನ ಚಾಣಾಕ್ಷತನದಿಂದ ಬಿಲದೊಳಗೆ ಸೇರಿ ಬಿಡುತ್ತಿತ್ತು. ಹೀಗೆ ಸುಮಾರು ದಿನಗಳು ಕಳೆದವು.

ಒಂದು ದಿನ ಬೇಟೆಗಾರ ಆಲದ ಮರದ ಹತ್ತಿರ ತನ್ನ ಬಲೆಯನ್ನು ಬೀಸಿ ಹೋದ. ಅದನ್ನರಿಯದೇ ಚಿಗರೆಯೊಂದು ಅದರಲ್ಲಿ ಸಿಕ್ಕು ಬೇಟೆಗಾರನಿಗೆ ಬಲಿಯಾಯಿತು. ಇಲಿ ತನ್ನ ಬಳಗದವರಿಗೆ ‘ಇಲ್ಲಿ ಅಪಾಯ ತಪ್ಪಿದ್ದಲ್ಲ. ನಾವೆಲ್ಲರೂ ಎಚ್ಚರದಿಂದಿರಬೇಕು’ ಎಂದು ಎಚ್ಚರಿಸಿತು. ಹೀಗೆ ಕೆಲವು ದಿನಗಳು ಉರುಳಿದವು.

ಕೆಲವು ದಿನಗಳ ನಂತರ ಬೇಟೆಗಾರ ಅದೇ ಆಲದ ಮರದ ಕೆಳಗೆ ಮತ್ತೆ ಬಲೆ ಬೀಸಿ ಹೊರಟು ಹೋದ. ಇದನ್ನು ತನ್ನ ಬಿಲದಿಂದಲೇ ನೋಡಿದ ಇಲಿ ಬಿಲದೊಳಗೆ ಅಡಗಿಕೊಂಡಿತು.

ಬೆಳಕು ಹರಿಯುತ್ತಲೇ ಬಿಲದಿಂದಲೇ ಇಣುಕಿ ನೋಡಿತು. ಈ ಸಲ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದು ಬೇರೆ ಯಾರೂ ಅಲ್ಲ, ಅದು ಬೆಕ್ಕಾಗಿತ್ತು.

ಇಲಿಗೆ ಎಲ್ಲಿಲ್ಲದ ಆನಂದ. ತನ್ನನ್ನು ಹಿಡಿದು ತಿನ್ನುವ ಆಸೆಯಲ್ಲಿ ಬಂದು ಬಲೆಗೆ ಬಿದ್ದಿದೆ ಎಂದು ಅರಿತ ಇಲಿ ತನ್ನ ಬಳಗವನ್ನೆಲ್ಲ ಕರೆದು ಸಂತೋಷವನ್ನು ಹಂಚಿಕೊಂಡಿತು. ಹೀಗೆ ಸಂತೋಷದಲ್ಲಿ ಕಲ್ಲು ಬಂಡೆಗಳ ಮೇಲೆ ಅತ್ತ ಇತ್ತ ಓಡಾಡುತ್ತಿರುವಾಗ ಅಲ್ಲೊಂದು ಮುಂಗಲಿ ಕಾಣಿಸಿಕೊಂಡಿತು.

ಇದೇನಪ್ಪ ಒಂದರ ಕಾಟ ತಪ್ಪಿತು ಎನ್ನುವಷ್ಟರಲ್ಲಿ ಇನ್ನೊಂದು ಬಂತಲ್ಲ, ಏನು ಮಾಡುವುದು? ಎಂದು ಯೋಚಿಸುತ್ತಿದ್ದಂತೆ ಅದಕ್ಕೊಂದು ವಿಚಾರ ಹೊಳೆಯಿತು. ಇನ್ನು ಮುಂದೆ ಆಲದ ಮರದ ಮೇಲೆ ವಾಸ ಮಾಡಿದರಾಯಿತು ಎಂದು ಮರದ ಕಡೆ ನೋಡಿತು. ಅಲ್ಲಿ ಕುಳಿತ ಒಂದು ಗೂಗೆ ಇಲಿಯನ್ನೆ ಗುರಿಯಾಗಿಟ್ಟು ನೋಡುತ್ತಿತ್ತು. ಇದನ್ನು ಕಂಡ ಇಲಿ ಗಾಬರಿಯಾಯಿತು. ಕೆಳಗೆ ಮುಂಗಲಿ, ಮೇಲೆ ಗೂಗೆ, ಏನು ಮಾಡಲಿ ದೇವರೆ? ಎಂದು ಚಡಪಡಿಸತೊಡಗಿತು.

ಇಲಿಗೆ ಒಂದು ವಿಚಾರ ಹೊಳೆಯಿತು. ಅದು ನೇರವಾಗಿ ಬಲೆಯಲ್ಲಿ ಸಿಕ್ಕುಬಿದ್ದ ಬೆಕ್ಕಿನ ಸನಿಹಕ್ಕೆ ಹೋಗಿ ವಿನಯದಿಂದ ಕೇಳಿಕೊಂಡಿತು. ‘ನೋಡು ಬೆಕ್ಕಪ್ಪ, ನಾನು ನಿನ್ನನ್ನು ಈ ಬಲೆಯಿಂದ ಬಿಡಿಸಬಲ್ಲೆ. ಆದರೆ ಒಂದು ಷರತ್ತಿನ ಮೇಲೆ’ ಎನ್ನುತ್ತಿದ್ದಂತೆ ಬೆಕ್ಕು ‘ಏನದು ಷರತ್ತು?’ ಎಂದಿತು.

“ನಾನು ನಿನ್ನನ್ನು ಈ ಬಲೆಯಿಂದ ಬಿಡಿಸಿ ಬೇಟೆಗಾರನಿಂದ ಪಾರು ಮಾಡುತ್ತೇನೆ. ಇದರ ಬದಲಾಗಿ ನೀನು ನನ್ನನ್ನು ಈ ಮುಂಗಲಿ ಹಾಗೂ ಮರದ ಮೇಲಿರುವ ಗೂಬೆಯಿಂದ ರಕ್ಷಿಸುವುದಾಗಿ ಮಾತುಕೊಡು’ ಎಂದಿತು.

ಬಲೆಯಲ್ಲಿ ಸಿಕ್ಕು ಒದ್ದಾಡುತ್ತಿದ್ದ ಬೆಕ್ಕಿಗೆ ಪ್ರಾಣ ಉಳಿಸಿಕೊಳ್ಳಲು ಇದು ಒಳ್ಳೆಯ ವಿಚಾರ ಎಂದೆನೆಸಿತು. ‘ಇಲಿರಾಯ, ನಾನು ನಿನ್ನ ಷರತ್ತಿಗೆ ಬದ್ಧನಾಗಿದ್ದೇನೆ’ ಎಂದು ಮಾತು ಕೊಟ್ಟಿತು. ‘ನೀನು ಹೇಳಿದಂತೆ ನಡೆದುಕೊಳ್ಳುತ್ತೇನೆ. ನನ್ನನ್ನು ಪ್ರಾಣಾಪಾಯದಿಂದ ಪಾರು ಮಾಡು’ ಎಂದು ಅಂಗಲಾಚಿತು.

ಇಲಿ ಅಂಜುತ್ತಲೇ ತನ್ನ ಹಲ್ಲುಗಳಿಂದ ಬಲೆಯನ್ನು ಕಡಿದು ಬೆಕ್ಕನ್ನು ಬಿಡಗಡೆಗೊಳಿಸಿತು. ಬೆಕ್ಕು ಇಲಿಯನ್ನು ಮುಂಗಲಿ ಹಾಗೂ ಗೂಗೆಯಿಂದ ರಕ್ಷಿಸಿತು. ಬೆಕ್ಕು ಮತ್ತು ಇಲಿ ಪರಸ್ಪರ ಆನಂದದಿಂದ ತಮ್ಮ ತಮ್ಮ ಮನೆಗಳಲ್ಲಿ ತಮ್ಮ ಬಳಗದ ಜೊತೆ ಸುಖವಾಗಿ ಬಾಳತೊಡಗಿದವು.

ಕೃಪೆ: ಸುದರ್ಶಿನಿ ಅನ್ನಪೂರ್ಣಾ ಕನೋಜ, ಬೈಲಹೊಂಗಲ (ಸಾಮಾಜಿಕ ಜಾಲತಾಣ)

ರಾಜಕೀಯ

ಭವಿಷ್ಯ ನುಡಿಯೋಕೆ ಅವರ‍್ಯಾರು, ಜ್ಯೋತಿಷಿನಾ? – ಡಿ.ಕೆ. ಶಿವಕುಮಾರ್ ವಿರುದ್ಧ ನಿಖಿಲ್‌ ಕುಮಾರಸ್ವಾಮಿ ಕಿಡಿ

ಭವಿಷ್ಯ ನುಡಿಯೋಕೆ ಅವರ‍್ಯಾರು, ಜ್ಯೋತಿಷಿನಾ? – ಡಿ.ಕೆ. ಶಿವಕುಮಾರ್ ವಿರುದ್ಧ ನಿಖಿಲ್‌ ಕುಮಾರಸ್ವಾಮಿ

ಖಾತಾ ಪರಿವರ್ತನೆ ಹೆಸರಿನಲ್ಲಿ ರಾಜ್ಯ ಸರ್ಕಾರ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಸರ್ಕಾರದ ಬಳಿ ಗುಂಡಿ ಮುಚ್ಚಲು ಹಣವಿಲ್ಲ, ಹಗಲು ದರೋಡೆ ದಂಧೆ ಮಾಡ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ (Nikhil

[ccc_my_favorite_select_button post_id="115363"]
ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ. ಹೀಗಾಗಿ ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಅವರು ಸ್ಪಷ್ಟ ಎಚ್ಚರಿಕೆ ನೀಡಿದರು.

[ccc_my_favorite_select_button post_id="114725"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ನಿಸರ್ಗ ಯೋಗ ಕೇಂದ್ರದ ಹಾಗೂ ರಾಜ್ಯ ಬಾಲಕರ ಯೋಗ ತಂಡದ ನಾಯಕ ವಿ.ವರ ಪ್ರಸಾದ್ (V. Vara Prasad) 50ನೇ ಗೋಲ್ಡನ್‌ ಜುಬ್ಲಿ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ (Yoga Championship) ನಲ್ಲಿ ಭಾಗವಹಿಸಿ ಚಿನ್ನದ

[ccc_my_favorite_select_button post_id="114944"]
ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ಕಳೆದ ತಿಂಗಳ ಕೊನೆಯ ದಿನ ನಡೆದಿದ್ದ ತಾಲೂಕಿನ ಪ್ರಸಿದ್ಧ ಗುಟ್ಟೆ ಶ್ರೀ ಲಕ್ಷೀನರಸಿಂಹ ಸ್ವಾಮಿ (Gutte Lakshmi Narasimhaswamy Temple) ದೇವಾಲಯದಲ್ಲಿ ಕಳ್ಳತನ (Theft) ಪ್ರಕರಣ ಮತ್ತೆ ಮುಂದುವರಿದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

[ccc_my_favorite_select_button post_id="115220"]
ಕಾರು ಮತ್ತು ಬೊಲೆರೋ ನಡುವೆ ಭೀಕರ ಅಪಘಾತ.. ತಪ್ಪಿದ ಭಾರಿ ಅನಾಹುತ.!

ಕಾರು ಮತ್ತು ಬೊಲೆರೋ ನಡುವೆ ಭೀಕರ ಅಪಘಾತ.. ತಪ್ಪಿದ ಭಾರಿ ಅನಾಹುತ.!

ಕಾರು ಮತ್ತು ಬೊಲೆರೋ ವಾಹನದ ನಡುವೆ ಭೀಕರ ಅಪಘಾತ (Accident) ಉಂಟಾಗಿದ್ದು, ಅದೃಷ್ಟವಶಾತ್ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 44 ರ

[ccc_my_favorite_select_button post_id="115379"]

ಆರೋಗ್ಯ

ಸಿನಿಮಾ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಕನ್ನಡ ಚಿತ್ರರಂಗ ಸಮೃದ್ಧವಾಗಿ ಬೆಳೆಯಬೇಕಾದರೆ ನಾಯಕ ನಟರು ಹೆಚ್ಚು ಸಿನಿಮಾಗಳನ್ನು ಮಾಡಬೇಕು ಹಾಗೂ ಹೆಚ್ಚು ನಾಯಕ ನಟರು ಚಿತ್ರರಂಗಕ್ಕೆ ಬರಬೇಕು ಎಂದು ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.

[ccc_my_favorite_select_button post_id="115245"]
error: Content is protected !!