
ಮುಂಬೈ: ಫೋಟೋದಲ್ಲಿ ಕಾಣಿಸಿಕೊಳ್ಳಲು ಬಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಕಾರ್ಯಕರ್ತನಿಗೆ ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ರಾವ್ ಸಾಹೇಬ್ ದಾನ್ವೆ ಜಾಡಿಸಿ ಒದ್ದ ಘಟನೆ ಜಲ್ನಾದಲ್ಲಿ ನಡೆದಿದೆ ಎನ್ನಲಾಗಿದೆ.
ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಅಲ್ಲದೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಮತದಾನಕ್ಕೂ ಮುನ್ನ ಪಕ್ಷದ ಕಾರ್ಯಕರ್ತನೊಂದಿಗೆ ವರ್ತಿಸಿದ ರೀತಿ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ವಿಡಿಯೋದಲ್ಲಿ ಬಿಜೆಪಿ ಮುಖಂಡ ರಾವ್ ಸಾಹೇಬ್ ದಾನ್ವೆ ಅವರು ಶಿವಸೇನಾ ಶಿಂಧೆ ಬಣದ ಅಭ್ಯರ್ಥಿ ಅರ್ಜುನ್ ಖೋಟ್ಕರ್ ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಂದಾದಾಗ RSS ಕಾರ್ಯಕರ್ತರೊಬ್ಬರು ಫೋಟೋಗೆ ಪೋಸ್ ಕೊಡಲು ಅವರ ಹತ್ತಿರ ಬರಲು ಮುಂದಾಗಿದ್ದಾರೆ. ಆಗ ದಾನ್ವೆ ಆತನನ್ನು ಕಾಲಿನಿಂದ ಒದ್ದು ದೂರ ಮಾಡಿದ್ದನ್ನು ಕಾಣಬಹುದಾಗಿದೆ.
Look at this ARROGANT IDIOT BJP Leader & former Union Minister for Railways Raosaheb Danve (@raosahebdanve)
— मुन्ना भैया (@munnabhaiyya_) November 11, 2024
People of Jalna already shown him his “AUKAAT” in #LS2024 as he was defeated by more than 1 lakh votes.
Still his arrogance has not decreased. See how he’s kicking a… pic.twitter.com/T3l4e1HFGT
ಇದು ವೈರಲ್ ಆಗುತ್ತಿದ್ದಂತೆಯೇ ವೀಡಿಯೋ ನೋಡಿದ ನೆಟ್ಟಿಗರು ಬಿಜೆಪಿ ನಾಯಕ ಈ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ರಾಜ್ಯ ಚುನಾವಣಾ ಮುಖ್ಯಸ್ಥ ರಾವ್ ಸಾಹೇಬ್ ದಾನ್ವೆ ಅವರು ಆರ್ಎಸ್ಎಸ್ ಕಾರ್ಯಕರ್ತನಿಗೆ ಒದೆಯುತ್ತಿರುವುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ.
ಕೃತ್ಯದಿಂದ ರಾಜ್ಯಾದ್ಯಂತ ಅನೇಕ ಬಿಜೆಪಿ ಆರ್ಎಸ್ಎಸ್ ಬೆಂಬಲಿಗರು ತೀವ್ರವಾಗಿ ನೊಂದಿದ್ದು, ಚುನಾವಣಾ ದಿನದಂದು ಬಿಜೆಪಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.