daily story| ಹರಿತಲೇಖನಿ ದಿನಕ್ಕೊಂದು ಕಥೆ: ಆಗಸ ಕಳಚಿ ಬಿದ್ದಿತೆ?

daily story: ಸೋಮಪುರವೆಂಬ ಊರಿನ ಬಳಿ ಒಂದು ಸುಂದರವಾದ ಅರಣ್ಯವಿದ್ದಿತು. ದಟ್ಟ ಗಿಡ-ಮರ, ಪೊದೆಗಳಿಂದ ಕೂಡಿದ ಈ ಕಾಡಿನಲ್ಲಿ ಅಲ್ಲಲ್ಲಿ ಶುಭ್ರ ನೀರಿನ ತೊರೆಗಳೂ ಇದ್ದವು. ಇದರಿಂದ ಪ್ರಾಣಿ- ಪಕ್ಷಿಗಳು ಆನಂದದಿಂದ ವಾಸಿಸುತ್ತಿದ್ದವು.

Guarantee scheme
ಎನ್ ವಿಶ್ವನಾಥ್

ಇಂತಹ ಅರಣ್ಯದಲ್ಲಿ ಮೊಲವಿದ್ದಿತು. ತುಪ್ಪಳದಂತಹ ತನ್ನ ಶರೀರ, ಮಲ್ಲಿಗೆಯಂತಹ ಬಿಳುಪು ವರ್ಣ, ಉದ್ದನೆಯ ಕಿವಿಗಳು ತನ್ನ ಸೌಂದರ್ಯದ ಪ್ರತೀಕವೆಂದೇ ಅದು ಭಾವಿಸಿತ್ತು. ಅಲ್ಲದೆ ಚತುರತೆ, ಬುದ್ದಿವಂತಿಕೆಯಲ್ಲಿ ತನ್ನ ಸಮಾನರಿಲ್ಲ ಎಂದು ಅದು ಬೀಗುತ್ತಿತ್ತು. ಆದ್ದರಿಂದ ಇತರ ಪ್ರಾಣಿಗಳ ಜೊತೆ ದುರಹಂಕಾರದಿಂದಲೇ ವರ್ತಿಸುತ್ತಿತ್ತು.

ಹೀಗಿರಲು ಒಂದು ದಿನ ಅದಕ್ಕೆ ತಿನ್ನಲು ಕೆಂಪು ಕೆಂಪಾದ ಗಜ್ಜರಿ ದೊರೆತಿತ್ತು. ಹೊಟ್ಟೆ ತುಂಬಾ ತಿಂದ ಮೊಲ ಒಂದು ಮರದ ನೆರಳಲ್ಲಿ ವಿಶ್ರಮಿಸಿತು. ಅಲ್ಲೇ ನಿದ್ದೆ ಹತ್ತಿದ ಮೊಲಕ್ಕೆ ಏನೇನೋ ಕನಸು. ಆಕಾಶದ ತುಣುಕೊಂಡು ಜಾರಿ ಕೆಳಬಿದ್ದಂತೆ ಅದು ಕನಸು ಕಂಡಿತು. ಬೆದರಿದ ಮೊಲ ಕಣ್ಣೆರೆಯುವುಕ್ಕೂ, ಮೇಲಿನಿಂದ ಏನೋ ಭಾರೀ ಸದ್ದಿನಿಂದ ಕೆಳಗೆ ಬೀಳುವುದೂ ತಾಳೆಯಾಯಿತು. ಇದರಿಂದ ಕಂಗಾಲಾದ ಮೊಲ ಸತ್ತೆನೊ ಕೆಟ್ಟೆನೊ ಎಂದು ಓಡತೊಡಗಿತು.

ಆಗ ಜಿಂಕೆಯೊಂದು ಎದುರಾಯಿತು. ‘ಮೊಲರಾಯಾ, ಎಲ್ಲಿಗೆ ಓಡುವೆ?’ ಎಂದದು ಕೇಳಿತು.

‘ಅರೆ! ಆಕಾಶ ಕಳಚಿ ಬೀಳುತ್ತಿದೆಯಲ್ಲ, ನೀನೂ ಓಡು’ ಎನ್ನುತ್ತಾ ಓಡತೊಡಗಿತು. ಬುದ್ಧಿವಂತ ಮೊಲ ಹಾಗೆ ಹೇಳಿದಾಗ ಬಡ ಹರಿಣ ಬೆದರದಿರುತ್ತದೆಯೇ? ಅದೂ ಮೊಲದ ಹಿಂದೆಯೇ ಓಡತೊಡಗಿತು. ಅವೆರಡೂ ತುಸು ಮುಂದೆ ಸಾಗುತ್ತಿದ್ದಂತೆ ಕರಡಿಯೊಂದು ಎದುರಿಗೆ ಬಂದಿತು.

ಚಕಿತಗೊಂಡ ಅದು, ‘ನೀವಿಬ್ಬರೂ ತತ್ತರಿಸಿದಂತೆ ಓಡುತ್ತಿರುವಿರಲ್ಲ? ಏನು ವಿಶೇಷ?’ ಎಂದು ಕೇಳಿತು. ‘ಆಕಾಶ ಕಳಚಿ ಬೀಳುತ್ತಿದೆಯಲ್ಲಿ, ಓಡು, ಓಡು’ ಎನ್ನುತ್ತ ನಿಲ್ಲದೆ ಅವೆರಡೂ ಓಡಿದವು. ಹೆದರಿದ ಕರಡಿಯೂ ಅವನ್ನು ಹಿಂಬಾಲಿಸಿತು. ಹಾಗೆ ಅನೇಕ ಪ್ರಾಣಿಗಳು ಜತೆಗೂಡಿ ಧಾವಿಸತೊಡಗಿದವು.

ತುಸು ಮುಂದೆ ಕಾಡಿನ ರಾಜ ಸಿಂಹ ಎದುರಾಯಿತು. ಇವರ ಓಟ ಕಂಡು ಅದು ಘರ್ಜಿಸಿತು, ‘ಎಲ್ಲಿ ಓಡುತ್ತಿರುವಿರಿ? ನಿಲ್ಲಿ, ನಿಲ್ಲಿ’ ಎಂದಿತು.

ಪ್ರಾಣಭಯದಿಂದ ತತ್ತರಿಸುತ್ತಿದ್ದ ಪ್ರಾಣಿಗಳು ವಿಧಿ ಇಲ್ಲದೆ ತಮ್ಮ ಓಟ ನಿಧಾನಗೊಳಿಸಿ ರಾಜನಿಗೆ ತಮ್ಮ ಓಟದ ಕಾರಣ ತಿಳಿಸಿದವು.

‘ಮೊಲವೇ, ಆಕಾಶ ಬಿದ್ದ ಜಾಗ ನನಗೆ ತೋರಿಸು, ಎಲ್ಲರೂ ಬನ್ನಿ’ ಎಂದಿತು ಸಿಂಹ. ಎಲ್ಲರಿಗೂ ಹಿಂದಿರುಗಲು ಭಯ. ಆದರೆ ಸಿಂಹರಾಜನ ಮಾತು ಮೀರುವುದುಂಟೇ ಎಂದು ಹೆದರುತ್ತಾ, ಬೆದರುತ್ತಾ ಸ್ಥಳ ತಲಪಿದವು. ಅಲ್ಲೊಂದು ತೆಂಗಿನಕಾಯಿ ಬಿದ್ದಿತ್ತು. ಸಿಂಹ ಮೇಲೆ ನೋಡಿದಾಗ ಮಂಗವೊಂದು ಕಾಣಿಸಿತು. ಮಂಗವನ್ನು ಕೇಳಿದಾಗ, ತೆಂಗಿನಕಾಯಿ ತನ್ನ ಕೈಯಿಂದ ಜಾರಿ ಕೆಳಗೆ ಬಿದ್ದಿತೆಂದು ಅದು ಹೇಳಿತು.

‘ನೋಡಿದೆಯಾ ಮೊಲರಾಯಾ, ನಿನ್ನ ಆಕಾಶದ ತುಣುಕು. ಬುದ್ಧಿವಂತವೆಂದು ಬೀಗುತ್ತಿದ್ದೆಯಲ್ಲಾ? ಇದೇ ಏನು ನಿನ್ನ ಬುದ್ದಿವಂತಿಕೆ?’ ಎಂದು ಜೋರಾಗಿ ಸಿಂಹರಾಜ ನಗಲಾರಂಭಿಸಿತು. ಇದನ್ನು ಕಂಡು ಇತರ

ಪ್ರಾಣಿಗಳೂ ಬಿದ್ದು ಬಿದ್ದು ನಗತೊಡಗಿದವು. ಅಪಮಾನದಿಂದ ಕೆಂಪಾದ ಮೊಲ, ಅಂದಿನಿಂದಲೇ ತನ್ನ ಅಹಂಕಾರ ಬಿಟ್ಟು ಎಲ್ಲರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸತೊಡಗಿತು.

ಕೃಪೆ: ಸಾಮಾಜಿಕ ಜಾಲತಾಣ (ಲೇಖಕರ ಮಾಹಿತಿ ಲಭ್ಯವಿಲ್ಲ)

ರಾಜಕೀಯ

ಗ್ಯಾರಂಟಿ ಯೋಜನೆಗಳನ್ನ ಕೊಟ್ಟು ಜನರನ್ನು ಮರಳು ಮಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ

ಗ್ಯಾರಂಟಿ ಯೋಜನೆಗಳನ್ನ ಕೊಟ್ಟು ಜನರನ್ನು ಮರಳು ಮಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ

ಕಾಂಗ್ರೆಸ್ ಶಾಸಕರೇ ರಾಜ್ಯ ಸರ್ಕಾರದ ವಿರುದ್ದ ತಿರುಗಿ ಬಿದ್ದಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy)

[ccc_my_favorite_select_button post_id="110970"]
ಶಕ್ತಿ ಯೋಜನೆ ದೇಶಕ್ಕೆ ಮಾದರಿ; ಗ್ಯಾರಂಟಿಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ಶಕ್ತಿ ಯೋಜನೆ ದೇಶಕ್ಕೆ ಮಾದರಿ; ಗ್ಯಾರಂಟಿಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: “500 ಕೋಟಿ ಟ್ರಿಪ್ ಗಳನ್ನು ಕಂಡಿರುವ ಶಕ್ತಿ ಯೋಜನೆ ಇಡೀ ದೇಶಕ್ಕೆ ಮಾದರಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar) ಬಣ್ಣಿಸಿದರು. ಎನ್ ವಿಶ್ವನಾಥ್ “ಶಕ್ತಿ” ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣ 500

[ccc_my_favorite_select_button post_id="111083"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ದೊಡ್ಡಬಳ್ಳಾಪುರ: ಅಕ್ರಮ ಗುಡಿಸಲು, ಶೆಡ್ ನಿರ್ಮಾಣದ ಆರೋಪ.. ನಗರಸಭೆಗೆ ದೂರು

ದೊಡ್ಡಬಳ್ಳಾಪುರ: ಅಕ್ರಮ ಗುಡಿಸಲು, ಶೆಡ್ ನಿರ್ಮಾಣದ ಆರೋಪ.. ನಗರಸಭೆಗೆ ದೂರು

ನಗರಸಭೆ ವ್ಯಾಪ್ತಿಯ ರಾಜೀವ್ ಗಾಂಧಿ ಬಡಾವಣೆಯಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಶೆಡ್ ‌ನಿರ್ಮಾಣ ಮಾಡಲಾಗಿದೆ Municipal council

[ccc_my_favorite_select_button post_id="110824"]
ಚಿತ್ರೀಕರಣದ ವೇಳೆ ಅವಘಡ.. ಖ್ಯಾತ ಸ್ಟಂಟ್ ಮಾಸ್ಟರ್ ದುರ್ಮರಣ| Video

ಚಿತ್ರೀಕರಣದ ವೇಳೆ ಅವಘಡ.. ಖ್ಯಾತ ಸ್ಟಂಟ್ ಮಾಸ್ಟರ್ ದುರ್ಮರಣ| Video

ನಾಗಪಟ್ಟಣಂ: ದಕ್ಷಿಣ ಭಾರತದ ಖ್ಯಾತ ಸ್ಟಂಟ್ ಮಾಸ್ಟರ್ (Stunt Master) ಮೋಹನ್ ರಾಜ್ (Mohan Raj) ಸಿನಿಮಾ ಚಿತ್ರೀಕರಣದ ವೇಳೆ ನಿಧನರಾಗಿದ್ದಾರೆ. ಎನ್ ವಿಶ್ವನಾಥ್ ಸಿನಿಮಾ ಚಿತ್ರೀಕರಣ ವೇಳೆ ಕಾರು ಅಪಘಾತಗೊಂಡಿದ್ದು ಸ್ಟಂಟ್ ಮಾಸ್ಟರ್

[ccc_my_favorite_select_button post_id="111079"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!