ಹರಿತಲೇಖನಿ ದಿನಕ್ಕೊಂದು ಕಥೆ: ಹಣ ಮತ್ತು ಗುಣ| Daily story

Daily story: ಇಬ್ಬರು ಗೆಳೆಯರಿದ್ದರು. ಅವರ ಕೆಲಸ ಒಳ್ಳೆಯ ಸುಂದರವಾದ `ಮಡಕೆಗಳನ್ನು ಮಾಡುವುದು. ಸುತ್ತಮುತ್ತಲಿನ ಹಳ್ಳಿಗಳಲ್ಲಿ ಒಳ್ಳೆಯ ಕುಂಬಾರರು ಎಂದು ಹೆಸರು ಮಾಡಿದ್ದರು. ಮಡಕೆಗಳನ್ನು ಮಾರಿ ತಮ್ಮ ಜೀವನ ಸಾಗಿಸುತ್ತಿದ್ದರು.

ಒಂದು ಸಂತೆಯಲ್ಲಿ ಮಡಕೆ ಮಾರುತ್ತಿರುವಾಗ ಆ ಹಳ್ಳಿಯ ಜಮೀನುದಾರ ‘ನನ್ನ ಮನಸ್ಸಿಗೆ ಸುಂದರವಾಗಿ ಕಾಣುವಂತೆ ಯಾರು ಒಳ್ಳೆಯ ಮಡಕೆಗಳನ್ನು ಮಾಡಿಕೊಂಡು ಬರುತ್ತಾರೋ ಅವರಿಗೆ ನಿಮ್ಮ ತೂಕದಷ್ಟು ಹಣವನ್ನು ಕೊಡುತ್ತೇನೆ’ ಎಂದು ಹೇಳಿ ಹೋದನು.

ಗೆಳೆಯರಿಬ್ಬರು ಬಡವರು. ಆದರೆ, ಒಬ್ಬ ಹಿರಿಯ ಮಡಕೆ ಮಾಡುವಲ್ಲಿ ಕಿರಿಯನಿಗಿಂತ ಸ್ವಲ್ಪ ನುರಿತವನಾಗಿದ್ದ. ಒಳ್ಳೆಯ ಸುಂದರವಾದ ಮಡಕೆಗಳನ್ನು ಮಾಡುತ್ತಿದ್ದ, ಆದರೆ ಕಿರಿಯವನು ಸುಂದರವಾಗಿ ಮಾಡುತ್ತಿದ್ದರೂ ಅವನು ಮಾಡಿದ ಮಡಕೆಯ ಮೇಲೆ ಸುಂದರವಾದ ವಿನ್ಯಾಸ ಇರಲಿಲ್ಲ. ಇದರಿಂದ ತನಗೆ ಆ ಬಹುಮಾನದ ಹಣ ತಪ್ಪುತ್ತದೆ. ತನ್ನ ಗೆಳೆಯನಿಗೆ ಸಿಗುತ್ತದೆ ಎಂದು ದುರಾಸೆಯನ್ನು ವ್ಯಕ್ತಪಡಿಸಿದ.

‘ಹೇಗಾದರೂ ಮಾಡಿ ಗೆಳೆಯನ ಮಡಕೆಯಲ್ಲಿ ಒಂದು ರಂಧ್ರವನ್ನು ಕೊರೆದು ಬಿಟ್ಟರೆ ಆ ಜಮೀನುದಾರ ನನಗೆ ಹಣವನ್ನು ಕೊಡುತ್ತಾನೆ’ ಎಂದು ಕಿರಿಯವ ಯೋಚಿಸಿದ. ಅಂದು ಮಧ್ಯರಾತ್ರಿ ರಂಧ್ರ ಕೊರೆಯಲು ಎದ್ದ. ಗೆಳೆಯ ತಯಾರು ಮಾಡಿದ ಸುಂದರವಾದ ಮಡಕೆಯನ್ನು ನೋಡಿದಾಗ ಮನಸ್ಸು ಬರಲಿಲ್ಲ. ಆದರೆ ಹಣದ ಆಸೆಯಿಂದ ಮಡಕೆಯನ್ನು ಎತ್ತಿ ಕೊಂಡಾಗ ಆಶ್ಚರ್ಯವಾಯಿತು ಕಿರಿಯ ಕುಂಬಾರನಿಗೆ, ಅಲ್ಲಿದ್ದ ಪ್ರತಿಯೊಂದು ಮಡಕೆಯಲ್ಲೂ ಮೊದಲೇ ರಂಧ್ರವಿತ್ತು.

ಅಷ್ಟರಲ್ಲಿ ಗೆಳೆಯನಾದ ಹಿರಿಯ ಕುಂಬಾರ ಎದುರಿಗೆ ಬಂದ. ‘ನಾಳೆ ನಿನ್ನ ಮಡಕೆಗಳನ್ನು ತೆಗೆದುಕೊಂಡು ಹೋಗು. ನನ್ನ ಮಡಕೆಯಲ್ಲಿ ಲೋಪವಿದೆ ಎಂದು ನಾನೇ ಹೇಳುತ್ತೇನೆ. ಆಗ ಬಹುಮಾನದ ಹಣವೆಲ್ಲ ನಿನಗೆ ಸಿಗುತ್ತದೆ. ಎಲ್ಲ ಹಣ ನೀನೆ ತೆಗೆದುಕೋ ನನಗೆ ಹಣ ಬೇಡ. ದುಡಿಯಲು ಶಕ್ತಿ ಇದೆ. ಸುಂದರವಾದ ಮಡಕೆಗಳನ್ನು ಮಾಡಲು, ಯೋಚಿಸಲು ಯುಕ್ತಿ ಇದೆ. ಅಷ್ಟು ಸಾಕು ನನಗೆ. ಈಗ ಮಲಗು. ಮುಂಜಾನೆ ಬೇಗ ಜಮೀನುದಾರನ ಮನೆಗೆ ಹೋಗಬೇಕು’ ಎಂದ.

ಕಿರಿಯ ಕುಂಬಾರನಿಗೆ ತನ್ನ ತಪ್ಪಿನ ಅರಿವಾಯಿತು. ‘ಕ್ಷಮಿಸು ಗೆಳೆಯ, ಹಣದ ವ್ಯಾಮೋಹದಿಂದ ನಾನು ದುರ್ಬುದ್ದಿಯವನಾದೆ. ಹಣಕ್ಕಿಂತ ಮೀಗಿಲಾದದ್ದು ಗುಣ. ಆ ಗುಣ ನಿನ್ನಲ್ಲಿ ಇದೆ. ಶಕ್ತಿಯ ಜೊತೆ ಯುಕ್ತಿಯೊಂದಿದ್ದರೆ ನಾನು ಶ್ರೀಮಂತನಾಗಬಹುದು. ಏನು ಬೇಕಾದರೂ ಸಾಧಿಸಬಹುದು ಎಂದು ನೀನು ನನಗೆ ಹೇಳಿಕೊಟ್ಟೆ’ ಎಂದು ತನ್ನ ಗೆಳೆಯನ ಕ್ಷಮೆ ಕೇಳಿದನು.

ಕೃಪೆ: ಸಾಮಾಜಿಕ ಜಾಲತಾಣ.

ರಾಜಕೀಯ

ಅತಿ ಶೀಘ್ರವೇ ಕರ್ನಾಟಕ ಸೇರಿ ಹಲವು ರಾಜ್ಯಾಧ್ಯಕ್ಷರ ಘೋಷಣೆ: ಬಿ.ವೈ.ವಿಜಯೇಂದ್ರ

ಅತಿ ಶೀಘ್ರವೇ ಕರ್ನಾಟಕ ಸೇರಿ ಹಲವು ರಾಜ್ಯಾಧ್ಯಕ್ಷರ ಘೋಷಣೆ: ಬಿ.ವೈ.ವಿಜಯೇಂದ್ರ

ಅತಿ ಶೀಘ್ರವೇ ಕರ್ನಾಟಕವೂ ಒಳಗೊಂಡಂತೆ ಹಲವು ರಾಜ್ಯಾಧ್ಯಕ್ಷರ ಹೆಸರು ಘೋಷಣೆ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B.Y.Vijayendra) ತಿಳಿಸಿದ್ದಾರೆ

[ccc_my_favorite_select_button post_id="109998"]
ಅವರದ್ ಬಿಡ್ರೀ.. ನೀವ್ ಸಿಎಂ ಆಗಿದ್ದಾಗ ವರದಿಗಳನ್ನು ಏನ್ ಮಾಡ್ದೇ ಹೇಳು; ಹೆಚ್‌ಡಿಕೆಗೆ ಹೆಚ್.ಕೆ.ಪಾಟೀಲ್ ತಿರುಗೇಟು

ಅವರದ್ ಬಿಡ್ರೀ.. ನೀವ್ ಸಿಎಂ ಆಗಿದ್ದಾಗ ವರದಿಗಳನ್ನು ಏನ್ ಮಾಡ್ದೇ ಹೇಳು; ಹೆಚ್‌ಡಿಕೆಗೆ

ಈಗ ಅಕ್ರಮ ಗಣಿಗಾರಿಕೆ ಪತ್ರದ ಮಾತಾಡುವ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅಭಿಷೇಕ ಮಾಡಿಕೊಂಡು ಕುಳಿತಿದ್ರಾ; ಸಚಿವ ಹೆಚ್.ಕೆ.ಪಾಟೀಲ್ (H.K.Patil)

[ccc_my_favorite_select_button post_id="109884"]
ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ವಿಶ್ವದ ಬೇರೆ ಬೇರೆ ದೇಶಗಳಿಗೆ ಹೊಲಿಕೆ ಮಾಡಿದಾಗ ಭಾರತವು ಹೇರಳವಾದ ಮಾನವ ಸಂಪನ್ಮೂಲ ಹೊಂದಿದೆ ಸಚಿವ ಪ್ರಲ್ಹಾದ ಜೋಶಿ (Pralhad Joshi)

[ccc_my_favorite_select_button post_id="108459"]
ಲಾಸ್ ಏಂಜಲೀಸ್‌ ಧಗಧಗ..!| Video ನೋಡಿ

ಲಾಸ್ ಏಂಜಲೀಸ್‌ ಧಗಧಗ..!| Video ನೋಡಿ

ಪ್ರಸ್ತುತ ವರದಿ ಪ್ರಕಾರ, ಡೊನಾಲ್ಡ್ ಟ್ರಂಪ್ ಅವರ ಐಸಿಇ ದಾಳಿಗಳನ್ನು ಧಿಕ್ಕರಿಸಿ ಲಾಸ್ ಏಂಜಲೀಸ್‌ನಲ್ಲಿ ದೊಡ್ಡಮಟ್ಟದದಲ್ಲಿ ಶಾಂತಿಯುತ ಪ್ರತಿಭಟನೆ Los Angeles

[ccc_my_favorite_select_button post_id="108829"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ಲೈವ್ ಬೆತ್ತಲೆ ವಿಡಿಯೋ ಬ್ಯುಸಿನೆಸ್.. ದಂಪತಿಗಳು ಪೊಲೀಸರ ಅತಿಥಿ

ಲೈವ್ ಬೆತ್ತಲೆ ವಿಡಿಯೋ ಬ್ಯುಸಿನೆಸ್.. ದಂಪತಿಗಳು ಪೊಲೀಸರ ಅತಿಥಿ

HD ಕ್ಯಾಮೆರಾಗಳೊಂದಿಗೆ ದಂಪತಿಗಳು ಲೈವ್ ಬೆತ್ತಲೆ ವಿಡಿಯೋ (Live nude video) ವ್ಯವಹಾರ ನಡೆಸಿ ಪೊಲೀಸರ ಅತಿಥಿಯಾಗಿದ್ದಾರೆ.

[ccc_my_favorite_select_button post_id="109995"]
ಬೆಂ.ಗ್ರಾ.ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಿಂದ 297 ಸಾವು..! ಜಿಲ್ಲಾಧಿಕಾರಿ ಕಳವಳ

ಬೆಂ.ಗ್ರಾ.ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಿಂದ 297 ಸಾವು..! ಜಿಲ್ಲಾಧಿಕಾರಿ ಕಳವಳ

ಬೆಂ.ಗ್ರಾ.ಜಿಲ್ಲೆ: ಜಿಲ್ಲೆಯಲ್ಲಿ ದಿನೇ ದಿನೇ ರಸ್ತೆ ಅಪಘಾತಗಳು ಹೆಚ್ಚುತ್ತಲೇ ಇವೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದೆ; ಜಿಲ್ಲಾಧಿಕಾರಿ ಎ.ಬಿ ಬಸವರಾಜು (Deputy Commissioner A.B. Basavaraju)

[ccc_my_favorite_select_button post_id="109939"]

ಆರೋಗ್ಯ

ಸಿನಿಮಾ

CET ಫಲಿತಾಂಶ ಪ್ರಕಟ| ಫಲಿತಾಂಶ ನೋಡಲು ಲಿಂಕ್ ಇಲ್ಲಿದೆ

CET ಫಲಿತಾಂಶ ಪ್ರಕಟ| ಫಲಿತಾಂಶ ನೋಡಲು ಲಿಂಕ್ ಇಲ್ಲಿದೆ

ವಿದ್ಯಾರ್ಥಿಗಳು ಸಾಕಷ್ಟು ಕಾತರದಿಂದ ಕಾಯುತ್ತಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2025ರ (CET) ಫಲಿತಾಂಶ ಪ್ರಕಟಗೊಂಡಿದೆ.

[ccc_my_favorite_select_button post_id="107812"]