ಹರಿತಲೇಖನಿ ದಿನಕ್ಕೊಂದು ಕಥೆ: ಶಿವ-ಪಾರ್ವತಿಯೂ, ನಂದಿಯೂ| Daily Story

Daily Story: ಒಮೈ ಭೂಲೋಕವನ್ನು ಸುತ್ತಬೇಕೆಂಬ ಆಸೆಯಿಂದ ಕೈಲಾಸದಿಂದ ಶಿವ ಬಪಾರ್ವತಿ ಹಾಗೂ ನಂದಿ ಜೊತೆಯಾಗಿ ಬಂದಿದ್ದರು. ನಿಸರ್ಗವನ್ನು. ಅದರ ಚೆಲುವನ್ನು ಅನುಭವಿಸುತ್ತಾ ಹಾಗೆಯೇ ಗ್ರಾಮವೊಂದನ್ನು ಪ್ರವೇಶಿಸಿದರು.

ಶಿವ ಹಾಗೂ ಪಾರ್ವತಿ ತಮ್ಮ ಸ್ವಂತ ರೂಪದಿಂದ ಇರದೇ ಸಾಮಾನ್ಯ ಮನುಷ್ಯರಂತೆ ಬಂದಿದ್ದರು. ಅಂತೆಯೇ ನಂದಿಯು ಬಸವನಂತೆ ಬಂದಿತ್ತು.

ತುಂಬಾ ದೂರದಿಂದ ಕಾಲಿನ ನಡಿಗೆಯಲ್ಲಿ ಬಂದಿದ್ದರಿಂದ ಶಿವ ಹಾಗೂ ಪಾರ್ವತಿ ಬಹಳ ದಣಿದಿದ್ದರು. ಹಾಗಾಗಿ ಇಬ್ಬರೂ ನಂದಿಯ ಮೇಲೆ ಕುಳಿತು ಬರುತ್ತಿದ್ದಾಗ ಗ್ರಾಮದವನೊಬ್ಬ ಇವರನ್ನು ನೋಡಿ ‘ಪಾಪ, ಎಂತಹ ಮನುಷ್ಯರೋ ಇವರು, ಪಾಪದ ಪ್ರಾಣಿಯನ್ನೇರಿ ಬರುತ್ತಿದ್ದಾರೆ. ಕಠೋರ ಮನಸ್ಸಿನವರು’ ಎಂದು ಹೇಳುತ್ತಾ ಮುಂದೆ ಹೋದನು.

ಮುಂದೆ ಸಾಗುತ್ತಿದ್ದಂತೆ ಶಿವನು ನಂದಿಯಿಂದ ಇಳಿದನು. ಪಾರ್ವತಿಯೊಬ್ಬಳೇ ನಂದಿಯ ಬೆನ್ನೇರಿ ಬರುತ್ತಿದ್ದಳು. ಶಿವನು ನಡೆದುಕೊಂಡು ಬರುವಾಗ ಮುಂದೆ ಇದ್ದ ಹೆಂಗಸೊಬ್ಬಳು ‘ಆಹಾ! ಇಲ್ಲಿ ನೋಡಿ, ಬರೀ ಕಾಲಲ್ಲಿ ನಡೆದುಕೊಂಡು ಬರುತ್ತಿರುವ ಗಂಡ. ಗಂಡನನ್ನು ಬಿಸಿಲಿನಲ್ಲಿ ಒಣಗಿಸಿ,. ಹಾಯಾಗಿ ಬಸವನ ಮೇಲೆ ಹ್ಯಾಗೆ ಹೆಂಡತಿ ನಾಚಿಕೆಯಿಲ್ಲದೆ ಕುಳಿತು ಬರುತ್ತಿದ್ದಾಳೆ ನೋಡಿ’ ಎಂದು ಇತರ ಹೆಂಗಸರಿಗೆ ತೋರಿಸಿದಳು.

ಇನ್ನೂ ಮುಂದೆ ಸಾಗಿದಂತೆ ಪಾರ್ವತಿ ತಾನು ಮೈಕೈ ಆಡಿಸಬೇಕೆಂದೂ, ಕಾಲುನಡಿಗೆಯಲ್ಲಿ ಬರುವೆನೆಂದೂ ಹೇಳಿ ಶಿವನಿಗೆ ನಂದಿಯ ಮೇಲೆ ಬರುವಂತೆ ತಿಳಿಸಿದಳು. ಸರಿ, ಶಿವನು ನಂದಿಯನ್ನೇರಿದ. ಪಾರ್ವತಿ ನಡೆದುಕೊಂಡು ಪಕ್ಕದ ಗ್ರಾಮಕ್ಕೆ ಕಾಲಿಟ್ಟಾಗ ಅಲ್ಲಿದ್ದ ಮುದುಕನೊಬ್ಬ ‘ಎಂತಹ ಕೆಟ್ಟ ಗಂಡಸು ಇವನು, ಹೆಂಡತಿಯನ್ನು ನಡೆಸಿಕೊಂಡು ತಾನು ಮಾತ್ರ ಹಾಯಾಗಿ ಕನಿಕರವೇ ಇಲ್ಲ’ ಎಂದನು.

ಹೀಗೆಯೇ ಮುಂದೆ ಸಾಗುತ್ತಾ ಶಿವ, ಪಾರ್ವತಿ ಇಬ್ಬರೂ ನಂದಿಯ ಜೊತೆಯಲ್ಲಿ ಕಾಲು ನಡಿಗೆಯಲ್ಲಿ ಬರುತ್ತಿದ್ದರು. ಅಲ್ಲಿಯೇ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಇವರನ್ನು ನೋಡಿ ಮನಸ್ಸಿನಲ್ಲೇ ನಕ್ಕು ‘ಎಂತಹ ಪೆದ್ದು ಜನರಪ್ಪ, ಆ ಪ್ರಾಣಿ ಇರುವಾಗ ಅದರ ಮೇಲೆ ಹಾಯಾಗಿ ಬರದೇ ಈ ಉರಿ ಬಿಸಿಲಲ್ಲಿ ಕಾಲು ನಡಿಗೆಯಲ್ಲೇ ಬರುತ್ತಿದ್ದಾರೆ. ಯೋಚಿಸಲಾರದ ತಲೆಯವರು’ ಎಂದುಕೊಳ್ಳುತ್ತಿದ್ದ.

ಭೂಲೋಕ ಸಂಚಾರ ಮುಗಿಸಿ ಕೈಲಾಸಕ್ಕೆ ಬಂದ ನಂತರ ಶಿವನು ನಂದಿ ಹಾಗೂ ಪಾರ್ವತಿಗೆ ‘ಪಾರ್ವತಿ, ನಂದಿ ಕೇಳಿದಿರಲ್ಲ ಭೂಲೋಕದ ಜನರ ಮಾತುಗಳನ್ನು! ಒಬ್ಬ ಯೋಚಿಸಿದಂತೆ ಮಗದೊಬ್ಬ ಯೋಚಿಸಲಾರ.

ಅವರವರ ಮೂಗಿನ ನೇರಕ್ಕೆ ಅವರವರು ಮಾತಾಡಿಕೊಳ್ಳುತ್ತಾರೆ. ಒಬ್ಬೊಬ್ಬ ಮನುಷ್ಯನ ಯೋಚನೆ, ಭಾವನೆ ಎಲ್ಲವೂ ಬೇರೆಯೇ ಅಲ್ಲವೇ?’ ಎಂದ. ಪಾರ್ವತಿ ಹಾಗೂ ನಂದಿ ಇಬ್ಬರೂ ಒಟ್ಟಾಗಿ ‘ಹೌದು ಪರಮೇಶ್ವರ, ನೀನು ಹೇಳಿದ್ದು ಸರಿ’ ಎಂದು ತಲೆಯಾಡಿಸಿ ‘ಒಬ್ಬರಿಗೆ ಸರಿಯೆನಿಸಿದ್ದು ಇನ್ನೊಬ್ಬನಿಗೆ ತಪ್ಪಾಗಿ ಕಾಣುತ್ತದೆ. ಹಾಗಾಗಿ ಭೂಲೋಕದಲ್ಲಿ ಮನುಷ್ಯ ತನಗೆ, ತನ್ನ ಆತ್ಮಕ್ಕೆ ಸರಿಯೆನಿಸಿದ್ದನ್ನು ಮಾಡುತ್ತಾನೆ.

ಒಬ್ಬರು ಹೇಳಿದರೆಂದು ಅತಿಯಾಗಿ ತಲೆ ಕೆಡಿಸಿಕೊಳ್ಳದೆ ತಮ್ಮ ಕೆಲಸವನ್ನು ಮಾಡಿಕೊಂಡು ಹೋಗುವುದು ಅವರಿಗೆ ಒಳಿತು’ ಎಂದರು.

ಅದಕ್ಕೆ ಶಿವನು ನಕ್ಕು ‘ಹೌದು, ನೀವು ಹೇಳಿದ್ದು ಸರಿ, ಭೂಲೋಕದಲ್ಲಿ ಪರರ ಮಾತನ್ನು ಅಗತ್ಯವಿರುವಷ್ಟು ಮಾತ್ರ ಆಲಿಸಿ ತಮಗೆ ಸರಿ ಹಾಗೂ ಒಳಿತೆಂದು ತಿಳಿದು ಬಾಳಿದರೆ ಅವರಿಗೆಲ್ಲಾ ಮಂಗಳವಾಗುತ್ತದೆ’ ಎಂದು ಹೇಳಿ ಮುಗಿಸಿದನು.

ಕೃಪೆ; ಸಾಮಾಜಿಕ ಜಾಲತಾಣ ( ಲೇಖಕರ ಮಾಹಿತಿ ಲಭ್ಯವಾಗಿಲ್ಲ)

ರಾಜಕೀಯ

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ

"ನಾವು ಅವರ (ಧರ್ಮಸ್ಥಳ) ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ ಪರ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದಷ್ಟೇ ನಾವು ಹೇಳುತ್ತಿದ್ದೇವೆ": ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="113000"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ನೆರೆ ರಾಜ್ಯದಿಂದ ಅಕ್ರಮವಾಗಿ ಹೆಂಡ (Toddy) ಸಾಗಿಸುತ್ತಿದ್ದ ಮಹಿಳೆಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="112911"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!