Daily story| ಹರಿತಲೇಖನಿ ದಿನಕ್ಕೊಂದು ಕಥೆ: ಚದುರಂಗದಿಂದ ಚಕ್ರವರ್ತಿ

Daily story: ಒಂದು ದಟ್ಟ ಕಾಡು, ಆ ಕಾಡಿಗೆ ರಾಜ ಮೃಗರಾಜನಿದ್ದ. ಅವನ ಮಂತ್ರಿ ಹುಲಿ. ಕುದುರೆ, ಆನೆ, ಮೊಲ, ಜಿಂಕೆ ಉಳಿದ ಪ್ರಾಣಿಗಳು ಸೈನಿಕರಂತೆ ಇದ್ದರು.

‘ನಾ ಹೆಚ್ಚು, ನಾ ಹೆಚ್ಚು’ ಎನ್ನುವ ಭಾವನೆ ಎಲ್ಲರಲ್ಲಿಯೂ ಇತ್ತು. ಕಾಡಿನ ರಾಜ ಸಿಂಹನಿಗೆ ವಯಸ್ಸಾಯಿತು. ಅದು ಮುಂದಿನ ಉತ್ತರಾಧಿಕಾರಿಯ ಹುಡುಕಾಟದಲ್ಲಿತ್ತು. ಕುದುರೆಗಳ ಸಾಮರ್ಥ್ಯ, ಜಿಂಕೆ ಮೊಲಗಳ ಮುಗ್ಧತೆ ಕಾನನದ ಅಧಿಪತ್ಯದ ಗದ್ದುಗೆಯ ಆಸೆಯಿಂದ ಹಿಂದೆ ಸರಿಯಲು ಕಾರಣವಾದವು.

ಮಂತ್ರಿ ಹುಲಿರಾಯ ಬಹಳ ಆತುರದಿಂದ ತನ್ನಿಂದಲೇ ಸಿಂಹವು ರಾಜನಾಗಿರುವುದು ಎಂದು ಅಹಂಕಾರದಿಂದ ಮೆರೆಯುತ್ತಿತ್ತು.

ಆನೆ ತಾನೂ ಏಕೆ ಸುಮ್ಮನಿರಬೇಕು? ‘ನಾನು ಕೂಡಾ ನೇತೃತ್ವ ವಹಿಸಲಿಕ್ಕೆ ಸಿದ್ಧನಿದ್ದೇನೆ’ ಎಂದು ನಿರ್ಧರಿತು.

ಹೀಗೆ ಒಂದು ದಿನ ತನ್ನ ಅಭಿಲಾಷೆಯನ್ನು ಉಳಿದೆಲ್ಲಾ ಮುಗ್ಧ ಪ್ರಾಣಿಗಳ ಮುಂದೆ ವ್ಯಕ್ತಪಡಿಸಿದಾಗ ಅದಕ್ಕೆ ಒಪ್ಪಿಕೊಂಡು ಬೆಂಬಲಿಸಿದವು. ಮೃಗರಾಜನಿಗೆ ಹುಲಿಯ ಸ್ವಭಾವ ಗೊತ್ತಿತ್ತು. ಇದು ಕಾಡಿನ ಸಂಪ್ರದಾಯ ಉಳಿಸುವುದಿಲ್ಲ. ಅದು ಆನೆಗೆ ಪರೋಕ್ಷವಾಗಿ ಬೆಂಬಲಿಸುತ್ತಿತ್ತು.

ಒಂದು ದಿನ ಇನ್ನೊಂದು ಕಾಡಿನ ಸಿಂಹವು ಈ ಕಾಡನ್ನು ವಶಪಡಿಸಿಕೊಳ್ಳಲು ಹವಣಿಸಿತು. ಇವರ ಜೊತೆ ಮಲ್ಲಯುದ್ಧ. ಇತರೆ ದೈಹಿಕ ಯುದ್ಧದಲ್ಲಿ ಗೆಲ್ಲಲಿಕ್ಕೆ ಆಗುವುದಿಲ್ಲ. ಬುದ್ಧಿಯಿಂದ ಗೆಲ್ಲಬೇಕು ಎಂದು ಉಪಾಯ ಮಾಡಿತು.

ಅದು ಈ ಕಾಡಿಗೆ ಬಂದು ನಾಯಕ ಮೃಗರಾಜನಿಗೆ ಹೇಳುತ್ತಾ ‘ನಾವು ಒಂದು ಚದುರಂಗ ಸ್ಪರ್ಧೆಯನ್ನು ಏರ್ಪಡಿಸೋಣ. ಸೋತರೆ ನಾವು ನಿಮಗೆ ಶರಣಾಗುತ್ತೇವೆ. ಗೆದ್ದರೆ ನೀವು ನಮ್ಮ ಸೇವಕರಾಗಿ ಮುಂದುವರೆಯಬೇಕು’ ಎಂದು ಹೇಳಿತು. ಈ ಸವಾಲಿಗೆ ಒಪ್ಪಿ ಸಿಂಹವು ಕಾಡಿನ ಎಲ್ಲ ಪ್ರಾಣಿಗಳ ಸಭೆ ಕರೆದು ನೆರೆಯ ಕಾಡಿನ ರಾಜ ಹಾಕಿದ ಸವಾಲ್ ಬಗ್ಗೆ ವಿವರಿಸಿತು.

‘ಸುಮ್ಮನಿದ್ದರೆ ನಾವು ಹೇಡಿಗಳಾಗುತ್ತವೆ. ಹಾಗಾಗಿ ನಾವು ಒಗ್ಗಟ್ಟಾಗಿ ಅವರ ವಿರುದ್ಧ ಗೆಲ್ಲಬೇಕು’ ಎಂದು ಉಪದೇಶಿಸಿತು. ಎಲ್ಲ ಪಶುಗಳು ಸಮ್ಮತಿಸಿದರು.

ಸಭೆ ಮುಗಿದ ಬಳಿಕ ಸಿಂಹ, ಹುಲಿಯನ್ನು ಆಮಂತ್ರಿಸಿ ಸಲಹೆ ನೀಡುತ್ತಾ, ‘ನೀನು ಅಹಂಕಾರ ಬಿಟ್ಟು ಎಲ್ಲರೊಂದಿಗೆ ಒಗ್ಗಟ್ಟಾಗಿರಬೇಕು. ಒಗ್ಗಟ್ಟಾಗಿದ್ದರೆ ಸಂತೋಷ ಒಂಟಿಯಾಗಿದ್ದರೆ ಉಪವಾಸ. ನಾವು ಬಲಿಷ್ಠರಿದ್ದರೂ ಸಣ್ಣವರ ಸಹಾಯ ಬೇಕು. ಅಪಾಯ ಬಂದಾಗ ಹುಲ್ಲಕಡ್ಡಿ ಕೂಡಾ ಆಸರೆವಾಗುತ್ತದೆ’ ಎಂದು ಹಿತನುಡಿಗಳನ್ನು ಹೇಳಿತು. ಆದರೆ ಸಿಂಹದ ಉಪದೇಶದ ಮಾತುಗಳು ಅದರ ಅಹಂಭಾವ ಸ್ವಭಾವವನ್ನು ಬದಲಾಯಿಸಲಿಲ್ಲ. ‘ನಾನೇ ಶಕ್ತಿವಂತ. ನನ್ನಿಂದ ಎಲ್ಲವು ಸಾಧ್ಯ. ಯಾವುದೇ ಪ್ರಾಣಿಗಳಿಂದ ನನಗೆ ಸಹಾಯ ಬೇಕಿಲ್ಲ. ಸಣ್ಣವರ ಸಹಕಾರ ಇಷ್ಟಪಡಲ್ಲ. ಅವರ ಜೊತೆ ಸೇರುವುದಿಲ್ಲ’ ಎಂದಿತು.

ಎರಡು ಕಾಡಿನ ಪ್ರಾಣಿಗಳ ‘ಚದುರಂಗ ಸ್ಪರ್ಧೆ’ ಪ್ರಾರಂಭವಾಯಿತು. ಆನೆಗಳ ಗುಂಪು ತಮ್ಮ ತಂಡವೇ ಗೆಲ್ಲಬೇಕು. ಹುಲಿಗೆ ಬುದ್ದಿ ಕಲಿಸಬೇಕು. ಅದರ ಸಹಾಯವಿಲ್ಲದೆ ಗೆದ್ದು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿಬೇಕು ಎಂದು ಆತ್ಮವಿಶ್ವಾಸದಿಂದ ಆಡಲು ಪ್ರಾರಂಭಿಸಿದವು.

ಆ ಕಡೆ ಕಾಡಿನ ಗುಂಪಿನಲ್ಲಿಯೂ ಕೆಲವು ನ್ಯೂನ್ಯತೆಗಳಿದ್ದವು. ಆ ಕಡೆ ರಾಜ ಸಿಂಹನಿಗೆ ನಾವು ಈ ಕಾಡನ್ನು ವಶಪಡಿಸಿಕೊಳ್ಳುತ್ತೇವೆ ಎಂಬ ಆತ್ಮವಿಶ್ವಾಸವಿತ್ತು. ಆದರೆ ಮಂತ್ರಿ ಇತರೆ ಎಲ್ಲ ಸದಸ್ಯರಿಗೆ ನಿರ್ದಿಷ್ಟವಾದ ಗುರಿ ಹಾಗೂ ಛಲವಿರಲಿಲ್ಲ. ನಾಯಕನ ಸರ್ವಾಧಿಕಾರಿ ಧೋರಣೆ ಇಷ್ಟ ಆಗುತ್ತಿರಲಿಲ್ಲ. ಹೀಗೆ ದೃಢ ನಿರ್ಧಾರವಿಲ್ಲದೆ ನಾಯಕನ ಒತ್ತಾಯಕ್ಕೆ ಮಣಿದು ಆಡಲು ಬಂದಿದ್ದವು.

ಆಟ ಪ್ರಾರಂಭವಾಯಿತು. ಆ ಕಡೆಯಿಂದ ಈ ಕಡೆಗೆ ಒಂದೊಂದೇ ಪ್ರಾಣಿಗಳು ಚಲನೆಯಾಗಿ ಎರಡು ಕಡೆ ಕೆಲವು ಮುಗ್ಧ ಪ್ರಾಣಿಗಳು ಆಹುತಿಯಾದವು. ಆಟ ರೋಚಕ ಹಂತದಲ್ಲಿತ್ತು. ಈ ಕಡೆಯ ಹುಲಿರಾಯ ಆತುರ ಸ್ವಭಾವದವ. ‘ನಾನೇ ಗೆಲ್ಲಬೇಕು. ನನ್ನಿಂದಲೇ ಜಯಿಸಬೇಕು’ ಎಂಬ ಅತಿಯಾದ ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿತ್ತು. ಆನೆಗಳು ಗಾಬರಿಯಾದವು. ಮತ್ತೆ ಆ ಹುಲಿ ಈ ಕುದುರೆ, ಮೊಲ, ಜಿಂಕೆಗಳನ್ನು ತಿಂದಿತು. ಕೇವಲ ಎರಡು ಆನೆಗಳು ಕೆಲವೇ ಕೆಲವು ಮುಗ್ಧ ಪ್ರಾಣಿಗಳು ಉಳಿದವು.

ಈ ಕಡೆ ಗುಂಪಿನ ಸದಸ್ಯರಿಗೆ ಬೆವರು ಇಳಿಯಿತು. ನಾಯಕ ಸಿಂಹವು ಆನೆಗಳಿಗೆ ‘ಬಹಳ ಜಾಗರೂಕವಾಗಿರಬೇಕು. ನೀವೇ ನಮ್ಮ ಗೌರವವನ್ನು ಕಾಪಾಡಬೇಕು. ಅವಸರ ಮಾಡಬೇಡಿರಿ. ಜಾಣ್ಣೆಯಿಂದ ಆಟ ಮುಂದುವರೆಸಿ’ ಎಂದು ಸಮಾಧಾನವನ್ನು ಹೇಳಿತು. ಅವು ಸ್ಥಿರ ಮನಸ್ಸಿನಿಂದ ಆಟ ಮುಂದುವರೆಸಿದವು.

ಅವಸರದಿಂದ ಓಡುತ್ತಿದ್ದ ವಿರೋಧಿ ಹುಲಿಯನ್ನು ಎರಡು ಆನೆಗಳು ಎರಡು ಕಡೆಯಿಂದ ಮುತ್ತಿಗೆ ಹಾಕಿ ಕೊಂದವು. ಜಾಣತನದಿಂದ ಒಂದೊಂದು ಪ್ರಾಣಿಗಳನ್ನು ಬಲಿ ತೆಗೆದುಕೊಳ್ಳುತ್ತಾ ವಿರೋಧಿ ಆನೆಗಳನ್ನು ಖೆಡ್ಡಾದಲ್ಲಿ ಕೆಡವಿ ಕೊನೆಗೆ ರಾಜನಾದ ಸಿಂಹವನ್ನು ಮುತ್ತಿಗೆ ಹಾಕಿದ್ದರಿಂದ ಬೆದರಿ ತಮ್ಮ ಸೋಲನ್ನು ಒಪ್ಪಿ ಶರಣಾದವು.

ಆತ್ಮವಿಶ್ವಾಸದಿಂದ ಆನೆಗಳು ತಮ್ಮ ರಾಜ್ಯವನ್ನು ವಿಸ್ತರಿಸಿ ರಾಜನ ಗೌರವ ಇಮ್ಮಡಿಗೊಳಿಸಿದವು. ಹುಲಿಗೆ ಬುದ್ದಿ ಕಲಿಸಿದವು. ಕೊನೆಗೆ ಬುದ್ದಿ ಬಂದ ಹುಲಿ ತನ್ನಲ್ಲಿರುವ ಅಹಂಕಾರವನ್ನು ತೆಗೆದುಹಾಕಿ ಕಾಡಿನಲ್ಲಿ ಎಲ್ಲರೊಂದಿಗೆ ಸಂತೋಷದಿಂದ ಬಾಳ ತೊಡಗಿತು.

ಕೃಪೆ: ಸಾಮಾಜಿಕ ಜಾಲತಾಣ (ಲೇಖಕರ ಮಾಹಿತಿ ಲಭ್ಯವಾಗಿಲ್ಲ)

ರಾಜಕೀಯ

ಅತಿ ಶೀಘ್ರವೇ ಕರ್ನಾಟಕ ಸೇರಿ ಹಲವು ರಾಜ್ಯಾಧ್ಯಕ್ಷರ ಘೋಷಣೆ: ಬಿ.ವೈ.ವಿಜಯೇಂದ್ರ

ಅತಿ ಶೀಘ್ರವೇ ಕರ್ನಾಟಕ ಸೇರಿ ಹಲವು ರಾಜ್ಯಾಧ್ಯಕ್ಷರ ಘೋಷಣೆ: ಬಿ.ವೈ.ವಿಜಯೇಂದ್ರ

ಅತಿ ಶೀಘ್ರವೇ ಕರ್ನಾಟಕವೂ ಒಳಗೊಂಡಂತೆ ಹಲವು ರಾಜ್ಯಾಧ್ಯಕ್ಷರ ಹೆಸರು ಘೋಷಣೆ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B.Y.Vijayendra) ತಿಳಿಸಿದ್ದಾರೆ

[ccc_my_favorite_select_button post_id="109998"]
ಅವರದ್ ಬಿಡ್ರೀ.. ನೀವ್ ಸಿಎಂ ಆಗಿದ್ದಾಗ ವರದಿಗಳನ್ನು ಏನ್ ಮಾಡ್ದೇ ಹೇಳು; ಹೆಚ್‌ಡಿಕೆಗೆ ಹೆಚ್.ಕೆ.ಪಾಟೀಲ್ ತಿರುಗೇಟು

ಅವರದ್ ಬಿಡ್ರೀ.. ನೀವ್ ಸಿಎಂ ಆಗಿದ್ದಾಗ ವರದಿಗಳನ್ನು ಏನ್ ಮಾಡ್ದೇ ಹೇಳು; ಹೆಚ್‌ಡಿಕೆಗೆ

ಈಗ ಅಕ್ರಮ ಗಣಿಗಾರಿಕೆ ಪತ್ರದ ಮಾತಾಡುವ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅಭಿಷೇಕ ಮಾಡಿಕೊಂಡು ಕುಳಿತಿದ್ರಾ; ಸಚಿವ ಹೆಚ್.ಕೆ.ಪಾಟೀಲ್ (H.K.Patil)

[ccc_my_favorite_select_button post_id="109884"]
ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ವಿಶ್ವದ ಬೇರೆ ಬೇರೆ ದೇಶಗಳಿಗೆ ಹೊಲಿಕೆ ಮಾಡಿದಾಗ ಭಾರತವು ಹೇರಳವಾದ ಮಾನವ ಸಂಪನ್ಮೂಲ ಹೊಂದಿದೆ ಸಚಿವ ಪ್ರಲ್ಹಾದ ಜೋಶಿ (Pralhad Joshi)

[ccc_my_favorite_select_button post_id="108459"]
ಲಾಸ್ ಏಂಜಲೀಸ್‌ ಧಗಧಗ..!| Video ನೋಡಿ

ಲಾಸ್ ಏಂಜಲೀಸ್‌ ಧಗಧಗ..!| Video ನೋಡಿ

ಪ್ರಸ್ತುತ ವರದಿ ಪ್ರಕಾರ, ಡೊನಾಲ್ಡ್ ಟ್ರಂಪ್ ಅವರ ಐಸಿಇ ದಾಳಿಗಳನ್ನು ಧಿಕ್ಕರಿಸಿ ಲಾಸ್ ಏಂಜಲೀಸ್‌ನಲ್ಲಿ ದೊಡ್ಡಮಟ್ಟದದಲ್ಲಿ ಶಾಂತಿಯುತ ಪ್ರತಿಭಟನೆ Los Angeles

[ccc_my_favorite_select_button post_id="108829"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ಲೈವ್ ಬೆತ್ತಲೆ ವಿಡಿಯೋ ಬ್ಯುಸಿನೆಸ್.. ದಂಪತಿಗಳು ಪೊಲೀಸರ ಅತಿಥಿ

ಲೈವ್ ಬೆತ್ತಲೆ ವಿಡಿಯೋ ಬ್ಯುಸಿನೆಸ್.. ದಂಪತಿಗಳು ಪೊಲೀಸರ ಅತಿಥಿ

HD ಕ್ಯಾಮೆರಾಗಳೊಂದಿಗೆ ದಂಪತಿಗಳು ಲೈವ್ ಬೆತ್ತಲೆ ವಿಡಿಯೋ (Live nude video) ವ್ಯವಹಾರ ನಡೆಸಿ ಪೊಲೀಸರ ಅತಿಥಿಯಾಗಿದ್ದಾರೆ.

[ccc_my_favorite_select_button post_id="109995"]
ಬೆಂ.ಗ್ರಾ.ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಿಂದ 297 ಸಾವು..! ಜಿಲ್ಲಾಧಿಕಾರಿ ಕಳವಳ

ಬೆಂ.ಗ್ರಾ.ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಿಂದ 297 ಸಾವು..! ಜಿಲ್ಲಾಧಿಕಾರಿ ಕಳವಳ

ಬೆಂ.ಗ್ರಾ.ಜಿಲ್ಲೆ: ಜಿಲ್ಲೆಯಲ್ಲಿ ದಿನೇ ದಿನೇ ರಸ್ತೆ ಅಪಘಾತಗಳು ಹೆಚ್ಚುತ್ತಲೇ ಇವೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದೆ; ಜಿಲ್ಲಾಧಿಕಾರಿ ಎ.ಬಿ ಬಸವರಾಜು (Deputy Commissioner A.B. Basavaraju)

[ccc_my_favorite_select_button post_id="109939"]

ಆರೋಗ್ಯ

ಸಿನಿಮಾ

CET ಫಲಿತಾಂಶ ಪ್ರಕಟ| ಫಲಿತಾಂಶ ನೋಡಲು ಲಿಂಕ್ ಇಲ್ಲಿದೆ

CET ಫಲಿತಾಂಶ ಪ್ರಕಟ| ಫಲಿತಾಂಶ ನೋಡಲು ಲಿಂಕ್ ಇಲ್ಲಿದೆ

ವಿದ್ಯಾರ್ಥಿಗಳು ಸಾಕಷ್ಟು ಕಾತರದಿಂದ ಕಾಯುತ್ತಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2025ರ (CET) ಫಲಿತಾಂಶ ಪ್ರಕಟಗೊಂಡಿದೆ.

[ccc_my_favorite_select_button post_id="107812"]