Daily Story| ಹರಿತಲೇಖನಿ ದಿನಕ್ಕೊಂದು ಕಥೆ: ಕದ್ದ ವಸ್ತುವಿನ ಖರೀದಿ..!

Daily Story: ರಾಮುನ ಮುಖ ಸಣ್ಣದಾಗಿತ್ತು. ಆತ ತನ್ನ ಹೊಸ ಪೆನ್ನನ್ನು ‘ಕಳೆದುಕೊಂಡಿದ್ದ. ತನ್ನ ಚೀಲದಲ್ಲಿರುವ ಪುಸ್ತಕಗಳನ್ನೆಲ್ಲ ಹೊರಗೆ ತೆಗೆದು ನೋಡಿದ. ಶಾಲೆಯ ಕೋಣೆಯಲ್ಲೆಲ್ಲ ಸುತ್ತಾಡಿ ಹುಡುಕಿದ. ಎಲ್ಲೂ ಪೆನ್ನು ಕಾಣಿಸಲೇ ಇಲ್ಲ.

ರಾಮು ತನ್ನ ತಂದೆಯನ್ನು ಕಾಡಿ-ಬೇಡಿ ಪಡೆದ ಪ್ರೀತಿಯ ಪೆನ್ನು ಅದು. ಅದು ಎಲ್ಲೂ ಕಳೆಯಬಾರದು. ಬಹಳ ದಿನ ತನ್ನಲ್ಲೇ ಇರಬೇಕು ಎಂದೆಲ್ಲ ಯೋಚಿಸಿದ್ದ. ಆ ಬಗ್ಗೆ ತುಂಬ ಕಾಳಜಿಯನ್ನು ತೆಗೆದುಕೊಂಡಿದ್ದ. ಆದರೂ ಅದು ಕಳೆದು ಹೋಗಿತ್ತು.

ಮರುದಿನ ಶಾಲೆಗೆ ಬಂದಾಗಲೂ ಅದೇ ವಿಚಾರ ರಾಮುನನ್ನು ಕಾಡುತ್ತಿತ್ತು. ಅದೇ ವರ್ಗದ ಭೀಮುವಿನ ಕಿಸೆಯಲ್ಲಿ ತನ್ನಂತಹುದೇ ಒಂದು ಪೆನ್ನು ಇದ್ದದ್ದು ಕಂಡಿತು. ಕೂಡಲೇ ಭೀಮುವಿನ ಬಳಿ ಹೋಗಿ, ಆತನ ಕಿಸೆಯಿಂದ ಆ ಪೆನ್ನನ್ನು ಕಿತ್ತುಕೊಂಡ. ಹೌದು. ಅದು ತನ್ನದೇ ಪೆನ್ನು, ಹಾಗೆಂದು ಭೀಮುವಿಗೆ ಹೇಳಿಯೂ ಬಿಟ್ಟ.

ಭೀಮು ರಾಮುನ ಮಾತಿಗೆ ಒಪ್ಪಲಿಲ್ಲ. ‘ಅದು ನಿನ್ನದೇ ಎಂದು ಹೇಗೆ ಹೇಳುತ್ತಿ? ನಿನ್ನಂತಹ ಬೆನ್ನು ಬೇರೆಯವರಲ್ಲಿ ಇರಬಾರದೇನು?’ ಎಂದು ಕೇಳಿದ. ಅದಕ್ಕೆ ರಾಮು, ‘ಇದು ನನ್ನದೇ ಪೆನ್ನು. ಇದರ ಮುಚ್ಚಳದ ಮೇಲೆ ರಾಮು ಎಂದು ಬರೆದಿರುವೆ ನೋಡು’ ಎಂದು ತೋರಿಸಿದ.

‘ನಾನು ನಿನ್ನೆ ರವಿಯಿಂದ ಹಣ ಕೊಟ್ಟು ಇದನ್ನು ಕೊಂಡಿದ್ದೇನೆ. ನನಗೇನೂ ಬೇರೆಯವರ ಪೆನ್ನು ಕದಿಯುವ ಬುದ್ದಿ ಇಲ್ಲ.’ ಎಂದು ಭೀಮು ತನ್ನನ್ನು ಸಮರ್ಥಿಸಿಕೊಂಡ.

ಇಬ್ಬರೂ ನ್ಯಾಯಕ್ಕಾಗಿ ಮುಖ್ಯೋಪಾಧ್ಯಾಯರ ಬಳಿ ಹೋದರು. ಅವರು ಇಬ್ಬರ ಮಾತನ್ನು ಸಮಾಧಾನದಿಂದ ಕೇಳಿದರು. ಆಮೇಲೆ ‘ಭೀಮು ನೀನು ಈ ಪೆನ್ನನ್ನು ರವಿಯ ಬಳಿ ಯಾಕೆ ಕೊಂಡುಕೊಂಡೆ?’ ಎಂದು ಕೇಳಿದರು.

ಭೀಮು: ‘ನನಗೆ ಒಂದು ಪೆನ್ನು ಬೇಕಾಗಿತ್ತು. ರವಿ ಇದನ್ನು ಮಾರುತ್ತೇನೆ ಎಂದ. ನಾನು ಕೊಂಡುಕೊಂಡೆ.’

ಮುಖ್ಯೋಪಾಧ್ಯಾಯ: ಇದಕ್ಕೆ ಎಷ್ಟು ಹಣ ಕೊಟ್ಟೆ?

ಭೀಮು: ‘ಐದು ರೂಪಾಯಿ’

ಮುಖ್ಯೋಪಾಧ್ಯಾಯ: ‘ಅದು ಅಂಗಡಿಯಲ್ಲಿ ಸಿಗುತ್ತಿರಲ್ಲಿಲ್ಲವೇ?’

ಭೀಮು: ‘ಅಂಗಡಿಯಲ್ಲಿ ಇದರ ಬೆಲೆ ಹತ್ತು ರೂಪಾಯಿ’

ಮುಖ್ಯೋಪಾಧ್ಯಾಯ: ‘ಅಂದರೆ ಇದು ನಿನಗೆ ಅರ್ಧ ಬೆಲೆಯಲ್ಲಿ ಸಿಕ್ಕಂತಾಯಿತು!’

ಭೀಮು: ‘ಹೌದು ಸರ್’

ಮುಖ್ಯೋಪಾಧ್ಯಾಯ: ‘ಹಾಗಾದರೆ ರವಿ ಕಳ್ಳತನದಲ್ಲಿ ನೀನು ಪಾಲುದಾರ? ಪೂರ್ಣ ಬೆಲೆ ಕೊಟ್ಟ ರಾಮುಗೆ ಅದನ್ನು ಕೊಡು. ಕಳ್ಳತನ ಮಾಡಿದ ರವಿ ಮೊದಲ ಅಪರಾಧಿ. ಅದು ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಖರೀದಿಸಿದ ನೀನು ಎರಡನೇಯ ಅಪರಾಧಿ. ಇಬ್ಬರೂ ಕಳ್ಳರೇ, ಕಾರಣ ಇಬ್ಬರೂ ದಂಡ ಕೊಡಬೇಕು.’ ಎಂದು ತೀರ್ಪಿತ್ತರು.

ಕೃಪೆ: ಸಾಮಾಜಿಕ ಜಾಲತಾಣ (ಲೇಖಕರ ಮಾಹಿತಿ ಲಭ್ಯವಿಲ್ಲ)

ರಾಜಕೀಯ

ದೊಡ್ಡಬಳ್ಳಾಪುರ TAPMCS ಚುನಾವಣೆ: ತಾಲ್ಲೂಕಿನಾಧ್ಯಂತ ಬಿರುಸಿನ ಪ್ರಚಾರ

ದೊಡ್ಡಬಳ್ಳಾಪುರ TAPMCS ಚುನಾವಣೆ: ತಾಲ್ಲೂಕಿನಾಧ್ಯಂತ ಬಿರುಸಿನ ಪ್ರಚಾರ

ನವೆಂಬರ್ 2 ರಂದು ನಡೆಯಲಿರುವ ದೊಡ್ಡಬಳ್ಳಾಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (TAPMCS) ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ.

[ccc_my_favorite_select_button post_id="115546"]
ಕರ್ನಾಟಕ ಪೊಲೀಸರಿಗೆ ನೂತನ ಕ್ಯಾಪ್..!

ಕರ್ನಾಟಕ ಪೊಲೀಸರಿಗೆ ನೂತನ ಕ್ಯಾಪ್..!

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಆಯೋಜಿಸಿದ್ದ ಪೊಲೀಸ್ ಸಿಬ್ಬಂದಿಯ ನೂತನ ಪೀಕ್ ಕ್ಯಾಚ್ ವಿತರಣೆ: Cmsiddaramaiah, D.K.Shivakumar

[ccc_my_favorite_select_button post_id="115427"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಗುಡ್ಮಾರ್ನಿಂಗ್ ನ್ಯೂಸ್: ಆಸ್ಟ್ರೇಲಿಯಾಗೆ ಮುಖಭಂಗ.. ಫೈನಲ್‌ಗೆ ಇಂಡಿಯಾ

ಗುಡ್ಮಾರ್ನಿಂಗ್ ನ್ಯೂಸ್: ಆಸ್ಟ್ರೇಲಿಯಾಗೆ ಮುಖಭಂಗ.. ಫೈನಲ್‌ಗೆ ಇಂಡಿಯಾ

ಭಾರತ (India) ತಂಡವು ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ (Women's ODI World Cup tournament) ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ (Australia) ವಿರುದ್ಧ 5 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ.

[ccc_my_favorite_select_button post_id="115495"]
ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ಕಳೆದ ತಿಂಗಳ ಕೊನೆಯ ದಿನ ನಡೆದಿದ್ದ ತಾಲೂಕಿನ ಪ್ರಸಿದ್ಧ ಗುಟ್ಟೆ ಶ್ರೀ ಲಕ್ಷೀನರಸಿಂಹ ಸ್ವಾಮಿ (Gutte Lakshmi Narasimhaswamy Temple) ದೇವಾಲಯದಲ್ಲಿ ಕಳ್ಳತನ (Theft) ಪ್ರಕರಣ ಮತ್ತೆ ಮುಂದುವರಿದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

[ccc_my_favorite_select_button post_id="115220"]
ದೊಡ್ಡಬಳ್ಳಾಪುರ: ಅಪಘಾತ ನ್ಯೂಸ್ ಅಪ್ಡೇಟ್.. ಬಾಲಕ ದುರ್ಮರಣ

ದೊಡ್ಡಬಳ್ಳಾಪುರ: ಅಪಘಾತ ನ್ಯೂಸ್ ಅಪ್ಡೇಟ್.. ಬಾಲಕ ದುರ್ಮರಣ

ದೊಡ್ಡಬಳ್ಳಾಪುರ ನಗರದ ಎಪಿಎಂಸಿ ಸಮೀಪದ ಹಾಲು ಶಿಥಲೀಕರಣ ಘಟಕದ ಬಳಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿ (Accident), ಸುಮಾರು 11 ವರ್ಷದ ಬಾಲಕ ಸಾವನಪ್ಪಿರುವ ದಾರುಣ ಘಟನೆ ನಡೆದಿದೆ.

[ccc_my_favorite_select_button post_id="115509"]

ಆರೋಗ್ಯ

ಸಿನಿಮಾ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಕನ್ನಡ ಚಿತ್ರರಂಗ ಸಮೃದ್ಧವಾಗಿ ಬೆಳೆಯಬೇಕಾದರೆ ನಾಯಕ ನಟರು ಹೆಚ್ಚು ಸಿನಿಮಾಗಳನ್ನು ಮಾಡಬೇಕು ಹಾಗೂ ಹೆಚ್ಚು ನಾಯಕ ನಟರು ಚಿತ್ರರಂಗಕ್ಕೆ ಬರಬೇಕು ಎಂದು ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.

[ccc_my_favorite_select_button post_id="115245"]
error: Content is protected !!