Daily story: ಹರಿತಲೇಖನಿ ದಿನಕ್ಕೊಂದು ಕಥೆ: ಶಕುನಿ ಗುಣವಂತನೇ..?

Daily story: ಮಹಾಭಾರತದಲ್ಲಿನ ಅತ್ಯಂತ ಕುತೂಹಲಕಾರಿ ಪಾತ್ರಗಳಲ್ಲಿ ‘ಶಕುನಿ’ ಪಾತ್ರ ಕೂಡ ಒಂದು. ಇಂದಿಗೂ ಕೂಡ ಜನರು ಶಕುನಿಯನ್ನು ದೂಷಿಸುತ್ತಾರೆ.

ಸೇಡು ತೀರಿಸಿಕೊಳ್ಳುವ ಮನೋಭಾವದವರನ್ನು, ಮೋಸ ಮಾಡುವ ಮನೋಭಾವದವರನ್ನು, ಕುತಂತ್ರ ಬುದ್ಧಿಯುಳ್ಳವರನ್ನು ನೋಡಿದಾಗಲೆಲ್ಲಾ ಅವರನ್ನು ಆಡು ಮಾತಿನಲ್ಲಿ ಅವನೊಬ್ಬ ಶಕುನಿಯೆಂದು ಹೇಳುವುದುಂಟು.

ಹಾಗಾದರೆ ಮಹಾಭಾರತದಲ್ಲಿನ ಶಕುನಿ ಅಷ್ಟೊಂದು ಕೆಡುಕನೇ..? ಶಕುನಿ ಗುಣವಂತನೇ..? ಅಥವಾ ಕೆಟ್ಟವನೇ..? ಇಲ್ಲಿದೆ ಶಕುನಿಯ ಕುರಿತಿರುವ ಆಸಕ್ತಿದಾಯಕ ಸಂಗತಿಗಳು.

ಶಕುನಿಯು ಗಾಂಧಾರ ರಾಜ ಸುಬಲನ ಪುತ್ರನಾಗಿದ್ದನು. ರಾಜ ಸುಬಲನಿಗೆ 100 ಗಂಡು ಮಕ್ಕಳು ಮತ್ತು ಒಬ್ಬಳೇ ಪುತ್ರಿಯಿದ್ದಳು. ಶಕುನಿ ಗಾಂಧಾರ ಕುಲದ ಕೊನೆಯ ಮಗನಾಗಿದ್ದರೆ, ಗಾಂಧಾರಿಯು ಗಾಂಧಾರ ಕುಲದ ಏಕೈಕ ಮಗಳಾಗಿದ್ದಳು.

ಶಕುನಿ ಸುಬಲ ರಾಜನ ಕೊನೆಯ ಮಗನಾಗಿದ್ದರೂ ಈತ ಉಳಿದೆಲ್ಲಾ ಸಹೋದರರಿಗಿಂತಲೂ ಅತ್ಯಂತ ಬುದ್ಧಿವಂತನಾಗಿದ್ದನು. ಈತ ಸುಬಲ ರಾಜನ ಕಿರಿಯ ಪುತ್ರನಾಗಿದ್ದರಿಂದ ಈತನನ್ನು ಸೌಬಲ ಎಂದು ಕರೆಯಲಾಗುತ್ತಿತ್ತು.

ಶಕುನಿಯು ಕೊನೆಯ ಮಗನಾಗಿದ್ದನು. ಈತ ಈಗಾಗಲೇ ಹೇಳಿರುವಂತೆ ಮಹಾನ್‌ ಬುದ್ಧಿವಂತನಾಗಿದ್ದ ಹಾಗೂ ಮಾಸ್ಟರ್‌ ಮೈಂಡ್‌ ಹೊಂದಿದವನಾಗಿದ್ದನು. ಸುಬಲ ರಾಜನ 100 ನೇ ಮಗನೇ ಈ ಶಕುನಿ. ಈತನ ಸೋದರಳಿಯರೆಂದರೆ 100 ಜನ ಕೌರವರು.

ಶಕುನಿಗೆ ಭೀಷ್ಮನನ್ನು ನೋಡಿದರೆ ಎಲ್ಲಿಲ್ಲದ ಕೋಪವಿತ್ತು. ಯಾವಾಗಲೂ ಕೂಡ ಶಕುನಿ ಭೀಷ್ಮನ ವಿರುದ್ಧ ಸಂಚು ಸಾರುತ್ತಿದ್ದ. ಇದಕ್ಕೆ ಮುಖ್ಯ ಕಾರಣವೇನು ಗೊತ್ತಾ..? ಭೀಷ್ಮನು ಶಕುನಿಯ ಸಹೋದರಿಯಾದ ಗಾಂಧಾರಿಯು ಅಂಧ ಅಥವಾ ಕುರುಡ ಧೃತರಾಷ್ಟ್ರನನ್ನು ವಿವಾಹವಾಗುತ್ತಾನೆ ಮಾಡುತ್ತಾನೆ. ಆದ್ದರಿಂದ ಶಕುನಿಗೆ ಭೀಷ್ಮನ ಮೇಲೆ ಅಗಾಧವಾದ ಕೋಪವಿತ್ತು. ಶಕುನಿಗೆ ಪಾಂಡವರ ಮೇಲೆ ಯಾವುದೇ ಕೋಪವಿರುವುದಿಲ್ಲ. ಆದರೆ ಭೀಷ್ಮ ಪಿತಾಮಹನ ಸಂಪೂರ್ಣ ಕುಟುಂಬವನ್ನು ನಾಶ ಮಾಡುವ ಸೇಡನ್ನು ಹೊಂದಿದ್ದನು.

ಶಕುನಿಯು ಹೆಚ್ಚಾಗಿ ಹಸ್ತಿನಾಪುರದಲ್ಲೇ ತನ್ನ ದಿನಗಳನ್ನು ಕಳೆದಿರುವುದರಿಂದ ಆತನು ತನ್ನ ಕುಟುಂಬಕ್ಕೆ ಅಷ್ಟೊಂದು ಒತ್ತು ನೀಡಿರಲಿಲ್ಲ. ಆದರೆ ಶಕುನಿಗೆ ಉಲುಕ ಮತ್ತು ವೃಕಾಸುರ ಎನ್ನುವ ಇಬ್ಬರು ಗಂಡು ಮಕ್ಕಳಿದ್ದರು ಎಂದು ಹೇಳಲಾಗುತ್ತದೆ.

ಶಕುನಿಯ ಮಗನಾದ ಉಲೂಕ್‌ ಅಥವಾ ಉಲುಕನು ಪಾಂಡವರು ತಮ್ಮ ಅಜ್ಞಾತವಾಸವನ್ನು ಕಳೆದು ಹಿಂದಿರುಗುವುದರೊಳಗೆ ತನ್ನ ತಂದೆಯಾದ ಶಕುನಿಯನ್ನು ಪುನಃ ಗಾಂಧಾರಕ್ಕೆ ಕರೆದೊಯ್ಯಲು ಬಯಸಿದ್ದನು. ಆದರೆ ಶಕುನಿಯು ಇದಕ್ಕೆ ಒಪ್ಪದೇ ತಾನು ಕುರುಕ್ಷೇತ್ರವನ್ನು ಇಲ್ಲಿಯೇ ಕುಳಿತು ನೋಡಬೇಕೆಂದು ಬಯಸಿ ಹಸ್ತಿನಾಪುರದಲ್ಲೇ ಉಳಿದುಕೊಳ್ಳುತ್ತಾನೆ.

ಪಗಡೆಯಾಟ ಅಥವಾ ಜೂಜಿನಾಟವು ಮಹಾಭಾರತದ ಹಲವು ಪ್ರಮುಖ ಅಧ್ಯಾಯಗಳಲ್ಲಿ ಇದು ಕೂಡ ಒಂದಾಗಿತ್ತು. ಮಹಾಭಾರತದಲ್ಲಿ ಶಕುನಿ ಮಾತ್ರವಲ್ಲದೆ, ಆತನು ಜೂಜಿನಾಟದಲ್ಲಿ ಬಳಸುತ್ತಿದ್ದ ಮಾಂತ್ರಿಕ ದಾಳಗಳು ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸಿದೆ.

ಶಕುನಿ ಬಳಸುತ್ತಿದ್ದ ದಾಳವು ಆತನ ತಂದೆಯ ಮರಣದ ನಂತರ ಕಾಲಿನ ಹಿಂಭಾಗದ ಅಥವಾ ತೊಡೆಯ ಮೂಲೆಯಿಂದ ಮಾಡಲ್ಪಟ್ಟಿದೆ ಎಂಬ ಕಥೆಯಿದೆ. ಆದರೆ ವಾಸ್ತವದಲ್ಲಿ ಶಕುನಿಯ ದಾಳಗಳು ದಂತಗಳಿಂದ ಮಾಡಲ್ಪಟ್ಟಿದ್ದು, ಶಕುನಿಯು ಮಾಯಾವಾದಿಯಾಗಿದ್ದರಿಂದ ಈತನ ದಾಳಗಳು ಕೂಡ ಮಾಯದ ದಾಳಗಳು ಎಂದು ಹೇಳಲಾಗುತ್ತದೆ.

ವೇದವ್ಯಾಸರು ಯುದ್ಧದಲ್ಲಿ ಮೌನಿಯಾಗಿರಲು ಇಚ್ಛಿಸಿದವರು. ವಾಸ್ತವವಾಗಿ ದಾಳಗಳು ಮೂಳೆಯಿಂದ ಮಾಡಲ್ಪಟ್ಟಿದೆ ಎನ್ನುವುದಕ್ಕೆ ಯಾವುದೇ ಸುಳಿವು ಇಲ್ಲದಿರುವ ಕಾರಣ ಅದು ದಂತದಿಂದ ಮಾಡಲ್ಪಟ್ಟ ದಾಳವಾಗಿರಬಹುದೆಂದು ವೇದವ್ಯಾಸರು ಹೇಳುತ್ತಾರೆ. ಈ ದಾಳವನ್ನು ಉಪಯೋಗಿಸುವ ಕಲೆ ಕೇವಲ ಶಕುನಿಗೆ ಮಾತ್ರ ತಿಳಿದಿತ್ತೆಂದು ಕೂಡ ಅವರು ಹೇಳುತ್ತಾರೆ.

ಕೃಪೆ: ಸಾಮಾಜಿಕ ಜಾಲತಾಣ

ರಾಜಕೀಯ

ಭವಿಷ್ಯ ನುಡಿಯೋಕೆ ಅವರ‍್ಯಾರು, ಜ್ಯೋತಿಷಿನಾ? – ಡಿ.ಕೆ. ಶಿವಕುಮಾರ್ ವಿರುದ್ಧ ನಿಖಿಲ್‌ ಕುಮಾರಸ್ವಾಮಿ ಕಿಡಿ

ಭವಿಷ್ಯ ನುಡಿಯೋಕೆ ಅವರ‍್ಯಾರು, ಜ್ಯೋತಿಷಿನಾ? – ಡಿ.ಕೆ. ಶಿವಕುಮಾರ್ ವಿರುದ್ಧ ನಿಖಿಲ್‌ ಕುಮಾರಸ್ವಾಮಿ

ಖಾತಾ ಪರಿವರ್ತನೆ ಹೆಸರಿನಲ್ಲಿ ರಾಜ್ಯ ಸರ್ಕಾರ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಸರ್ಕಾರದ ಬಳಿ ಗುಂಡಿ ಮುಚ್ಚಲು ಹಣವಿಲ್ಲ, ಹಗಲು ದರೋಡೆ ದಂಧೆ ಮಾಡ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ (Nikhil

[ccc_my_favorite_select_button post_id="115363"]
ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ. ಹೀಗಾಗಿ ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಅವರು ಸ್ಪಷ್ಟ ಎಚ್ಚರಿಕೆ ನೀಡಿದರು.

[ccc_my_favorite_select_button post_id="114725"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ನಿಸರ್ಗ ಯೋಗ ಕೇಂದ್ರದ ಹಾಗೂ ರಾಜ್ಯ ಬಾಲಕರ ಯೋಗ ತಂಡದ ನಾಯಕ ವಿ.ವರ ಪ್ರಸಾದ್ (V. Vara Prasad) 50ನೇ ಗೋಲ್ಡನ್‌ ಜುಬ್ಲಿ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ (Yoga Championship) ನಲ್ಲಿ ಭಾಗವಹಿಸಿ ಚಿನ್ನದ

[ccc_my_favorite_select_button post_id="114944"]
ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ಕಳೆದ ತಿಂಗಳ ಕೊನೆಯ ದಿನ ನಡೆದಿದ್ದ ತಾಲೂಕಿನ ಪ್ರಸಿದ್ಧ ಗುಟ್ಟೆ ಶ್ರೀ ಲಕ್ಷೀನರಸಿಂಹ ಸ್ವಾಮಿ (Gutte Lakshmi Narasimhaswamy Temple) ದೇವಾಲಯದಲ್ಲಿ ಕಳ್ಳತನ (Theft) ಪ್ರಕರಣ ಮತ್ತೆ ಮುಂದುವರಿದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

[ccc_my_favorite_select_button post_id="115220"]
ಕಾರು ಮತ್ತು ಬೊಲೆರೋ ನಡುವೆ ಭೀಕರ ಅಪಘಾತ.. ತಪ್ಪಿದ ಭಾರಿ ಅನಾಹುತ.!

ಕಾರು ಮತ್ತು ಬೊಲೆರೋ ನಡುವೆ ಭೀಕರ ಅಪಘಾತ.. ತಪ್ಪಿದ ಭಾರಿ ಅನಾಹುತ.!

ಕಾರು ಮತ್ತು ಬೊಲೆರೋ ವಾಹನದ ನಡುವೆ ಭೀಕರ ಅಪಘಾತ (Accident) ಉಂಟಾಗಿದ್ದು, ಅದೃಷ್ಟವಶಾತ್ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 44 ರ

[ccc_my_favorite_select_button post_id="115379"]

ಆರೋಗ್ಯ

ಸಿನಿಮಾ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಕನ್ನಡ ಚಿತ್ರರಂಗ ಸಮೃದ್ಧವಾಗಿ ಬೆಳೆಯಬೇಕಾದರೆ ನಾಯಕ ನಟರು ಹೆಚ್ಚು ಸಿನಿಮಾಗಳನ್ನು ಮಾಡಬೇಕು ಹಾಗೂ ಹೆಚ್ಚು ನಾಯಕ ನಟರು ಚಿತ್ರರಂಗಕ್ಕೆ ಬರಬೇಕು ಎಂದು ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.

[ccc_my_favorite_select_button post_id="115245"]
error: Content is protected !!