ದೊಡ್ಡಬಳ್ಳಾಪುರ (Doddaballapura): ಹುಲ್ಲು ತುಂಬಿಕೊಂಡು ಸಾಗುತ್ತಿದ್ದ ಕ್ಯಾಂಟರ್ಗೆ ಬೆಂಕಿ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ರಾಗಿ ಹುಲ್ಲಿಗೆ ಬೆಂಕಿ ತಗುಲಿರುವ ಘಟನೆ ದೊಡ್ಡಬೆಳವಂಗಲ ಸಮೀಪದ ಭಕ್ತರಹಳ್ಳಿಯಲ್ಲಿ ಸಂಭವಿಸಿದೆ.
ಭಕ್ತರಹಳ್ಳಿಯಿಂದ ದೇವನಹಳ್ಳಿಗೆ ಕ್ಯಾಂಟರ್ನಲ್ಲಿ ಬೆಂಕಿ ಹುಲ್ಲು ಸಾಗಿಸುವ ವೇಳೆ, ಭಕ್ತರಹಳ್ಳಿಯ ಸರ್ಕಾರಿ ಶಾಲೆಯ ಮುಂಭಾಗ ವಿದ್ಯುತ್ ತಂತಿ ಸ್ಪರ್ಶಿಸಿ ಬೆಂಕಿ ಹೊತ್ತಿಕೊಂಡಿದೆ.
ಕೂಡಲೇ ಎಚ್ಚೆತ್ತ ಕ್ಯಾಂಟರ್ ಚಾಲಕ, ಕ್ಲೀನರ್ ಹಾಗೂ ಗ್ರಾಮಸ್ಥರು, ರಸ್ತೆ ಬದಿಯಲ್ಲಿಯೇ ಇರು ತೊಟ್ಟಿಯಲ್ಲಿದ್ದ ನೀರನ್ನು ಬಳಸಿ ಬೆಂಕಿಯನ್ನು ನಂದಿಸಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ.
ಆದರೆ ಕ್ಯಾಂಟರ್ ಗೆ ಲೋಡ್ ಮಾಡಿದ್ದ ಹೆಚ್ಚಿನ ಹುಲ್ಲಿಗೆ ಬೆಂಕಿ ತಗುಲಿರುವ ಕಾರಣ ಬೆಂಕಿ ತಹಬದಿಗೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಗಿದ್ದು, ಕಾಯಲಾಗುತ್ತಿದೆ. ಅಲ್ಲದೆ ಕ್ಯಾಂಟರ್ನಿಂದ ಹುಲ್ಲನ್ನು ಕೆಳಕ್ಕೆ ಇಳಿಸಲಾಗುತ್ತಿದೆ.
ಶಾಲೆ ಬಳಿಯೇ ಈ ಘಟನೆ ಸಂಭವಿಸಿರುವುದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದು, ಮಕ್ಕಳನ್ನು ಹೊರಗೆ ಬಿಡದೆ ಶಾಲೆಯೊಳಗೆ ಕುಳ್ಳರಿಸಲಾಗಿದೆ.
ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.