
ದೇವನಹಳ್ಳಿ (Video); ವೈಕುಂಠ ಏಕಾದಶಿಯ ಆಚರಣೆ ಅಂಗವಾಗಿ ತಾಲೂಕಿನ ಇಲ್ತೊರೆ ಗ್ರಾಮದಲ್ಲಿನ ಶ್ರೀ ಪ್ರಸನ್ನ ಮುತ್ತುರಾಯಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಆಚರಣೆ, ರಾತ್ರಿ 10.30ಕ್ಕೆ ಬಹಳ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ನಾಲ್ಕು ಸಾವಿರಕ್ಕೂ ಅಧಿಕ ಭಕ್ತರು ಶ್ರೀ ಭೂದೇವಿ ಶ್ರೀದೇವಿ ಸಮೇತ ಮುತ್ತುರಾಯಸ್ವಾಮಿಯ ದರ್ಶನವನ್ನು ಮಾಡಿ ಪುನೀತರಾದರು.
ದೇವಸ್ಥಾನದ ಐತಿಹ್ಯ ಅತ್ಯಂತ ಪ್ರಾಚೀನವಾದರೂ, ದೇವಸ್ಥಾನ ಜೀರ್ಣೋದ್ಧಾರಗೊಂಡಿದ್ದು, ಭಕ್ತರನ್ನು ಆಕರ್ಷಿಸುತ್ತಿದೆ.
ಗ್ರಾಮಸ್ಥರೆಲ್ಲರೂ ಭಾಗವಹಿಸಿ ಸಾಂಸ್ಕೃತಿಕ ಯಕ್ಷಗಾನ, ಚಂಡೆ ವಾದ್ಯವನ್ನು ಆನಂದಿಸಿದರು.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						