Astrology: Likely to be a memorable day

Astrology: ಜ.13 ದಿನ ಭವಿಷ್ಯ: ಈ ರಾಶಿಯವರ ಬಂದು ಮಿತ್ರರಲ್ಲಿ ದ್ವೇಷ ಬೇಡ – ಎನ್ಎಸ್ ಶರ್ಮ

Astrology ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಶುಕ್ಲ ಪೂರ್ಣಿಮೆ ಅತ್ಯಂತ ಶ್ರೇಷ್ಠವಾದ; ಬೆಳಗ್ಗೆ ಬನಶಂಕರಿ ದೇವಿಯನ್ನು ಆರಾಧನೆ ಮಾಡಿ ಸಂಜೆ ಲಕ್ಷಣವಾಗಿ ಸತ್ಯನಾರಾಯಣ ಸ್ವಾಮಿಯ ಪೂಜೆಯನ್ನು ಆಚರಿಸಿದರೇ ಸಕಲ ಸೌಭಾಗ್ಯಗಳು ಉಂಟಾಗುತ್ತವೆ.

ಮೇಷ ರಾಶಿ: ಒಳ್ಳೆಯ ದಿನ, ಬಂದು ಮಿತ್ರರೊಂದಿಗೆ ಕಲಹ ಮಾಡಿಕೊಳ್ಳಬೇಡಿ, ಅತ್ಯಂತ ಆಯಾಸವನ್ನು ಮಾಡಿಕೊಂಡರೆ ಕಾರ್ಯ ಸಾಧನೆ ಆಗುವುದಿಲ್ಲ.. ಬುದ್ಧಿವಂತಿಕೆಯಿಂದ ಯೋಚಿಸಿ, ಒಳ್ಳೆಯದಾಗುತ್ತದೆ. (ಪರಿಹಾರಕ್ಕಾಗಿ ಮನೆಯಲ್ಲಿ ನವಗ್ರಹ ಪೂಜೆ ಮಾಡಿ)

ವೃಷಭ ರಾಶಿ: ಮನಸ್ಸಿನಲ್ಲಿ ಧರ್ಮ ಕಾರ್ಯವನ್ನು ಮಾಡಬೇಕೆಂಬ ಆಸೆ, ಮನೆಯಲ್ಲಿ ಚಿಕ್ಕದಾದ ಪೂಜೆಯನ್ನು ಮಾಡಲು ಬಯಕೆ. ಆದರೆ ಸಮಸ್ಯೆಗಳು ಬಿಡುತ್ತಿಲ್ಲ, ಧನಾರ್ಜನೆ ಸ್ವಲ್ಪ ಕಮ್ಮಿ, ವಿದ್ಯಾರ್ಜನೆ ತುಂಬಾ ಚೆನ್ನಾಗಿದೆ. (ಪರಿಹಾರಕ್ಕಾಗಿ ಶಿವನನ್ನು ಆರಾಧನೆ ಮಾಡಿ)

ಮಿಥುನ ರಾಶಿ: ವಿದ್ಯಾರ್ಥಿಗಳಿಗೆ ಸ್ವಲ್ಪ ಭಯ, ನೆನಪಿನ ಶಕ್ತಿಯ ಕೊರತೆ, ಮುಂದಿನ ಜೀವನದ ಬಗ್ಗೆ ಆತಂಕ, ಧನಾರ್ಜನೆ ಕೊರತೆ, ಅತಿಯಾದ ಆಸೆ, ಆಸೆಯಿಂದ ನಾನಾ ವಿಧವಾದ ದುಃಖಗಳು ವಿರಕ್ತಿಯ ಬಗ್ಗೆ ಚಿಂತನೆ. (ಪರಿಹಾರಕ್ಕಾಗಿ ಆಂಜನೇಯನ ಆರಾಧನೆ ಮಾಡಿ)

ಕಟಕ ರಾಶಿ; ಬಹಳ ವಿಜೃಂಭಣೆಯಿಂದ ಮಾಡಬೇಕಾದ ಕಾರ್ಯವನ್ನು ಮಾಡಿದ್ದೀರಿ, ಚಿಂತೆ ಬೇಡ ಒಳ್ಳೆಯದಾಗುತ್ತದೆ. ಹಣದ ವ್ಯಯವಾಯಿತು ಆದರೆ ಸಂಪಾದನೆ ಅನುಕೂಲವಾಗುತ್ತದೆ ಶುಭವಾಗುತ್ತದೆ. (ಪರಿಹಾರಕ್ಕಾಗಿ ಮಹಾಲಕ್ಷ್ಮಿಯ ಆರಾಧನೆ ಮಾಡಿ)

ಸಿಂಹ ರಾಶಿ: ಅತಿಯಾದ ದೈರ್ಯ, ಕೆಲವು ಬಾರಿ ಹಿಂಸೆಯನ್ನು ಕೊಡುತ್ತದೆ. ಹಣ ವಾಪಸ್ಸಾಗುವ ಚಿಂತೆ, ವಿಪರೀತ ಯೋಚಿಸಬೇಡಿ ಅನುಕೂಲವಾಗುತ್ತದೆ. ವಿದ್ಯಾರ್ಜನೆ ಸ್ವಲ್ಪ ಕಮ್ಮಿ, ಧನಾರ್ಜನೆ ಪರವಾಗಿಲ್ಲ ಮಧ್ಯಮ ವಾಗಿರುತ್ತದೆ, ಕೆಲಸ ಕಾರ್ಯಗಳಲ್ಲಿ ಅಲ್ಪ ಜಯ. (ಪರಿಹಾರಕ್ಕಾಗಿ ದುರ್ಗಾದೇವಿಯನ್ನು ಪೂಜೆ ಮಾಡಿ)

ಕನ್ಯಾ ರಾಶಿ: ಅನುಕೂಲವಾಗುತ್ತದೆ, ಈಗಲೂ ಅನುಕೂಲವಾಗಿ ಇದೆ. ಆದರೆ ಅನಾವಶ್ಯಕ ಯೋಚನೆಯಿಂದ ಮನಸ್ಸು ಸ್ವಲ್ಪ ಕೆಟ್ಟಿದೆ, ಚಿಂತಿಸಬೇಡಿ ಅನುಕೂಲವಾಗುತ್ತದೆ. ಯೋಚನೆ ಮಾಡುವುದನ್ನು ಕಮ್ಮಿ ಮಾಡಿ, ಬಂದು ಮಿತ್ರರಲ್ಲಿ ದ್ವೇಷ ಬೇಡ. (ಪರಿಹಾರಕ್ಕಾಗಿ ಸುಬ್ರಹ್ಮಣ್ಯನನ್ನು ಆರಾಧನೆ ಮಾಡಿ)

ತುಲಾ ರಾಶಿ: ಸಣ್ಣ ಸಣ್ಣ ವಿಷಯಕ್ಕೆ ಕೋಪ ಮಾಡಿಕೊಂಡರೆ ತುಂಬಾ ಕಠಿಣವಾಗುತದೆ, ಜೀವನ ಇರುವುದು ಸ್ವಲ್ಪ ಭಾಗ ಅದನ್ನು ನೆಮ್ಮದಿಯಾಗಿ ಖುಷಿಯಿಂದ ಅನುಭವಿಸಿ. (ಪರಿಹಾರಕ್ಕಾಗಿ ವೆಂಕಟೇಶನ ಸ್ಮರಣೆಯನ್ನು ಮಾಡಿ)

ವೃಶ್ಚಿಕ ರಾಶಿ: ಆರೋಗ್ಯದಲ್ಲಿ ಸ್ವಲ್ಪ ಏರುಪೇರು, ನಿಧಾನವಾಗಿ ಚೇತರಿಸಿಕೊಳ್ಳಬೇಕು. ಧನದ ವ್ಯಯ, ವಿದ್ಯಾರ್ಜನೆ ಸ್ವಲ್ಪ ಕಠಿಣ, ಆದರೂ ಒಳ್ಳೆಯದಾಗುತ್ತದೆ ಚಿಂತಿಸಬೇಡಿ. (ಪರಿಹಾರಕ್ಕಾಗಿ ಪವಮಾನ ಪಾರಾಯಣವನ್ನು ಮಾಡಿಸಿ)

ಧನಸ್ಸು ರಾಶಿ: ಶ್ರೇಷ್ಠವಾದ ದಿನ, ಶುಭ ಫಲಗಳನ್ನು ಅನುಭವಿಸುತ್ತೀರಿ, ಆನಂದವಾಗಿ ಮಕ್ಕಳೊಂದಿಗೆ ಕಳೆಯುವ ದಿನ, ಬಂದು ಮಿತ್ರರ ಸೌಖ್ಯ, ಮನೆಯಲ್ಲಿ ಒಳ್ಳೆಯ ವಾತಾವರಣ. (ಪರಿಹಾರಕ್ಕಾಗಿ ಸೂರ್ಯ ಪೂಜೆಯನ್ನು ಮಾಡಿ)

ಮಕರ ರಾಶಿ: ಸ್ವಲ್ಪ ಕಷ್ಟದ ಪರಿಸ್ಥಿತಿಯನ್ನು ಹೆದರಿಸಬೇಕು, ಜೀವನ ಬಹಳ ಮುಖ್ಯ ಯೋಚಿಸಬೇಡಿ ಒಳ್ಳೆಯದಾಗುತ್ತದೆ. ಮನಸ್ಸಿಗೆ ತೊಂದರೆ ತಂದುಕೊಳ್ಳಬೇಡಿ, ಮಾತನ್ನು ಹಿಡಿತವಾಗಿರಲಿ. (ಪರಿಹಾರಕ್ಕಾಗಿ ಸರಸ್ವತಿಯ ಧ್ಯಾನವನ್ನು ಮಾಡಿ)

ಕುಂಭ ರಾಶಿ: ಅತಿಯಾದ ಆಲೋಚನೆ ಮಾಡುವುದು, ಮನಸ್ಸಿಗೆ ಬಹಳ ಕಷ್ಟ, ಸಣ್ಣ ಪುಟ್ಟ ವಿಷಯಗಳನ್ನು ಸಣ್ಣ ಪುಟ್ಟದಾಗಿ ಬಿಡಿ, ತಲೆಗೆ ತುಂಬಿಕೊಳ್ಳಬೇಡಿ, ಮಕ್ಕಳು ಓದುತ್ತಾರೆ. ಚಿಂತೆ ಬೇಡ, ಎಲ್ಲರಿಗೂ ಶುಭವಾಗುತ್ತದೆ. (ಪರಿಹಾರಕ್ಕಾಗಿ ಗಣಪತಿಯ ಪೂಜೆ ಮಾಡಿ)

ಮೀನ ರಾಶಿ: ಅತ್ಯಂತ ತೃಪ್ತಿದಾಯಕ ದಿನ, ಎಲ್ಲಾ ರೀತಿಯ ಮಾತುಕತೆ, ಎಲ್ಲರೊಂದಿಗೆ ಸೌಖ್ಯ, ಧಾರ್ಮಿಕ ಕಾರ್ಯದಲ್ಲಿ ಯಶಸ್ಸು, ಶುಭವಾಗುತ್ತದೆ, ಚಿಂತೆ ಬೇಡ. (ಪರಿಹಾರಕ್ಕಾಗಿ ಅಮ್ಮನವರ ಆರಾಧನೆ ಮಾಡಿ)

ರಾಹುಕಾಲ: 7-30AM ರಿಂದ 9-00AM

ಗುಳಿಕಕಾಲ: 6-00AM ರಿಂದ 7-30 AM

ಯಮಗಂಡಕಾಲ: 1-30PMರಿಂದ 3-00PM

ವಿಶೇಷವಾಗಿ ದುರ್ಗೆಯ ಅಂಶ ದಿಂದ ಉದ್ಭವವಾದ ದಿವ್ಯ ಶಕ್ತಿ.. ಜ್ಞಾನ ಸ್ವರೂಪವಾದ ವೇದಗಳನ್ನು ತನ್ನ ಸ್ವಾರ್ಥಕ್ಕಾಗಿ ಕಪಿಮುಷ್ಟಿಯಲ್ಲಿ ಬಂಧನದಲ್ಲಿರಿಸಿ, ದುರಾಸೆಯಿಂದ ಇದ್ದ ರಾಕ್ಷಸನನ್ನು ಸಂಹರಿಸಿದ ದಿನ. ಹಾಗಾಗಿ ಈ ದಿನ ಬನಶಂಕರಿ ಜಯಂತಿ ಪ್ರಸಿದ್ಧವಾಯಿತು.

ಈ ದಿನ ವಿಶೇಷವಾಗಿ ಬನಶಂಕರಿ ದೇವಿಯನ್ನು ವನದುರ್ಗಾ ದೇವಿಯನ್ನು ಭಕ್ತಿಯಿಂದ ಪೂಜಿಸುತ್ತಾರೆ. ಎಲ್ಲರೂ ಸಹ ಅಮ್ಮನವರ ಆರಾಧನೆಯನ್ನು ಮಾಡಿ ಅತ್ಯಂತ ಶುಭವಾಗುತ್ತದೆ

ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572

ರಾಜಕೀಯ

ಎಷ್ಟೇ ಗ್ಯಾರಂಟಿಗಳನ್ನು ಕೊಟ್ಟರೂ ನಮಗೆ ತೊಂದರೆ ಇಲ್ಲ; ಪ್ರತಿಪಕ್ಷ ನಾಯಕ ಆರ್‌.ಅಶೋಕ

ಎಷ್ಟೇ ಗ್ಯಾರಂಟಿಗಳನ್ನು ಕೊಟ್ಟರೂ ನಮಗೆ ತೊಂದರೆ ಇಲ್ಲ; ಪ್ರತಿಪಕ್ಷ ನಾಯಕ ಆರ್‌.ಅಶೋಕ

ಗ್ಯಾರಂಟಿಗಳಿಗೆ ಈ ಹಣವನ್ನು ಬಳಸಿದರೂ ಇನ್ನೂ ಹಣ ಉಳಿಯುತ್ತದೆ. ಗ್ಯಾರಂಟಿಗೆ ಹಣ ಕೊಡಬೇಡಿ ಎಂದು ಹೇಳುತ್ತಿಲ್ಲ. ಆರ್. ಅಶೋಕ (R. Ashoka)

[ccc_my_favorite_select_button post_id="112891"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ಮಂಗಳವಾರ ಬೆಳಗ್ಗೆ ವ್ಯಕ್ತಿಯೋರ್ವನ ಮೃತ ದೇಹ ನಗರದ ಹೊರವಲಯದಲ್ಲಿರುವ ರೈಲ್ವೇ ನಿಲ್ದಾಣದ ಬಳಿ ಪತ್ತೆಯಾಗಿದ್ದು, ಹತ್ಯೆ (Murder) ನಡೆದಿರುವ ಕುರಿತು ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

[ccc_my_favorite_select_button post_id="112854"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!