Astrology: Likely to be a memorable day

Astrology: ಜ.13 ದಿನ ಭವಿಷ್ಯ: ಈ ರಾಶಿಯವರ ಬಂದು ಮಿತ್ರರಲ್ಲಿ ದ್ವೇಷ ಬೇಡ – ಎನ್ಎಸ್ ಶರ್ಮ

Astrology ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಶುಕ್ಲ ಪೂರ್ಣಿಮೆ ಅತ್ಯಂತ ಶ್ರೇಷ್ಠವಾದ; ಬೆಳಗ್ಗೆ ಬನಶಂಕರಿ ದೇವಿಯನ್ನು ಆರಾಧನೆ ಮಾಡಿ ಸಂಜೆ ಲಕ್ಷಣವಾಗಿ ಸತ್ಯನಾರಾಯಣ ಸ್ವಾಮಿಯ ಪೂಜೆಯನ್ನು ಆಚರಿಸಿದರೇ ಸಕಲ ಸೌಭಾಗ್ಯಗಳು ಉಂಟಾಗುತ್ತವೆ.

ಮೇಷ ರಾಶಿ: ಒಳ್ಳೆಯ ದಿನ, ಬಂದು ಮಿತ್ರರೊಂದಿಗೆ ಕಲಹ ಮಾಡಿಕೊಳ್ಳಬೇಡಿ, ಅತ್ಯಂತ ಆಯಾಸವನ್ನು ಮಾಡಿಕೊಂಡರೆ ಕಾರ್ಯ ಸಾಧನೆ ಆಗುವುದಿಲ್ಲ.. ಬುದ್ಧಿವಂತಿಕೆಯಿಂದ ಯೋಚಿಸಿ, ಒಳ್ಳೆಯದಾಗುತ್ತದೆ. (ಪರಿಹಾರಕ್ಕಾಗಿ ಮನೆಯಲ್ಲಿ ನವಗ್ರಹ ಪೂಜೆ ಮಾಡಿ)

ವೃಷಭ ರಾಶಿ: ಮನಸ್ಸಿನಲ್ಲಿ ಧರ್ಮ ಕಾರ್ಯವನ್ನು ಮಾಡಬೇಕೆಂಬ ಆಸೆ, ಮನೆಯಲ್ಲಿ ಚಿಕ್ಕದಾದ ಪೂಜೆಯನ್ನು ಮಾಡಲು ಬಯಕೆ. ಆದರೆ ಸಮಸ್ಯೆಗಳು ಬಿಡುತ್ತಿಲ್ಲ, ಧನಾರ್ಜನೆ ಸ್ವಲ್ಪ ಕಮ್ಮಿ, ವಿದ್ಯಾರ್ಜನೆ ತುಂಬಾ ಚೆನ್ನಾಗಿದೆ. (ಪರಿಹಾರಕ್ಕಾಗಿ ಶಿವನನ್ನು ಆರಾಧನೆ ಮಾಡಿ)

ಮಿಥುನ ರಾಶಿ: ವಿದ್ಯಾರ್ಥಿಗಳಿಗೆ ಸ್ವಲ್ಪ ಭಯ, ನೆನಪಿನ ಶಕ್ತಿಯ ಕೊರತೆ, ಮುಂದಿನ ಜೀವನದ ಬಗ್ಗೆ ಆತಂಕ, ಧನಾರ್ಜನೆ ಕೊರತೆ, ಅತಿಯಾದ ಆಸೆ, ಆಸೆಯಿಂದ ನಾನಾ ವಿಧವಾದ ದುಃಖಗಳು ವಿರಕ್ತಿಯ ಬಗ್ಗೆ ಚಿಂತನೆ. (ಪರಿಹಾರಕ್ಕಾಗಿ ಆಂಜನೇಯನ ಆರಾಧನೆ ಮಾಡಿ)

ಕಟಕ ರಾಶಿ; ಬಹಳ ವಿಜೃಂಭಣೆಯಿಂದ ಮಾಡಬೇಕಾದ ಕಾರ್ಯವನ್ನು ಮಾಡಿದ್ದೀರಿ, ಚಿಂತೆ ಬೇಡ ಒಳ್ಳೆಯದಾಗುತ್ತದೆ. ಹಣದ ವ್ಯಯವಾಯಿತು ಆದರೆ ಸಂಪಾದನೆ ಅನುಕೂಲವಾಗುತ್ತದೆ ಶುಭವಾಗುತ್ತದೆ. (ಪರಿಹಾರಕ್ಕಾಗಿ ಮಹಾಲಕ್ಷ್ಮಿಯ ಆರಾಧನೆ ಮಾಡಿ)

ಸಿಂಹ ರಾಶಿ: ಅತಿಯಾದ ದೈರ್ಯ, ಕೆಲವು ಬಾರಿ ಹಿಂಸೆಯನ್ನು ಕೊಡುತ್ತದೆ. ಹಣ ವಾಪಸ್ಸಾಗುವ ಚಿಂತೆ, ವಿಪರೀತ ಯೋಚಿಸಬೇಡಿ ಅನುಕೂಲವಾಗುತ್ತದೆ. ವಿದ್ಯಾರ್ಜನೆ ಸ್ವಲ್ಪ ಕಮ್ಮಿ, ಧನಾರ್ಜನೆ ಪರವಾಗಿಲ್ಲ ಮಧ್ಯಮ ವಾಗಿರುತ್ತದೆ, ಕೆಲಸ ಕಾರ್ಯಗಳಲ್ಲಿ ಅಲ್ಪ ಜಯ. (ಪರಿಹಾರಕ್ಕಾಗಿ ದುರ್ಗಾದೇವಿಯನ್ನು ಪೂಜೆ ಮಾಡಿ)

ಕನ್ಯಾ ರಾಶಿ: ಅನುಕೂಲವಾಗುತ್ತದೆ, ಈಗಲೂ ಅನುಕೂಲವಾಗಿ ಇದೆ. ಆದರೆ ಅನಾವಶ್ಯಕ ಯೋಚನೆಯಿಂದ ಮನಸ್ಸು ಸ್ವಲ್ಪ ಕೆಟ್ಟಿದೆ, ಚಿಂತಿಸಬೇಡಿ ಅನುಕೂಲವಾಗುತ್ತದೆ. ಯೋಚನೆ ಮಾಡುವುದನ್ನು ಕಮ್ಮಿ ಮಾಡಿ, ಬಂದು ಮಿತ್ರರಲ್ಲಿ ದ್ವೇಷ ಬೇಡ. (ಪರಿಹಾರಕ್ಕಾಗಿ ಸುಬ್ರಹ್ಮಣ್ಯನನ್ನು ಆರಾಧನೆ ಮಾಡಿ)

ತುಲಾ ರಾಶಿ: ಸಣ್ಣ ಸಣ್ಣ ವಿಷಯಕ್ಕೆ ಕೋಪ ಮಾಡಿಕೊಂಡರೆ ತುಂಬಾ ಕಠಿಣವಾಗುತದೆ, ಜೀವನ ಇರುವುದು ಸ್ವಲ್ಪ ಭಾಗ ಅದನ್ನು ನೆಮ್ಮದಿಯಾಗಿ ಖುಷಿಯಿಂದ ಅನುಭವಿಸಿ. (ಪರಿಹಾರಕ್ಕಾಗಿ ವೆಂಕಟೇಶನ ಸ್ಮರಣೆಯನ್ನು ಮಾಡಿ)

ವೃಶ್ಚಿಕ ರಾಶಿ: ಆರೋಗ್ಯದಲ್ಲಿ ಸ್ವಲ್ಪ ಏರುಪೇರು, ನಿಧಾನವಾಗಿ ಚೇತರಿಸಿಕೊಳ್ಳಬೇಕು. ಧನದ ವ್ಯಯ, ವಿದ್ಯಾರ್ಜನೆ ಸ್ವಲ್ಪ ಕಠಿಣ, ಆದರೂ ಒಳ್ಳೆಯದಾಗುತ್ತದೆ ಚಿಂತಿಸಬೇಡಿ. (ಪರಿಹಾರಕ್ಕಾಗಿ ಪವಮಾನ ಪಾರಾಯಣವನ್ನು ಮಾಡಿಸಿ)

ಧನಸ್ಸು ರಾಶಿ: ಶ್ರೇಷ್ಠವಾದ ದಿನ, ಶುಭ ಫಲಗಳನ್ನು ಅನುಭವಿಸುತ್ತೀರಿ, ಆನಂದವಾಗಿ ಮಕ್ಕಳೊಂದಿಗೆ ಕಳೆಯುವ ದಿನ, ಬಂದು ಮಿತ್ರರ ಸೌಖ್ಯ, ಮನೆಯಲ್ಲಿ ಒಳ್ಳೆಯ ವಾತಾವರಣ. (ಪರಿಹಾರಕ್ಕಾಗಿ ಸೂರ್ಯ ಪೂಜೆಯನ್ನು ಮಾಡಿ)

ಮಕರ ರಾಶಿ: ಸ್ವಲ್ಪ ಕಷ್ಟದ ಪರಿಸ್ಥಿತಿಯನ್ನು ಹೆದರಿಸಬೇಕು, ಜೀವನ ಬಹಳ ಮುಖ್ಯ ಯೋಚಿಸಬೇಡಿ ಒಳ್ಳೆಯದಾಗುತ್ತದೆ. ಮನಸ್ಸಿಗೆ ತೊಂದರೆ ತಂದುಕೊಳ್ಳಬೇಡಿ, ಮಾತನ್ನು ಹಿಡಿತವಾಗಿರಲಿ. (ಪರಿಹಾರಕ್ಕಾಗಿ ಸರಸ್ವತಿಯ ಧ್ಯಾನವನ್ನು ಮಾಡಿ)

ಕುಂಭ ರಾಶಿ: ಅತಿಯಾದ ಆಲೋಚನೆ ಮಾಡುವುದು, ಮನಸ್ಸಿಗೆ ಬಹಳ ಕಷ್ಟ, ಸಣ್ಣ ಪುಟ್ಟ ವಿಷಯಗಳನ್ನು ಸಣ್ಣ ಪುಟ್ಟದಾಗಿ ಬಿಡಿ, ತಲೆಗೆ ತುಂಬಿಕೊಳ್ಳಬೇಡಿ, ಮಕ್ಕಳು ಓದುತ್ತಾರೆ. ಚಿಂತೆ ಬೇಡ, ಎಲ್ಲರಿಗೂ ಶುಭವಾಗುತ್ತದೆ. (ಪರಿಹಾರಕ್ಕಾಗಿ ಗಣಪತಿಯ ಪೂಜೆ ಮಾಡಿ)

ಮೀನ ರಾಶಿ: ಅತ್ಯಂತ ತೃಪ್ತಿದಾಯಕ ದಿನ, ಎಲ್ಲಾ ರೀತಿಯ ಮಾತುಕತೆ, ಎಲ್ಲರೊಂದಿಗೆ ಸೌಖ್ಯ, ಧಾರ್ಮಿಕ ಕಾರ್ಯದಲ್ಲಿ ಯಶಸ್ಸು, ಶುಭವಾಗುತ್ತದೆ, ಚಿಂತೆ ಬೇಡ. (ಪರಿಹಾರಕ್ಕಾಗಿ ಅಮ್ಮನವರ ಆರಾಧನೆ ಮಾಡಿ)

ರಾಹುಕಾಲ: 7-30AM ರಿಂದ 9-00AM

ಗುಳಿಕಕಾಲ: 6-00AM ರಿಂದ 7-30 AM

ಯಮಗಂಡಕಾಲ: 1-30PMರಿಂದ 3-00PM

ವಿಶೇಷವಾಗಿ ದುರ್ಗೆಯ ಅಂಶ ದಿಂದ ಉದ್ಭವವಾದ ದಿವ್ಯ ಶಕ್ತಿ.. ಜ್ಞಾನ ಸ್ವರೂಪವಾದ ವೇದಗಳನ್ನು ತನ್ನ ಸ್ವಾರ್ಥಕ್ಕಾಗಿ ಕಪಿಮುಷ್ಟಿಯಲ್ಲಿ ಬಂಧನದಲ್ಲಿರಿಸಿ, ದುರಾಸೆಯಿಂದ ಇದ್ದ ರಾಕ್ಷಸನನ್ನು ಸಂಹರಿಸಿದ ದಿನ. ಹಾಗಾಗಿ ಈ ದಿನ ಬನಶಂಕರಿ ಜಯಂತಿ ಪ್ರಸಿದ್ಧವಾಯಿತು.

ಈ ದಿನ ವಿಶೇಷವಾಗಿ ಬನಶಂಕರಿ ದೇವಿಯನ್ನು ವನದುರ್ಗಾ ದೇವಿಯನ್ನು ಭಕ್ತಿಯಿಂದ ಪೂಜಿಸುತ್ತಾರೆ. ಎಲ್ಲರೂ ಸಹ ಅಮ್ಮನವರ ಆರಾಧನೆಯನ್ನು ಮಾಡಿ ಅತ್ಯಂತ ಶುಭವಾಗುತ್ತದೆ

ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572

ರಾಜಕೀಯ

ದೊಡ್ಡಬಳ್ಳಾಪುರ TAPMCS ಚುನಾವಣೆ; ಕಣದಲ್ಲಿ ಉಳಿದವರು ಎಷ್ಟು ಗೊತ್ತೆ..!?

ದೊಡ್ಡಬಳ್ಳಾಪುರ TAPMCS ಚುನಾವಣೆ; ಕಣದಲ್ಲಿ ಉಳಿದವರು ಎಷ್ಟು ಗೊತ್ತೆ..!?

ದೊಡ್ಡಬಳ್ಳಾಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (TAPMCS) ಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಕೊನೆಯ ದಿನವಾದ ಸೋಮವಾರ ಅಂತಿಮ ಕಣದಲ್ಲಿ ‘ಎ’ ತರಗತಿಯಿಂದ 9, ‘ಬಿ’ ತರಗತಿಯಿಂದ 19 ಜನ ಉಳಿದಿದ್ದಾರೆ.

[ccc_my_favorite_select_button post_id="115412"]
ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ. ಹೀಗಾಗಿ ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಅವರು ಸ್ಪಷ್ಟ ಎಚ್ಚರಿಕೆ ನೀಡಿದರು.

[ccc_my_favorite_select_button post_id="114725"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ನಿಸರ್ಗ ಯೋಗ ಕೇಂದ್ರದ ಹಾಗೂ ರಾಜ್ಯ ಬಾಲಕರ ಯೋಗ ತಂಡದ ನಾಯಕ ವಿ.ವರ ಪ್ರಸಾದ್ (V. Vara Prasad) 50ನೇ ಗೋಲ್ಡನ್‌ ಜುಬ್ಲಿ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ (Yoga Championship) ನಲ್ಲಿ ಭಾಗವಹಿಸಿ ಚಿನ್ನದ

[ccc_my_favorite_select_button post_id="114944"]
ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ಕಳೆದ ತಿಂಗಳ ಕೊನೆಯ ದಿನ ನಡೆದಿದ್ದ ತಾಲೂಕಿನ ಪ್ರಸಿದ್ಧ ಗುಟ್ಟೆ ಶ್ರೀ ಲಕ್ಷೀನರಸಿಂಹ ಸ್ವಾಮಿ (Gutte Lakshmi Narasimhaswamy Temple) ದೇವಾಲಯದಲ್ಲಿ ಕಳ್ಳತನ (Theft) ಪ್ರಕರಣ ಮತ್ತೆ ಮುಂದುವರಿದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

[ccc_my_favorite_select_button post_id="115220"]
ಕಾರು ಮತ್ತು ಬೊಲೆರೋ ನಡುವೆ ಭೀಕರ ಅಪಘಾತ.. ತಪ್ಪಿದ ಭಾರಿ ಅನಾಹುತ.!

ಕಾರು ಮತ್ತು ಬೊಲೆರೋ ನಡುವೆ ಭೀಕರ ಅಪಘಾತ.. ತಪ್ಪಿದ ಭಾರಿ ಅನಾಹುತ.!

ಕಾರು ಮತ್ತು ಬೊಲೆರೋ ವಾಹನದ ನಡುವೆ ಭೀಕರ ಅಪಘಾತ (Accident) ಉಂಟಾಗಿದ್ದು, ಅದೃಷ್ಟವಶಾತ್ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 44 ರ

[ccc_my_favorite_select_button post_id="115379"]

ಆರೋಗ್ಯ

ಸಿನಿಮಾ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಕನ್ನಡ ಚಿತ್ರರಂಗ ಸಮೃದ್ಧವಾಗಿ ಬೆಳೆಯಬೇಕಾದರೆ ನಾಯಕ ನಟರು ಹೆಚ್ಚು ಸಿನಿಮಾಗಳನ್ನು ಮಾಡಬೇಕು ಹಾಗೂ ಹೆಚ್ಚು ನಾಯಕ ನಟರು ಚಿತ್ರರಂಗಕ್ಕೆ ಬರಬೇಕು ಎಂದು ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.

[ccc_my_favorite_select_button post_id="115245"]
error: Content is protected !!