Daily story; ಹರಿತಲೇಖನಿ ದಿನಕ್ಕೊಂದು ಕತೆ: ವೇಶ್ಯೆ ಹಾಗೂ..‌

Daily story: Prostitute and...

Daily story: ಒಂದಿನ ಒಬ್ಬಳು ವೇಶ್ಯೆ ಸತ್ತು ಹೋದ್ಲು ಅದೇ ದಿವಸ ಎದುರುಗಡೆ ವಾಸವಾಗಿದ್ದ ಒಬ್ಬ ಸಾಧು ಕೂಡ ಸತ್ತುಹೋದರು.

ಅವರನ್ನು ಕರೆದುಕೊಂಡು ಹೋಗಲು ದೂತರು ಬಂದರು, ಅವರು ಇಬ್ಬರನ್ನು ಕರೆದುಕೊಂಡು ಹೋಗಿ ಸಾಧುವನ್ನು ನರಕಕ್ಕೂ, ವೇಶ್ಯೆಯನ್ನು ಸ್ವರ್ಗಕ್ಕೆ ಕರೆದುಕೊಂಡು ಹೊರಟರು.

ಸಾಧು ತಕ್ಷಣ ನಿಂತುಬಿಟ್ಟ, “ನೀವು ಏನು ಮಾಡುತ್ತಿರುವಿರಿ,? ನನ್ನ ಹೆಸರು ಸ್ವರ್ಗದಲ್ಲಿ ಇರಬೇಕು ವೇಶ್ಯೆಯ ಹೆಸರು ನರಕದಲ್ಲಿ ಇರಬೇಕು. ನೀವು ತಪ್ಪುಕಲ್ಪನೆ ಮಾಡಿಕೊಂಡಿರುವಿರಿ, ಎಲ್ಲೋ ಏನೋ ತಪ್ಪಾಗಿದೆ ನನ್ನನ್ನು ದೇವರ ಬಳಿ ಕರೆದುಕೊಂಡು ಹೋಗಿ, ನಾನು ಆ ದೇವರನ್ನು ನ್ಯಾಯ ಕೇಳುವೆ ಎಂದು ಆಗ್ರಹಿಸಿದ “

ಇದರಿಂದ ವಿಚತಲಿತರಾದ ಯಮದೂತರು, ಆ ಸಾಧುವನ್ನು ದೇವರ ಬಳಿ ಕರೆದುಕೊಂಡು ಹೋದರು. ಆಗ ಸಾಧು ತನ್ನ ಅನುಮಾನವನ್ನು ವ್ಯಕ್ತಪಡಿಸಿದನು “ನಾನು ಸ್ವರ್ಗಕ್ಕೆ ಹೋಗಬೇಕು ಆದರೆ ದೂತರು ತಪ್ಪಾಗಿ ನನ್ನನ್ನು ನರಕಕ್ಕೆ ಕೊಂಡೊಯ್ಯುತ್ತಿರುವರು ನ್ಯಾಯವೇ”? ಎಂದು ಕೇಳಿದನು.

ಆಗ ಭಗವಂತ ನಕ್ಕು ನುಡಿದ ಇಲ್ಲ ಅವರು ಸರಿಯಾಗಿ ಕರೆದುಕೊಂಡು ಹೋಗುತ್ತಿದ್ದಾರೆ ಅದಕ್ಕೆ ಕಾರಣವಿದೆ. ಸಾಧುವಾಗಿ ನೀನು ಸದಾ ವೇಶ್ಯೆಯ ಮನೆ ಕಡೆಯ ಗಮನವಿತ್ತು. ತುಂಬಾ ಚೆನ್ನಾಗಿದ್ದಾಳೆ ಆದರೆ ಅವಳು ಮಾಡುವ ಕೆಲಸ ಸರಿಯಿಲ್ಲ..

ಅವಳು ಕಸುಬಿಗೆ ಹೇಗೆ ಬಂದಳು ಕೇಳಬೇಕು? ಅವಳಿಗೆ ಬುದ್ಧಿವಾದವನ್ನು ಹೇಳಬೇಕು ಹೇಗೆ ? ಎಂಬ ಆಲೋಚನೆಯಲ್ಲಿ ನಿನ್ನ ದಿನವನ್ನು ಕಳೆಯುತ್ತಿದ್ದೆ. ಆದರೆ ಒಂದು ದಿನವೂ ಅವಳನ್ನು ಭೇಟಿಯಾಗುವ ಧೈರ್ಯಮಾಡಲಿಲ್ಲ.

ಅವಳು ಬಂದವರಿಗೆಲ್ಲ ಸಾರಾಯಿಯನ್ನು ಕುಡಿಸುತ್ತಿದ್ದಳು. ಅದರ ವಾಸನೆ ನಿನಗೆ ಸದಾ ಮೂಗಿಗೆ ಬಡಿಯುತ್ತಿತ್ತು ನಿನಗೆ ಸಾರಾಯಿ ಕುಡಿಯುವ ಆಸೆಯಿದ್ದರೂ ಸಮಾಜದ ಭಯದಿಂದ ನೀನು ಕುಡಿಯುವ ದೇರ್ಯ ಮಾಡಲಿಲ್ಲ.‌

ಸದಾ ನಿನ್ನ ಮನಸ್ಸನ್ನು ಹತೋಟಿಯಲ್ಲಿ ಇಡುವ ಪ್ರಯತ್ನ ಮಾಡುತ್ತಲೇ ಇದ್ದೇ ಜನಗಳು ನಿನ್ನನ್ನು ಸ್ವಾಮೀಜಿ ಎಂದು ಪೂಜಿಸುತ್ತಿದ್ದರು.

ನೀನು ಅವರಿಗಾಗಿ ನಿನ್ನ ಆಸೆಗಳನ್ನೆಲ್ಲಾ ಅದುಮಿಟ್ಟುಕೊಂಡು ತೋರ್ಪಡಿಕೆಯ ಜೀವನ ಸಾಗಿಸುತ್ತಿದ್ದೆ.. ತಪ್ಪಾಗಿ ನಡೆದರೆ ಎಲ್ಲಿ ಜನಗಳು ನನ್ನನ್ನು ತಿರಸ್ಕರಿಸುವರೋ ಎಂಬ ಭಯ ನಿನ್ನನ್ನು ಕಾಡುತ್ತಿತ್ತು. ಆದರೆ ವೇಶ್ಯೆಯು ಪ್ರತಿದಿನವೂ ನೀನು ಮಾಡುವ ಪೂಜೆ ಭಜನೆ ಹಾಗೂ ನೀನು ಹಚ್ಚುವ ದೀಪವನ್ನು ನೋಡುತ್ತಿದ್ದಳು.

“ನನಗೆ ಆಗ ಅದೃಷ್ಟ ಇಲ್ಲವೇ “ಎಂದು ಕೊರಗುತ್ತಿದ್ದಳು ಅವಳು ಅವರ ಮನೆಯಿಂದಲೇ ನೀನು ಮಾಡುವ ಪೂಜೆಯನ್ನು ಗಮನಿಸುತ್ತಿದ್ದಳು.

ಬೆಳಗುವ ದೀಪವನ್ನು ನಮಸ್ಕರಿಸುತ್ತಿದ್ದಳು ಹಚ್ಚುವ ಧೂಪವನ್ನು ಸೇವಿಸುತ್ತಿದ್ದಳು, ನೀನು ಪ್ರತಿಸಾರಿ ಭಜನೆ ಮಾಡಿದಾಗಲೂ ಕಣ್ಮುಚ್ಚಿ ಅದನ್ನು ಆರಾಧಿಸುತ್ತಿದ್ದಳು.

ದೇವರ ಗುಡಿಗೆ ಹೋಗಿ ಪೂಜೆ ಸಲ್ಲಿಸುವ ಅದೃಷ್ಟ ತನಗೆ ಇಲ್ಲವೆಂದು ಸದಾ ಕಣ್ಣೀರು ಸುರಿಸುತ್ತಿದ್ದಳು.‌ ಹಾಗಾಗಿ ಅವಳು ಮನದಿಂದ ಸದಾ ದೇವರನ್ನು ಪೂಜಿಸುತ್ತಿದ್ದಳು.

ಇದರಿಂದ ಇಂದು ಅವಳು ಸ್ವರ್ಗದ ದಾರಿ ಹಿಡಿದಳು. ನೀನು ನರಕದ ದಾರಿ ಹಿಡಿದೆ ಎಂದರು..

ಕೃಪೆ: ಸುರಭಿ ಲತಾ. (ಸಾಮಾಜಿಕ ಜಾಲತಾಣ)

ರಾಜಕೀಯ

ಮೇ ಮೊದಲ ವಾರದಲ್ಲಿ ದೊಡ್ಡಬಳ್ಳಾಪುರಕ್ಕೆ ನಿಖಿಲ್ ಕುಮಾರಸ್ವಾಮಿ: ಹರೀಶ್ ಗೌಡ

ಮೇ ಮೊದಲ ವಾರದಲ್ಲಿ ದೊಡ್ಡಬಳ್ಳಾಪುರಕ್ಕೆ ನಿಖಿಲ್ ಕುಮಾರಸ್ವಾಮಿ: ಹರೀಶ್ ಗೌಡ

ಮುಂದಿನ ತಿಂಗಳ (ಮೇ) ಮೊದಲ ವಾರದಲ್ಲಿ ಜೆಡಿಎಸ್ (JDS) ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ದೊಡ್ಡಬಳ್ಳಾಪುರಕ್ಕೆ ಭೇಟಿ ನೀಡಲಿದ್ದಾರೆಂದು ಜೆಡಿಎಸ್ ಹಿರಿಯ ಮುಖಂಡ ಎಸ್.ಎಂ. ಹರೀಶ್ ಗೌಡ (S.M.

[ccc_my_favorite_select_button post_id="120975"]
ಈ ಉಪ ಚುನಾವಣೆಯು ಕಾಂಗ್ರೆಸ್ ಸರ್ಕಾರವನ್ನು ಕಿತ್ತುಹಾಕಲು ಅವಕಾಶ: ಆರ್.ಅಶೋಕ

ಈ ಉಪ ಚುನಾವಣೆಯು ಕಾಂಗ್ರೆಸ್ ಸರ್ಕಾರವನ್ನು ಕಿತ್ತುಹಾಕಲು ಅವಕಾಶ: ಆರ್.ಅಶೋಕ

ಈ ಉಪಚುನಾವಣೆಯಲ್ಲಿ ಬಡವರು ಹಾಗೂ ಶ್ರೀಮಂತರ ನಡುವೆ ಸ್ಪರ್ಧೆ ನಡೆಯಲಿದೆ. ಇದರಲ್ಲಿ ಕಾಂಗ್ರೆಸ್ ಸೋತು ಮುಂದಿನ ರಾಜ್ಯದ ಭವಿಷ್ಯ ತೀರ್ಮಾನವಾಗಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ (R. Ashoka) ಹೇಳಿದರು.

[ccc_my_favorite_select_button post_id="120773"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

IPLಗೆ ಕ್ಷಣಗಣನೆ.. ಟಿಕೆಟ್ ಬೇಡಿ ಮರ್ಯಾದೆ ಕಳೆದುಕೊಂಡ ಶಾಸಕರು

IPLಗೆ ಕ್ಷಣಗಣನೆ.. ಟಿಕೆಟ್ ಬೇಡಿ ಮರ್ಯಾದೆ ಕಳೆದುಕೊಂಡ ಶಾಸಕರು

ಇಂಡಿಯನ್ ಪ್ರೀಮಿಯರ್ ಲೀಗ್ (IPL) 19ನೇ ಆವೃತ್ತಿಯ ಉದ್ಘಾಟನಾ ಪಂದ್ಯ ಇಂದು (ಮಾರ್ಚ್ 28) ಚಿನ್ನಸ್ವಾಮಿಯಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗಲಿವೆ.

[ccc_my_favorite_select_button post_id="120518"]

RCB ಮಾರಾಟ: ವಿಜಯ್ ಮಲ್ಯ ಭಾವುಕ ಸಂದೇಶ

[ccc_my_favorite_select_button post_id="120461"]

RCBಗೆ ಕೆಎಂಎಫ್ ಪ್ರಾಯೋಜಕತ್ವ..!

[ccc_my_favorite_select_button post_id="120424"]

IPL ಟಿಕೆಟ್: ನಕಲಿ ಲಿಂಕ್ ಎಚ್ಚರಿಕೆ

[ccc_my_favorite_select_button post_id="120376"]
ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ಪುರುಷರು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಸೋಮವಾರ ಸಂಜೆ ದೊಡ್ಡಬಳ್ಳಾಪುರ ಗ್ರಾಮಾಂತರ ಹಾಗೂ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

[ccc_my_favorite_select_button post_id="120943"]
ದೊಡ್ಡಬಳ್ಳಾಪುರ: ಎರಡು ಪ್ರತ್ಯೇಕ ಅಪಘಾತ.. ಇಬ್ಬರ ದುರ್ಮರಣ..!

ದೊಡ್ಡಬಳ್ಳಾಪುರ: ಎರಡು ಪ್ರತ್ಯೇಕ ಅಪಘಾತ.. ಇಬ್ಬರ ದುರ್ಮರಣ..!

ಮಂಗಳವಾರ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತದಲ್ಲಿ (Accident) ಇಬ್ಬರು ಸಾವನಪ್ಪಿರುವ ಘಟನೆ ತಾಲೂಕಿನ..*** ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.

[ccc_my_favorite_select_button post_id="120965"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]