ಹರಿತಲೇಖನಿ ದಿನಕ್ಕೊಂದು ಕಥೆ: ಕರ್ಣನ ಮಹಾದಾನಿ ಎನ್ನುವುದೇಕೆ ಗೊತ್ತಾ..?

Karna broke the beautiful couch..!

Daily story: ಒಂದು ಸಾರಿ ಕೃಷ್ಣ ಮತ್ತು ಅರ್ಜುನ ನಗರ ಸಂಚಾರ ಮಾಡುತ್ತಿದ್ದರು. ಅದು-ಇದು ಮಾತನಾಡುತ್ತಾ ಹೋಗುತ್ತಿದ್ದರು.

ಒಂದು ದಿನ ಇದ್ದಕ್ಕಿದ್ದಂತೆ ಕೃಷ್ಣ ಏನೋ ನೆನಪಾದವನಂತೆ , “ಅರ್ಜುನ ನೀ ಏನೇ ಹೇಳು ಕರ್ಣನಂತಹ ದಾನಿಗಳು ಯಾರು ಇಲ್ಲ ಅಲ್ವಾ ?” ಎಂದು ಕೇಳಿದ.

ಈ ಮಾತುಗಳನ್ನು ಕೇಳಿ ಅರ್ಜುನನಿಗೆ ಅವನ ಮೈಯನ್ನು ಯಾರೋ ಪರಚಿದಂತಾಯ್ತು. ಕೃಷ್ಣನೂ, ಬೇಕೆಂದೇ ಕೆಣಕಿ ಹೇಳಿದ್ದು.

ಅರ್ಜುನನಿಗೆ ಕರ್ಣನ ಹೆಸರು ಕೇಳಿದರೆ ಆಗದು. ಈ ವಾಸುದೇವ ಯಾವಾಗಲೂ ಕರ್ಣನನ್ನು ವಹಿಸಿಕೊಂಡು ಏಕೆ ಮಾತನಾಡುತ್ತಾನೆ ? ಎಂದು ಮನಸ್ಸಿನಲ್ಲಿ ಅಂದುಕೊಂಡು, “ಅಲ್ಲ ಕೃಷ್ಣ , ನಾನು ಬೇಕಾದಷ್ಟು ದಾನ ಮಾಡುತ್ತೇನೆ.

ಅದರಲ್ಲಿ ಕರ್ಣನದ್ದೇನು ಹೆಚ್ಚುಗಾರಿಕೆ ನನಗಂತೂ ಅರ್ಥ ಆಗ್ಲಿಲ್ಲ “ಎಂದು ಸ್ವಲ್ಪ ಅಸಮಧಾನದಿಂದಲೇ ಹೇಳಿದ.

ಕೃಷ್ಣ ಕಿರುನಗೆ ಬೀರೀ, ಅರ್ಜುನನ್ನು ಓರೆಗಣ್ಣಿನಿಂದ ನೋಡುತ್ತಾ, ಆಯ್ತಪ್ಪ ಹಾಗಾದ್ರೆ ನೀನು ಒಂದು ಕೆಲಸ ಮಾಡು. ಆಗೋ ಅಲ್ಲಿ ನೋಡು ಎದುರುಗಡೆ ಎರಡು ದೊಡ್ಡ ಬೆಟ್ಟಗಳಿವೆ. ಅದನ್ನು ಬಂಗಾರದ ಬೆಟ್ಟವನ್ನಾಗಿ ಮಾಡುತ್ತೇನೆ.

ನೀನು, ನಿಮ್ಮ ಊರಿನವರನ್ನೆಲ್ಲ ಕರೆದು ಬಂಗಾರವನ್ನು ದಾನ ಮಾಡು, ಆದರೆ ಅದರಲ್ಲಿ ಒಂದು ಚೂರು ನೀನು ತೆಗೆದುಕೊಳ್ಳುವಂತಿಲ್ಲ ಎಂದನು.

ಅರ್ಜುನನು ಆಯ್ತು ಕೃಷ್ಣ, ನೀನು ಹೇಳಿದ ಹಾಗೆ ಮಾಡುತ್ತೇನೆ ಎಂದು ತನ್ನ ಗ್ರಾಮಕ್ಕೆ ಹೋಗಿ, “ಎಲ್ಲರೂ ಬನ್ನಿ ನಾನು ಬಂಗಾರ ದಾನ ಮಾಡುತ್ತೇನೆ” ಎಂದ.

ಊರವರೆಲ್ಲ ಬಂಗಾರ ಎಂದು ಕೂಡಲೇ ಗುಂಪುಗುಂಪಾಗಿ ಬಂದರು.ಅರ್ಜುನನು ಬೆಟ್ಟವನ್ನು ಮೊಗೆದು, ಮೊಗೆದು ಬಂಗಾರ ಕೊಡುತ್ತಿದ್ದನು.

ಬಂಗಾರ ತಗೊಂಡು ನಿನಗೆ ಒಳ್ಳೆಯದಾಗಲಿ ಎಂದು ಆಶೀರ್ವದಿಸಿ ಹೋಗುತ್ತಿದ್ದರು. ಮತ್ತು ಕೆಲವರು “ಅರ್ಜುನಾ, ನಿನ್ನಂತಹ ದಾನಿಗಳು ಜಗತ್ತಿನಲ್ಲಿ ಯಾರೂ ಇಲ್ಲ” ಎಂದು ಹಾಡಿ ಹೊಗಳುತ್ತಿದ್ದರು.

ಇದನ್ನೆಲ್ಲಾ ಕಂಡು, ಕೇಳಿ, ಅರ್ಜುನನಿಗೆ ತನ್ನ ಬಗ್ಗೆ ತನಗೆ ಹೆಮ್ಮೆ ಅನಿಸಿತು. ಎರಡು ಮೂರು ದಿನಗಳಿಂದ ಬಿಡುವಿಲ್ಲದೆ ದಾನ ಕೊಡುತ್ತಲೇ ಇದ್ದಾನೆ.

ಊರಿನವರು, ಅಕ್ಕ- ಪಕ್ಕದೂರಿನವರು ಬಂಗಾರವನ್ನು ಮನೆಯ ಪೆಟ್ಟಿಗೆ, ಬೀರು, ಪೆಟಾರಿ, ಕೊನೆಗೆ ಬಟ್ಟೆಗಳಲ್ಲಿ ಗಂಟು ಕಟ್ಟಿಟ್ಟು, ಬಂದು ಬಂದು ತೆಗೆದುಕೊಂಡು ಹೋಗುತ್ತಿದ್ದರು.

ತೆಗೆದುಕೊಂಡು ಹೋದವರು ಬಂಗಾರದ ಆಸೆಗಾಗಿ ಮತ್ತೆ ಮತ್ತೆ ಬರುತ್ತಿದ್ದರು. ಅರ್ಜುನನು ಕೊಡುತ್ತಲೇ ಇದ್ದನು. ಇಷ್ಟೆಲ್ಲಾ ಕೊಟ್ಟರೂ ಬೆಟ್ಟದ ಬಂಗಾರ ಒಂದು ಗುಲಗಂಜಿ ತೂಕದಷ್ಟು ಕಡಿಮೆಯಾಗಲಿಲ್ಲ. ಎಷ್ಟು ಬಂಗಾರ ಅಗೆದು ಮೊಗೆದು ಕೊಟ್ಟರೂ, ಮತ್ತೆ ಅಷ್ಟೇ ಆಗುತ್ತಿತ್ತು.

ಅರ್ಜುನನು ಕೊಟ್ಟು ಕೊಟ್ಟು ಸೋತು ಹೈರಾಣಾದ. ಮೂರ್ನಾಲ್ಕು ದಿನಗಳಿಂದ ನಿದ್ದೆ ಇಲ್ಲ, ಆಹಾರ ಸರಿಯಾಗಿ ತಿಂದಿಲ್ಲ, ವಿಶ್ರಾಂತಿಯ ಮಾತಂತೂ ಇಲ್ಲವೇ ಇಲ್ಲ. ಸುಸ್ತಾದ ಅರ್ಜುನನು ಕೃಷ್ಣಾ, ನನ್ನ ಕೈಲಿ ಇನ್ನು ಬಂಗಾರ ಕೊಡಲು ಆಗುವುದಿಲ್ಲ. ನನಗೆ ವಿಶ್ರಾಂತಿಯ ಅಗತ್ಯವಿದೆ ಎಂದನು.

ಕೃಷ್ಣನು ಹೌದೌದು, ಅರ್ಜುನ ನೀನು ಬಹಳ ದಣಿದಿದ್ದಿ ವಿಶ್ರಾಂತಿ ತೊಗೋ ಎಂದು ಹೇಳಿದ.

ಅದರ ಮರುದಿನವೇ, ಕೃಷ್ಣನು, ಕರ್ಣನು ಬರುವುದನ್ನು ನೋಡಿ ಅವನನ್ನು ಕರೆದು, “ನೋಡು ಕರ್ಣ, ಅಲ್ಲಿ ಎರಡು ಬಂಗಾರದ ಬೆಟ್ಟಗಳಿವೆ. ಅವುಗಳನ್ನು ಯಾರಿಗೆ ಬೇಕು ಅವರಿಗೆ ದಾನ ಮಾಡು. ಆದರೆ ನೀನು ಮಾತ್ರ ಒಂದು ಚೂರು ತೆಗೆದುಕೊಳ್ಳುವಂತಿಲ್ಲ”, ಎಂದು ಹೇಳಿ ಹೊರಟನು.

ಕರ್ಣನು ಆಯ್ತು ಕೃಷ್ಣ ಎಂದವನೇ, ತನ್ನ ಗ್ರಾಮಕ್ಕೆ ಬಂದು, ಗ್ರಾಮದ ಜನಗಳನ್ನೆಲ್ಲಾ ಕರೆದು “ನೋಡಿ ಅಲ್ಲಿ ಎರಡು ಬಂಗಾರದ ಬೆಟ್ಟ ಇದೆ. ನಿಮಗೆ ಎಷ್ಟು ಬೇಕಾದರೂ ಅಷ್ಟು ಬಂಗಾರ ತೆಗೆದುಕೊಂಡು ಹೋಗಿ” ಎಂದು ಹೇಳಿ ಒಂದು ಕ್ಷಣವೂ ನಿಲ್ಲದೆ, ತಿರುಗಿಯೂ ನೋಡದೆ, ಹೊರಟುಬಿಟ್ಟ.

ಮರೆಯಲ್ಲಿ ನಿಂತು ನೋಡುತ್ತಿದ್ದ ಕೃಷ್ಣನು, ಅರ್ಜುನನಿಗೆ ತೋರಿಸಿ “ನೋಡಿದೆಯಾ? ಅವನಿಗೆ ಯಾರ ಹೊಗಳಿಕೆ ಆಗಲಿ, ಕೊಟ್ಟಿದ್ದೇನೆ ಎಂಬ ಅಹಂ ಆಗಲಿ, ನನ್ನದು ಎಂಬ ಸ್ವಾರ್ಥವಾಗಲಿ, ಯಾವುದೂ ಇಲ್ಲ. ಇದಕ್ಕಾಗಿಯೇ ಕರ್ಣನನ್ನು ಮಹಾದಾನಿ ಎಂದು ಎಲ್ಲರೂ ಹೇಳುವುದು” ಎಂದು ಹೇಳಿದಾಗ ಅರ್ಜುನನು ನಾಚಿಕೆಯಿಂದ ತಲೆ ತಗ್ಗಿಸಿದನು.

ಕೃಪೆ: ಆಶಾ ನಾಗಭೂಷಣ. (ಸಾಮಾಜಿಕ ಜಾಲತಾಣ)

ರಾಜಕೀಯ

ಆದಿಚುಂಚನಗಿರಿಯಲ್ಲಿ ಭೈರವೈಕ್ಯ ಮಂದಿರ ಉದ್ಘಾಟಿಸಿದ ಪ್ರಧಾನಿ ಮೋದಿ

ಆದಿಚುಂಚನಗಿರಿಯಲ್ಲಿ ಭೈರವೈಕ್ಯ ಮಂದಿರ ಉದ್ಘಾಟಿಸಿದ ಪ್ರಧಾನಿ ಮೋದಿ

ಆದಿಚುಂಚನಗಿರಿಯಲ್ಲಿ ನಿರ್ಮಾಣವಾಗಿರುವ ಭೈರವೈಕ್ಯ ಮಂದಿರದ ಉದ್ಘಾಟನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ನೆರವೇರಿಸಿದರು.

[ccc_my_favorite_select_button post_id="120981"]
ಈ ಉಪ ಚುನಾವಣೆಯು ಕಾಂಗ್ರೆಸ್ ಸರ್ಕಾರವನ್ನು ಕಿತ್ತುಹಾಕಲು ಅವಕಾಶ: ಆರ್.ಅಶೋಕ

ಈ ಉಪ ಚುನಾವಣೆಯು ಕಾಂಗ್ರೆಸ್ ಸರ್ಕಾರವನ್ನು ಕಿತ್ತುಹಾಕಲು ಅವಕಾಶ: ಆರ್.ಅಶೋಕ

ಈ ಉಪಚುನಾವಣೆಯಲ್ಲಿ ಬಡವರು ಹಾಗೂ ಶ್ರೀಮಂತರ ನಡುವೆ ಸ್ಪರ್ಧೆ ನಡೆಯಲಿದೆ. ಇದರಲ್ಲಿ ಕಾಂಗ್ರೆಸ್ ಸೋತು ಮುಂದಿನ ರಾಜ್ಯದ ಭವಿಷ್ಯ ತೀರ್ಮಾನವಾಗಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ (R. Ashoka) ಹೇಳಿದರು.

[ccc_my_favorite_select_button post_id="120773"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

IPLಗೆ ಕ್ಷಣಗಣನೆ.. ಟಿಕೆಟ್ ಬೇಡಿ ಮರ್ಯಾದೆ ಕಳೆದುಕೊಂಡ ಶಾಸಕರು

IPLಗೆ ಕ್ಷಣಗಣನೆ.. ಟಿಕೆಟ್ ಬೇಡಿ ಮರ್ಯಾದೆ ಕಳೆದುಕೊಂಡ ಶಾಸಕರು

ಇಂಡಿಯನ್ ಪ್ರೀಮಿಯರ್ ಲೀಗ್ (IPL) 19ನೇ ಆವೃತ್ತಿಯ ಉದ್ಘಾಟನಾ ಪಂದ್ಯ ಇಂದು (ಮಾರ್ಚ್ 28) ಚಿನ್ನಸ್ವಾಮಿಯಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗಲಿವೆ.

[ccc_my_favorite_select_button post_id="120518"]

RCB ಮಾರಾಟ: ವಿಜಯ್ ಮಲ್ಯ ಭಾವುಕ ಸಂದೇಶ

[ccc_my_favorite_select_button post_id="120461"]

RCBಗೆ ಕೆಎಂಎಫ್ ಪ್ರಾಯೋಜಕತ್ವ..!

[ccc_my_favorite_select_button post_id="120424"]

IPL ಟಿಕೆಟ್: ನಕಲಿ ಲಿಂಕ್ ಎಚ್ಚರಿಕೆ

[ccc_my_favorite_select_button post_id="120376"]
ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ಪುರುಷರು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಸೋಮವಾರ ಸಂಜೆ ದೊಡ್ಡಬಳ್ಳಾಪುರ ಗ್ರಾಮಾಂತರ ಹಾಗೂ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

[ccc_my_favorite_select_button post_id="120943"]
ದೊಡ್ಡಬಳ್ಳಾಪುರ: ಎರಡು ಪ್ರತ್ಯೇಕ ಅಪಘಾತ.. ಇಬ್ಬರ ದುರ್ಮರಣ..!

ದೊಡ್ಡಬಳ್ಳಾಪುರ: ಎರಡು ಪ್ರತ್ಯೇಕ ಅಪಘಾತ.. ಇಬ್ಬರ ದುರ್ಮರಣ..!

ಮಂಗಳವಾರ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತದಲ್ಲಿ (Accident) ಇಬ್ಬರು ಸಾವನಪ್ಪಿರುವ ಘಟನೆ ತಾಲೂಕಿನ..*** ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.

[ccc_my_favorite_select_button post_id="120965"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]