ದೊಡ್ಡಬಳ್ಳಾಪುರ: ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ (Ghati Subrahmanya) ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಮೇ7 ರಂದು ನಡೆಯಲಿರುವ ‘ಮಾಂಗಲ್ಯ ಭಾಗ್ಯ’ (Mangalya bhagya) ಸರಳ ಸಾಮೂಹಿಕ ವಿವಾಹಕ್ಕೆ 67 ಜೋಡಿ ನೋಂದಾಯಿಸಿಕೊಂಡಿವೆ.
ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಜೋಡಿಗಳು ಸಾಮೂಹಿಕ ವಿವಾಹದಲ್ಲಿ ಭಾಗವಹಿಸುತ್ತಿವೆ.
ವಿವಾಹ ಕಾರ್ಯಕ್ಕೆ ಸಂಬಂಧಿಸಿದ ವಧು, ವರರ ಬಟ್ಟೆ, ತಾಳಿ, ಊಟದ ವ್ಯವಸ್ಥೆ ಸೇರಿದಂತೆ ಎಲ್ಲಾ ಖರ್ಚನ್ನು ಪ್ರಾಧಿಕಾರದಿಂದಲೇ ಭರಿಸಲಾಗುತ್ತಿದೆ.