ಕೊಟ್ಟೂರು: ಬಿಜೆಪಿಯಿಂದ ಉಚ್ಚಾಟಿತರಾಗಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ( Basana Gouda patila yatnal) ಅವರನ್ನು ಮತ್ತೆ ಬಿಜೆಪಿಗೆ ಬರ ಮಾಡಿಕೊಳ್ಳುವ ಪ್ರಕ್ರಿಯೆ ನಡೆದಿದೆ ಎಂಬ ಮಾಹಿತಿ ವರದಿಯಾಗಿದೆ.
ಇದಕ್ಕೆ ಪೂರಕವಾಗಿ ಯತ್ನಾಳ ಕೇಂದ್ರ ಬಿಜೆಪಿ ಪರಿಷ್ಠರಿಗೆ ಪತ್ರ ಬರೆದಿದ್ದಾರೆ ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಮುಲು ಅವರು, ಯತ್ನಾಳ್ ಈ ಹಿಂದೆ ಮಾಡಿರುವ ಪಕ್ಷಸದೃಢತೆಗೊಳಿಸುವ ಕೆಲಸವನ್ನು ವರಿಷ್ಠರು ಮನಗಂಡಿದ್ದು, ಹೀಗಾಗಿ ಯತ್ನಾಳ್ ಬಿಜೆಪಿ ಮರು ಸೇರ್ಪಡೆ ಕಾರ್ಯ ಶೀಘ್ರ ಆಗಲಿದೆ ಎಂದು ತಿಳಿಸಿದರು.
ಜನಾರ್ದನ ರೆಡ್ಡಿ ನನ್ನ ವಿರುದ್ದ ಟೀಕೆ ಮಾಡಿದ್ದಕ್ಕೆ ಉತ್ತರ ರೂಪದಲ್ಲಿ ತಿರುಗೇಟು ನೀಡಿದ್ದೇನೆ. ಅದು ಬಿಟ್ಟು ಅವರನ್ನು ಸದಾ ಶತ್ರು ರೀತಿ ಬಿಂಬಿಸಿ ಅವರ ವಿರುದ್ದ ಸಣ್ಣತನದ ರಾಜಕೀಯ ಮಾಡಲಾರೆ.
2028ರ ವಿಧಾನ ಸಭೆ ಚುನಾವ ಣೆಯಲ್ಲಿ ಕೂಡ್ಲಿಗಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ತಿಳಿಸಿದರು.